Gautam Adani: ವಾರೆನ್​ ಬಫೆಟ್​ರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತರಾದ ಗೌತಮ್ ಅದಾನಿ

ಗೌತಮ್ ಅದಾನಿ ಅವರು ಜನಪ್ರಿಯ ಹೂಡಿಕೆದಾರ ವಾರೆನ್​ ಬಫೆಟ್​ ಅವರನ್ನು ಮೀರಿ ವಿಶ್ವದ ಐದನೇ ಶ್ರೀಮಂತರಾಗಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Gautam Adani: ವಾರೆನ್​ ಬಫೆಟ್​ರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತರಾದ ಗೌತಮ್ ಅದಾನಿ
ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on: Apr 25, 2022 | 2:32 PM

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ (Gautam Adani) ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ, 59 ವರ್ಷ ವಯಸ್ಸಿನ ಅದಾನಿ ಅವರು ಶುಕ್ರವಾರದ ಮಾರುಕಟ್ಟೆಯ ಅಂತ್ಯದ ವೇಳೆಗೆ 123.7 ಬಿಲಿಯನ್ ಯುಎಸ್​ಡಿ (12,370 ಕೋಟಿ ಯುಎಸ್​ಡಿ) ನಿವ್ವಳ ಮೌಲ್ಯವನ್ನು ಹೊಂದಿದ್ದು, ಬಫೆಟ್ ಅವರ 121.7 ಬಿಲಿಯನ್ ಯುಎಸ್​ಡಿ (12,170 ಕೋಟಿ ಯುಎಸ್​ಡಿ) ಸಂಪತ್ತನ್ನು ದಾಟಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು 2022ರಲ್ಲಿ ತನ್ನ ಸಂಪತ್ತಿಗೆ 43 ಬಿಲಿಯನ್ ಯುಎಸ್​ಡಿ ಸೇರಿಸಿದ್ದು, ಇದು ಅವರ ಪೋರ್ಟ್‌ಫೋಲಿಯೊದಲ್ಲಿ ಶೇ 56.2ರಷ್ಟು ಏರಿಕೆಯಾಗಿದೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (ಯುಎಸ್​ಡಿ 130.2 ಶತಕೋಟಿ), ಬರ್ನಾರ್ಡ್ ಅರ್ನಾಲ್ಟ್ (ಯುಎಸ್​ಡಿ 167.9 ಶತಕೋಟಿ), ಜೆಫ್ ಬೆಜೋಸ್ (ಯುಎಸ್​ಡಿ 170.2 ಶತಕೋಟಿ), ಮತ್ತು ಎಲಾನ್ ಮಸ್ಕ್ (ಯುಎಸ್​ಡಿ 269.7 ಶತಕೋಟಿ) ವಿಶ್ವದ ನಾಲ್ಕು ಶ್ರೀಮಂತ ಉದ್ಯಮಿಗಳ ಹಿಂದೆ ಅದಾನಿ ಮಾತ್ರ ಈಗ ಇದ್ದಾರೆ. ಅದಾನಿಯವರ ಅಂದಾಜು ಯುಎಸ್​ಡಿ 123.7 ಬಿಲಿಯನ್ ನಿವ್ವಳ ಮೌಲ್ಯವು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡುತ್ತದೆ.

ಗೌತಮ್ ಅದಾನಿ ಅವರು ಅದಾನಿ ಸಮೂಹದ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದಾರೆ – ಈ ಸಮೂಹವು ವಿಮಾನ ನಿಲ್ದಾಣಗಳಿಂದ ಬಂದರುಗಳವರೆಗೆ ಮತ್ತು ವಿದ್ಯುತ್ ಉತ್ಪಾದನೆಯಿಂದ ವಿತರಣೆಯವರೆಗೆ ಹಲವಾರು ವ್ಯವಹಾರಗಳನ್ನು ನಡೆಸುತ್ತದೆ. ಇದು ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪವರ್ ಸೇರಿದಂತೆ ಭಾರತದಲ್ಲಿ ಆರು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪೆನಿಗಳನ್ನು ಹೊಂದಿದೆ. ಅದಾನಿ ಸಮೂಹವು ಏಪ್ರಿಲ್ 8ರಂದು ಅಬುಧಾಬಿ ಮೂಲದ ಇಂಟರ್​ನ್ಯಾಷನಲ್ ಹೋಲ್ಡಿಂಗ್ ಕಂಪೆನಿ PJSC (IHC) ಮೂರು ಅದಾನಿ ಪೋರ್ಟ್​ಫೋಲಿಯೊ ಕಂಪೆನಿಗಳಲ್ಲಿ ಯುಎಸ್​ಡಿ 2 ಬಿಲಿಯನ್ ಹೂಡಿಕೆ ಮಾಡಿದೆ – ಅದಾನಿ ಗ್ರೀನ್ ಎನರ್ಜಿ (AGEL), ಅದಾನಿ ಟ್ರಾನ್ಸ್​ಮಿಷನ್ (ATL) ಮತ್ತು ಅದಾನಿ ಎಂಟರ್​ಪ್ರೈಸಸ್ (AEL).

ಕಳೆದ ವಾರ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮಾತನಾಡಿ, 2050ರ ವೇಳೆಗೆ ದೇಶವು ಯುಎಸ್​ಡಿ 30-ಟ್ರಿಲಿಯನ್ ಆರ್ಥಿಕತೆಯಾದರೆ ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗದ ರಾಷ್ಟ್ರ ಆಗಬಹುದು ಎಂದಿದ್ದಾರೆ.”ನಾವು 2050ನೇ ಇಸವಿಯಿಂದ ಸುಮಾರು 10,000 ದಿನಗಳ ದೂರದಲ್ಲಿದ್ದೇವೆ. ಈ ಅವಧಿಯಲ್ಲಿ ನಮ್ಮ ಆರ್ಥಿಕತೆಗೆ ಸುಮಾರು ಯುಎಸ್​ಡಿ 25 ಟ್ರಿಲಿಯನ್ ಅನ್ನು ಸೇರಿಸುತ್ತೇವೆ ಎಂದು ನಿರೀಕ್ಷಿಸುತ್ತೇನೆ. ಇದು ಪ್ರತಿ ದಿನ ಜಿಡಿಪಿಗೆ ಯುಎಸ್​ಡಿ 2.5 ಶತಕೋಟಿಯ ಸೇರ್ಪಡೆಯಾಗಿದೆ. ನಾನು ಇದನ್ನು ನಿರೀಕ್ಷಿಸುತ್ತೇನೆ. ಈ ಅವಧಿಯಲ್ಲಿ ನಾವು ಎಲ್ಲ ರೀತಿಯ ಬಡತನವನ್ನು ನಿರ್ಮೂಲನೆ ಮಾಡುತ್ತೇವೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: Top 10 Richest Indian 2021: ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್