AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್​ಪ್ರೆಸ್​ವೇ ಮ್ಯಾಜಿಕ್

Bengaluru Pune Expressway to cut road travel time by 7 hrs: ಉತ್ತಮ ಹೆದ್ದಾರಿ ನಿರ್ಮಿಸಲಾಗಿರುವ ಮಾರ್ಗಗಳಲ್ಲಿ ವಿಮಾನಗಳ ಹಾರಾಟ ನಿಲ್ಲುತ್ತಿವೆಯಾ? ನಿತಿನ್ ಗಡ್ಕರಿ ಪ್ರಕಾರ ಹೌದು. ಮುಂಬೈ ಮತ್ತು ಪುಣೆ ನಡುವೆ 8 ಫ್ಲೈಟ್​ಗಳಿದ್ದವು. ಎಕ್ಸ್​ಪ್ರೆಸ್​ವೇ ನಿರ್ಮಾಣವಾದ ಬಳಿಕ ಎಲ್ಲವೂ ಬಂದ್ ಆಗಿವೆ. ದಿಲ್ಲಿಯಿಂದ ಡೆಹ್ರಾಡೂನ್, ದಿಲ್ಲಿಯಿಂದ ಜೈಪುರ್​ಗೂ ಫ್ಲೈಟ್​ಗಳು ಬಂದ್ ಅಗಬಹುದು ಎಂದು ಗಡ್ಕರಿ ತಮಾಷೆ ಮಾಡಿದ್ದಾರೆ.

ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್​ಪ್ರೆಸ್​ವೇ ಮ್ಯಾಜಿಕ್
ನಿತಿನ್ ಗಡ್ಕರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 06, 2026 | 3:28 PM

Share

ನವದೆಹಲಿ, ಏಪ್ರಿಲ್ 6: ದೇಶದ ಬೆಳವಣಿಗೆಗೆ ಬೇಕಾದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ರಸ್ತೆ ಸೌಕರ್ಯವೂ ಪ್ರಮುಖವಾದುದು. ಅದರಲ್ಲೂ ದೂರದೂರುಗಳನ್ನು ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಉತ್ತಮವಾಗಿರುವುದು ಮುಖ್ಯ. ಇತ್ತೀಚೆಗೆ ಸರ್ಕಾರ ನಿರ್ಮಿಸುತ್ತಿರುವ ಎಕ್ಸ್​ಪ್ರೆಸ್​ವೇಗಳು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಶಕ್ಯಗೊಂಡಿವೆ. ಬೆಂಗಳೂರಿನ ಮೈಸೂರಿಗೆ ಒಂದೆರಡು ಗಂಟೆಯಲ್ಲೇ ಕಾರಿನಲ್ಲಿ ಹೋಗಬಹುದು. ಇದೀಗ ಪುಣೆ ಮತ್ತು ಬೆಂಗಳೂರು ನಡುವೆ ಎಕ್ಸ್​ಪ್ರೆಸ್​ವೇ (Pune-Bengaluru Expressway) ನಿರ್ಮಿಸುವ ಯೋಜನೆ ಹಾಕಲಾಗಿದೆ.

700ರಿಂದ 745 ಕಿಮೀ ಉದ್ದದ ಪುಣೆ-ಬೆಂಗಳೂರು ಗ್ರೀನ್​ಫೀಲ್ಡ್ ಎಕ್ಸ್​ಪ್ರೆಸ್​ವೇ ಅನ್ನು 40,000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಯೋಜನೆಯ ಪ್ರಸ್ತಾಪ ಸರ್ಕಾರದ ಬಳಿ ಇದೆ. ಸದ್ಯ ಬೆಂಗಳೂರಿನಿಂದ ಮುಂಬೈಗೆ ರಸ್ತೆ ಮೂಲಕ ಹೋಗಲು ಕನಿಷ್ಠ 12 ಗಂಟೆಯಾದರೂ ಬೇಕಾಗುತ್ತದೆ. ಎಕ್ಸ್​ಪ್ರೆಸ್​ವೇ ನಿರ್ಮಾಣವಾದ ಬಳಿಕ ಪ್ರಯಾಣದ ಅವಧಿ 5.5 ಗಂಟೆಗೆ ಇಳಿಯುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ 12 ಜಿಲ್ಲೆಗಳಾದ್ಯಂತ ಹೋಗುವ ಈ ಎಕ್ಸ್​ಪ್ರೆಸ್​ವೇ ಮೂಲಕ ಕೇವಲ ಐದೂವರೆ ಗಂಟೆಗೆ ಬೆಂಗಳೂರಿಂದ ಮುಂಬೈ ತಲುಪಬಹುದು.

ಇದನ್ನೂ ಓದಿ: ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್

ಅಷ್ಟಪಥ ಹೆದ್ದಾರಿ ಇದಾಗಿದ್ದು, ಎಲ್ಲಿಯೂ ಟ್ರಾಫಿಕ್ ನಿಲ್ಲದಂತೆ ಬೈಪಾಸ್​ಗಳನ್ನು ನಿರ್ಮಿಸಲಾಗುತ್ತದೆ. ಈ ರಸ್ತೆಯಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಹೋಗಲು ಅವಕಾಶ ಇರುತ್ತದೆ. ಪುಣೆಯಿಂದ ಆರಂಭವಾಗಿ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಜಿಲ್ಲೆಗಳನ್ನು ದಾಟಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಹೀಗೆ ಮಾರ್ಗದ ಪ್ರಸ್ತಾಪ ಇದೆ.

ಈ ಎಕ್ಸ್​ಪ್ರೆಸ್​ವೇ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದ್ದು, 2028ಕ್ಕೆ ಮುಗಿಯುವ ನಿರೀಕ್ಷೆ ಇದೆ.

ವಿಮಾನ ಸಂಚಾರವೇ ಬಂದ್ ಆಗ್ತಿದೆ: ನಿತಿನ್ ಗಡ್ಕರಿ ತಮಾಷೆ

ಎಕ್ಸ್​ಪ್ರೆಸ್ವೇ ನಿರ್ಮಾಣ ಮಾಡಿದ ಮಾರ್ಗದಲ್ಲಿ ವಿಮಾನ ಸಂಚಾರವೇ ನಿಲ್ಲಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬ್ಯುಸಿನೆಸ್ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು ಬೆಂಗಳೂರು ಪುಣೆ ಎಕ್ಸ್​ಪ್ರೆಸ್​ವೇ ವಿಚಾರ ಮಾತನಾಡುತ್ತಾ ಆ ಮಾತುಗಳನ್ನಾಡಿದರು.

ನಿತಿನ್ ಗಡ್ಕರಿ ಮಾತನಾಡಿರುವ ವಿಡಿಯೋ

ಇದನ್ನೂ ಓದಿ: ಟಾಟಾ ಟ್ರಸ್ಟ್ಸ್​ನ ಬಾಯ್ ಹಿರಾಬಾಯ್ ಟ್ರಸ್ಟ್​ನಿಂದ ಹೊರಬಿದ್ದ ವೇಣು ಶ್ರೀನಿವಾಸನ್

ಮುಂಬೈ ಮತ್ತು ಪುಣೆ ಮಧ್ಯೆ ಜೆಟ್ ಏರ್ವೇಸ್​ನ ಎಂಟು ಫ್ಲೈಟ್​ಗಳಿದ್ದವು. ಹೆದ್ದಾರಿ ಆದ ಬಳಿಕ ಎಲ್ಲಾ ಬಂದ್ ಆದವು. ಮುಂಬೈ ಪುಣೆ ಮಧ್ಯೆ ಜನರು ಫ್ಲೈಟ್​ನಲ್ಲಿ ಹೋಗೋದಿಲ್ಲ. ಡಿಸಂಬರ್​ನಲ್ಲಿ ದಿಲ್ಲಿಯಿಂದ ಡೆಹ್ರಾಡೂನ್​ಗೆ ಫ್ಲೈಟ್ ಬಂದ್ ಆಗಿ ಹೋಗುತ್ತೆ. ದಿಲ್ಲಿಯಿಂದ ಜೈಪುರ್ ಫ್ಲೈಟ್ ಬಂದ್ ಆಗುತ್ತೆ ಎಂದು ಗಡ್ಕರಿ ತಮಾಷೆ ಮಾಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us