AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್ ಟೆಕ್ನಾಲಜಿಯಿಂದ ಪರಿವರ್ತನೆ; ಅಭಿವೃದ್ಧಿಶೀಲ ದೇಶಗಳಿಗೆ ಭಾರತವೇ ಮಾದರಿ: ಪ್ರೊ. ರೋಮರ್

Prof Paul Michael Romer suggestions to digital south countries: ಭಾರತ ಆಧಾರ್ ಯೋಜನೆಯ ಪ್ರಯೋಗ ಹೇಗೆ ಮಾಡಿತೋ, ಅದೇ ರೀತಿ ಅಭಿವೃದ್ಧಿಶೀಲ ದೇಶಗಳೂ ಕೂಡ ಹೊಸ ಪ್ರಯೋಗಕ್ಕೆ ಹಿಂಜರಿಯಬಾರದು ಎಂದು ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಪ್ರೊ. ಪೌಲ್ ಮೈಕೇಲ್ ರೋಮರ್ ಹೇಳಿದ್ದಾರೆ. ಐಎಎನ್​ಎಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಸೌತ್ ದೇಶಗಳು ಶ್ರೀಮಂತ ದೇಶಗಳ ಮೇಲೆ ಅವಲಂಬಿತವಾಗದೇ ಭಾರತವನ್ನು ಮಾದರಿಯನ್ನಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಡಿಜಿಟಲ್ ಟೆಕ್ನಾಲಜಿಯಿಂದ ಪರಿವರ್ತನೆ; ಅಭಿವೃದ್ಧಿಶೀಲ ದೇಶಗಳಿಗೆ ಭಾರತವೇ ಮಾದರಿ: ಪ್ರೊ. ರೋಮರ್
ಪೌಲ್ ಮೈಕೇಲ್ ರೋಮರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 20, 2024 | 6:52 PM

Share

ನವದೆಹಲಿ, ಅಕ್ಟೋಬರ್ 20: ಡಿಜಿಟಲ್ ತಂತ್ರಜ್ಞಾನದಲ್ಲಿ ಹಿಂದುಳಿದ ದೇಶಗಳಿಗೆ ಭಾರತವೇ ಮಾದರಿಯಾಗಬೇಕು. ಭಾರತಕ್ಕೆ ಈ ಬೆಳವಣಿಗೆ ಸಾಧ್ಯವಾಗುತ್ತದೆ ಎಂದಾದಲ್ಲಿ ತಮಗೇಕೆ ಸಾಧ್ಯವಿಲ್ಲ ಎಂದು ಈ ದೇಶಗಳು ಪ್ರಶ್ನಿಸಿಕೊಳ್ಳಬೇಕು ಎಂದು ಅಮೆರಿಕದ ಆರ್ಥಿಕ ತಜ್ಞ ಪ್ರೊಫೆಸರ್ ಪೌಲ್ ಮೈಕೇಲ್ ರೋಮರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಆಧಾರ್ ಎಂಬ ವಿನೂತನ ಯೋಜನೆ ಆರಂಭಿಸಿತು. ಅದರಂತೆಯೇ ಇತರ ದೇಶಗಳು ಕೂಡ ಈ ಹಿಂದೆ ಮಾಡದೇ ಇದ್ದ ಪ್ರಯತ್ನಕ್ಕೆ ಕೈ ಹಾಕುವ ಸಾಹಸ, ಆಕಾಂಕ್ಷೆ ಮತ್ತು ಆತ್ಮವಿಶ್ವಾಸ ಹೊಂದಿರಬೇಕು. ಭಾರತದ ಪ್ರಯೋಗವನ್ನು ಈ ದೇಶಗಳು ಅನುಕರಿಸಬಹುದು. ಭಾರತದ ಅನುಭವದಿಂದ ಕಲಿಯಬಹುದು ಎಂದು ಪ್ರೊಫೆಸರ್ ರೋಮರ್ ಹೇಳಿದ್ದಾರೆ.

ಡಿಜಿಟಲ್ ಸೌತ್ ದೇಶಗಳು (ಅಭಿವೃದ್ದಿಶೀಲ) ಶ್ರೀಮಂತ ರಾಷ್ಟ್ರಗಳ ಮೇಲೆ ಎಲ್ಲದಕ್ಕೂ ಅವಲಂಬಿತ ಆಗಬಾರದು. ಇದು ಬಹಳ ಮುಖ್ಯ. ಶ್ರೀಮಂತ ದೇಶಗಳನ್ನು ಸೂತ್ರಧಾರನಾಗಿ ಇರುಸುವ ತಪ್ಪು ಬೇಡ. ನಮ್ಮ ನಾಗರಿಕರಿಗೆ ಅಗತ್ಯ ಇರುವ ಜೀವನದ ಗುಣಮಟ್ಟದಲ್ಲಿ ಬೇಕಾಗಿರುವ ಸುಧಾರಣೆಗಳನ್ನು ತರಲು ಈ ಸಿರಿವಂತ ದೇಶಗಳಿಂದ ನೆರವಾಗದೇ ಹೋಗಬಹುದು ಎಂದು ವರ್ಲ್ಡ್ ಬ್ಯಾಂಕ್​ನ ಮಾಜಿ ಚೀಫ್ ಎಕನಾಮಿಸ್ಟ್ ಆದ ಪ್ರೊಫೆಸರ್ ರೋಮರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ 5 ಕೋಟಿ ಸಮೀಪ

ನೊಬೆಲ್ ಸ್ಮಾರಕ ಪ್ರಶಸ್ತಿ ಪುರಸ್ಕೃತರೂ ಆಗಿರುವ ಪೌಲ್ ಮೈಕೇಲ್ ರೋಮರ್ ಅಮೆರಿದಕ ಕೊಲೊರಾಡೋದ ಡೆನ್ವರ್ ನಗರದಲ್ಲಿ ಜನಿಸಿ, ಆರ್ಥಿಕ ವಿಷಯದಲ್ಲಿ ಪರಿಣಿತಿ ಹೊಂದಿದ್ದಾರೆ.

ದೀರ್ಘಾವಧಿ ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡಲು ಜ್ಞಾನ ಹೇಗೆ ನೆರವಾಗುತ್ತದೆ ಎಂಬುದನ್ನು ಪೌಲ್ ರೋಮರ್ ತಮ್ಮ ಅಧ್ಯಯನದಲ್ಲಿ ನಿರೂಪಿಸಿದ್ದಾರೆ. ಸಂಸ್ಥೆಗಳಿಗೆ ಹೊಸ ಐಡಿಯಾಗಳನ್ನು ಹೊರತರುವ ಇಚ್ಛೆ ಬರಲು ಆರ್ಥಿಕ ಶಕ್ತಿಗಳ ಪ್ರಭಾವ ಹೇಗೆ ಇರುತ್ತದೆ ಎಂಬುದನ್ನೂ ಅವರು ತೋರಿಸಿಕೊಟ್ಟಿದ್ದಾರೆ. 1990ರಲ್ಲಿ ಅವರ ಈ ಆರ್ಥಿಕ ಪರಿಕಲ್ಪನೆ ಪ್ರಕಟವಾಗಿತ್ತು. ಅವರ ಈ ಕಾರ್ಯಕ್ಕೆ 2018ರಲ್ಲಿ ಸ್ವೆರಿಗೆಸ್ ರಿಕ್ಸ್​ಬ್ಯಂಕ್ ಪ್ರಶಸ್ತಿ (ನೊಬೆಲ್ ಸ್ಮಾರಕ ಪ್ರಶಸ್ತಿ) ಸಿಕ್ಕಿತ್ತು.

ಇದನ್ನೂ ಓದಿ: ಅಂಬಾನಿ ವರ್ಸಸ್ ಮಸ್ಕ್; ಭಾರತೀಯ ಸೆಟಿಲೈಟ್ ಇಂಟರ್ನೆಟ್ ಯುದ್ಧದಲ್ಲಿ ಗೆಲ್ಲೋದ್ಯಾರು?

ಪ್ರೊಫೆಸರ್ ಪೌಲ್ ಮೈಕೇಲ್ ರೋಮರ್ ಅವರು 2016ರ ಅಕ್ಟೋಬರ್​ನಿಂದ 2018ರ ಜನವರಿ 24ರವರೆಗೂ ವಿಶ್ವಬ್ಯಾಂಕ್​ನಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿ ಜವಾಬ್ದಾರಿ ನಿಭಾಯಿಸಿದ್ದರು. ವಿವಿಧ ಯೂನಿವರ್ಸಿಟಿಗಳಲ್ಲಿ ಅವರು ಪಾಠ ಮಾಡಿದ್ದಾರೆ. 68 ವರ್ಷದ ಅವರು ಪ್ರಸಕ್ತ ವಿಶ್ವದ ಶ್ರೇಷ್ಠ ಅರ್ಥ ವಿಜ್ಞಾನಿಗಳ ಪೈಕಿ ಒಬ್ಬರೆನಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?