AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು ಟಿಪ್ಸ್; ಸಮಯ ಬಂದಾಗ ಮಾರಿಬಿಡಿ; ಕಂಪನಿ ಚೆನ್ನಾಗಿದೆ ಅಂತ ಕೊನೆ ತನಕ ಇಟ್ಕೋಬೇಡಿ

Stock market tips: ಷೇರುಗಳನ್ನು ಕೊಂಡಾಗ ಅದನ್ನು ಯಾವಾಗ ಮಾರಬೇಕು, ಎಷ್ಟು ದಿನ ಇಟ್ಟುಕೊಂಡರೆ ಉತ್ತಮ ರಿಟರ್ಸ್ ಸಿಗುತ್ತದೆ ಎಂಬ ಲೆಕ್ಕಾಚಾರ ಬಹಳ ಕಡಿಮೆ ಜನರಿಗೆ ತಿಳಿದಿರಬಹುದು. ಷೇರು ವಿಷಯದಲ್ಲಿ ಸೆಂಟಿಮೆಂಟ್ ಇರಕೂಡದು. ಹಿಂದೆಲ್ಲಾ ಸೂಪರ್​​ಸ್ಟಾರ್ ಎನಿಸಿದ್ದ ಷೇರುಗಳು ಇವತ್ತು ಹೇಳಹೆಸರಿಲ್ಲದಂತಾಗಿವೆ. ಮಾರಿಗೋಲ್ಡ್ ವೆಲ್ತ್ ಸಂಸ್ಥಾಪಕ ಅರವಿಂದ್ ದತ್ತ ಒಂದು ಅಮೂಲ್ಯ ಟಿಪ್ಸ್ ಹಂಚಿಕೊಂಡಿದ್ದಾರೆ.

ಷೇರು ಟಿಪ್ಸ್; ಸಮಯ ಬಂದಾಗ ಮಾರಿಬಿಡಿ; ಕಂಪನಿ ಚೆನ್ನಾಗಿದೆ ಅಂತ ಕೊನೆ ತನಕ ಇಟ್ಕೋಬೇಡಿ
ಷೇರು ಮಾರಾಟ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 18, 2025 | 5:54 PM

ಒಬ್ಬ ವ್ಯಕ್ತಿ ಯಾವಾಗಲೋ ಖರೀದಿಸಿಟ್ಟು ಮರೆತೇಹೋಗಿದ್ದ ಷೇರುಗಳು ಆತನ ಬಳಿಕ ಆತನ ಮಕ್ಕಳ ಕಣ್ಣಿಗೆ ಬೀಳುತ್ತವೆ. ಆಗ ಷೇರುಗಳ ಮೌಲ್ಯ ಹಲವು ಸಾವಿರ ಪಟ್ಟು ಬೆಳೆದಿರುತ್ತದೆ. ಈ ರೀತಿಯ ಕೆಲ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ನೀವು ಓದಿರಬಹುದು. ಇನ್ನೂ ಕೆಲವರು, ನೀವು ಒಂದು ಷೇರಿನ ಮೇಲೆ ದೀರ್ಘಾವಧಿ ಹೂಡಿಕೆ (long term holding) ಮಾಡಿದರೆ ಭಾರೀ ಲಾಭ ಮಾಡಬಹುದು ಎಂದು ಸಲಹೆ ನೀಡುವುದುಂಟು. ಆದರೆ, ವಾಸ್ತವದಲ್ಲಿ ಕೆಲ ಷೇರುಗಳ ವಿಚಾರದಲ್ಲಿ ಅದು ಸರಿ ಎನಿಸಬಹುದು. ಆದರೆ, ಹೆಚ್ಚಿನ ಸಂದರ್ಭದಲ್ಲಿ ಅದು ತಪ್ಪು ಎಣಿಕೆ ಆಗುತ್ತದೆ, ತಪ್ಪು ನಿರ್ಧಾರ ಆಗುತ್ತದೆ. ಮಾರಿಗೋಲ್ಡ್ ವೆಲ್ತ್ ಸಂಸ್ಥೆಯ ಸಿಇಒ ಅರವಿಂದ್ ದತ್ತ ನಿನ್ನೆ ಒಂದು ಇಂಟರೆಸ್ಟಿಂಗ್ ಆದ ವಿಚಾರವನ್ನು ತಮ್ಮ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ಷೇರು ಖರೀದಿಸಿ ಅದನ್ನು ಸದಾ ಇರಿಸಿಕೊಳ್ಳುವ ತಂತ್ರ ಫಲ ಕೊಡೋದಿಲ್ಲ ಎಂದು ಅವರು ಹೇಳುತ್ತಾರೆ.

ಹಿಂದೆ ತಮ್ಮ ಸೆಕ್ಟರ್​​ಗಳಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗಳು ಇವತ್ತು ಅಸ್ತಿತ್ವದಲ್ಲೇ ಇಲ್ಲದಿರುವುದನ್ನು ಎತ್ತಿ ತೋರಿಸಿರುವ ಅವರು, ಸಮಯ ಬಂದಾಗ ಷೇರು ಮಾರುವುದು ತಿಳಿದಿರಬೇಕು ಎನ್ನುತ್ತಾರೆ.

ಇದನ್ನೂ ಓದಿ
Image
ಸೆನ್ಸೆಕ್ಸ್, ನಿಫ್ಟಿ ಏರುತ್ತಿರುವುದು ಯಾಕೆ?
Image
ಇತಿಹಾಸದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತವಾ ಇದು?
Image
ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳ ಸಾಧಕ-ಬಾಧಕಗಳು
Image
ಮಲ್ಟಿಬ್ಯಾಗರ್ ಷೇರು ಗುರುತಿಸಲು ಬೇಕು ಈ ಅಂಶಗಳು

‘ನನಗೆ ಒಂದು ಪಾಠ ಅರಿವಾಗಿದೆ. ಖರೀದಿಸಿ ಸದಾ ಇಟ್ಟುಕೊಳ್ಳುವುದು ಫಲ ಕೊಡೋದಿಲ್ಲ. ಅದರ ಸಮಯ ಮುಗಿದಾಗ ಮಾರಿ ಲಾಭ ಮಾಡಿಕೊಳ್ಳಿ ಎಂದು ಎಕ್ಸ್ ಪೋಸ್ಟ್​​ನಲ್ಲಿ ಬರೆದಿರುವ ಅವರು 1990 ಮತ್ತು 2000 ದಶಕಗಳಲ್ಲಿ ಮುಂಚೂಣಿಯಲ್ಲಿದ್ದು ಈಗ ಅಸ್ತಿತ್ವದಲ್ಲಿಲ್ಲದ ಕಂಪನಿಗಳ ಪಟ್ಟಿಯನ್ನು ನೀಡಿದ್ದಾರೆ.

ಇದನ್ನೂ ಓದಿ: ಗರಿಗೆದರಿದ ಷೇರುಪೇಟೆ; 900 ಅಂಕ ಗಳಿಸಿದ ಸೆನ್ಸೆಕ್ಸ್; 267 ಅಂಕ ಹೆಚ್ಚಿಸಿಕೊಂಡ ನಿಫ್ಟಿ; ಇವತ್ತು ಮಾರುಕಟ್ಟೆ ಏರುತ್ತಿರುವುದು ಯಾಕೆ?

ನಹಾರ್ ಸ್ಪಿನ್ನಿಂಗ್, ಓಸ್ವಾಲ್ ಆಗ್ರೋ, ಬಿಂದಾಲ್ ಆಗ್ರೋ, ಸೆಂಚೂರಿಯನ್ ಬ್ಯಾಂಕ್, ವಿಪ್​ರೋ, ಗ್ಲೋಬಲ್ ಟೆಲಿ ಸಿಸ್ಟಮ್ಸ್, ಸತ್ಯಂ ಕಂಪ್ಯೂಟರ್ಸ್ ಕಂಪನಿಗಳ ಹೆಸರನ್ನು ಅರವಿಂದ್ ದತ್ತಾ ಸ್ಮರಿಸಿದ್ದಾರೆ. ತಾನು ಆ ಕಂಪನಿಗಳ ಷೇರು ಉಚ್ಛ್ರಾಯ ಮಟ್ಟದಲ್ಲಿರುವಾಗ ಮಾರಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಹಲವು ಎಕ್ಸ್ ಬಳಕೆದಾರರು ಈ ಪೋಸ್ಟ್​​ಗೆ ಸ್ಪಂದಿಸಿದ್ದಾರೆ. ವಿಪ್ರೋ ಮತ್ತು ಸತ್ಯಂ ಷೇರುಗಳು ಆ ಕಾಲದಲ್ಲಿ ರಾಕೆಟ್ ಎನಿಸಿದ್ದವು ಎಂದು ಒಬ್ಬ ಯೂಸರ್ ಪ್ರತಿಕ್ರಿಯಿಸಿದ್ದಾರೆ.

ಇಂಡೆಕ್ಸ್ ಫಂಡ್ ಸುರಕ್ಷಿತ ಹೂಡಿಕೆ ಸ್ಥಳ?

ಇದೇ ಪೋಸ್ಟ್​​ಗೆ ಬಂದ ಪ್ರತಿಕ್ರಿಯೆಯಲ್ಲಿ ಒಬ್ಬ ವ್ಯಕ್ತಿ ತಾನು ನಿಫ್ಟಿ50 ಇಂಡೆಕ್ಸ್​​ನಲ್ಲಿರುವ ಷೇರುಗಳಲ್ಲಿ ಎಸ್​​ಐಪಿ ಮೂಲಕ ಹೂಡಿಕೆ ಮಾಡುವುದೋ ಅಥವಾ ಇಂಡೆಕ್ಸ್ ಫಂಡ್​​ನಲ್ಲಿ ಹೂಡಿಕೆ ಮಾಡುವುದೋ ಎಂದು ಕೇಳಿದ್ದಾರೆ. ಅದಕ್ಕೆ ಅರವಿಂದ್ ದತ್ತಾ ಅವರು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಇಂಡೆಕ್ಸ್ ಫಂಡ್​​ನಲ್ಲಿ ಹೂಡಿಕೆ ಮಾಡುವುದು ಕಡಿಮೆ ರಿಸ್ಕಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 1929ರಲ್ಲಿ ಷೇರುಪೇಟೆ ಮಹಾಕುಸಿತದ ಪರಿಣಾಮ ಭೀಕರ; ಈ ಬಾರಿ ಅದನ್ನೂ ಮೀರಿಸಿದ ಕುಸಿತವಾ?

ಏನಿದು ಇಂಡೆಕ್ಸ್ ಫಂಡ್?

ಷೇರು ಮಾರುಕಟ್ಟೆಯಲ್ಲಿ ಹಲವಾರು ಇಂಡೆಕ್ಸ್​​​ಗಳಿವೆ. ಎನ್​​ಎಸ್​​ಇಯಲ್ಲಿ ನಿಫ್ಟಿ50 ಎಂಬುದು ಪ್ರಮುಖ ಸೂಚ್ಯಂಕ. ಬಿಎಸ್​​ಇನಲ್ಲಿ ಸೆನ್ಸೆಕ್ಸ್ ಪ್ರಮುಖ ಸೂಚ್ಯಂಕ. ಇವು ಅತಿಹೆಚ್ಚು ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳ ಗುಂಪಾಗಿರುತ್ತವೆ. ಇವುಗಳ ಜೊತೆಗೆ ಇನ್ನೂ ಹಲವಾರು ಸೂಚ್ಯಂಕಗಳು ಸೆಕ್ಟರ್​​ವಾರು ಇರುತ್ತವೆ.

ಇಂಡೆಕ್ಸ್ ಫಂಡ್​​ಗಳು ಈ ರೀತಿಯ ಸೂಚ್ಯಂಕಗಳಲ್ಲಿರುವ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಹೀಗಾಗಿ, ರಿಸ್ಕ್ ಅಂಶ ಕಡಿಮೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ