AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘3 ಈಡಿಯಟ್ಸ್​’, ‘ಬಾಹುಬಲಿ’ಗಿಂತಲೂ ‘ಪುಷ್ಪ’ ಸಿನಿಮಾದ ಯಶಸ್ಸು ದೊಡ್ಡದು ಎಂದ ಆಮಿರ್ ಖಾನ್

ಬಾಲಿವುಡ್​ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್​ ಖಾನ್​ ಮಾತನಾಡಿದ್ದಾರೆ. ಈ ವೇಳೆ ಸಿನಿಮಾದ ಯಶಸ್ಸನ್ನು ಯಾವ ರೀತಿಯಲ್ಲಿ ಅಳೆಯಬೇಕು ಎಂಬುದನ್ನು ಅವರು ಹೇಳಿದ್ದಾರೆ.

‘3 ಈಡಿಯಟ್ಸ್​’, ‘ಬಾಹುಬಲಿ’ಗಿಂತಲೂ ‘ಪುಷ್ಪ’ ಸಿನಿಮಾದ ಯಶಸ್ಸು ದೊಡ್ಡದು ಎಂದ ಆಮಿರ್ ಖಾನ್
ಅಲ್ಲು ಅರ್ಜುನ್​-ಆಮಿರ್​ ಖಾನ್​
TV9 Web
| Edited By: |

Updated on:Jan 18, 2022 | 7:22 PM

Share

ಅಲ್ಲು ಅರ್ಜುನ್​ (Allu Arjun) ನಟನೆಯ ‘ಪುಷ್ಪ: ದಿ ರೈಸ್​’ (Pushpa: The Rise) ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾದ ಕಲೆಕ್ಷನ್​ 300 ಕೋಟಿ ರೂಪಾಯಿ ಗಡಿ ದಾಟಿದೆ. ಈ ಮೂಲಕ ಚಿತ್ರ ಬ್ಲಾಕ್​ಬಸ್ಟರ್​ ಹಿಟ್​ ಎನಿಸಿಕೊಂಡಿದೆ. ಈ ಸಿನಿಮಾ ಬಾಲಿವುಡ್​ನಲ್ಲೂ ಒಳ್ಳೆಯ ಕಲೆಕ್ಷನ್​ ಮಾಡಿದೆ. ಹಿಂದಿಗೆ ಡಬ್​ ಆಗಿ ತೆರೆ ಕಂಡ ಈ ಚಿತ್ರದ ಕಲೆಕ್ಷನ್​ 100 ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರದ ಬಗ್ಗೆ ಆಮಿರ್​ ಖಾನ್​ (Aamir Khan) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ಗಳಿಕೆ ವಿಚಾರದಲ್ಲಿ ‘ಪುಷ್ಪ’ ಸಿನಿಮಾ ‘3 ಈಡಿಯಟ್ಸ್​’ ಅನ್ನೂ ಹಿಂದಿಕ್ಕಿದೆ ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.  

ಬಾಲಿವುಡ್​ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್​ ಖಾನ್​ ಮಾತನಾಡಿದ್ದಾರೆ. ಈ ವೇಳೆ ಸಿನಿಮಾದ ಯಶಸ್ಸನ್ನು ಯಾವ ರೀತಿಯಲ್ಲಿ ಅಳೆಯಬೇಕು ಎಂಬುದನ್ನು ಅವರು ಹೇಳಿದ್ದಾರೆ. ‘ಚಿತ್ರದ ಯಶಸ್ಸನ್ನು ಅಳೆಯಲು ವಾರಾಂತ್ಯದ ಕಲೆಕ್ಷನ್​ ಹಾಗೂ ಸಿನಿಮಾದ ಒಟ್ಟೂ ಕಲೆಕ್ಷನ್​ ನಡುವೆ ಹೋಲಿಕೆ ಮಾಡಿ ನೋಡಬೇಕು. ‘3 ಈಡಿಯಟ್ಸ್​’ ಸಿನಿಮಾ ವಾರಾಂತ್ಯದಲ್ಲಿ 40 ಕೋಟಿ ಗಳಿಕೆ ಮಾಡಿತ್ತು. ಈ ಚಿತ್ರದ ಒಟ್ಟೂ ಗಳಿಕೆ 200 ಕೋಟಿ ರೂಪಾಯಿ. ಅಂದರೆ, ವಾರಾಂತ್ಯದ ಕಲೆಕ್ಷನ್​ಗಿಂತ ಐದು ಪಟ್ಟು ಹೆಚ್ಚು ಈ ಸಿನಿಮಾ ಗಳಿಕೆ ಮಾಡಿತ್ತು. ಹೀಗಾಗಿ, ಈ ಚಿತ್ರ ಉತ್ತಮವಾಗಿದೆ ಎನ್ನಬಹುದು. ವಾರಾಂತ್ಯದಲ್ಲಿ 100 ಕೋಟಿ ಗಳಿಸಿ, ಸಿನಿಮಾದ ಒಟ್ಟೂ ಗಳಿಕೆ 200 ಕೋಟಿ ಎಂದರೆ, ಆ ಸಿನಿಮಾ ಉತ್ತಮವಾಗಿಲ್ಲ ಎಂದರ್ಥ’ ಎಂದಿದ್ದಾರೆ ಆಮಿರ್​ ಖಾನ್ .

‘ಪುಷ್ಪ ಸಿನಿಮಾ ಮೊದಲ ವಾರಾಂತ್ಯದ ಕಲೆಕ್ಷನ್​ಗಿಂತ ​7.04 ಪಟ್ಟು ಹೆಚ್ಚು ಒಟ್ಟೂ ಕಲೆಕ್ಷನ್​ ಮಾಡಿದೆ. ಈ ಫಾರ್ಮುಲಾ ವಿಚಾರದಲ್ಲಿ, ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ (6.87), ಬಾಹುಬಲಿ: ದಿ ಬಿಗಿನಿಂಗ್​ (5.31) 3 ಈಡಿಯಟ್ಸ್​ (5) ರೇಟಿಂಗ್​ ಕಡಿಮೆ. ಈ ಲೆಕ್ಕಕ್ಕೆ ಹೋಲಿಕೆ ಮಾಡಿದರೆ ಪುಷ್ಪ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಚಿತ್ರವನ್ನು ನೋಡೋಕೆ ಪ್ರೇಕ್ಷಕರು ಮತ್ತೆಮತ್ತೆ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ’ ಎಂದಿದ್ದಾರೆ ಆಮಿರ್​ ಖಾನ್​.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್​; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ

ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ

Published On - 6:04 pm, Tue, 18 January 22

ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್