AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Retrospective Tax: ಹಿಂದಿನ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಸ್ತಾವದ ಮಹತ್ವ ಏನು? ವಿವರಣೆ ಇಲ್ಲಿದೆ

ಹಿಂದಿನ ತೆರಿಗೆಗಳ ಪಾವತಿ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಪ್ರಸ್ತಾವ ಮಾಡಿದೆ. ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಶುರುವಾದ ಈ ವ್ಯಾಜ್ಯ ಎಲ್ಲಿಗೆ ಬಂದು ನಿಂತಿದೆ ನೋಡಿ.

Retrospective Tax: ಹಿಂದಿನ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಸ್ತಾವದ ಮಹತ್ವ ಏನು? ವಿವರಣೆ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on:Aug 05, 2021 | 10:25 PM

Share

ಭಾರತ ಸರ್ಕಾರ ಗುರುವಾರ ಮಹತ್ವವಾದ ಪ್ರಸ್ತಾವವೊಂದನ್ನು ಮಾಡಿದೆ. ಈ ಹಿಂದಿನ ಮರುಪಾವತಿ ಕುರಿತಾದ ತೆರಿಗೆ ವ್ಯಾಜ್ಯಕ್ಕೆ ಸಂಬಂಧಿಸಿದ್ದರ ಬಗೆಗಿನ ಪ್ರಸ್ತಾವ ಅದು. ಟೆಲಿಕಾಂ ಆಪರೇಟರ್ ವೊಡಾಫೋನ್, ಎನರ್ಜಿ ಕಂಪೆನಿಯಾದ ಕೇರ್ನ್​ಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ವ್ಯಾಜ್ಯದಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಈಗಿನ ಪ್ರಸ್ತಾವ ಮಾಡಲಾಗಿದೆ. 2012ರ ಮೇ ತಿಂಗಳ ಮುಂಚೆ ಪರೋಕ್ಷವಾಗಿ ಭಾರತೀಯ ಆಸ್ತಿಗಳನ್ನು ವರ್ಗಾವಣೆ ಮಾಡಿದ್ದರಿಂದ ಸಂಗ್ರಹವಾದ ತೆರಿಗೆಗಳನ್ನು ಮನ್ನಾ ಮಾಡಲಾಗುತ್ತದೆ. ಆದರೆ ಅದಕ್ಕಾಗಿ ಕೆಲವು ನಿರ್ದಿಷ್ಟ ಷರತ್ತುಗಳನ್ನು ಪೂರ್ತಿ ಮಾಡಬೇಕಾಗುತ್ತದೆ. ಜತೆಗೆ ಬಾಕಿ ಇರುವ ವ್ಯಾಜ್ಯಗಳನ್ನು ವಿಥ್​ಡ್ರಾ ಮಾಡಲಾಗುತ್ತದೆ. ಮತ್ತು ಯಾವುದೇ ಹಾನಿಯನ್ನು ಕ್ಲೇಮ್ ಫೈಲ್ ಮಾಡುವುದಿಲ್ಲ ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ. ಈ ವ್ಯಾಜ್ಯವು 2012ರಿಂದ ಶುರುವಾಗಿದೆ. ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ವೊಡಾಫೋನ್ ಮತ್ತು ಕೇರ್ನ್​ನಂಥ ಕೆಲವು ಕಂಪೆನಿಗಳಿಗೆ ಅದರ ಹಿಂದಿನ ವರ್ಷಗಳ ಕ್ಯಾಪಿಟಲ್ ಗೇಯ್ನ್ಸ್ (ಆಸ್ತಿಗಳ ಮಾರಾಟದಿಂದ ಬರುವ ಲಾಭವನ್ನು ಕ್ಯಾಪಿಟಲ್ ಗೇಯ್ನ್ಸ್ ಎನ್ನಲಾಗುತ್ತದೆ) ತೆರಿಗೆ ಹೇರುವುದಕ್ಕೆ ನಿರ್ಧರಿಸಿತು. ಈ ನಿರ್ಧಾರದ ವಿರುದ್ಧ ಪ್ರಕರಣವನ್ನು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೋರ್ಟ್​ಗೆ ಒಯ್ದು, ಆ ಕಂಪೆನಿಗಳು ಗೆಲ್ಲುವಂತಾದವು.

ಈ ಪ್ರಕರಣಗಳಿಂದ ಭಾರತದ ವಿರುದ್ಧ ವಿದೇಶಿ ಹೂಡಿಕೆದಾರರು ಹುಯಿಲೆಬ್ಬಿಸುವಂತೆ ಆಯಿತು ಹಾಗೂ ಮಾಜಿ ಪ್ರಧಾನಿ ಮನ್​ಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯೂ ಆಯಿತು. 2014ರಲ್ಲಿ ಕಾಂಗ್ರೆಸ್​ ನೇತೃತ್ವದ ಸಮ್ಮಿಶ್ರ ಸರ್ಕಾರ ಸೋತು, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ಆ ನಂತರದಲ್ಲಿ, ನಾವು ಈ ಹಿಂದಿನ ತೆರಿಗೆಗಳನ್ನು ಈಗ ಹಾಕಲ್ಲ ಎಂದು ಮೋದಿ ಸರ್ಕಾರವು ಹೇಳಿಕೊಂಡು ಬಂದಿತು. ಆದರೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ವರ್ಷಗಳಿಂದ ಬಡಿದಾಡುತ್ತಾ ಬಂತು. ಕಳೆದ ತಿಂಗಳು (ಜುಲೈನಲ್ಲಿ) ಕೇರ್ನ್ ಎನರ್ಜಿ ಹೇಳಿದಂತೆ, ಅದರ ಅರ್ಜಿಯನ್ನು ಪ್ಯಾರಿಸ್ ಕೋರ್ಟ್ ಒಪ್ಪಿದೆ. ಆದ್ದರಿಂದ ಭಾರತ ಸರ್ಕಾರಕ್ಕೆ ಸೇರಿದಂಥ ಅಲ್ಲಿರುವ 20 ಮಿಲಿಯನ್ ಯುರೋ ಮೌಲ್ಯದ ಆಸ್ತಿಯನ್ನು ತಡೆಹಿಡಿಯಲಾಗಿದೆ. ತನ್ನ ಪ್ರಯತ್ನಕ್ಕೆ ಇದು ಅತಿದೊಡ್ಡ ವಿಜಯ ಎಂದು ಹೇಳಿಕೊಂಡ ಕೇರ್ನ್, ಸುದೀರ್ಘವಾದ ತೆರಿಗೆ ವ್ಯಾಜ್ಯದಲ್ಲಿ ಭಾರತೀಯ ಸರ್ಕಾರ ಬಿಲಿಯನ್ ಡಾಲರ್ ಹಾನಿ ಪಾವತಿಸಬೇಕು ಎಂದು ಹೇಳಿಕೊಂಡು ಬಂತು.

ಕೇರ್ನ್ ಕಂಪೆನಿಗೆ ಪಾವತಿಸಬೇಕಾದ ಮೊತ್ತ ಫ್ರೆಂಚ್ ಟ್ರಿಬ್ಯುನಲ್ ಆದೇಶ ಹೊರಡಿಸಿ, ಕೇಂದ್ರ ಸ್ಥಾನಗಳಲ್ಲೇ ಇರುವ ಭಾರತೀಯ ಸರ್ಕಾರಕ್ಕೆ ಸೇರಿದ ಆಸ್ತಿಗಳನ್ನು ತಡೆ ಹಿಡಿಯಬೇಕು. ಇದನ್ನು ಕೇರ್ನ್​ ಕಂಪೆನಿಗೆ ಭಾರತ ಸರ್ಕಾರ ನೀಡಬೇಕಾದ ಮೊತ್ತಕ್ಕೆ ಗ್ಯಾರಂಟಿ ಎಂಬಂತೆ ಅಂದುಕೊಳ್ಳಬೇಕು ಎಂದಿದ್ದಾಗಿ ಹೇಳಲಾಗಿದೆ. ಅಂದಹಾಗೆ ಇದೇ ರೀತಿಯಲ್ಲಿ ಭಾರತದ ವಿರುದ್ಧವಾಗಿ ಕೇರ್ನ್​ನಿಂದ ಅಮೆರಿಕ, ಬ್ರಿಟನ್, ನೆದರ್ಲೆಂಡ್ಸ್, ಸಿಂಗಾಪೂರ್ ಹಾಗೂ ಕೆನಡಾದಲ್ಲೂ ಕ್ಲೇಮ್ ನೋಂದಣಿ ಮಾಡಲಾಗಿದೆ. ಅಮೆರಿಕದಲ್ಲಿ ಏರ್​ ಇಂಡಿಯಾಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯುವ ಯತ್ನ ನಡೆದಿದೆ.

ಕೇರ್ನ್ ಕಂಪೆನಿಯು ಭಾರತದಲ್ಲಿ ತೈಲ ಹಾಗೂ ಅನಿಲ ಕಾರ್ಯಾಚರಣೆಯನ್ನು ಭಾರತದಲ್ಲಿ ನಡೆಸುತ್ತದೆ. ಅದಕ್ಕೆ ಹಾನಿಯ ಪರಿಹಾರವಾಗಿ 120 ಕೋಟಿ ಅಮೆರಿಕನ್ ಡಾಲರ್, ಜತೆಗೆ ಬಡ್ಡಿ ಹಾಗೂ ವೆಚ್ಚವನ್ನು ನೀಡಬೇಕು ಎಂದು ಹೇಗ್​ನಲ್ಲಿನ ಮಧ್ಯಸ್ಥಿಕೆ ಕೋರ್ಟ್​ ಕಳೆದ ಡಿಸೆಂಬರ್​ನಲ್ಲಿ ಆದೇಶ ಮಾಡಿತ್ತು. ಅದಕ್ಕೆ ಮುನ್ನ ಭಾರತ ಸರ್ಕಾರವು ವಿವಿಧ ಹಳೇ ತೆರಿಗೆಗಳ ವ್ಯಾಜ್ಯವನ್ನು ಬಡಿದಾಡುತ್ತಾ ಬಂದಿತ್ತು. ಕೇರ್ನ್​ ಕಂಪೆನಿಗೆ ಒಟ್ಟು 170 ಕೋಟಿ ಅಮೆರಿಕನ್ ಡಾಲರ್​ ಮೊತ್ತ ಬರಬೇಕಾಗಿದೆ ಎಂದಿದೆ.

ವೊಡಾಫೋನ್ ವಿರುದ್ಧವೂ ಇಂಥದ್ದೇ ಪ್ರಕರಣ ಇನ್ನು ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಇಂಥದ್ದೇ ಪ್ರಕರಣವನ್ನು ಭಾರತದ ವಿರುದ್ಧ ವೊಡಾಫೋನ್​ ಹೇಗ್​ನಲ್ಲಿ ಜಯಿಸಿದೆ. ಅದು 200 ಕೋಟಿ ಅಮೆರಿಕನ್ ಡಾಲರ್​ನ ತೆರಿಗೆ ಕ್ಲೇಮ್. ಭಾರತ ಮತ್ತು ನೆದರ್ಲೆಂಡ್ಸ್​ ಮಧ್ಯದ ಹೂಡಿಕೆ ಒಪ್ಪಂದದ ಉಲ್ಲಂಘನೆ ಆಗಿದೆ ಎಂದು ಟ್ರಿಬ್ಯುನಲ್ ಆದೇಶ ನೀಡಿತ್ತು. ಆದರೆ ಭಾರತ ಮಾತ್ರ ಈ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದೆ. ಇದರಿಂದಾಗಿ ಹೂಡಿಕೆದಾರರ ವಿಶ್ವಾಸ ಕುಸಿಯುತ್ತಿದ್ದು, ಹಿನ್ನಡೆ ಆಗುತ್ತಿದೆ.

ಈ ವಾರ ಶತ ಕೋಟ್ಯಧಿಪತಿ ಹಾಗೂ ವೊಡಾಫೋನ್ ಇಂಡಿಯಾದ ಜಂಟಿ ಸಹಭಾಗಿತ್ವದ ವೊಡಾಫೋನ್ ಐಡಿಯಾ ಕಾರ್ಯ ನಿರ್ವಾಹಕೇತರ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಹುದ್ದೆ ತ್ಯಜಿಸಿದ್ದಾರೆ. ಸರ್ಕಾರಕ್ಕೆ ಇರುವ ದೊಡ್ಡ ಮೊತ್ತದ ಬಾಕಿ ತೀರಿಸಿ, ಉಳಿಯುವ ಕಷ್ಟ ಆಗಬಹುದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಹಿಂದಿನ ತೆರಿಗೆ ನೀತಿಗಳಿಗೆ ಸಂಬಂದಿಸಿದಂತೆ ಕೇಳಿಬರುತ್ತಿರುವ ಟೀಕೆ ಹಾಗೂ ನವೀಕೃತ ಸ್ಕ್ರೂಟನಿ ಹಿನ್ನೆಲೆಯಲ್ಲಿ ಕುಮಾರ ಮಂಗಲಂ ಬಿರ್ಲಾ ಜೂನ್​ನಲ್ಲಿ ಆದಿತ್ಯ ಬಿರ್ಲಾ ಸಮೂಹವು ವೊಡಾಫೋನ್​ನಲ್ಲಿ ಹೊಂದಿರುವ ಶೇ 27ರಷ್ಟು ಪಾಲನ್ನು ಮಾರಾಟ ಮಾಡುವುದಾಗಿ ಘೋಷಿಸಿದ್ದರು.

ಹಿಂದಿನ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ವೊಡಾಫೋನ್ ಹಾಗೂ ಕೇರ್ನ್​ ಮಾತ್ರ ಭಾರತ ಸರ್ಕಾರದ ಪಾಲಿನ ಸವಾಲಲ್ಲ. ಇದರ ಜತೆಗೆ Deutsche Telekom ಮತ್ತು ನಿಸ್ಸಾನ್ ಮೋಟಾರ್ ಕಂಪೆನಿಗಳು ಹಿಂದಿನ ತೆರಿಗೆಯಿಂದ ಪಾವತಿ ವ್ಯಾಜ್ಯದ ತನಕ ಸಮಸ್ಯೆಗಳಿವೆ.

ಇದನ್ನೂ ಓದಿ: Tv9 Kannada Digital Explainer: ವಿದೇಶದಲ್ಲಿರುವ ಭಾರತದ ಆಸ್ತಿಗಳ ವಶಕ್ಕೆ ಕೇರ್ನ್ ಎನರ್ಜಿ ಮುಂದಾಗಿರುವುದು ಏಕೆ?

ಇದನ್ನೂ ಓದಿ: Vodafone Idea: ಬಂದ್ ಆಗಲಿದೆಯಾ ವೊಡಾಫೋನ್-ಐಡಿಯಾ?

(Retrospective Tax Here Is An explainer From How It All Begin From Congress Led UPA Government)

Published On - 10:16 pm, Thu, 5 August 21