AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಹನ್‌ಲಾಲ್ ಸಿನಿಮಾಗಿಂತ ಡಿಫರೆಂಟ್ ಆಗಿರಲಿದೆ ಹಿಂದಿಯ ‘ದೃಶ್ಯಂ 3’: ಅಜಯ್ ದೇವಗನ್ ಭರವಸೆ

ಮಲಯಾಳಂ ಮೂಲದ ‘ದೃಶ್ಯಂ’ ಚಿತ್ರ ಸರಣಿಯನ್ನು ಆಧರಿಸಿ ಹಿಂದಿಯಲ್ಲಿ ಮೊದಲ ಎರಡು ಭಾಗಗಳನ್ನು ರಿಮೇಕ್ ಮಾಡಲಾಗಿತ್ತು. ಆದರೆ ಮೂರನೇ ಭಾಗದ ವಿಷಯದಲ್ಲಿ ಹಿಂದಿ ಚಿತ್ರತಂಡ ಸ್ವತಂತ್ರ ಹಾದಿ ಹಿಡಿದಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಶುಭ ದಿನದಂದು ಚಿತ್ರವು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.

ಮೋಹನ್‌ಲಾಲ್ ಸಿನಿಮಾಗಿಂತ ಡಿಫರೆಂಟ್ ಆಗಿರಲಿದೆ ಹಿಂದಿಯ ‘ದೃಶ್ಯಂ 3’: ಅಜಯ್ ದೇವಗನ್ ಭರವಸೆ
Drishyam The Conclusion StillImage Credit source: Star Studios
ಮದನ್​ ಕುಮಾರ್​
|

Updated on: Sep 09, 2026 | 10:09 PM

Share

ಬಾಲಿವುಡ್‌ನ ಯಶಸ್ವಿ ಫ್ರಾಂಚೈಸಿ ‘ದೃಶ್ಯಂ’ ಸರಣಿಯ ಬಹುನಿರೀಕ್ಷಿತ ಮೂರನೇ ಹಾಗೂ ಕೊನೆಯ ಭಾಗ ‘ದೃಶ್ಯಂ: ದ ಕನ್‌ಕ್ಲೂಷನ್’ ಚಿತ್ರದ ಟ್ರೇಲರ್ ಬುಧವಾರ (ಸೆಪ್ಟೆಂಬರ್ 9) ಅದ್ದೂರಿಯಾಗಿ ಬಿಡುಗಡೆಯಾಗಿದೆ. ವಿಜಯ್ ಸಾಲ್ಗಾಂವ್ಕರ್ ಪಾತ್ರದಲ್ಲಿ ಮತ್ತೆ ಅಜಯ್ ದೇವಗನ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಯ್ ದೇವಗನ್, ಮಲಯಾಳಂನ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಚಿತ್ರಕ್ಕೂ ಮತ್ತು ತಮ್ಮ ಹಿಂದಿ ಆವೃತ್ತಿಗೂ ಯಾವುದೇ ಸಂಬಂಧವಿಲ್ಲ; ಇದು ಸಂಪೂರ್ಣವಾಗಿ ವಿಭಿನ್ನ ಕಥೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಯ್ ದೇವಗನ್, ‘ನಮ್ಮ ಎರಡನೇ ಭಾಗವು ಮೂಲ ಮಲಯಾಳಂ ಚಿತ್ರದಿಂದ ಪ್ರೇರಿತವಾಗಿತ್ತು. ಆದರೆ ಈ ಮೂರನೇ ಭಾಗದ ಕಥೆಯೇ ಬೇರೆ. ಮಲಯಾಳಂನ ‘ದೃಶ್ಯಂ 3’ ಹಾಗೂ ನಮ್ಮ ‘ದೃಶ್ಯಂ ದ ಕನ್‌ಕ್ಲೂಷನ್’ ಚಿತ್ರಗಳ ನಡುವೆ ಸಣ್ಣಪುಟ್ಟ ಬದಲಾವಣೆಗಳಷ್ಟೇ ಅಲ್ಲ, ಎರಡೂ ಸಂಪೂರ್ಣ ವಿಭಿನ್ನ ಚಿತ್ರಕಥೆಗಳನ್ನು ಹೊಂದಿವೆ. ದೃಶ್ಯಂ 2 ನಂತರ ಈ ಸಿನಿಮಾ ಸೆಟ್ಟೇರುತ್ತದೆಯೋ ಇಲ್ಲವೋ ಎಂಬ ಗೊಂದಲವಿತ್ತು. ಏಕೆಂದರೆ ಇದು ಕೇವಲ ಸೀಕ್ವೆಲ್ ಮಾಡಬೇಕು ಅಂತ ಬರೆಯುವ ಕಥೆಯಲ್ಲ. ಇದರಲ್ಲಿ ರೋಚಕ ಟ್ವಿಸ್ಟ್ ಹಾಗೂ ಟರ್ನ್‌ಗಳು ಇರಬೇಕಾಗುತ್ತದೆ’ ಎಂದು ವಿವರಿಸಿದ್ದಾರೆ.

ಚಿತ್ರದ ನಿರ್ದೇಶಕ ಅಭಿಷೇಕ್ ಪಾಠಕ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅಜಯ್ ದೇವಗನ್, ‘ಅಭಿಷೇಕ್ ಈ ಕಥೆಯನ್ನು ಅತ್ಯುತ್ತಮವಾಗಿ ರೂಪಿಸಿದ್ದಾರೆ. ಈ ಸಿನಿಮಾ ಮುಖಾಂತರ ಅವರ ಬೆಳವಣಿಗೆ ನಿಮಗೆ ತಿಳಿಯುತ್ತದೆ. ಮಲಯಾಳಂ ನಟ ಮೋಹನ್‌ಲಾಲ್ ಹಾಗೂ ನಿರ್ದೇಶಕ ಜೀತು ಜೋಸೆಫ್ ನಮ್ಮ ಈ ಚಿತ್ರವನ್ನು ನೋಡಬೇಕು. ಅವರಿಗೆ ನಮ್ಮ ಸಿನಿಮಾ ಇಷ್ಟವಾಗಿ ಒಪ್ಪಿಗೆ ಸಿಕ್ಕರೆ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ದೃಶ್ಯಂ 3’ ಚಿತ್ರದ ಟ್ರೇಲರ್:

‘ದೃಶ್ಯಂ: ದ ಕನ್‌ಕ್ಲೂಷನ್’ ಚಿತ್ರದಲ್ಲಿ ವಿಜಯ್ ಸಾಲ್ಗಾಂವ್ಕರ್ ಪಾತ್ರದಲ್ಲಿ ಅಜಯ್ ದೇವಗನ್, ಮಾಜಿ ಐಜಿ ಮೀರಾ ದೇಶ್‌ಮುಖ್ ಪಾತ್ರದಲ್ಲಿ ಟಬು ಹಾಗೂ ನಂದಿನಿ ಪಾತ್ರದಲ್ಲಿ ಶ್ರಿಯಾ ಶರಣ್ ಮುಂದುವರಿದಿದ್ದಾರೆ. ರಜತ್ ಕಪೂರ್ ಕೂಡ ತಮ್ಮ ಹಳೆಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಎರಡು ಪ್ರಮುಖ ಹೊಸ ಪಾತ್ರಗಳು ಕಥೆಗೆ ಸೇರ್ಪಡೆಯಾಗಿವೆ. ನಟ ಪ್ರಕಾಶ್ ರಾಜ್ ಹಾಗೂ ಜೈದೀಪ್ ಅಹ್ಲಾವತ್ ಹೊಸ ಹಾಗೂ ಪ್ರಬಲ ಪಾತ್ರಗಳಲ್ಲಿ ವಿಜಯ್ ಸಾಲ್ಗಾಂವ್ಕರ್ ಕುಟುಂಬಕ್ಕೆ ಸವಾಲೊಡ್ಡಲಿದ್ದಾರೆ.

ಇದನ್ನೂ ಓದಿ: ಪಾನ್ ಮಸಾಲ ಜಹೀರಾತು ವಿವಾದ: ಶಾರುಖ್, ಅಜಯ್ ದೇವಗನ್ ನೀಡಿದ್ದ ಸಮರ್ಥನೆ ಏನು?

‘ಸ್ಟಾರ್ ಸ್ಟುಡಿಯೋ 18’ ಮತ್ತು ಶ್ರೇಯಾಸ್ ತಲ್ಪಡೆ ಒಡೆತನದ ಪ್ಯಾನೋರಮಾ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಅಭಿಷೇಕ್ ಪಾಠಕ್ ನಿರ್ದೇಶನದ ಜೊತೆಗೆ ಆಮಿಲ್ ಕೀಯಾನ್ ಖಾನ್ ಹಾಗೂ ಪರ್ವೀಜ್ ಶೇಖ್ ಅವರೊಂದಿಗೆ ಸೇರಿ ಚಿತ್ರಕಥೆ ಬರೆದಿದ್ದಾರೆ. ಆಲೋಕ್ ಜೈನ್, ಅಜಿತ್ ಅಂಧಾರೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ