AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSMEs: ಭಾರತದ ಜಿಡಿಪಿಗೆ ಎಂಎಸ್​ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?

Indian Economy and MSMEs Contribution: ಭಾರತದ ಆರ್ಥಿಕತೆಗೆ ಎಂಎಸ್​ಎಂಇಗಳ ಕೊಡುಗೆ ಶೇ. 30ರಷ್ಟಿದೆ. ಚೀನಾದಲ್ಲಿ ಇದರ ಪ್ರಮಾಣ ಶೇ. 60ರಷ್ಟಿದೆ. ಮುಂದುವರಿದ ದೇಶಗಳಲ್ಲಿ ಅಲ್ಲಿನ ಆರ್ಥಿಕತೆಗೆ ಸಣ್ಣ ಉದ್ದಿಮೆಗಳ ಕೊಡುಗೆ ಹೆಚ್ಚಿನ ಮಟ್ಟದಲ್ಲಿ ಇದೆ. ರಿಯಲ್ ಎಸ್ಟೇಟ್ ಕನ್ಸಲ್ಟಿಂಗ್ ಸಂಸ್ಥೆ ಸಿಬಿಆರ್​ಇ ಬಿಡುಗಡೆ ಮಾಡಿದ ವರದಿಯಲ್ಲಿ ಎಂಎಸ್​ಎಂಇಗಳ ಕೊಡುಗೆ ಬಗ್ಗೆ ಬೆಳಕು ಚೆಲ್ಲಲಾಗಿದೆ.

MSMEs: ಭಾರತದ ಜಿಡಿಪಿಗೆ ಎಂಎಸ್​ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?
ಎಂಎಸ್​ಎಂಇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 09, 2024 | 10:30 AM

Share

ನವದೆಹಲಿ, ಜನವರಿ 9: ರಿಯಲ್ ಎಸ್ಟೇಟ್ ಕನ್ಸಲ್ಟಿಂಗ್ ಸಂಸ್ಥೆ ಸಿಬಿಆರ್​ಇ ಸೌತ್ ಏಷ್ಯಾ ಭಾರತದ ಎಂಎಸ್​ಎಂಇ ವಲಯದ (MSME sector) ಬಗ್ಗೆ ಕುತೂಹಲಕಾರಿ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದೆ. ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳು (ಎಂಎಸ್​ಎಂಇ) ಭಾರತದ ಆರ್ಥಿಕತೆಗೆ ಹೇಗೆ ಪುಷ್ಟಿ ಕೊಡುತ್ತಿವೆ ಎಂಬುದನ್ನು ಅವಲೋಕಿಸುವ ವರದಿ ಇದು. ‘ಎಂಎಸ್​ಎಂಇ: ಆರ್ಥಿಕ ಪ್ರಗತಿಯ ಯಂತ್ರಗಳ ಅನಾವರಣ’ (MSMEs: Unleashing the Engines of Economic Prosperity) ಎಂಬ ಈ ವರದಿಯಲ್ಲಿ ಭಾರತದ ವಿವಿಧ ರಾಜ್ಯಗಳು ಎಂಎಸ್​ಎಂಇ ವಲಯಕ್ಕೆ ಎಷ್ಟು ಕೊಡುಗೆ ನೀಡುತ್ತಿವೆ ಎಂಬುದನ್ನೂ ಅವಲೋಕಿಸಿದೆ.

ಸಿಬಿಆರ್​ಇ ಪ್ರಕಟಿಸಿದ ಈ ವರದಿಯ ಪ್ರಕಾರ ದೇಶದ ಎಂಎಸ್​ಎಂಇ ವಲಯಕ್ಕೆ ಮಹಾರಾಷ್ಟ್ರದ ಕೊಡುಗೆ ಶೇ. 17ರಷ್ಟಿದೆ. ತಮಿಳುನಾಡು ಮತ್ತು ಉತ್ತರಪ್ರದೇಶ ಟಾಪ್-3 ರಾಜ್ಯಗಳ ಪಟ್ಟಿಯಲ್ಲಿವೆ. ಬಿಮಾರು ರಾಜ್ಯಗಳ ಪೈಕಿ ಒಂದು ಎಂದು ಸದಾ ಹೀಯಾಳಿಸಲ್ಪಡುವ ಉತ್ತರಪ್ರದೇಶ ರಾಜ್ಯ ಎಂಎಸ್​ಎಂಇ ವಲಯಕ್ಕೆ ಶೇ. 9ರಷ್ಟು ಕೊಡುಗೆ ನೀಡುತ್ತದೆ ಎನ್ನುವುದು ಗಮನಾರ್ಹ. ಇದು ಉದ್ಯಮ್ ಪೋರ್ಟಲ್ ಮೂಲಕ ನೊಂದಣಿಯಾದ ಎಂಎಸ್​ಎಂಇಗಳ ದತ್ತಾಂಶದ ಮೇಲೆ ಆಧಾರಿತವಾಗಿರುವ ವರದಿ.

ಇದನ್ನೂ ಓದಿ: Maldives: ಭಾರತದಲ್ಲಿ ಟ್ರೆಂಡ್ ಆಗುತ್ತಿದೆ #UninstallMakeMyTrip; ಯಾಕೆ ಮೇಕ್ ಮೈ ಟ್ರಿಪ್ ಮೇಲೆ ಆಕ್ರೋಶ?

ಎಂಎಸ್​ಎಂಇ ಸಂಖ್ಯೆಯಲ್ಲಿ ಕರ್ನಾಟಕದ ಸ್ಥಾನ ಎಷ್ಟು?

ಭಾರತದ ಐಟಿ ಬಿಟಿ ಸೆಂಟರ್ ಎನಿಸಿರುವ ಮತ್ತು ಸ್ಟಾರ್ಟಪ್​ಗಳ ಅಡ್ಡೆಯಾಗಿರುವ ಕರ್ನಾಟಕ ಎಂಎಸ್​ಎಂಇ ವಿಚಾರದಲ್ಲಿ ಮುಂಚೂಣಿಯಲ್ಲಿ ಇಲ್ಲ ಎನ್ನುವುದು ಆಶ್ಚರ್ಯ. ಸಣ್ಣ ಉದ್ದಿಮೆಗಳ ವಲಯದಲ್ಲಿ ಕರ್ನಾಟಕದ ಪಾಲು ಶೇ. 6 ಮಾತ್ರ ಇದ್ದು, ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬಳ್ಳಿಯಲ್ಲಿ ಹೆಚ್ಚಿನ ಸ್ಟಾರ್ಟಪ್​ಗಳು ನೆಲಸಿವೆ.

ಎಂಎಸ್​ಎಂಇ ವಲಯಕ್ಕೆ ರಾಜ್ಯಗಳ ಕೊಡುಗೆ

  1. ಮಹಾರಾಷ್ಟ್ರ: ಶೇ. 17
  2. ತಮಿಳುನಾಡು: ಶೇ. 10
  3. ಉತ್ತರಪ್ರದೇಶ: ಶೇ. 9
  4. ಗುಜರಾತ್: ಶೇ. 7
  5. ರಾಜಸ್ಥಾನ್: ಶೇ. 7
  6. ಕರ್ನಾಟಕ: ಶೇ. 6
  7. ಮಧ್ಯಪ್ರದೇಶ: ಶೇ. 5
  8. ಬಿಹಾರ: ಶೇ. 4
  9. ಪಶ್ಚಿಮ ಬಂಗಾಳ: ಶೇ. 4
  10. ಪಂಜಾಬ್: 4

ಇದನ್ನೂ ಓದಿ: EaseMyTrip: ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರ ಹಿತಾಸಕ್ತಿ ಮುಖ್ಯ; ಮಾಲ್ಡೀವ್ಸ್ ಅಲ್ಲ, ಲಕ್ಷದ್ವೀಪ, ಅಯೋಧ್ಯೆ ಪ್ಯಾಕೇಜ್ ಕೊಡ್ತೀವಿ: ಈಸ್ ಮೈ ಟ್ರಿಪ್

ಭಾರತದಲ್ಲಿ ಎಂಎಸ್​ಎಂಇಗಳ ಸಂಖ್ಯೆ ಎಷ್ಟಿದೆ?

ಸಿಬಿಆರ್​ಇ ವರದಿ ಪ್ರಕಾರ ಭಾರತ ಸರ್ಕಾರದ ಉದ್ಯಮ್ ಪೋರ್ಟಲ್​ನಲ್ಲಿ ನೊಂದಣಿಯಾದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಂಖ್ಯೆ 2.1 ಕೋಟಿಯಷ್ಟಿದೆ. ಈ ಎಂಎಸ್​ಎಂಇಗಳು ದೇಶದ ಜಿಡಿಪಿಗೆ ನೀಡುತ್ತಿರುವ ಕೊಡುಗೆ ಶೇ. 30ರಷ್ಟಿದೆ. ಬರೋಬ್ಬರಿ 14 ಕೋಟಿ ಜನರಿಗೆ ಈ ವಲಯದಲ್ಲಿ ಉದ್ಯೋಗ ಸಿಕ್ಕಿದೆ. ಅಷ್ಟೇ ಅಲ್ಲ, ಭಾರತದ ಒಟ್ಟು ರಫ್ತಿನಲ್ಲಿ ಎಂಎಸ್​ಎಂಇಗಳ ಕೊಡುಗೆ ಶೇ. 44ರಷ್ಟಿದೆ ಎನ್ನುವುದು ಗಮನಾರ್ಹ.

ಬೇರೆ ಬೇರೆ ದೇಶಗಳಲ್ಲಿ ಎಂಎಸ್​ಎಂಇಗಳಿಂದ ಜಿಡಿಪಿಗೆ ಎಷ್ಟಿದೆ ಕೊಡುಗೆ?

  • ಚೀನಾ: ಶೇ. 60
  • ಜಪಾನ್: ಶೇ. 50
  • ಜರ್ಮನಿ: ಶೇ. 48
  • ಅಮೆರಿಕ: ಶೇ. 44
  • ಸಿಂಗಾಪುರ: ಶೇ. 44
  • ಸೌತ್ ಆಫ್ರಿಕಾ: ಶೇ. 40
  • ಬ್ರೆಜಿಲ್: ಶೇ. 30
  • ಭಾರತ: ಶೇ. 30
  • ರಷ್ಯಾ: ಶೇ. 22

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮುಂದುವರಿದ ದೇಶಗಳಲ್ಲಿ ಅಲ್ಲಿನ ಆರ್ಥಿಕತೆಗೆ ಎಂಎಸ್​ಎಂಇಗಳ ಕೊಡುಗೆ ಹೆಚ್ಚಿನ ಮಟ್ಟದಲ್ಲಿ ಇದೆ. ಹಾಗೆಯೇ, ಭಾರತದಲ್ಲಿ ಎಂಎಸ್​ಎಂಇ ವಲಯಕ್ಕೆ ಇರುವ ತೊಡರುಗಳ ಬಗ್ಗೆಯೂ ಈ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.

ಇದನ್ನೂ ಓದಿ: Farmers: ಪಿಎಂ ಕಿಸಾನ್ ಯೋಜನೆ; ರೈತರಿಗೆ ಸಿಗಲಿದೆ 8,000 ರೂ ಹಣ; ಕಂತುಗಳ ಸಂಖ್ಯೆ 4ಕ್ಕೆ ಏರಿಕೆ ಸಾಧ್ಯತೆ

ಎಂಎಸ್​ಎಂಇ ವಲಯಕ್ಕೆ ಇರುವ ಹಿನ್ನಡೆ

  • ಭಾರತದಲ್ಲಿ 14 ಪ್ರತಿಶತದಷ್ಟು ಎಂಎಸ್ಎಂಇಗಳಿಗೆ ಮಾತ್ರವೇ ಸಾಲ ಸೌಲಭ್ಯ ಇದೆ. ಮುಂದುವರಿದ ದೇಶಗಳಲ್ಲಿ ಇದರ ಪ್ರಮಾಣ ಶೇ. 30ರಷ್ಟಿದೆ.
  • ಭಾರತದಲ್ಲಿ ಅರ್ಧದಷ್ಟು ಸಣ್ಣ ಉದ್ದಿಮೆಗಳ ಉತ್ಪನ್ನ ಮತ್ತು ಸೇವೆಗಳು ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಇಲ್ಲ.
  • ಭಾರತದಲ್ಲಿ ಎಂಎಸ್​ಎಂಇಗಳ ಬೆಳವಣಿಗೆಗೆ ಪೂರಕವಾಗಿರುವ ಸಾರಿಗೆ, ವಿದ್ಯುತ್, ಡಿಜಿಟಲ್ ಕನೆಕ್ಟಿವಿಟಿ ಇತ್ಯಾದಿ ಸಮರ್ಪಕ ಇನ್​ಫ್ರಾಸ್ಟ್ರಕ್ಚರ್ ಇನ್ನೂ ನಿರ್ಮಾಣವಾಗಿಲ್ಲ.
  • ಎಂಎಸ್​ಎಂಇಗಳಿಗೆ ಕುಶಲ ಕಾರ್ಮಿಕರು ಸಿಗುವುದು ಕಷ್ಟಕರವಾಗಿದೆ. ಇದು ಅಸಂಘಟಿತ ವಲಯ ಎನ್ನುವ ಭಾವನೆ ನೆಲಸಿರುವುದು ಇದಕ್ಕೆ ಕಾರಣವಾಗಿಎ.
  • ಎಂಎಸ್​ಎಂಇಗಳು ದೂರದ ಮಾರುಕಟ್ಟೆಗಳನ್ನು ತಲುಪುವುದು ಕಷ್ಟವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್