AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Insurance on Bank Deposits: ಆರ್​ಬಿಐ ನಿರ್ಬಂಧದ ಬ್ಯಾಂಕ್​ಗಳ ಠೇವಣಿದಾರರಿಗೆ 90 ದಿನದಲ್ಲಿ ಹಣ; ನ. 30ರಿಂದಲೇ ಜಾರಿ

ಸಂಕಷ್ಟದಲ್ಲಿ ಸಿಲುಕಿದ ಬ್ಯಾಂಕ್​ಗಳ ಠೇವಣಿದಾರರಿಗೆ ರೂ. 5 ಲಕ್ಷದೊಳಗಿನ ಮೊತ್ತವು ನವೆಂಬರ್ 30, 2021ರಿಂದ ಆಚೆಗೆ 90 ದಿನದೊಳಗಾಗಿ ದೊರೆಯುತ್ತದೆ.

Insurance on Bank Deposits: ಆರ್​ಬಿಐ ನಿರ್ಬಂಧದ ಬ್ಯಾಂಕ್​ಗಳ ಠೇವಣಿದಾರರಿಗೆ 90 ದಿನದಲ್ಲಿ ಹಣ; ನ. 30ರಿಂದಲೇ ಜಾರಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 30, 2021 | 11:44 PM

Share

ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ (ಪಿಎಂಸಿ) ಬ್ಯಾಂಕ್ ಸೇರಿದಂತೆ ಒತ್ತಡದಲ್ಲಿದ್ದ ಬ್ಯಾಂಕ್​ಗಳ ಠೇವಣಿದಾರರಿಗೆ ನಬೆಂಬರ್ 30ನೇ ತಾರೀಕಿನಿಂದ 5 ಲಕ್ಷ ರೂಪಾಯಿ ತನಕ ದೊರೆಯಲಿದೆ. ಡಿಐಸಿಜಿಸಿ ಕಾಯ್ದೆ ತಿದ್ದುಪಡಿಗೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಲಿದೆ. ಈ ತಿಂಗಳ ಆರಂಭದಲ್ಲಿ ಸಂಸತ್​ನಲ್ಲಿ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆ, 2021ಕ್ಕೆ ಅನುಮೋದನೆ ನೀಡಲಾಗಿತ್ತು. ಅದರ ಪ್ರಕಾರವಾಗಿ, ಆರ್​ಬಿಐನಿಂದ ಯಾವ ಬ್ಯಾಂಕ್​ ಮೇಲೆ ನಿರ್ಬಂಧ ಹೇರಲಾಗುತ್ತದೋ ಅದರಲ್ಲಿನ ಠೇವಣಿದಾರರು 5 ಲಕ್ಷ ರೂಪಾಯಿಯೊಳಗಿನ ಮೊತ್ತವನ್ನು 90 ದಿನದೊಳಗೆ ಹಿಂಪಡೆಯುತ್ತಾರೆ. ಆ ಐದು ಲಕ್ಷ ರೂಪಾಯಿ ಮೊತ್ತವನ್ನು ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್​ (ಡಿಐಸಿಜಿಸಿ) ನೀಡುತ್ತದೆ.

ಕೇಂದ್ರ ಸರ್ಕಾರವು ಸೆಪ್ಟೆಂಬರ್ 1, 2021 ದಿನಾಂಕವನ್ನು ಕಾಯ್ದೆಯ ಜಾರಿಯ ದಿನಾಂಕವಾಗಿ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಆಗಸ್ಟ್ 27, 2021ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಇದಾದ ಮೇಲೆ ನವೆಂಬರ್ 30, 2021ರ ನಂತರದಲ್ಲಿ 90 ದಿನದೊಳಗಾಗಿ ಠೇವಣಿದಾರರಿಗೆ ತಮ್ಮ ಹಣ ವಾಪಸ್ ದೊರೆಯುತ್ತದೆ. ಮೊದಲ 45 ದಿನಗಳು ಒತ್ತಡದಲ್ಲಿ ಸಿಲುಕಿಕೊಂಡ ಬ್ಯಾಂಕ್​ಗಳಿಗೆ ಇರುತ್ತದೆ. ಖಾತೆಗಳ ಎಲ್ಲ ಮಾಹಿತಿಯನ್ನು ಕಲೆಹಾಕಿ, ಎಲ್ಲಿ ಕ್ಲೇಮ್ ಮಾಡಬೇಕು ಎಂಬ ವಿವರವನ್ನು ತಿಳಿಯಲಾಗುತ್ತದೆ. ಆ ನಂತರ ಇದನ್ನು ಇನ್ಷೂರೆನ್ಸ್ ಕಂಪೆನಿಗೆ ಕಳುಹಿಸಲಾಗುತ್ತದೆ. ಎಲ್ಲವನ್ನೂ ಪರಿಶೀಲನೆ ಮಾಡಿ, 90ನೇ ದಿನ ಹತ್ತಿರ ಬರುತ್ತಿದ್ದಂತೆ ಠೇವಣಿದಾರರಿಗೆ ಹಣ ದೊರೆಯುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಈಗ ಒತ್ತಡದಲ್ಲಿ ಸಿಲುಕಿಕೊಂಡು, ಆರ್​ಬಿಐನಿಂದ ನಿರ್ಬಂಧ ಹೇರಲಾದ 23 ಕೋ ಆಪರೇಟಿವ್ ಬ್ಯಾಂಕ್​ಗಳ ಠೇವಣಿದಾರರಿಗೆ ಈಗಿನ ನಡೆಯಿಂದ ಅನುಕೂಲ ಆಗಲಿದೆ. ಅಂದಹಾಗೆ ಡಿಐಸಿಜಿಸಿ ಎಂಬುದು ಪೂರ್ತಿಯಾಗಿ ಆರ್​ಬಿಐನ ಅಂಗಸಂಸ್ಥೆ. ಬ್ಯಾಂಕ್​ ಠೇವಣಿ ಮೇಲೆ ಇನ್ಷೂರೆನ್ಸ್ ಕವರ್ ಒದಗಿಸುತ್ತದೆ. ಸದ್ಯಕ್ಕೆ ಏನು ಪರಿಸ್ಥಿತಿ ಇದೆ ಅಂದರೆ, ಸಂಕಷ್ಟಕ್ಕೆ ಸಿಲುಕಿಕೊಂಡ ಬ್ಯಾಂಕ್​ಗಳ ಠೇವಣಿದಾರರು ತಮ್ಮ ಇನ್ಷೂರೆನ್ಸ್ ಹಣ ಹಾಗೂ ಇತರ ಕ್ಲೇಮ್ ಪಡೆಯಲು ಎಂಟರಿಂದ ಹತ್ತು ವರ್ಷ ಸಮಯ ತೆಗೆದುಕೊಳ್ಳುತ್ತಿದೆ. ಏನೇ ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ನಿಗಾ ವಹಿಸುತ್ತಿದ್ದರೂ ಬ್ಯಾಂಕ್​ಗಳಲ್ಲಿ, ಅದರಲ್ಲೂ ಕೋ ಆಪರೇಟಿವ್​ ಬ್ಯಾಂಕ್​ಗಳಲ್ಲಿ ವಂಚನೆ ಪ್ರಕರಣ, ನಿಯಮ ಉಲ್ಲಂಘನೆ ಆಗುತ್ತಿದೆ. ಅಂಥ ಸಂದರ್ಭದಲ್ಲಿ ಆರ್​ಬಿಐನಿಂದ ವಹಿವಾಟಿಗೆ ನಿರ್ಬಂಧ ಹೇರಿ, ಠೇವಣಿದಾರರಿಗೆ ಸಮಸ್ಯೆ ಆಗುತ್ತಿದೆ.

ಕಳೆದ ವರ್ಷ ಸರ್ಕಾರದಿಂದ ಠೇವಣಿ ಮೇಲಿನ ಇನ್ಷೂರೆನ್ಸ್ ಮೊತ್ತವನ್ನು ಐದು ಪಟ್ಟು, ಅಂದರೆ ಐದು ಲಕ್ಷ ರೂಪಾಯಿಗೆ ಏರಿಸಲಾಯಿತು. ಫೆಬ್ರವರಿ 4, 2020ರಿಂದ ವಿಸ್ತರಣೆಯಾದ 5 ಲಕ್ಷ ರೂಪಾಯಿಯ ಇನ್ಷೂರೆನ್ಸ್ ಕವರ್ ಜಾರಿಗೆ ಬಂದಿದೆ. ಪ್ರತಿ ಬ್ಯಾಂಕ್ ಸಹ ಠೇವಣಿ ಮೊತ್ತದ ತಲಾ 100 ರೂಪಾಯಿಗೆ 10 ಪೈಸೆಯಂತೆ ಪ್ರೀಮಿಯಂ ಪಾವತಿ ಮಾಡಬೇಕು.

ಇದನ್ನೂ ಓದಿ: ಡಿಐಸಿಜಿಸಿ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಸ್ತು; ಕೋಟ್ಯಂತರ ಬ್ಯಾಂಕ್​ ಠೇವಣಿದಾರರ ಹಣಕ್ಕೆ ಸಿಕ್ತು ಗ್ಯಾರಂಟಿ

(Depositors Of Stressed Banks Will Get Money Up to Rs 5 Lakhs Within 90 Days From November 30 2021)

Published On - 11:43 pm, Mon, 30 August 21

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​