AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀಪ್ಯಾಡ್ ಇಲ್ಲ, ಟಚ್ ಸ್ಕ್ರೀನ್ ಇಲ್ಲ: ಸ್ಮಾರ್ಟ್​​ಫೋನ್​ಗಿಂಥ ಪೂರ್ಣ ಭಿನ್ನವಾದ ಸಾಧನ ತಯಾರಿಸುತ್ತಿರುವ ಓಪನ್​​ಎಐ

OpenAI developing AI-powered device: ಸ್ಯಾಮ್ ಆಲ್ಟ್​​ಮ್ಯಾನ್ ಅವರ ಓಪನ್​​ಎಐ ಸಂಸ್ಥೆ ಈಗಿನ ಸ್ಮಾರ್ಟ್​​ಫೋನ್ ಮತ್ತು ಕಂಪ್ಯೂಟರ್​​ಗಿಂತ ಬಹಳ ಭಿನ್ನವಾದ ಎಐ ಶಕ್ತ ಸಾಧನವೊಂದನ್ನು ತಯಾರಿಸುತ್ತಿದೆ. ಚ್ಯಾಟ್​​ಜಿಪಿಟಿಯಂತಹ ಎಐ ಮಾಡಲ್ ನೀಡಿದ ಈ ಸಂಸ್ಥೆಯು ಈ ಸಾಧನದ ವಿನ್ಯಾಸಕ್ಕಾಗಿ ಮಾಜಿ ಆ್ಯಪಲ್ ಚೀಫ್ ಡಿಸೈನ್ ಅಫೀಸರ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಹೊಸ ಸಾಧನದಲ್ಲಿ ಟಚ್ ಸ್ಕ್ರೀನ್ ಇರಲ್ಲ, ಕೀಪ್ಯಾಡ್ ಇರಲ್ಲ ಎಂದು ಹೇಳಲಾಗುತ್ತಿದೆ.

ಕೀಪ್ಯಾಡ್ ಇಲ್ಲ, ಟಚ್ ಸ್ಕ್ರೀನ್ ಇಲ್ಲ: ಸ್ಮಾರ್ಟ್​​ಫೋನ್​ಗಿಂಥ ಪೂರ್ಣ ಭಿನ್ನವಾದ ಸಾಧನ ತಯಾರಿಸುತ್ತಿರುವ ಓಪನ್​​ಎಐ
ಓಪನ್​ಎಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2025 | 5:20 PM

Share

ನವದೆಹಲಿ, ಮೇ 21: ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಆವಿಷ್ಕಾರಗಳು, ಹೊಸ ಆಲೋಚನೆಗಳು ಹೊರಹೊಮ್ಮುತ್ತಲೇ ಇರುತ್ತವೆ. ಮೂರು ದಶಕದ ಹಿಂದೆ ಸ್ಮಾರ್ಟ್​​ಫೋನ್​ಗಳು ಜನಸಾಗರವನ್ನೇ ಆಳುತ್ತವೆ ಎಂದು ಯಾರಾದರೂ ಊಹಿಸಿದ್ದರಾ? ಸ್ಮಾರ್ಟ್​​ಫೋನ್ ಬಂದಾಗಲೇ ಅದೊಂದು ಅಮೋಘ ಕಲ್ಪನೆ ಎನಿಸಿತ್ತು. ಈಗ ಅಕ್ಷರಗಳನ್ನು ಟೈಪಿಸುವ ಕೀಪ್ಯಾಡ್ ಮತ್ತು ಟಚ್ ಸ್ಕ್ರೀನ್ ಇಲ್ಲದ ಸ್ಮಾರ್ಟ್​​ಫೋನ್ ಅನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾ? ಇಂಥದ್ದೊಂದು ಸಾಧನವನ್ನು ಹೊರತರುತ್ತಿದೆ ಓಪನ್​ಎಐ ಸಂಸ್ಥೆ. ಚ್ಯಾಟ್​​ಜಿಪಿಟಿಯಂತಹ (ChatGPT) ಜಾಣ ವೇದಿಕೆಯನ್ನು (AI Model) ಲೋಕಾರ್ಪಣೆ ಮಾಡಿದ ಓಪನ್​ಎಐ ಸಂಸ್ಥೆ (OpenAI) ಈಗ ಎಐ ಶಕ್ತ ಸಾಧನವೊಂದನ್ನು (AI powered device) ಅಭಿವೃದ್ಧಿಪಡಿಸುತ್ತಿದೆಯಂತೆ.

ಹಿಂದೆ ಹಾಸುಹೊಕ್ಕಾಗಿದ್ದ ನೊಕಿಯಾದಂತಹ ಫೀಚರ್ ಫೋನ್​​ಗಳ ಜಾಗವನ್ನು ಸ್ಮಾರ್ಟ್​​ಫೋನ್ ತುಂಬಿದಂತೆ, ಈಗ ಸ್ಮಾರ್ಟ್​​ಫೋನ್ ಸ್ಥಾನಕ್ಕೆ ತಮ್ಮ ಎಐ ಸಾಧನಗಳು ಬರಲಿವೆ ಎನ್ನುವುದು ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​​ಮ್ಯಾನ್ ಅನಿಸಿಕೆ.

ಇದನ್ನೂ ಓದಿ: ಇಂದಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವುದು ಸುರಕ್ಷಿತವೇ?: ಇಲ್ಲಿ ತಿಳಿದುಕೊಳ್ಳಿ

ಇದನ್ನೂ ಓದಿ
Image
ಟ್ರಂಪ್​ರಿಂದ ರೆಮಿಟೆನ್ಸ್ ಬರೆ; ಭಾರತಕ್ಕೆ ಹೊರೆ
Image
ಪಾಸ್‌ವರ್ಡ್ ಹಾಕಿದ್ದರೂ ಅದನ್ನು ನಮೋದಿಸದೆ ಫೋನ್ ಅನ್‌ಲಾಕ್ ಮಾಡುವುದು ಹೇಗೆ?
Image
ಇಂದಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವುದು ಸುರಕ್ಷಿತವೇ?
Image
WhatsApp Tricks: ಯಾರ ಮೆಸೇಜ್ ಬಂತೆಂದು ಫೋನ್ ನೋಡದೆಯೇ ತಿಳಿಯುವುದು ಹೇಗೆ?

ಹೇಗಿರುತ್ತೆ ಓಪನ್​​ಎಐನ ಹೊಸ ಫೋನ್?

ಓಪನ್​ಎಐ ಅಭಿವೃದ್ಧಿಪಡಿಸುತ್ತಿರುವ ಎಐ ಶಕ್ತ ಸಾಧನ ಹೇಗಿರುತ್ತೆ ಎಂಬುದರ ಸ್ಪಷ್ಟ ಸುಳಿವಿಲ್ಲ. ಅವರೇ ಹೇಳಿದಂತೆ, ಜನರು ಯಂತ್ರದ ಜೊತೆ ಸಂವಹನ ನಡೆಸುವ ವಿಧಾನವೇ ಬದಲಾಗಲಿದೆಯಂತೆ. ಬಹುಶಃ ಧ್ವನಿ ಮತ್ತು ದೃಶ್ಯ ಆಧಾರಿತ ಸಂವಹನ ಇರಬಹುದು. ಎರಡು ವರ್ಷದ ಹಿಂದೆಯೇ ಇಂಥದ್ದೊಂದು ವರ್ತಮಾನವನ್ನು ಓಪನ್​ಎಐ ಹೊರಹಾಕಿತ್ತು.

ಐಫೋನ್, ಐಮ್ಯಾಕ್, ಐಪ್ಯಾಡ್​ನಂತಹ ಉತ್ಕೃಷ್ಟ ಆ್ಯಪಲ್ ಉತ್ಪನ್ನಗಳ ರೂವಾರಿ ಎನಿಸಿದ್ದ, ಆ್ಯಪಲ್​​ನ ಮಾಜಿ ಮುಖ್ಯ ಡಿಸೈನ್ ಆಫೀಸರ್ ಜಾನಿ ಐವೆ ಅವರ ನೆರವಿನೊಂದಿಗೆ ಓಪನ್​​ಎಐ ಈ ಹೊಸ ಸಾಧನವನ್ನು ಅಭಿವೃದ್ಧಿಪಡಿಸುತ್ತಿರುವುದು ತಿಳಿದು ಬಂದಿದೆ. ಸ್ಯಾಮ್ ಆಲ್ಟ್​​ಮ್ಯಾನ್ ಪ್ರಕಾರ, ಐಫೋನ್ ಬಳಿಕ ಅವರ ಈ ಉತ್ಪನ್ನವೇ ಅತ್ಯುತ್ತಮ ಆವಿಷ್ಕಾರ ಎನಿಸಲಿದೆಯಂತೆ. ನಿತ್ಯದ ಬಳಕೆದಾರರಿಗೆ ಬಹಳ ಒಗ್ಗಿಹೋಗುವ, ಇಷ್ಟವಾಗುವ ಮತ್ತು ಸುಲಭ ಬಳಕೆಯಾಗಿಸುವ ಸಾಧನ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಾಟ್ಸ್ಆ್ಯಪ್​ನಲ್ಲಿ ಯಾರ ಮೆಸೇಜ್ ಬಂತೆಂದು ಫೋನ್ ನೋಡದೆಯೇ ತಿಳಿಯುವುದು ಹೇಗೆ?, ಇಲ್ಲಿದೆ ಟ್ರಿಕ್

ಓಪನ್​​ಎಐನ ಈ ಹೊಸ ಸಾಧನವು ಈಗಿರುವ ಕಂಪ್ಯೂಟರ್ ಮತ್ತು ಸ್ಮಾರ್ಟ್​​ಫೋನ್​​ಗಳಿಗಿಂತ ಬಹಳ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಕೃತಕ ಬುದ್ಧಿಮತ್ತೆಯನ್ನು ಜನರ ನಿತ್ಯಜೀವನದಲ್ಲಿ ಹೆಚ್ಚು ಹೊಕ್ಕಾಗಿಸುತ್ತದೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು