AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಸಿಯಟ್ ಜಾಹೀರಾತಿಗೂ ಕರ್ನಾಟಕ ಚುನಾವಣೆಗೂ ಸಂಬಂಧವೇ ಇಲ್ಲ; ವೈರಲ್ ವಿಡಿಯೊ ಎಡಿಟ್ ಮಾಡಿದ್ದು!

2017 ರಲ್ಲಿ ಪ್ರಸಾರವಾದ ಸಿಯಟ್ ಟೈರ್ಸ್ ಜಾಹೀರಾತನ್ನು ಎಡಿಟ್ ಮಾಡಿ  ಸಾಮಾಜಿಕ ಮಾಧ್ಯಗಳಲ್ಲಿ ಹರಿಬಿಡಲಾಗಿದೆ. ಮೂಲ ಜಾಹೀರಾತಿನಲ್ಲಿ ಬಿಜೆಪಿ ಅಥವಾ ನರೇಂದ್ರ ಮೋದಿ ವಿರುದ್ಧ ಯಾವುದೇ ಬರಹಗಳಾಗಲೀ ಘೋಷಣೆಗಳಾಗಲೀ ಇಲ್ಲ

Fact Check: ಸಿಯಟ್ ಜಾಹೀರಾತಿಗೂ ಕರ್ನಾಟಕ ಚುನಾವಣೆಗೂ ಸಂಬಂಧವೇ ಇಲ್ಲ; ವೈರಲ್ ವಿಡಿಯೊ ಎಡಿಟ್ ಮಾಡಿದ್ದು!
CEAT ಜಾಹೀರಾತು
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Apr 29, 2023 | 8:57 PM

Share

ಮುಖ್ಯಾಂಶಗಳು

  • ಕರ್ನಾಟಕ ಚುನಾವಣೆ ಬಗ್ಗೆ ಉತ್ತಮ ಜಾಹೀರಾತು ಎಂಬ ಬರಹದೊಂದಿಗೆ ವೈರಲ್ ಆದ ವಿಡಿಯೊ
  • ಎಡಿಟ್ ಮಾಡಿದ ವಿಡಿಯೊದಲ್ಲಿ ಬಳಸಿದ್ದು ಸಿಯಟ್ ಟೈರ್ಸ್ ಜಾಹೀರಾತು
  • ಈ ಜಾಹೀರಾತಿನ ಕೊನೆಯ ಭಾಗವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ

ಶಾಪಿಂಗ್ ಮಾಲ್​​ನಲ್ಲಿ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಹಣವನ್ನು ಪಾವತಿಸಲು ನಿರಾಕರಿಸುವ ವ್ಯಕ್ತಿ ತನ್ನ ಕೈಯಲ್ಲಿ, ಬಾಯಲ್ಲಿ ಸಾಮಾಗ್ರಿಗಳನ್ನು ಕೊಂಡೊಯ್ಯುವ ವಿಡಿಯೊ ಅದು. ಹೀಗೆ ಕೊಂಡೊಯ್ಯುವಾಗ ಪಾರ್ಕಿಂಗ್ ಸ್ಥಳದಲ್ಲಿ ಆತನ ಕುತ್ತಿಗೆಯಡಿಯಲ್ಲಿರಿಸಿದ ಕೆಚಪ್ ಬಾಟಲಿ ಜಾರಿ ಬೀಳುತ್ತದೆ. ಹಣ ಉಳಿತಾಯ ಮಾಡಲು ಈ ರೀತಿ ಕಸರತ್ತು ಮಾಡುತ್ತಿದ್ದೀರಾ ಎಂಬ ಹಿನ್ನಲೆ ದನಿ ಕೇಳುತ್ತದೆ. ನಂತರ ಸ್ಕ್ರೀನ್​​ನಲ್ಲಿ ಮೋದಿ (PM Modi) ಹಠಾವೋ ಪೈಸೆ ಬಚಾವೋ, ಹೀಗೆ ಹಲವು ಘೋಷಣೆಗಳು ಕಾಣಿಸಿಕೊಳ್ಳುತ್ತವೆ. ಕರ್ನಾಟಕದ ವಿಧಾನಸಭಾ ಚುನಾವಣೆಯು(Karnataka Elections 2023) ಮೇ 10, 2023 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಈ ಜಾಹೀರಾತು ವೈರಲ್ (Viral Video) ಆಗಿದೆ.

ಫ್ಯಾಕ್ಟ್ ಚೆಕ್

2017 ರಲ್ಲಿ ಪ್ರಸಾರವಾದ ಸಿಯಟ್ ಟೈರ್ಸ್ ಜಾಹೀರಾತನ್ನು ಎಡಿಟ್ ಮಾಡಿ  ಸಾಮಾಜಿಕ ಮಾಧ್ಯಗಳಲ್ಲಿ ಹರಿಬಿಡಲಾಗಿದೆ. ಮೂಲ ಜಾಹೀರಾತಿನಲ್ಲಿ ಬಿಜೆಪಿ ಅಥವಾ ನರೇಂದ್ರ ಮೋದಿ ವಿರುದ್ಧ ಯಾವುದೇ ಬರಹಗಳಾಗಲೀ ಘೋಷಣೆಗಳಾಗಲೀ ಇಲ್ಲ ಎಂದು ಬೂಮ್​​ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.

37 ಸೆಕೆಂಡ್‌ಗಳ ಮೂಲ ಜಾಹೀರಾತಿನ ಕೊನೆಯಲ್ಲಿ ವೈರಲ್ ವಿಡಿಯೊದಲ್ಲಿರುವಂತೆ ಮೋದಿ ಹಠಾವೋ ಎಂಬ ಟ್ಯಾಗ್‌ಲೈನ್ ಇಲ್ಲ. ಅದರ ಬದಲು ಹಣವನ್ನು ಉಳಿಸಲು CEAT ಟೈರ್‌ಗಳನ್ನು ಖರೀದಿಸಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Fact Check: ಬಿಜೆಪಿಗೆ ವೋಟ್ ಇಲ್ಲ ಎಂದ ಅನಿವಾಸಿ ಭಾರತೀಯರು; ವಿಡಿಯೊ ಅಭಿಯಾನ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ

ಈ ಜಾಹೀರಾತು ವಿಡಿಯೊವನ್ನು ಜೂನ್ 8, 2017 ರಂದು ಯೂಟ್ಯೂಬ್‌ನಲ್ಲಿ ಸಿಯಟ್ ಟೈರ್ಸ್ ಅಪ್‌ಲೋಡ್ ಮಾಡಿದೆ.

ಎಡಿಟ್ ಮಾಡಿದ ಈ ವಿಡಿಯೊವನ್ನು ಕರ್ನಾಟಕ ಚುನಾವಣೆಯ ಹ್ಯಾಷ್ ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತಿದೆ. ಮೂಲ ಜಾಹೀರಾತಿಗೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’