AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐನಿಂದ ನಡೆಯಲಿದೆ 12,000 ಹುದ್ದೆಗಳ ನೇಮಕಾತಿ; ಎಂಜಿನಿಯರಿಂಗ್ ಮಾಡಿದ್ದರೆ ಸುವರ್ಣಾವಕಾಶ

SBI recruitment 2024-25: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿದ ಎಸ್​ಬಿಐ ಈ ಹಣಕಾಸು ವರ್ಷದಲ್ಲಿ 12,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಇದರಲ್ಲಿ ಶೇ. 85ರಷ್ಟು ಎಂಜಿನಿಯರುಗಳಿಗೆ ಆದ್ಯತೆ ಇರಲಿದೆ. ಅಂದರೆ, 10,000 ಹುದ್ದೆಗಳಿಗೆ ಎಂಜಿನಿಯರುಗಳನ್ನು ರೆಕ್ರೂಟ್ ಮಾಡಿಕೊಳ್ಳಲಿದೆ ಎಸ್​ಬಿಐ. ಬ್ಯಾಂಕಿಂಗ್​ನಲ್ಲಿ ತಂತ್ರಜ್ಞಾನ ನಿರ್ವಹಣೆಯನ್ನು ಹೆಚ್ಚು ಸಮರ್ಪಕಗೊಳಿಸಲು ಈ ಯೋಜನೆ ಮಾಡಲಾಗಿದೆ.

ಎಸ್​ಬಿಐನಿಂದ ನಡೆಯಲಿದೆ 12,000 ಹುದ್ದೆಗಳ ನೇಮಕಾತಿ; ಎಂಜಿನಿಯರಿಂಗ್ ಮಾಡಿದ್ದರೆ ಸುವರ್ಣಾವಕಾಶ
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2024 | 7:26 PM

Share

ನವದೆಹಲಿ, ಮೇ 12: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2024-25ರ ಹಣಕಾಸು ವರ್ಷದಲ್ಲಿ 12,000 ಮಂದಿ ಹೊಸ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದೆ. ಪ್ರೊಬೇಶನರಿ ಆಫೀಸರ್ಸ್ (Probationary Officers) ಮತ್ತು ಅಸೋಸಿಯೇಟ್ಸ್​ಗಳಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳಿಗೆ ಎಂಜಿನಿಯರಿಂಗ್ ಪದವೀಧರರನ್ನು ಸೇರಿಸಿಕೊಳ್ಳಲಾಗಲಿದೆ. ಎಸ್​ಬಿಐ ಛೇರ್ಮನ್ ದಿನೇಶ್ ಖರ (Dinesh Khara) ನೀಡಿದ ಮಾಹಿತಿ ಪ್ರಕಾರ ನೇಮಕಾತಿ ಆಗುವ ಶೇ. 85ರಷ್ಟು ಹುದ್ದೆಗಳಿಗೆ ಎಂಜಿನಿಯರ್​ಗಳ ನೇಮಕಾತಿ ಆಗಲಿದೆ. ಡಿಜಿಟಲ್ ವಿಭಾಗದಲ್ಲಿ ಸರಿಯಾದ ರೀತಿಯಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇಲ್ಲದಿರುವ ಕಾರಣವೊಡ್ಡಿ ಆರ್​ಬಿಐ ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ಹೇರಿದ ಕ್ರಮ ಇತ್ತೀಚೆಗಷ್ಟೇ ನಡೆದಿದೆ. ಕೋಟಕ್ ಮಾತ್ರವಲ್ಲ, ಭಾರತದ ಹೆಚ್ಚಿನ ಬ್ಯಾಂಕುಗಳಲ್ಲಿ ಇನ್ನೂ ಹಳೆಯ ತಂತ್ರಜ್ಞಾನವೇ ಚಾಲ್ತಿಯಲ್ಲಿದೆ. ಒಂದೊಂದಾಗಿ ಬ್ಯಾಂಕುಗಳ ಮೇಲೆ ಆರ್​ಬಿಐ ಕ್ರಮ ಜರುಗಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಸ್​ಬಿಐ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳಲು ಹೊರಟಿರಬಹುದು.

ವರದಿಗಳ ಪ್ರಕಾರ ಎಸ್​ಬಿಐ ಸಾಕಷ್ಟು ದೊಡ್ಡ ಮಟ್ಟದಲ್ಲಿ ತಂತ್ರಜ್ಞಾನಕ್ಕೆ ವ್ಯಯಿಸಲು ಹೊರಟಿದೆ. ಸದ್ಯ ಭಾರತದ ಬ್ಯಾಂಕಿಂಗ್ ವಲಯದಲ್ಲಿ ತಂತ್ರಜ್ಞಾನ ನಿರ್ವಹಣಾ ವೆಚ್ಚ ಒಟ್ಟು ಬಜೆಟ್​ನಲ್ಲಿ ಸರಾಸರಿ ಶೇ. 7ರಿಂದ 8ರಷ್ಟಿದೆ. ಎಸ್​ಬಿಐ ಇದಕ್ಕಿಂತ ಬಹಳ ಹೆಚ್ಚಿನ ಮಟ್ಟದಲ್ಲಿ ತಂತ್ರಜ್ಞಾನಕ್ಕಾಗಿ ವ್ಯಯಿಸಲಿದೆ ಎನ್ನುವ ಮಾಹಿತಿಯನ್ನು ಎಸ್​ಬಿಐ ಛೇರ್ಮನ್ ನೀಡಿದ್ದಾರೆ.

ಇದನ್ನೂ ಓದಿ: Google Jobs: ಅಮೆರಿಕದಲ್ಲಿ ಲೇ ಆಫ್ ಮಾಡಿದರೂ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದ ಗೂಗಲ್

ಎಂಜಿನಿಯರ್​ಗಳನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ತಂದು ಏನು ಮಾಡುತ್ತದೆ ಎಸ್​ಬಿಐ?

ಸದ್ಯ ಬ್ಯಾಂಕಿಂಗ್ ಜ್ಞಾನ ಇರುವಂತಹ ಎಂಜಿನಿಯರುಗಳಿಗೆ ಎಸ್​ಬಿಐ ನೇಮಕಾತಿಯಲ್ಲಿ ಆದ್ಯತೆ ಸಿಗಲಿದೆ. 3,000 ಪ್ರೊಬೇಶನರಿ ಆಫೀಸರ್​ಗಳು ಹಾಗೂ 8,000 ಅಸೋಸಿಯೇಟ್​ಗಳ ಹುದ್ದೆಗೆ ನೇಮಕವಾಗುವ ಎಂಜಿನಿಯರುಗಳಿಗೆ ಆರಂಭಿಕ ತರಬೇತಿ ನೀಡಿ, ವಿವಿಧ ಬಿಸಿನೆಸ್ ಜವಾಬ್ದಾರಿಗಳಿಗೆ ನಿಯೋಜಿಸಲಾಗಲಿದೆ.

ತಾಂತ್ರಿಕವಾಗಿ ಪಳಗಿರುವ ಎಂಜಿನಿಯರುಗಳನ್ನು ಐಟಿ ಮತ್ತು ಬಿಸಿನೆಸ್ ರೋಲ್​ಗಳಿಗೆ ಹಾಕಿದರೆ ಗ್ರಾಹಕರೊಂದಿಗಿನ ವ್ಯವಹಾರ ಸಮರ್ಪಕವಾಗಿ ನಡೆಯಬಹುದು ಎನ್ನುವುದು ಎಸ್​ಬಿಐನ ಎಣಿಕೆ.

ಇದನ್ನೂ ಓದಿ: KPSC PDO Recruitment 2024: 247 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳು -ಅರ್ಹತೆ ವಿವರ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

‘ನಾವು ಅವರನ್ನು ಮೊದಲು ಬ್ಯಾಂಕಿಂಗ್​ಗೆ ಹಾಕುತ್ತೇವೆ. ಬಳಿಕ ಅವರ ಅಭಿರುಚಿ, ಸಾಮರ್ಥ್ಯ ಇತ್ಯಾದಿ ಆಧಾರದ ಮೇಲೆ ಐಟಿ ಅಥವಾ ಬಿಸಿನೆಸ್ ಜವಾಬ್ದಾರಿಗಳಿಗೆ ನಿಯೋಜಿಸಲಾಗುವುದು. ಇದರಿಂದ ತಂತ್ರಜ್ಞಾನ ಅರಿವು ಇರುವ ಮಾನವ ಸಂಪನ್ಮೂಲದ ನಿರಂತರ ಲಭ್ಯತೆ ಇದ್ದಂತಾಗುತ್ತದೆ ಎಂದು ಎಸ್​ಬಿಐ ಮುಖ್ಯಸ್ಥರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ