AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಜಯ್-ರಶ್ಮಿಕಾ ಒಂದೇ ರೆಸಾರ್ಟ್ ಹೋಗಿದ್ದೇಕೆ’; ಕೊನೆಗೂ ಮೌನ ಮುರಿದ ಆನಂದ್ ದೇವರಕೊಂಡ

‘ನಿಮ್ಮ ಅಣ್ಣ, ಸ್ಟಾರ್ ಹೀರೋಯಿನ್ ಒಂದೇ ರೆಸಾರ್ಟ್​ಗೆ ತೆರಳಿದ್ದರಲ್ಲ. ನೋಡಿ ನಮ್ಮ ಬಳಿ ಫೋಟೋ ಇದೆ’ ಎಂದು ಯೂಟ್ಯೂಬರ್ ತೋರಿಸಿದ್ದಾರೆ. ಇದಕ್ಕೆ ಆನಂದ್ ‘ನನ್ನ ಬಳಿಯೂ ಇದೆ’ ಎಂದು ಯಾವುದೋ ಒಂದು ಫೋಟೋ ತೋರಿಸಿದ್ದಾರೆ.

‘ವಿಜಯ್-ರಶ್ಮಿಕಾ ಒಂದೇ ರೆಸಾರ್ಟ್ ಹೋಗಿದ್ದೇಕೆ’; ಕೊನೆಗೂ ಮೌನ ಮುರಿದ ಆನಂದ್ ದೇವರಕೊಂಡ
‘ವಿಜಯ್-ರಶ್ಮಿಕಾ ಒಂದೇ ರೆಸಾರ್ಟ್ ಹೋಗಿದ್ದೇಕೆ’; ಕೊನೆಗೂ ಮೌನ ಮುರಿದ ಆನಂದ್ ದೇವರಕೊಂಡ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:May 31, 2024 | 8:06 AM

Share

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ಬೇರೆ ಬೇರೆ ಕಡೆಗಳಲ್ಲಿ ಸುತ್ತಾಟ ನಡೆಸುತ್ತಾರೆ. ಅನೇಕ ಬಾರಿ ಇವರು ಒಟ್ಟಾಗಿ ವಿದೇಶಕ್ಕೆ ತೆರಳಿದ್ದು ಇದೆ. ಬೇರೆ ಬೇರೆ ಸಂದರ್ಭದಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆದಾಗ್ಯೂ ಅಭಿಮಾನಿಗಳು ಇದನ್ನು ಕಂಡು ಹಿಡಿಯುತ್ತಾರೆ. ಈ ಪೈಕಿ ಹೆಚ್ಚು ಸುದ್ದಿ ಮಾಡಿದ್ದು ರೆಸಾರ್ಟ್ ಫೋಟೋ. ಇಬ್ಬರೂ ಒಂದೇ ರೆಸಾರ್ಟ್​ಗೆ ತೆರಳಿದ್ದರು. ಆದರೆ, ಬೇರೆ ಬೇರೆ ಸಂದರ್ಭದಲ್ಲಿ ಫೋಟೋ ಹಾಕಿದ್ದರು. ಇವರು ಒಟ್ಟಿಗೆ ಹೋಗಿದ್ದರು ಅನ್ನೋದು ಕೆಲವರ ಊಹೆ. ಈ ಬಗ್ಗೆ ಆನಂದ್ ದೇವರಕೊಂಡಗೆ ಪ್ರಶ್ನೆ ಎದುರಾಗಿದೆ.

ಇತ್ತೀಚೆಗೆ ಆನಂದ್ ದೇವರಕೊಂಡ ಅವರು ಯೂಟ್ಯೂಬ್​ ಚಾನೆಲ್​ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಆ ಯೂಟ್ಯೂಬರ್ ನೇರಾ ನೇರ ಪ್ರಶ್ನೆಗಳನ್ನು ಇಟ್ಟಿದ್ದಾರೆ. ‘ನಿಮ್ಮ ಅಣ್ಣ, ಸ್ಟಾರ್ ಹೀರೋಯಿನ್ ಒಂದೇ ರೆಸಾರ್ಟ್​ಗೆ ತೆರಳಿದ್ದರಲ್ಲ. ನೋಡಿ ನಮ್ಮ ಬಳಿ ಫೋಟೋ ಇದೆ’ ಎಂದು ಯೂಟ್ಯೂಬರ್ ತೋರಿಸಿದ್ದಾರೆ. ಇದಕ್ಕೆ ಆನಂದ್ ‘ನನ್ನ ಬಳಿಯೂ ಇದೆ’ ಎಂದು ಯಾವುದೋ ಒಂದು ಫೋಟೋ ತೋರಿಸಿದ್ದಾರೆ.

‘ಇದು ಕಾಕತಾಳೀಯ’ ಎಂದರು ಆನಂದ್. ‘ಒಂದೇ ರೆಸಾರ್ಟ್​ಗೆ ಇಬ್ಬರೂ ಹೋಗಿದ್ದು ಹೇಗೆ’ ಎಂದು ಸಂದರ್ಶಕ ಕೇಳಿದ. ‘ದೂರವಲ್ಲವೇ, ವಿಮಾನದಲ್ಲಿ ತೆರಳಿದರು’ ಎಂದರು ಆನಂದ್. ‘ಅವರಿಬ್ಬರು ಏನು ನಡೆಯುತ್ತಿದೆ’ ಎಂದು ಕೇಳಿದರು ಯೂಟ್ಯೂಬರ್. ‘ಮುಂದಿನ ಸಿನಿಮಾಗೆ ಸ್ಕ್ರಿಪ್ಟ್ ಡಿಸ್ಕಶನ್ ನಡೆಯುತ್ತಿದೆ’ ಎಂದರು ಆನಂದ್. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಆನಂದ್ ದೇವರಕೊಂಡ ನನ್ನ ಕುಟುಂಬದ ಸದಸ್ಯ ಎಂದ ರಶ್ಮಿಕಾ; ಇದರ ಒಳಾರ್ಥ ಗೊತ್ತಾಯ್ತಾ?

ಆನಂದ್ ದೇವರಕೊಂಡ ನಟನೆಯ ‘ಗಂ ಗಂ ಗಣೇಶಾ’ ಇಂದು (ಮೇ 31) ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವಿಜಯ್ ಅವರನ್ನು ತಮ್ಮ ಕುಟುಂಬದವರು ಎಂದು ಕರೆದಿದ್ದಾರೆ ರಶ್ಮಿಕಾ. ಈ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ರಶ್ಮಿಕಾ ಅವರು ಆಗಾಗ ವಿಜಯ್ ದೇವರಕೊಂಡ ಮನೆಗೆ ಭೇಟಿ ನೀಡುತ್ತಾರೆ. ಹಬ್ಬಗಳನ್ನು ಇವರು ಒಟ್ಟಾಗಿ ಆಚರಿಸುತ್ತಾರೆ. ಈ ಕಾರಣಕ್ಕೆ ಆನಂದ್ ಅವರಿಗೂ ರಶ್ಮಿಕಾ ಜೊತೆ ಒಳ್ಳೆಯ ಬಾಂಧವ್ಯ ಬೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:05 am, Fri, 31 May 24

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ