AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಜೊತೆ ಗಡಿತಂಟೆಗೆ ಬಂದು ಚೀನಾ ಅನುಭವಿಸಿದ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಅದರ ಆಫ್ಟರ್ ಎಫೆಕ್ಟ್ಸ್

India vs China: 2020ರ ಬಳಿಕ ಚೀನಾವನ್ನು ಭಾರತ ಬಹಳಷ್ಟು ವಿಷಯಗಳಲ್ಲಿ ದೂರ ಇಡುತ್ತಾ ಬಂದಿದೆ. ಭಾರತದಲ್ಲಿ ಹೇರಳವಾದ ಹೂಡಿಕೆ ಅವಕಾಶ ಇದ್ದರೂ ಅದನ್ನು ಉಪಯೋಗಿಸಿಕೊಳ್ಳಲು ಚೀನಾಗೆ ಸಾಧ್ಯವಾಗುತ್ತಿಲ್ಲ. ದೂರಗಾಮಿಯಾಗಿ ಚೀನಾಗೆ ಇದರಿಂದ ನಷ್ಟ ಹೆಚ್ಚು.

ಭಾರತದ ಜೊತೆ ಗಡಿತಂಟೆಗೆ ಬಂದು ಚೀನಾ ಅನುಭವಿಸಿದ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಅದರ ಆಫ್ಟರ್ ಎಫೆಕ್ಟ್ಸ್
ಚೀನಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 06, 2023 | 4:05 PM

Share

ಚೀನಾ ಕೆಲವಾರು ದಶಕಗಳಿಂದ ಈಚೆಗೆ ಅದಮ್ಯವಾಗಿ ಬೆಳೆದಿದೆ. ಅಮೆರಿಕಕ್ಕೆ ಪರ್ಯಾಯವಾಗಿ ಸೂಪರ್ ಪವರ್ ರಾಷ್ಟ್ರ ಎನಿಸುವ ಮಟ್ಟದ ಎತ್ತರಕ್ಕೆ ಚೀನಾ ಹೋಗಿದೆ. ಬಹುತೇಕ ವಿಶ್ವದ ಫ್ಯಾಕ್ಟರಿ (World Factory) ಎನಿಸಿದೆ. ಸಣ್ಣ ಆಟಿಕೆಯಿಂದ ಹಿಡಿದು ಐಫೋನ್​ವರೆಗೂ ಹೆಚ್ಚಿನ ವಸ್ತುಗಳು ಮೇಡ್ ಇನ್ ಚೀನಾ ಎನ್ನುವಂತಾಗಿದೆ. ತಮ್ಮ ಬಹುತೇಕ ಉತ್ಪನ್ನಗಳ ತಯಾರಿಕೆಯನ್ನು ಚೀನಾ ಮಡಿಲಿಗೆ ಇತ್ತ ಜಾಗತಿಕ ಕಂಪನಿಗಳ ಕಣ್ಣುಗಳು ಈಗ ಭಾರತ, ಇಂಡೋನೇಷ್ಯಾ, ವಿಯೆಟ್ನಾಂ ಇತ್ಯಾದಿ ದೇಶಗಳತ್ತ ಹೊರಳುತ್ತಿವೆ. ಚೀನಾದ ಯುಗ ಮುಗಿಯಿತು, ಭಾರತದ ಯುಗ ಆರಂಭವಾಯಿತು ಎಂದು ತಜ್ಞರು ಹೇಳತೊಡಗಿದ್ದಾರೆ. ಮುಂದಿನ ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಇನ್ನೂ ಅಪಾರವಾಗಿ ಆಗಲಿದೆ. ರಾಜಕೀಯವಾಗಿಯೂ ಭಾರತ ಬಲಿಷ್ಠವಾಗಲಿದೆ ಎಂಬ ಅನಿಸಿಕೆಗಳು ಬರತೊಡಗಿವೆ. ಕಾಕತಾಳೀಯವೋ ಎಂಬಂತೆ ಇವೆಲ್ಲಾ ಬೆಳವಣಿಗಳಿಗೂ ಕಳೆದ ಕೆಲ ವರ್ಷಗಳಿಂದ ಭಾರತದ ಜೊತೆ ಚೀನಾ ಗಡಿತಂಟೆ ನಡೆಸತೊಡಗಿದ್ದಕ್ಕೂ ಸಂಬಂಧ ಇರುವುದು ಕುತೂಹಲ.

2017ರ ಡೋಕ್ಲಾಮ್ ಸಂಘರ್ಷದ ಬಳಿಕ ಭಾರತ ತನ್ನ ಚೀನಾ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಆಲೋಚಿಸಿತು. ಆದರೆ, ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು 2020ರಲ್ಲಿ. ಕೋವಿಡ್ ಸಾಂಕ್ರಾಮಿಕ ರೋಗ ಅಡಿ ಇಟ್ಟ ಸಂದರ್ಭದಲ್ಲಿ 2020ರಲ್ಲಿ ಚೀನಾ ಲಡಾಖ್ ಗಡಿಭಾಗದ ವಿವಿಧೆಡೆ ಭಾರತದ ಭಾಗವನ್ನು ಆಕ್ರಮಿಸಲು ಯತ್ನಿಸಿತ್ತು. ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 24ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಚೀನೀಯರು ಬಲಿತೆಗೆದುಕೊಂಡಿದ್ದರು. ಆ ಘಟನೆ ಬಳಿಕ ಭಾರತ ಚೀನಾದ ಅನೇಕ ಆ್ಯಪ್​ಗಳನ್ನು ನಿಷೇಧಿಸಿದ್ದು ನೆನಪಿರಬಹುದು.

ಇದನ್ನೂ ಓದಿ: API: ಚೀನಾ ಅವಲಂಬನೆ ತಗ್ಗಿಸಲು ಭಾರತದಲ್ಲೇ ತಯಾರಾಗುತ್ತಿವೆ 38 APIಗಳು; ಏನಿವುಗಳ ವಿಶೇಷತೆ?

2020ರ ಬಳಿಕ ಭಾರತ ತನ್ನ ಬೆಳವಣಿಗೆಯ ಹಾದಿಯಿಂದ ಚೀನಾವನ್ನು ಬಹುತೇಕ ಹೊರಗಿಡುತ್ತಾ ಬಂದಿದೆ. ಮೊನ್ನೆಮೊನ್ನೆ, ಲ್ಯಾಪ್​ಟಾಪ್, ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್​ಗಳ ಆಮದನ್ನು ಭಾರತ ನಿರ್ಬಂಧಿಸಿದ್ದು ಇದೇ ಆಲೋಚನೆಯಲ್ಲಿ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಅಂತಿಮವಾಗಿ ಈ ಎಲೆಕ್ಟ್ರಾನಿಕ್ ಉತ್ಪನ್ನಗಳ ಆಮದಿನ ಮೇಲೆ ನಿರ್ಬಂಧ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿತಾದರೂ, ಚೀನಾ ವಿರುದ್ಧ ದಿಟ್ಟವಾಗಿ ನಿಷೇಧ, ನಿರ್ಬಂಧ ಇತ್ಯಾದಿ ಕ್ರಮಗಳನ್ನು ಭಾರತ ಈ ಹಿಂದೆ ಹಲವು ಬಾರಿ ಕೈಗೊಂಡಿದ್ದಿದೆ. ಗಾಲ್ವನ್ ಕಣಿವೆಯಲ್ಲಿ ಗಲಾಟೆ ಮಾಡಿದ ಪರಿಣಾಮವಾಗಿ ಚೀನಾ ಭಾರತದ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಜೊತೆಗೆ ಸಾಕಷ್ಟು ವ್ಯಾವಹಾರಿಕ ಸಾಧ್ಯತೆಗಳನ್ನೂ ಕಳೆದುಕೊಂಡಿದೆ.

2020ರ ಬಳಿಕ ಭಾರತದೊಂದಿಗೆ ಚೀನಾಗೆ ಆಗಿರುವ ವ್ಯವಹಾರ ನಷ್ಟ ಎಂಥದ್ದು?

ಬಿವೈಡಿ ಹೂಡಿಕೆ ಯೋಜನೆ ಮೊಟಕು

ಚೀನಾದ ಎಲೆಕ್ಟ್ರಿಕ್ ಕಾರು ತಯಾರಕ ಬಿವೈಡಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಘಟಕಗಳನ್ನು ಆರಂಭಿಸಲು 1 ಬಿಲಿಯನ್ ಡಾಲರ್ ಹೂಡಿಕೆ ಪ್ರಸ್ತಾವವನ್ನು ಭಾರತ ಸರ್ಕಾರದ ಮುಂದಿಟ್ಟಿತ್ತು. ಆದರೆ, ಇದಕ್ಕೆ ಸರ್ಕಾರದಿಂದ ಅನುಮೋದನೆ ದೊರೆಯದ ಕಾರಣ, ಬಿವೈಡಿ ತನ್ನ ಯೋಜನೆಯನ್ನು ನಿಲ್ಲಿಸಿತು.

ಇದನ್ನೂ ಓದಿ: Rupee: ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲಿ ವ್ಯವಹಾರ ನಡೆಸುವ 22 ದೇಶಗಳು; ಇಲ್ಲಿದೆ ಇವುಗಳ ಪಟ್ಟಿ

ಗ್ರೇಟ್ ವಾಲ್ ಮೋಟಾರ್ ಯೋಜನೆ

ಚೀನಾದ ಮತ್ತೊಂದು ಆಟೊಮೊಬೈಲ್ ಕಂಪನಿ ಗ್ರೇಟ್ ವಾಲ್ ಮೋಟಾರ್ ಕೂಡ 1 ಬಿಲಿಯನ್ ಡಾಲರ್ ಹಣದ ಹೂಡಿಕೆಯನ್ನು ಭಾರತದಲ್ಲಿ ಮಾಡಲು ಯೋಜಿಸಿತ್ತು. ಇದಕ್ಕೂ ಕೂಡ ಭಾರತ ಸರ್ಕಾರ ಅಥವಾ ಪ್ರಾಧಿಕಾರದಿಂದ ಅನುಮೋದನೆ ದೊರಕಲಿಲ್ಲ.

ಶಿಯೋಮಿ ಆಸ್ತಿ ಜಫ್ತಿ

ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಚೀನೀ ಕಂಪನಿ ಶಿಯೋಮಿ ಭಾರತದಲ್ಲಿ ಕಾನೂನು ಕ್ರಮ ಎದುರಿಸುತ್ತಿದೆ. ರಾಯಲ್ಟಿ ಅಥವಾ ರಾಯಧನದ ಹೆಸರಿನಲ್ಲಿ ವಿದೇಶೀ ಸಂಸ್ಥೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಶಿಯೋಮಿ ಮೇಲಿದೆ. ಭಾರತದ ಕಾನೂನು ಪಾಲನಾ ಸಂಸ್ಥೆಯೊಂದು ಶಿಯೋಮಿಯ 670 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬ್ಯಾಂಕಿನಲ್ಲಿ ಫ್ರೀಜ್ ಮಾಡಿಟ್ಟಿದೆ.

ಇದನ್ನೂ ಓದಿ: Semiconductor: ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್​ನ ಗ್ಲೋಬಲ್ ಸಪ್ಲಯರ್ ಕಂಪನಿಗಳು ಭಾರತಕ್ಕೆ ಬರಲು ಸಜ್ಜು

ಮೊಬೈಲ್ ಆ್ಯಪ್​ಗಳ ನಿಷೇಧ

2020ರ ಬಳಿಕ ಚೀನಾದ 300ಕ್ಕೂ ಹೆಚ್ಚು ಮೊಬೈಲ್ ಆ್ಯಪ್​ಗಳನ್ನು ಭಾರತ ನಿಷೇಧಿಸಿದೆ. ಇದರಲ್ಲಿ ಟಿಕ್ ಟಾಕ್ ಮೊದಲಾದ ಜನಪ್ರಿಯ ಆ್ಯಪ್​ಗಳೂ ಸೇರಿವೆ. ಟಿಕ್ ಟಾಕ್ ನಿಷೇಧವಾಗಿದ್ದು ಚೀನಾಗೆ ತುಸು ಘಾಸಿಯನ್ನೂ ಮಾಡಿದೆ.

ಚೀನಾ ಹೂಡಿಕೆಗಳತ್ತ ಗಮನ

ಅಂತಾರಾಷ್ಟ್ರೀಯ ಹೂಡಿಕೆಯಲ್ಲಿ ಭಾರತ ಒಂದು ನಿಯಮ ಬದಲಿಸಿದೆ. ಅದು ನೆರೆಯ ದೇಶಗಳ ಕಂಪನಿಗಳಿಂದ ಭಾರತದಲ್ಲಿ ಮಾಡಲಾಗುವ ಹೂಡಿಕೆಗಳಿಗೆ ಪ್ರಾಧಿಕಾರದ ಅನುಮೋದನೆ ಬೇಕೆಂಬ ನಿಯಮ. ಚೀನಾವನ್ನು ಗಮನದಲ್ಲಿಟ್ಟುಕೊಂಡು ಈ ನಿಯಮ ಮಾಡಲಾಗಿದೆ. ಹೂಡಿಕೆಗಳನ್ನು ಮಾಡಿ ಆ ಮೂಲಕ ದೇಶದ ಮೇಲೆ ಹಿಡಿತ ಸಾಧಿಸುವ ಚೀನಾದ ಹುನ್ನಾರವನ್ನು ಹತ್ತಿಕ್ಕುವುದು ಭಾರತದ ಪ್ರಯತ್ನವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು