Cognizant Layoffs: ಆಗ ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ಲೇ ಆಫ್

Office Spaces of Cognizant To Go Shorter: ಈ ವರ್ಷ ಕಂಪನಿಗೆ ಆದಾಯ ಕಡಿಮೆ ಬರುವ ಸಾಧ್ಯತೆ ಇರುವುದರಿಂದ ವೆಚ್ಚ ಕಡಿಮೆ ಮಾಡಲು ಕಾಗ್ನೈಜೆಂಟ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಉದ್ಯೋಗಿಗಳ ಲೇ ಆಫ್ ಮತ್ತು ಕಚೇರಿ ಸ್ಥಳ ಮೊಟಕುಗೊಳಿಸುವುದು ಸೇರಿದಂತೆ ವಿವಿಧ ಕ್ರಮಗಳಿಗೆ ಐಟಿ ಕಂಪನಿ ನಿರ್ಧರಿಸಿದೆ.

Cognizant Layoffs: ಆಗ ಅಕ್ಸೆಂಚರ್​ನಲ್ಲಿ 19 ಸಾವಿರ, ಈಗ ಕಾಗ್ನಿಜೆಂಟ್​ನಲ್ಲಿ 3,500 ಉದ್ಯೋಗಿಗಳ ಲೇ ಆಫ್
ಕಾಗ್ನಿಜೆಂಟ್
Follow us
|

Updated on: May 04, 2023 | 12:04 PM

ನವದೆಹಲಿ: ಉದ್ಯೋಗಿಗಳನ್ನು ಸಾಲು ಸಾಲಾಗಿ ಲೇ ಆಫ್ ಮಾಡುತ್ತಿರುವ ಟೆಕ್ ಕಂಪನಿಗಳ ಪಟ್ಟಿಗೆ ಈಗ ಕಾಗ್ನಿಜೆಂಟ್ (Cognizant) ಸೇರ್ಪಡೆಯಾಗಿದೆ. ಭಾರತ ಮೂಲದ ಅಮೆರಿಕನ್ ಐಟಿ ಕಂಪನಿ ಕಾಗ್ನೈಜೆಂಟ್ ತನ್ನ ವೆಚ್ಚ ಕಡಿಮೆ ಮಾಡಲು ಮತ್ತು ಚುರುಕು ಕಂಡುಕೊಳ್ಳಲು ತನ್ನ ಕಾರ್ಯಾಚರಣೆ ಪ್ರಕ್ರಿಯೆ ಸರಳಗೊಳಿಸುತ್ತಿದೆ. ನೆಕ್ಸ್​ಟ್​ಜೆನ್ (NextGen) ಎನ್ನುವ ಯೋಜನೆಯೊಂದನ್ನು ಕಾಗ್ನೈಜೆಂಟ್ ಜಾರಿಗೆ ತಂದಿದ್ದು, ಇದರಲ್ಲಿ ಕಂಪನಿ ಕಾರ್ಯಾಚರಿಸುವ ವಿಧಾನವನ್ನು ಹೆಚ್ಚು ಪರಿಣಾಮಕಾರಿ ಮತ್ತು ಸರಳಗೊಳಿಸಲಾಗುತ್ತಿದೆ. ಇದರಿಂದ 3,500 ಉದ್ಯೋಗಿಗಳಿಗೆ ಕೆಲಸ ಹೋಗುವ ಸಾಧ್ಯತೆ ಇದೆ. ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಷ್ಟೇ ಅಲ್ಲ, ಕೆಲಸ ಸ್ಥಳದಲ್ಲೂ ಬದಲಾವಣೆ ಮಾಡಲಾಗುತ್ತಿದೆ. ಅನವಶ್ಯಕತ ಕಚೇರಿ ಸ್ಥಳವನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದಲೂ ಕಂಪನಿಗೆ ಒಂದಷ್ಟು ವೆಚ್ಚದ ಉಳಿತಾಯವಾಗುವ ನಿರೀಕ್ಷೆ ಇದೆ.

ಕಾಗ್ನಿಜೆಂಟ್ ಟೆಕ್ನಾಲಜೀಸ್ ಕಂಪನಿಯಲ್ಲಿ ಸದ್ಯ ಸುಮಾರು 3.5 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಈಗ 3,500 ಮಂದಿ ಅಂದರೆ ಶೇ. 1ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಅಂದರೆ ನೂರು ಉದ್ಯೋಗಿ ಪೈಕಿ ಒಬ್ಬರು ಮನೆಗೆ ಹೋಗಬೇಕಾಗುತ್ತದೆ. ಉದ್ಯೋಗಿ ವೆಚ್ಚ ಉಳಿಸುವುದಕ್ಕಿಂತ ಹೆಚ್ಚಾಗಿ ಕಾರ್ಯಾಚರಣೆ ವ್ಯವಸ್ಥೆ ಸರಳಗೊಳಿಸುವ ನಿಟ್ಟಿನಲ್ಲಿ ಲೇ ಆಫ್ ನಡೆಯುತ್ತಿರವಂತೆ ಮೇಲ್ನೋಟಕ್ಕೆ ತೋರುತ್ತಿದೆ. ಕಾರ್ಯಸ್ಥಳ ತೆರವು ಮೂಲಕ ಉಳಿಸಿದ ಹಣವನ್ನು ಸಣ್ಣ ನಗರಗಳಲ್ಲಿ ಕಚೇರಿ ಸ್ಥಾಪಿಸಲು ಬಳಸಲು ಕಾಗ್ನೈಜೆಂಟ್ ಯೋಜಿಸಿದೆ. ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಲು ಅನುಕೂಲವಾಗಲು ಕಾಗ್ನೈಜೆಂಟ್ ಈ ಪ್ರಯತ್ನ ಮಾಡುತ್ತಿದೆ. ಭಾರತದಲ್ಲಿ 19,000 ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಅಕ್ಸೆಂಚರ್​ಗೆ ಹೋಲಿಸಿದರೆ ಕಾಗ್ನಿಜೆಂಟ್ ಲೇ ಆಫ್ ವಿಚಾರದಲ್ಲಿ ತುಸು ಮೃದುವಾಗಿದೆ.

ಇದನ್ನೂ ಓದಿExtra Week Offs: ಬ್ಯಾಂಕುಗಳಿಗೆ ವಾರದಲ್ಲಿ 2 ದಿನ ರಜೆ; ನಿತ್ಯ 40 ನಿಮಿಷ ಹೆಚ್ಚು ಕೆಲಸ; ಸರ್ಕಾರದಿಂದ ಶೀಘ್ರದಲ್ಲೇ ಅಧಿಸೂಚನೆ?

ಈ ವರ್ಷ ಆದಾಯ ಕಡಿಮೆ ಆಗುವ ಭೀತಿ ಕಾಗ್ನಿಜೆಂಟ್​ಗೆ

ಕಾಗ್ನಿಜೆಂಟ್ ತನ್ನ ಮೊದಲ ಕ್ವಾರ್ಟರ್​ನಲ್ಲಿ (2023 ಜನವರಿಯಿಂದ ಮಾರ್ಚ್) ಶೇ. 3ರಷ್ಟು ಆದಾಯ ಹೆಚ್ಚಳ ಕಂಡಿದೆಯಾದರೂ, ಈ ವರ್ಷ ತನ್ನ ಅದಾಯ ವೃದ್ಧಿ ಶೇ. 0.8ಕ್ಕಿಂತ ಕಡಿಮೆಗೆ ಇಳಿಯಬಹುದು ಎಂದು ಅಂದಾಜಿಸಿದೆ. ಮೈನಸ್ ಶೇ. 1.2ರಷ್ಟು ಹಿನ್ನಡೆಯೂ ಆಗಬಹುದು ಎನ್ನುವ ಭೀತಿಯನ್ನೂ ಅದು ವ್ಯಕ್ತಪಡಿಸಿದೆ. ಐಟಿ ಕಂಪನಿಗಳ ಪೈಕಿ ಅತಿ ಕಡಿಮೆ ಲಾಭದ ಮಾರ್ಜಿನ್ ಹೊಂದಿರುವ ಕಂಪನಿಗಳಲ್ಲಿ ಕಾಗ್ನೈಜೆಂಟ್ ಕೂಡ ಒಂದು. ಹೀಗಾಗಿ, ಈ ಸಂಸ್ಥೆಗೆ ಬ್ಯುಸಿನೆಸ್ ಕಡಿಮೆ ಆದರೆ ಆದಾಯವೂ ಇನ್ನೂ ವೇಗವಾಗಿ ಕಡಿಮೆ ಆಗುತ್ತದೆ.

ಕಾಗ್ನಿಜೆಂಟ್ ಕಂಪನಿಯಲ್ಲಿ ಇತ್ತೀಚೆಗೆ ಸಾಕಷ್ಟು ಆಡಳಿತಾತ್ಮಕ ಬದಲಾವಣೆಗಳಾಗುತ್ತಿವೆ. ಸಿಇಒ ಆಗಿದ್ದ ಬ್ರಿಯಾನ್ ಹಮ್​ಫ್ರೀಸ್ ಅವರನ್ನು ತೆಗೆದುಹಾಕಲಾಗಿತ್ತು. ಮೇಲ್ಪದರ ಇನ್ನೂ ಹಲವು ನಾಯಕರು ಕೆಲಸ ಬಿಡುವ ಸಾಧ್ಯತೆ ಇದೆ. ರವಿಕುಮಾರ್ ಎಸ್ ಎಂಬುವವರು ಇತ್ತೀಚೆಗಷ್ಟೇ ಸಿಇಒ ಆಗಿ ನೇಮಕವಾಗಿದ್ದಾರೆ. ಇಂಥ ಹೊತ್ತಿನಲ್ಲಿ ಹೊಸ ಸಿಇಒ ಮುಂದೆ ಗುರುತರ ಸವಾಲುಗಳಿವೆ. ಕಾಗ್ನಿಜೆಂಟ್​ಗೆ ಪ್ರತಿಸ್ಪರ್ಧಿಗಳಾಗಿ ಇನ್ಫೋಸಿಸ್, ಟಿಸಿಎಸ್, ಅಕ್ಸೆಂಚರ್ ಮೊದಲಾದ ಕಂಪನಿಗಳಿವೆ.

ಇದನ್ನೂ ಓದಿOla Refund: ಒಲಾ ಎಲೆಕ್ಟ್ರಿಕ್ ಶಾಕ್..! ಗ್ರಾಹಕರಿಗೆ 130 ಕೋಟಿ ರೂ ರೀಫಂಡ್; ಕಾರಣ ಏನು?

ಅಮೆರಿಕದಲ್ಲಿ ಮುಖ್ಯ ಕಚೇರಿ ಇದ್ದರೂ ಕಾಗ್ನಿಜೆಂಟ್ ಮೂಲ ಭಾರತದ್ದು:

ಕಾಗ್ನೈಜೆಂಟ್ ಸಂಸ್ಥೆ ಸ್ಥಾಪನೆಯಾಗಿದ್ದು 1994ರಂದು ಚೆನ್ನೈನಲ್ಲಿ. ಆತ ತೊಂಬತ್ತರ ದಶಕದಲ್ಲಿ ಬಹಳ ದೈತ್ಯ ಎನಿಸಿದ್ದ ಸತ್ಯಂ ಕಂಪ್ಯೂಟರ್ಸ್ ಹಾಗೂ ಡುನ್ ಅಂಡ್ ಬ್ರಾಡ್​ಸ್ಟ್ರೀಟ್ ಸಂಸ್ಥೆಯ ಜಂಟಿ ಯೋಜನೆಯಾಗಿ ಇದರ ಸ್ಥಾಪನೆ ಆಗಿದ್ದು. ಬಳಿಕ ಇದರ ಮುಖ್ಯ ಕಚೇರಿಯನ್ನು ಅಮೆರಿಕಗೆ ವರ್ಗಾಯಿಸಲಾಯಿತು. ಅಲ್ಲಿನ ನಾಸ್ಡಾಕ್ ಷೇರುಪೇಟೆಯಲ್ಲಿ ಇದು ಲಿಸ್ಟ್ ಆಗಿದೆ. ಅಮೆರಿಕದ ಕಂಪನಿ ಆದರೂ ಇದರ ಹೆಚ್ಚಿನ ಕಾರ್ಯಾಚರಣೆ ಇರುವುದು ಭಾರತದಲ್ಲೇ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ