AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್ಟಪ್ ಇಕೋಸಿಸ್ಟಂ: ಭಾರತದಲ್ಲಿ ಬೆಂಗಳೂರೇ ನಂಬರ್ ಒನ್; ಜಾಗತಿಕ ದಿಗ್ಗಜ ನಗರಗಳ ಸಾಲಿನಲ್ಲಿ ಸಿಲಿಕಾನ್ ಸಿಟಿ

Bangalore shines in Global Startup Ecosystem Index 2025: ಉದ್ಯಾನ ನಗರಿ, ಸಿಲಿಕಾನ್ ಸಿಟಿ ಇತ್ಯಾದಿಗಳಿಂದ ಗುರುಗಿರುವ ಬೆಂಗಳೂರು ಭಾರತದ ಸ್ಟಾರ್ಟಪ್ ರಾಜಧಾನಿ ಎಂದೂ ಹೆಸರು ಗಳಿಸಿದೆ. ಸ್ಟಾರ್ಟಪ್ ಜಿನೋಮ್ ಎನ್ನುವ ಸಂಸ್ಥೆಯು ಗ್ಲೋಬಲ್ ಸ್ಟಾರ್ಟಪ್ ಇಕೋಸಿಸ್ಟಂ ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ಬೆಂಗಳೂರು ಗಮನ ಸೆಳೆದಿದೆ. ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಬೆಂಗಳೂರು ಭಾರತದಲ್ಲೇ ಅಗ್ರಸ್ಥಾನದಲ್ಲಿದೆ. ಜಾಗತಿಕವಾಗಿ 14ನೇ ಸ್ಥಾನದಲ್ಲಿದೆ.

ಸ್ಟಾರ್ಟಪ್ ಇಕೋಸಿಸ್ಟಂ: ಭಾರತದಲ್ಲಿ ಬೆಂಗಳೂರೇ ನಂಬರ್ ಒನ್; ಜಾಗತಿಕ ದಿಗ್ಗಜ ನಗರಗಳ ಸಾಲಿನಲ್ಲಿ ಸಿಲಿಕಾನ್ ಸಿಟಿ
ಬೆಂಗಳೂರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 16, 2025 | 11:35 AM

ಬೆಂಗಳೂರು, ಜೂನ್ 16: ಹಲವು ಸಾಧನೆ, ಹೆಸರು, ದಾಖಲೆ, ಮೈಲಿಗಲ್ಲುಗಳಿಗೆ ಹೆಸರುವಾಸಿಯಾದ ಬೆಂಗಳೂರು ನಗರ ಇತ್ತೀಚೆಗೆ ಸ್ಟಾರ್ಟಪ್ ನಗರಿ ಎಂದೂ ಖ್ಯಾತವಾಗಿದೆ. ಅತಿಹೆಚ್ಚು ಭಾರತೀಯ ಸ್ಟಾರ್ಟಪ್​​ಗಳು ಬೆಂಗಳೂರಿನಲ್ಲಿ ಇವೆ. ಗ್ಲೋಬಲ್ ಸ್ಟಾರ್ಟಪ್ ಇಕೋಸಿಸ್ಟಂ 2025 ವರದಿ (Global Startup Ecosystem Report 2025) ಪ್ರಕಾರ ಬೆಂಗಳೂರು ಒಂದು ವರ್ಷದಲ್ಲಿ ಜಾಗತಿಕವಾಗಿ ಏಳು ಸ್ಥಾನ ಮೇಲೇರಿ, 14ನೇ ಸ್ಥಾನ ಪಡೆದಿದೆ. ಹಿಂದಿನ ವರ್ಷದ ಇಂಡೆಕ್ಸ್​​ನಲ್ಲಿ ಅದು 21ನೇ ಸ್ಥಾನದಲ್ಲಿತ್ತು. ಭಾರತೀಯ ನಗರಗಳ ಪೈಕಿ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ ನಗರಗಳನ್ನೂ ಹಿಂದಿಕ್ಕಿ ಬೆಂಗಳೂರು ನಂಬರ್ ಒನ್ ಎನಿಸಿದೆ.

ಪ್ಯಾರಿಸ್​​ನಲ್ಲಿ ನಡೆದ ವಾರ್ಷಿಕ ತಂತ್ರಜ್ಞಾನ ಸಮಾವೇಶದಲ್ಲಿ ಸ್ಟಾರ್ಟಪ್ ಜಿನೋಮ್ (Startup Genome) ಎನ್ನುವ ಕನ್ಸಲ್ಟೆಂಟ್ ಕಂಪನಿಯು ಈ ವರದಿಯನ್ನು ಬಿಡುಗಡೆ ಮಾಡಿದೆ. ವಿವಿಧ ಪ್ರದೇಶಗಳಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಫಂಡಿಂಗ್, ಮಾರುಕಟ್ಟೆ ಲಭ್ಯತೆ, ಪ್ರತಿಭೆ, ಅನುಭವ, ಜ್ಞಾನ, ಎಐ ಅಳವಡಿಕೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಮಿಲಿಯನೇರ್​​​ಗಳ ಸಂಖ್ಯೆ 85,000 ಕ್ಕಿಂತ ಹೆಚ್ಚು; ಜಾಗತಿಕವಾಗಿ ಮೂರೇ ದೇಶಗಳು ಭಾರತಕ್ಕಿಂತ ಮುಂದು

ಇದನ್ನೂ ಓದಿ
Image
ಭಾರತದಲ್ಲಿ ಲಕ್ಷ ಸಮೀಪದತ್ತ ಮಿಲಿಯನೇರ್​​ಗಳ ಸಂಖ್ಯೆ
Image
ಆಪ್ಟಾನಿಕ್ ಶೀಲ್ಡ್; ಡಿಆರ್​​ಡಿಒದಿಂದ ಹೊಸ ಡಿಫೆನ್ಸ್ ಸಿಸ್ಟಂ
Image
ಪಾಕಿಸ್ತಾನ 3 ರಫೇಲ್ ಹೊಡೆದಿರುವುದು ನಿಜವಲ್ಲ: ಡಸ್ಸೋ ಏವಿಯೇಶನ್ ಸಿಇಒ
Image
ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸುಂಗ್ ಮತ್ತೆ ನಂ. 1

ಟಾಪ್-5 ಎಐ ನಗರಗಳಲ್ಲಿ ಬೆಂಗಳೂರು

ಬೆಂಗಳೂರಿನ ಗರಿಮೆ ಇಷ್ಟಕ್ಕೆ ಮುಗಿದಿಲ್ಲ. ವಿಶ್ವದ ಐದು ಅಗ್ರಮಾನ್ಯ ಎಐ ನಗರಗಳ ಸಾಲಿನಲ್ಲಿ ಬೆಂಗಳೂರು ಇದೆ. ಅಮೆರಿಕದ ಸಿಲಿಕಾನ್ ವ್ಯಾಲಿ, ನ್ಯೂಯಾರ್​ಕ್ ನಗರ ಮತ್ತು ಬ್ರಿಟನ್ ರಾಜಧಾನಿ ಲಂಡನ್ ನಗರಗಳು ಮೊದಲ ಮೂರು ಸ್ಥಾನ ಪಡೆದರೆ ಬೆಂಗಳೂರು ಐದನೆ ಸ್ಥಾನ ಪಡೆದಿದೆ. ಸ್ಟಾರ್ಟಪ್ ಜಿನೋಮ್ ವಿಶ್ವದ ಟಾಪ್-50 ಎಐ ನಗರಗಳ ಪಟ್ಟಿ ಮಾಡಿದ್ದು ಅದರಲ್ಲಿ ಬೆಂಗಳೂರು 5ನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ 136 ಬಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟಪ್ ಇಕೋಸಿಸ್ಟಂ

ಗ್ಲೋಬಲ್ ಸ್ಟಾರ್ಟಪ್ ಇಕೋಸಿಸ್ಟಂ ವರದಿ ಪ್ರಕಾರ, ಬೆಂಗಳೂರಿನ ಯಶಸ್ಸು ಹಾಗೆ ಸುಮ್ಮನೆ ಸಿಕ್ಕಿದ್ದಲ್ಲ. ಬಹಳ ವರ್ಷಗಳಿಂದ ಇಲ್ಲಿ ಪೂರಕ ವಾತಾವರಣ ನಿರ್ಮಾಣವಾಗಿರುವುದರ ಫಲ ಇದು. 2020ರಿಂದ 2024ರವರೆಗೆ ಬೆಂಗಳೂರಿನಲ್ಲಿ 32 ಯೂನಿಕಾರ್ನ್ ಕಂಪನಿಗಳು ಶುರುವಾಗಿವೆ. ಹಲವು ಕಂಪನಿಗಳು ಜಾಗತಿಕ ಮಟ್ಟಕ್ಕೂ ಬೆಳೆದಿವೆ. 2024ರಲ್ಲಿ ಬೆಂಗಳೂರಿನಲ್ಲಿರುವ ಒಟ್ಟು ಸ್ಟಾರ್ಟಪ್ ಇಕೋಸಿಸ್ಟಂ ಮೌಲ್ಯ 136 ಬಿಲಿಯನ್ ಡಾಲರ್ (11.7 ಲಕ್ಷ ಕೋಟಿ ರೂ) ಮುಟ್ಟಿದೆ.

ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ಆ್ಯಪಲ್ ಅನ್ನು ಹಿಂದಿಕ್ಕಿದ ಸ್ಯಾಮ್ಸುಂಗ್; ಎಐ ಶಕ್ತ ಪರಿಕರಗಳೇ ಈ ಮುನ್ನಡೆಗೆ ಕಾರಣ

ವೈವಿಧ್ಯಮಯ ಪ್ರತಿಭಾನ್ವಿತ ಮಾನವ ಸಂಪನ್ಮೂಲಗಳ ಲಭ್ಯತೆ, ಸರ್ಕಾರದಿಂದ ಬಂಡವಾಳ ಹೂಡಿಕೆ, ವಿವಿಧ ವಲಯಗಳ ಪ್ರಬಲ ಬೆಳವಣಿಗೆ ಇತ್ಯಾದಿ ಹಲವು ಅಂಶಗಳು ಬೆಂಗಳೂರಿನಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ ಬಲವಾಗಿ ಬೇರೂರುವಂತೆ ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್
ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ
ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ