AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಕ್ಕೆ ಶೂರಿಟಿ ನೀಡುವುದರಿಂದ ಏನು ಸಮಸ್ಯೆ? ಸಾಲ ತೀರಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?

ಬ್ಯಾಂಕುಗಳು ಕೆಲ ಸಾಲಗಳಿಗೆ ಮೂರನೇ ವ್ಯಕ್ತಿಯಿಂದ ಶೂರಿಟಿ ಪಡೆಯುವುದುಂಟು. ಸಾಲಗಾರ ಸಾಲ ತೀರಿಸಲಿಲ್ಲವೆಂದ ಪಕ್ಷದಲ್ಲಿ ಅದರ ಹೊಣೆಯನ್ನು ಶೂರಿಟಿ ಹಾಕಿದವರು ಹೊರಬೇಕಾಗುತ್ತದೆ. ಹೀಗಾಗಿ, ಸಾಲ ತೀರದಿದ್ದರೆ ಶೂರಿಟಿ ಹಾಕಿದವರಿಗೆ ನೋಟೀಸ್ ಹೋಗುತ್ತದೆ. ಕ್ರೆಡಿಟ್ ಸ್ಕೋರ್ ಕೂಡ ಕಡಿಮೆ ಆಗಬಹುದು. ಹೀಗಾಗಿ, ಸಾಲಕ್ಕೆ ಗ್ಯಾರಂಟರ್ ಆಗುವ ಅಥವಾ ಶೂರಿಟ ಹಾಕುವ ಮುನ್ನ ಎಚ್ಚರ.

ಸಾಲಕ್ಕೆ ಶೂರಿಟಿ ನೀಡುವುದರಿಂದ ಏನು ಸಮಸ್ಯೆ? ಸಾಲ ತೀರಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?
ಬ್ಯಾಂಕುImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 03, 2026 | 6:37 PM

Share

ಸ್ನೇಹಿತರು ಅಥವಾ ಸಂಬಂಧಿಕರ ಕೋರಿಕೆಯ ಮೇರೆಗೆ ಬ್ಯಾಂಕ್ ಸಾಲಕ್ಕೆ ‘ಗ್ಯಾರಂಟರ್’ (ಶ್ಯೂರಿಟಿ) ಸಹಿ ಹಾಕುವುದು ಭಾರತೀಯರಲ್ಲಿ ಸಹಜ. ಆದರೆ, ಮೂಲ ಸಾಲಗಾರ ಸಾಲದ ಕಂತುಗಳನ್ನು (EMI) ಸರಿಯಾಗಿ ತೀರಿಸದಿದ್ದರೆ, ಅದು ನಿಮ್ಮ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ (Credit Score) ಅನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬಹುದು ಎಂಬ ಎಚ್ಚರಿಕೆಯನ್ನು ಹಣಕಾಸು ತಜ್ಞರು ನೀಡುತ್ತಾರೆ. ಆರ್​ಬಿಐ ಮತ್ತು ಕ್ರೆಡಿಟ್ ಬ್ಯೂರೋಗಳ ನಿಯಮಗಳ ಪ್ರಕಾರ, ಸಾಲಕ್ಕೆ ಗ್ಯಾರಂಟಿ ನೀಡುವುದೆಂದರೆ ಸಾಲಗಾರನಷ್ಟೇ ಜವಾಬ್ದಾರಿಯನ್ನು ನೀವು ವಹಿಸಿಕೊಂಡಂತೆ ಅರ್ಥ. ಒಂದು ವೇಳೆ, ನೀವು ಶೂರಿಟಿ ಕೊಟ್ಟ ಸಾಲ ತೀರಿದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ?

ಸಾಲಕ್ಕೆ ಗ್ಯಾರಂಟರ್ ಆಗುವುದರಿಂದ ಎದುರಾಗುವ ಪ್ರಮುಖ ಅಪಾಯಗಳು

  • ಕ್ರೆಡಿಟ್ ಸ್ಕೋರ್ ಕುಸಿತ: ಮೂಲ ಸಾಲಗಾರ ಇಎಂಐ ಪಾವತಿಸಲು ವಿಫಲವಾದರೆ ಅಥವಾ ವಿಳಂಬ ಮಾಡಿದರೆ, ಸಾಲಗಾರನ ಸಿಬಿಲ್ ಸ್ಕೋರ್ ಜತೆಗೆ ಗ್ಯಾರಂಟರ್ ಆಗಿರುವ ನಿಮ್ಮ ಸಿಬಿಲ್ ಸ್ಕೋರ್ ಕೂಡ ತಕ್ಷಣವೇ ಕುಸಿಯುತ್ತದೆ.
  • ಭವಿಷ್ಯದ ಸಾಲದ ಮೇಲೆ ಪ್ರಭಾವ: ಬ್ಯಾಂಕ್‌ಗಳು ನಿಮ್ಮನ್ನು ಸಾಲದ ಬಾಧ್ಯಸ್ಥರಲ್ಲಿ ಒಬ್ಬರೆಂದು ಪರಿಗಣಿಸುತ್ತವೆ. ಆದ್ದರಿಂದ ನೀವು ಸ್ವಂತಕ್ಕಾಗಿ (ಮನೆ, ಕಾರು ಅಥವಾ ವೈಯಕ್ತಿಕ ಸಾಲ) ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ನೀವು ಶೂರಿಟಿ ಹಾಕಿರುವ ಸಾಲವೂ ಗಣನೆಗೆ ಬರುತ್ತದೆ. ಒಟ್ಟು ಎಷ್ಟು ಮೊತ್ತದ ಸಾಲ ಬಾಕಿ ಇದೆ ಎಂದು ಲೆಕ್ಕ ಹಾಕಿ, ನಿಮ್ಮ ಸಾಲದ ಸಾಮರ್ಥ್ಯದಲ್ಲೇ (Borrowing Capacity) ಅಂದಾಜಿಸಲಾಗುತ್ತದೆ.
  • ಸಾಲ ಮರುಪಾವತಿಯ ಕಾನೂನು ಬಾಧ್ಯತೆ: ಬ್ಯಾಂಕು ಸಾಲ ವಾಪಸ್ ಆದಾಗ ಮೊದಲು ಸಾಲಗಾರನ ಹಿಂದೆಬೀಳುತ್ತದೆ. ಆದರೆ, ಆ ಸಾಲಗಾರ ಸಂಪೂರ್ಣ ಸುಸ್ತಿದಾರನಾದರೆ (Default), ಅಂದರೆ ಸಾಲ ವಾಪಸ್ ಮಾಡದೇ ಹೋದಾಗ, ಬ್ಯಾಂಕ್‌ಗಳು ಬಾಕಿ ಹಣವನ್ನು ವಸೂಲಿ ಮಾಡಲು ಗ್ಯಾರಂಟರ‍್ಗೆ ನೋಟಿಸ್ ಕಳುಹಿಸುತ್ತವೆ. ನಿಮ್ಮ ಆಸ್ತಿ ಅಥವಾ ಬ್ಯಾಂಕ್ ಖಾತೆಯಿಂದ ಹಣ ವಸೂಲಿ ಮಾಡುವ ಸಂಪೂರ್ಣ ಕಾನೂನು ಹಕ್ಕನ್ನು ಹೊಂದಿರುತ್ತವೆ.

ಶೂರಿಟಿ ಸಾಲ ತೀರಿದರೆ ನಿಮಗೇನು ಪ್ರಯೋಜನ?

ಸಾಲ ತೀರಿದಾಗ ಸಾಲಗಾರನ ಕ್ರೆಡಿಟ್ ಸ್​ಕೋರ್ ಉತ್ತಮಗೊಳ್ಳುತ್ತದೆ. ಅಂತೆಯೇ, ನೀವು ಶೂರಿಟಿ ಹಾಕಿರುವ ಅಥವಾ ಗ್ಯಾರಂಟರ್ ಆಗಿರುವ ಸಾಲವು ಸಂಪೂರ್ಣ ಮರುಪಾವತಿಯಾದರೆ ನಿಮ್ಮ ಕ್ರೆಡಿಟ್ ಸ್ಕೋರ್​ಗೆ ಪುಷ್ಟಿ ಸಿಗುತ್ತಾ ಎನ್ನುವ ಪ್ರಶ್ನೆ ಬರಬಹುದು. ಆದರೆ, ಶೂರಿಟಿ ಹಾಕಿದವರಿಗೆ ಕ್ರೆಡಿಟ್ ಸ್ಕೋರ್ ಹೆಚ್ಚುವುದಿಲ್ಲ ಎಂಬುದು ಗಮನದಲ್ಲಿರಲಿ.

ಇದನ್ನೂ ಓದಿ: ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೇ ಕರೆಂಟ್, ಗ್ಯಾಸ್, ವಾಟರ್ ಬಿಲ್ ಪಾವತಿ: ಹೊಸ ಫೀಚರ್ ಪರಿಚಯಿಸಿದ ಮೆಟಾ

ಸಾಲದ ಗ್ಯಾರಂಟಿ ನಿಲ್ಲುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು

  • ಸಾಲಗಾರನ ಆರ್ಥಿಕ ಸ್ಥಿತಿ ತಿಳಿಯಿರಿ: ಸಾಲ ಪಡೆಯುತ್ತಿರುವ ವ್ಯಕ್ತಿಯ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಕೂಲಂಕಷವಾಗಿ ಪರಿಶೀಲಿಸಿ.
  • ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ: ಸಾಲಗಾರನು ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುತ್ತಿದ್ದಾನೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಿ.
  • ಸಾಲ ಮರುಪಾವತಿ ವಿಮೆ: ಸಾಲಗಾರನಿಗೆ ಸಾಲ ಮರುಪಾವತಿ ವಿಮೆ (Loan Insurance) ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಲಗಾರನಿಗೆ ತೊಂದರೆಯಾದಲ್ಲಿ ವಿಮಾ ಕಂಪನಿಯೇ ಬಾಕಿ ಚುಕ್ತ ಮಾಡುತ್ತದೆ.
  • ಸುಲಭವಾಗಿ ಸಹಿ ಹಾಕಬೇಡಿ: ಕೇವಲ ಪ್ರೀತಿ ಅಥವಾ ಮುಲಾಜಿಗೆ ಒಳಗಾಗಿ ಯಾವುದೇ ಜಂಟಿ ಸಾಲ ಅಥವಾ ಗ್ಯಾರಂಟಿ ಪತ್ರಗಳಿಗೆ ಸಹಿ ಹಾಕಬೇಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Thu, 3 September 26

Follow Us
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ
‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!
ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!
ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?
ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ
ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ
ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?
ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?
ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು
ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ
ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ