AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಲಿಟರಿ ಸೇವೆಯ ಅಗ್ನಿಪಥ್ ಸ್ಕೀಮ್ ನಿಲ್ಲಿಸುವ ಯೋಚನೆ ಸರ್ಕಾರಕ್ಕಿಲ್ಲ; ಬಜೆಟ್​ನಲ್ಲಿ ಸ್ವಲ್ಪ ಬದಲಾವಣೆ ಸಾಧ್ಯತೆ

Union Budget 2024: ಅಗ್ನಿಪಥ್ ಯೋಜನೆಯನ್ನು ಕೈಬಿಡಿ ಎನ್ನುವ ವಿಪಕ್ಷಗಳ ಕೂಗಿಗೆ ಸರ್ಕಾರ ಬಗ್ಗುವ ಸಾಧ್ಯತೆ ಇಲ್ಲ. ವರದಿ ಪ್ರಕಾರ ಮುಂಬರುವ ಬಜೆಟ್​ನಲ್ಲಿ ಅಗ್ನಿಪಥ್ ಸ್ಕೀಮ್​ನಲ್ಲಿ ತುಸು ಮಾರ್ಪಾಡು ತರಬಹುದು ಎನ್ನಲಾಗಿದೆ. 17.5 ವರ್ಷದಿಂದ 21 ವರ್ಷದೊಳಗಿನ ವಯಸ್ಸಿನ ಯುವಕರು ಮತ್ತು ಯುವತಿಯರನ್ನು ನಾಲ್ಕು ವರ್ಷ ಕಾಲ ಮಿಲಿಟರಿ ಸೇವೆಗೆ ಸೇರಿಸಿಕೊಳ್ಳುವುದು ಅಗ್ನಿಪಥ್ ಯೋಜನೆ.

ಮಿಲಿಟರಿ ಸೇವೆಯ ಅಗ್ನಿಪಥ್ ಸ್ಕೀಮ್ ನಿಲ್ಲಿಸುವ ಯೋಚನೆ ಸರ್ಕಾರಕ್ಕಿಲ್ಲ; ಬಜೆಟ್​ನಲ್ಲಿ ಸ್ವಲ್ಪ ಬದಲಾವಣೆ ಸಾಧ್ಯತೆ
ಅಗ್ನಿಪಥ್ ಸ್ಕೀಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 12, 2024 | 10:28 AM

Share

ನವದೆಹಲಿ, ಜುಲೈ 12: ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಅಗ್ನಿಪಥ್ ಯೋಜನೆಯನ್ನು ನಿಲ್ಲಿಸುವ ಯಾವ ಆಲೋಚನೆ ಸರ್ಕಾರಕ್ಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಕೊನೆಯ ವಾರದಲ್ಲಿ ಮಂಡನೆಯಾಗುವ ಕೇಂದ್ರ ಬಜೆಟ್​ನಲ್ಲಿ ಅಗ್ನಿಪಥ್ ಯೋಜನೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ತರಬಹುದು ಎನ್ನಲಾಗಿದೆ. ಸಶಸ್ತ್ರ ಪಡೆಗಳಿಗೆ ಯುವಜನರನ್ನು ನೇಮಿಸುವ ಒಂದು ಸ್ಕೀಮ್ ಅಗ್ನಿಪಥ್. ಈ ಯೋಜನೆ ಸರ್ಕಾರಕ್ಕೆ ಎರಡು ರೀತಿಯಲ್ಲಿ ನೆರವಾಗುತ್ತದೆ. ಮೊದಲನೆಯದು, ಸಶಸ್ತ್ರ ಪಡೆಗೆ ಸಣ್ಣ ಪ್ರಾಯದವರ ಸೇವೆ ಲಭಿಸುತ್ತದೆ. ಎರಡನೆಯದು, ನಿವೃತ್ತ ಸೈನಿಕರಿಗೆ ಕೊಡಲಾಗುವ ಪಿಂಚಣಿ ಹಣವನ್ನು ಉಳಿಸಬಹುದು.

ಏನಿದು ಅಗ್ನಿಪಥ್ ಯೋಜನೆ?

2022ರ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿತು. 17.5 ವರ್ಷದಿಂದ 21 ವರ್ಷದೊಳಗಿನ ವಯೋಮಾನದ ಯುವಕ ಮತ್ತು ಯುವತಿಯರನ್ನು ಸೇನಾಪಡೆಗಳಿಗೆ ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಮೂಲ ಮಿಲಿಟರಿ ತರಬೇತಿ ಇತ್ಯಾದಿ ಕಲಿಸಿಕೊಡಲಾಗುತ್ತದೆ. ನಾಲ್ಕು ವರ್ಷ ಕಾಲ ಈ ಅಗ್ನಿವೀರರನ್ನು ಸೇವೆಯಲ್ಲಿರಿಸಲಾಗುತ್ತದೆ. ಅದಾದ ಬಳಿಕ ಶೇ. 25ರಷ್ಟು ಅಗ್ನಿವೀರರನ್ನು ಆಯ್ಕೆ ಮಾಡಿಕೊಂಡು ಖಾಯಂ ಆಗಿ ಸೇವೆಯಲ್ಲಿರಿಸಲಾಗುತ್ತದೆ. ಇನ್ನುಳಿದ ಶೇ. 75ರಷ್ಟು ಅಗ್ನಿವೀರರು ವಾಪಸ್ಸಾಗಬೇಕಾಗುತ್ತದೆ. ಇವರಿಗೆ ಸರ್ಕಾರ ಲಂಪ್ಸಮ್ ಆಗಿ ಇಂತಿಷ್ಟು ಹಣವನ್ನು ಕೊಡುತ್ತದೆ.

ಇದನ್ನೂ ಓದಿ: ಆದಾಯ ತೆರಿಗೆ ಸ್ಲ್ಯಾಬ್ ದರ, ಎಕ್ಸೆಂಪ್ಷನ್ ಮಿತಿಯಲ್ಲಿ ಬದಲಾವಣೆ ನಿರೀಕ್ಷಿಸುತ್ತಿರುವವರಿಗೆ ಕಾದಿದೆ ನಿರಾಸೆ

ವಿಪಕ್ಷಗಳು ಅಗ್ನಿಪಥ್ ಸ್ಕೀಮ್​ಗೆ ವಿರೋಧಿಸುತ್ತಿರುವುದ್ಯಾಕೆ?

ಅಗ್ನಿಪಥ್ ಸ್ಕೀಮ್​ನಲ್ಲಿ ಆಯ್ಕೆಯಾದ ಯುವಕರು ಮತ್ತು ಯುವತಿಯರು ನಾಲ್ಕು ವರ್ಷದ ಬಳಿಕ ಸೇವೆಯಲ್ಲಿ ಮುಂದುವರಿಯಲಿಲ್ಲ ಎಂದರೆ ಅವರ ಭವಿಷ್ಯವೇ ಮಸುಕಾಗಬಹುದು. ಅಗ್ನಿವೀರರಾಗದೇ ಹೋಗಿದ್ದರೆ ಓದು ಮುಂದುವರಿಸಿ ವೃತ್ತಿಜೀವನ ಹಿಡಿಯುತ್ತಿದ್ದರು. ಈ ಸ್ಕೀಮ್​ನಿಂದಾಗಿ ಅವರ ಜೀವನ ಹಾಳಾಗಬಹುದು ಎಂಬುದು ವಿಪಕ್ಷಗಳ ವಾದ.

ಅಗ್ನಿಪಥ್ ಯೋಜನೆಯಿಂದ ಸರ್ಕಾರಕ್ಕೆ ಏನು ಲಾಭ?

ಮಿಲಿಟರಿ ಸೇವೆಯಲ್ಲಿ ಈಗ ಹೆಚ್ಚಿನ ಯೋಧರು ವಯಸ್ಸಾದವರೇ ಇದ್ದಾರೆ. ಅಗ್ನಿಪಥ್ ಸ್ಕೀಮ್ ಮೂಲಕ ನಿರಂತರವಾಗಿ ಯುವಕರು ಸೇವೆಗೆ ಸಿಗುತ್ತಾರೆ. ಒಂದು ಬ್ಯಾಚ್​ನ ಅಗ್ನಿವೀರರು ನಾಲ್ಕು ವರ್ಷದ ಬಳಿಕ ಹೊರಹೋದಾಗ, ಮತ್ತೊಂದು ಹೊಸ ಬ್ಯಾಚ್ ಬರುತ್ತದೆ. ಆಗ 21 ವರ್ಷದೊಳಗಿನ ಯುವಕರು ಸೇನಾ ಪಡೆಗೆ ಸೇರಿಕೊಳ್ಳುತ್ತಾರೆ.

ಇದನ್ನೂ ಓದಿ: EPF: 2023-24ರ ಸಾಲಿನಲ್ಲಿ ಇಪಿಎಫ್ ಹಣಕ್ಕೆ ಶೇ. 8.25ರ ಬಡ್ಡಿ; ಹಣಕಾಸು ಸಚಿವಾಲಯದಿಂದ ಅನುಮೋದನೆ

ಒಂದು ಬ್ಯಾಚ್​ನ ಅಗ್ನಿವೀರರಲ್ಲಿ ಶೇ. 25ರಷ್ಟು ಮಂದಿಯನ್ನು ಮಾತ್ರ ಖಾಯಂ ಸೇವೆಗೆ ಸೇರಿಸಿಕೊಳ್ಳಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಪಿಂಚಣಿ, ದುಬಾರಿ ಸಂಬಳ ಇತ್ಯಾದಿ ವೆಚ್ಚ ತಪ್ಪುತ್ತದೆ. ಈ ಹಣವನ್ನು ಮಿಲಿಟರಿ ಆಧುನೀಕರಣಗೊಳಿಸಲು ಮತ್ತು ಮೇಲ್ದರ್ಜೆಗೇರಿಸಲು ಬಳಸಿಕೊಳ್ಳಬಹುದು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು