AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gautam Adani: ವಾರೆನ್​ ಬಫೆಟ್​ರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತರಾದ ಗೌತಮ್ ಅದಾನಿ

ಗೌತಮ್ ಅದಾನಿ ಅವರು ಜನಪ್ರಿಯ ಹೂಡಿಕೆದಾರ ವಾರೆನ್​ ಬಫೆಟ್​ ಅವರನ್ನು ಮೀರಿ ವಿಶ್ವದ ಐದನೇ ಶ್ರೀಮಂತರಾಗಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Gautam Adani: ವಾರೆನ್​ ಬಫೆಟ್​ರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತರಾದ ಗೌತಮ್ ಅದಾನಿ
ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Apr 25, 2022 | 2:32 PM

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ (Gautam Adani) ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ, 59 ವರ್ಷ ವಯಸ್ಸಿನ ಅದಾನಿ ಅವರು ಶುಕ್ರವಾರದ ಮಾರುಕಟ್ಟೆಯ ಅಂತ್ಯದ ವೇಳೆಗೆ 123.7 ಬಿಲಿಯನ್ ಯುಎಸ್​ಡಿ (12,370 ಕೋಟಿ ಯುಎಸ್​ಡಿ) ನಿವ್ವಳ ಮೌಲ್ಯವನ್ನು ಹೊಂದಿದ್ದು, ಬಫೆಟ್ ಅವರ 121.7 ಬಿಲಿಯನ್ ಯುಎಸ್​ಡಿ (12,170 ಕೋಟಿ ಯುಎಸ್​ಡಿ) ಸಂಪತ್ತನ್ನು ದಾಟಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು 2022ರಲ್ಲಿ ತನ್ನ ಸಂಪತ್ತಿಗೆ 43 ಬಿಲಿಯನ್ ಯುಎಸ್​ಡಿ ಸೇರಿಸಿದ್ದು, ಇದು ಅವರ ಪೋರ್ಟ್‌ಫೋಲಿಯೊದಲ್ಲಿ ಶೇ 56.2ರಷ್ಟು ಏರಿಕೆಯಾಗಿದೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (ಯುಎಸ್​ಡಿ 130.2 ಶತಕೋಟಿ), ಬರ್ನಾರ್ಡ್ ಅರ್ನಾಲ್ಟ್ (ಯುಎಸ್​ಡಿ 167.9 ಶತಕೋಟಿ), ಜೆಫ್ ಬೆಜೋಸ್ (ಯುಎಸ್​ಡಿ 170.2 ಶತಕೋಟಿ), ಮತ್ತು ಎಲಾನ್ ಮಸ್ಕ್ (ಯುಎಸ್​ಡಿ 269.7 ಶತಕೋಟಿ) ವಿಶ್ವದ ನಾಲ್ಕು ಶ್ರೀಮಂತ ಉದ್ಯಮಿಗಳ ಹಿಂದೆ ಅದಾನಿ ಮಾತ್ರ ಈಗ ಇದ್ದಾರೆ. ಅದಾನಿಯವರ ಅಂದಾಜು ಯುಎಸ್​ಡಿ 123.7 ಬಿಲಿಯನ್ ನಿವ್ವಳ ಮೌಲ್ಯವು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡುತ್ತದೆ.

ಗೌತಮ್ ಅದಾನಿ ಅವರು ಅದಾನಿ ಸಮೂಹದ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದಾರೆ – ಈ ಸಮೂಹವು ವಿಮಾನ ನಿಲ್ದಾಣಗಳಿಂದ ಬಂದರುಗಳವರೆಗೆ ಮತ್ತು ವಿದ್ಯುತ್ ಉತ್ಪಾದನೆಯಿಂದ ವಿತರಣೆಯವರೆಗೆ ಹಲವಾರು ವ್ಯವಹಾರಗಳನ್ನು ನಡೆಸುತ್ತದೆ. ಇದು ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪವರ್ ಸೇರಿದಂತೆ ಭಾರತದಲ್ಲಿ ಆರು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪೆನಿಗಳನ್ನು ಹೊಂದಿದೆ. ಅದಾನಿ ಸಮೂಹವು ಏಪ್ರಿಲ್ 8ರಂದು ಅಬುಧಾಬಿ ಮೂಲದ ಇಂಟರ್​ನ್ಯಾಷನಲ್ ಹೋಲ್ಡಿಂಗ್ ಕಂಪೆನಿ PJSC (IHC) ಮೂರು ಅದಾನಿ ಪೋರ್ಟ್​ಫೋಲಿಯೊ ಕಂಪೆನಿಗಳಲ್ಲಿ ಯುಎಸ್​ಡಿ 2 ಬಿಲಿಯನ್ ಹೂಡಿಕೆ ಮಾಡಿದೆ – ಅದಾನಿ ಗ್ರೀನ್ ಎನರ್ಜಿ (AGEL), ಅದಾನಿ ಟ್ರಾನ್ಸ್​ಮಿಷನ್ (ATL) ಮತ್ತು ಅದಾನಿ ಎಂಟರ್​ಪ್ರೈಸಸ್ (AEL).

ಕಳೆದ ವಾರ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮಾತನಾಡಿ, 2050ರ ವೇಳೆಗೆ ದೇಶವು ಯುಎಸ್​ಡಿ 30-ಟ್ರಿಲಿಯನ್ ಆರ್ಥಿಕತೆಯಾದರೆ ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗದ ರಾಷ್ಟ್ರ ಆಗಬಹುದು ಎಂದಿದ್ದಾರೆ.”ನಾವು 2050ನೇ ಇಸವಿಯಿಂದ ಸುಮಾರು 10,000 ದಿನಗಳ ದೂರದಲ್ಲಿದ್ದೇವೆ. ಈ ಅವಧಿಯಲ್ಲಿ ನಮ್ಮ ಆರ್ಥಿಕತೆಗೆ ಸುಮಾರು ಯುಎಸ್​ಡಿ 25 ಟ್ರಿಲಿಯನ್ ಅನ್ನು ಸೇರಿಸುತ್ತೇವೆ ಎಂದು ನಿರೀಕ್ಷಿಸುತ್ತೇನೆ. ಇದು ಪ್ರತಿ ದಿನ ಜಿಡಿಪಿಗೆ ಯುಎಸ್​ಡಿ 2.5 ಶತಕೋಟಿಯ ಸೇರ್ಪಡೆಯಾಗಿದೆ. ನಾನು ಇದನ್ನು ನಿರೀಕ್ಷಿಸುತ್ತೇನೆ. ಈ ಅವಧಿಯಲ್ಲಿ ನಾವು ಎಲ್ಲ ರೀತಿಯ ಬಡತನವನ್ನು ನಿರ್ಮೂಲನೆ ಮಾಡುತ್ತೇವೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್