AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಿಸ್ ಯೂ ಪದದ ಅರ್ಥ ಸೌಂದರ್ಯ ಅವರನ್ನು ಕಳೆದುಕೊಂಡ ಮೇಲೆಯೇ ತಿಳಿಯಿತು’ ಅರ್ಜುನ್ ಸರ್ಜಾ

ದಕ್ಷಿಣ ಭಾರತದ ಖ್ಯಾತ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ದಿವಂಗತ ನಟಿ ಸೌಂದರ್ಯ ಅವರೊಂದಿಗಿನ ಭಾವನಾತ್ಮಕ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ. ಸೌಂದರ್ಯ ಅವರ ಅಗಲಿಕೆಯ ನಂತರವೇ ತಮಗೆ 'ಮಿಸ್ ಯೂ' ಎಂಬ ಪದದ ನಿಜವಾದ ಅರ್ಥ ಮತ್ತು ನೋವು ತಿಳಿಯಿತು ಎಂದು ಅರ್ಜುನ್ ಭಾವುಕರಾಗಿ ಹೇಳಿದ್ದಾರೆ.

'ಮಿಸ್ ಯೂ ಪದದ ಅರ್ಥ ಸೌಂದರ್ಯ ಅವರನ್ನು ಕಳೆದುಕೊಂಡ ಮೇಲೆಯೇ ತಿಳಿಯಿತು’ ಅರ್ಜುನ್ ಸರ್ಜಾ
ಅರ್ಜುನ್ ಸರ್ಜಾ-ಸೌಂದರ್ಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 04, 2026 | 11:09 AM

Share

ಮುಖ್ಯಾಂಶಗಳು

  • ಸೌಂದರ್ಯ ಅಗಲಿಕೆ ನೆನೆದು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಭಾವುಕ
  • 'ಮಿಸ್ ಯೂ' ಪದದ ನೈಜ ಅರ್ಥ ತಿಳಿಸಿದ್ದು ನಟಿ ಸೌಂದರ್ಯ
  • ಚಿತ್ರರಂಗದ ಆರಂಭಿಕ ಕಷ್ಟಗಳು ಮತ್ತು ಸೌಂದರ್ಯ ಅಪರೂಪದ ಗುಣಗಳ ಬಣ್ಣನೆ

ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್‌ಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದವರು. ನಾಯಕ ನಟನಾಗಿ ಮಾತ್ರವಲ್ಲದೆ ಖಳನಾಯಕ ಹಾಗೂ ಕ್ಯಾರ್ಯಾಕ್ಟರ್ ಆರ್ಟಿಸ್ಟ್ ಆಗಿಯೂ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಅವರ ಆಕ್ಷನ್ ಸೀನ್‌ಗಳು ಮತ್ತು ಸ್ಕ್ರೀನ್ ಮೇಲಿನ ಆಟಿಟ್ಯೂಡ್ ಲಕ್ಷಾಂತರ ಅಭಿಮಾನಿಗಳನ್ನು ಆಕರ್ಷಿಸಿದೆ.

ಹಿಂದಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿಪಯಣ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದ ಅರ್ಜುನ್, ಆರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳು ಮತ್ತು ಕಷ್ಟಗಳನ್ನು ನೆನಪಿಸಿಕೊಂಡಿದ್ದರು. ‘ಆರಂಭದಲ್ಲಿ ಅವಕಾಶಗಳಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಆದರೆ ಎದುರಾದ ಪ್ರತಿಯೊಂದು ಹಿನ್ನಡೆಯನ್ನೂ ಒಂದು ಪಾಠವನ್ನಾಗಿ ಸ್ವೀಕರಿಸಿ ದಿಟ್ಟ ಹೆಜ್ಜೆ ಇಟ್ಟೆ. ನಟನೆಯ ಮೇಲಿದ್ದ ಶ್ರದ್ಧೆ ಹಾಗೂ ಬದ್ಧತೆಯೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ’ ಎಂದು ಹೇಳಿದ್ದರು.

ಈ ಸುದೀರ್ಘ ಚಲನಚಿತ್ರ ಪ್ರಯಾಣದಲ್ಲಿ ತಾವು ಸಂಪಾದಿಸಿದ ಆತ್ಮೀಯ ಸ್ನೇಹಿತರ ಬಗ್ಗೆ ಪ್ರಸ್ತಾಪಿಸಿದ್ದ ಅವರು, ಹಿರಿಯ ನಟ ಜಗಪತಿ ಬಾಬು ಹಾಗೂ ದಿವಂಗತ ಶ್ರೇಷ್ಠ ನಟಿ ಸೌಂದರ್ಯ ತಮ್ಮ ಆಪ್ತ ಗೆಳೆಯರ ಪಟ್ಟಿಯಲ್ಲಿದ್ದಾರೆ ಎಂದಿದ್ದರು. ಸೌಂದರ್ಯ ಅವರೊಂದಿಗಿನ ಬಾಂಧವ್ಯವನ್ನು ನೆನೆದು ಭಾವುಕರಾಗಿದ್ದ ಅರ್ಜುನ್, ‘ನನ್ನ ಜೀವನದಲ್ಲಿ ‘ಮಿಸ್ ಯೂ’ ಎಂಬ ಪದದ ನೈಜ ಅರ್ಥವನ್ನು ಹುಡುಕ ಹೊರಟರೆ, ಅದು ಸೌಂದರ್ಯ ಅವರನ್ನು ಕಳೆದುಕೊಂಡ ಕ್ಷಣದಲ್ಲಿ ಸಿಗುತ್ತದೆ. ಅವರು ಅಗಲಿದ ಮೇಲೆಯೇ ನನಗೆ ಆ ಪದದ ನಿಜವಾದ ನೋವು ಅರಿವಾಗಿದ್ದು’ ಎಂದು ಕಣ್ಣೀರಾಗಿದ್ದರು.

ಇದನ್ನೂ ಓದಿ:  ‘ಸೌಂದರ್ಯ’ ಸಿನಿಮಾ ಬಾಲನಟಿ ನೆನಪಿದ್ದಾರಾ? ಈಗ ಹೇಗಿದ್ದಾರೆ ನೋಡಿ?

ಸೌಂದರ್ಯ ಅವರ ನಟನೆ, ಸೌಂದರ್ಯ ಮತ್ತು ಸರಳತೆಯನ್ನು ಕೊಂಡಾಡಿದ ಅವರು, ‘ಒಬ್ಬ ವ್ಯಕ್ತಿಯಲ್ಲಿ ಇರಬೇಕಾದ ಎಲ್ಲಾ ಸದ್ಗುಣಗಳೂ ಸೌಂದರ್ಯ ಅವರಲ್ಲಿ ಒಂದೇ ಕಡೆ ಇದ್ದವು. ಅಂತಹ ಅಪರೂಪದ ಗುಣಗಳನ್ನು ಹೊಂದಿದ್ದ ಮಹಾನ್ ನಟಿ ಅವರು’ ಎಂದು ಬಣ್ಣಿಸಿದ್ದರು. ನಟ ಹಾಗೂ ನಿರ್ದೇಶಕರಾಗಿ ಯಶಸ್ಸು ಕಂಡಿರುವ ಅರ್ಜುನ್ ಸರ್ಜಾ ಅವರ ಈ ಮಾತುಗಳು, ಸೌಂದರ್ಯ ಅವರ ಮೇಲಿದ್ದ ಅವರ ಅಪಾರ ಪ್ರೀತಿ ಹಾಗೂ ಭಾವನಾತ್ಮಕ ಬಾಂಧವ್ಯವನ್ನು ಎತ್ತಿಹಿಡಿಯುತ್ತವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us