AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗ ಬದಲಾವಣೆ ನಂತರ ಇಪಿಎಫ್ ಖಾತೆದಾರರು ಖಾತೆ ವರ್ಗಾವಣೆ ಬಗ್ಗೆ ಚಿಂತಿಸಬೇಕಿಲ್ಲ ಏಕೆ, ಇಲ್ಲಿದೆ ಮಾಹಿತಿ

ಇಪಿಎಫ್​ಒ ಖಾತೆದಾರರು ತಮ್ಮ ಉದ್ಯೋಗವನ್ನು ಬದಲಾವಣೆ ಮಾಡಿದಾಗ ಇನ್ನು ಖಾತೆ ವರ್ಗಾವಣೆ ಮಾಡುವ ಅಗತ್ಯ ಇರುವುದಿಲ್ಲ ಏಕೆ ಗೊತ್ತೆ?

ಉದ್ಯೋಗ ಬದಲಾವಣೆ ನಂತರ ಇಪಿಎಫ್ ಖಾತೆದಾರರು ಖಾತೆ ವರ್ಗಾವಣೆ ಬಗ್ಗೆ ಚಿಂತಿಸಬೇಕಿಲ್ಲ ಏಕೆ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 23, 2021 | 1:10 PM

Share

ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸಭೆ ನವೆಂಬರ್ 20, 2021ರ ಶನಿವಾರದಂದು ನಡೆದಿತ್ತು. ಕೇಂದ್ರೀಕೃತ ಮಾಹಿತಿ ತಂತ್ರಜ್ಞಾನ ಬೆಂಬಲಿತ ವ್ಯವಸ್ಥೆ ಅಭಿವೃದ್ಧಿಗೊಳಿಸಲು ಸೆಂಟರ್ ಫಾರ್ ಡೆವಲಪ್​ಮೆಂಟ್ ಆಫ್ ಅಡ್ವಾನ್ಸ್ಡ್​ ಕಂಪ್ಯೂಟಿಂಗ್ (C-DAC)ಗೆ ಸಿಬಿಟಿಯಿಂದ ವಹಿಸಲಾಗಿದೆ. ಈ ಬೆಳವಣಿಗೆಯ ನಂತರ ಉದ್ಯೋಗಿಗಳು ಉದ್ಯೋಗ ಬದಲಾವಣೆ ಮಾಡಿದ ನಂತರವೂ ಅದೇ ಇಪಿಎಫ್ ಖಾತೆ ಸಂಖ್ಯೆ ಮುಂದುವರಿಯಲಿದೆ. “ಇದರ ನಂತರ, ಕ್ಷೇತ್ರ ಕಾರ್ಯಚಟುವಟಿಕೆಗಳು ಹಂತಹಂತವಾಗಿ ಕೇಂದ್ರ ಡೇಟಾಬೇಸ್​ಗೆ ವರ್ಗಾವಣೆ ಆಗುತ್ತವೆ. ಸುಗಮ ಕಾರ್ಯಾಚರಣೆಗಳು ಮತ್ತು ವರ್ಧಿತ ಸೇವಾ ವಿತರಣೆಯನ್ನು ಇದು ಸಕ್ರಿಯಗೊಳಿಸುತ್ತದೆ. ಕೇಂದ್ರೀಕೃತ ವ್ಯವಸ್ಥೆಯು ಯಾವುದೇ ಸದಸ್ಯರ ಎಲ್ಲ ಪಿಎಫ್​ ಖಾತೆಗಳ ಡಿ-ನಕಲು ಮತ್ತು ವಿಲೀನವನ್ನು ಸುಲಭಗೊಳಿಸುತ್ತದೆ. ಇದು ಕೆಲಸ ಬದಲಾವಣೆಯ ನಂತರ ವರ್ಗಾವಣೆ ಅಗತ್ಯವನ್ನು ತೆಗೆದುಹಾಕುತ್ತದೆ,” ಎಂದು ನಿವೃತ್ತಿ ನಿಧಿ ಸಂಸ್ಥೆಯ ಬಿಡುಗಡೆಯು ಕೇಂದ್ರೀಯ ಮಂಡಳಿ, ಇಪಿಎಫ್ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಪಟ್ಟಿ ಮಾಡಿದೆ.

ಸಭೆಯಲ್ಲಿ CBT ಅಧ್ಯಕ್ಷರು ‘ಕೊವಿಡ್‌ಗೆ ಪ್ರತಿಕ್ರಿಯೆ – 2.0’ ಎಂಬ ಶೀರ್ಷಿಕೆಯ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಕಿರುಪುಸ್ತಕವು ಕೊವಿಡ್ -19 ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ ಅದರ ಮಧ್ಯಸ್ಥಗಾರರಿಗೆ ಅಡೆತಡೆಯಿಲ್ಲದ ಸೇವೆಗಳನ್ನು ಆವಿಷ್ಕರಿಸಲು ಮತ್ತು ನೀಡಲು ಇಪಿಎಫ್‌ಒ ಹೇಗೆ ಸಂಸಿದ್ಧಗೊಂಡಿದೆ ಎಂಬುದನ್ನು ವಿವರಿಸುವ ಪ್ರಯತ್ನವಾಗಿದೆ. ಕಿರುಪುಸ್ತಕವು ಸರಣಿಯಲ್ಲಿ ಎರಡನೆಯದು. ಮೊದಲ ಆವೃತ್ತಿಯನ್ನು 2021ರ ಮಾರ್ಚ್​ನಲ್ಲಿ ಶ್ರೀನಗರದಲ್ಲಿ ನಡೆದ 228ನೇ CBT ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.

‘ನಿರ್ಬದ್: ತಡೆರಹಿತ ಸೇವಾ ವಿತರಣೆ’ ಎಂಬ ಶೀರ್ಷಿಕೆಯ ಮತ್ತೊಂದು ಕಿರುಪುಸ್ತಕ. ಈ ಕಿರುಪುಸ್ತಕವು ಕಳೆದ ಮೂರು ವರ್ಷಗಳಲ್ಲಿ ‘ಇಪಿಎಫ್​ಒನಿಂದ e-ಇಪಿಎಫ್​ಒ’ಗೆ ಯಶಸ್ವಿ ಡಿಜಿಟಲ್ ರೂಪಾಂತರದ ಕಡೆಗೆ ಇಪಿಎಫ್​ಒ ಅಳವಡಿಸಿಕೊಂಡ ಉಪಕ್ರಮಗಳು ಮತ್ತು ಕಾರ್ಯತಂತ್ರಗಳ ಸಂಕಲನವಾಗಿದೆ. ಈ ಪ್ರಯತ್ನಗಳು ಇಪಿಎಫ್‌ಒಗೆ ಡಿಜಿಟಲ್ ಸಂವಹನ ಮಾಡುವ ಪೇಪರ್‌ಲೆಸ್ ಸಂಸ್ಥೆ ಆಗುತ್ತ ಸಾಗಲು ಅನುವು ಮಾಡಿಕೊಟ್ಟಿದೆ. ಆ ಮೂಲಕ ಅದರ ಎಲ್ಲ ಪಾಲುದಾರರಿಗೆ ಜೀವನವನ್ನು ಸುಲಭಗೊಳಿಸುತ್ತದೆ.

ಇದನ್ನೂ ಓದಿ: EPFO: ಇಪಿಎಫ್​ಒದಿಂದ ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿ ರೂ. 4.20 ಲಕ್ಷದಿಂದ 8 ಲಕ್ಷಕ್ಕೆ ವಿಸ್ತರಣೆ

Follow Us
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿಬೆಟ್ಟದಲ್ಲಿ ಯಡಿಯೂರಪ್ಪ ಕುಟುಂಬದಿಂದ ವಿಶೇಷ ಪೂಜೆ
ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ ಅಭಿಮಾನಿ
ಚಾಮುಂಡಿ ಸನ್ನಿಧಿಯಲ್ಲಿ ದರ್ಶನ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ ಅಭಿಮಾನಿ
KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ