ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭದ್ರತೆ ಹೆಚ್ಚಳ
Ranveer Singh movie: ಕೆಲ ದಿನಗಳ ಹಿಂದಷ್ಟೆ ನಿರ್ದೇಶಕ, ನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಅದಾದ ಬಳಿಕ ನಟ ರಣ್ವೀರ್ ಸಿಂಗ್ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಅದಾಗಿ ಕೆಲವೇ ದಿನಗಳ ಬಳಿಕ ಮತ್ತೆ ರಣ್ವೀರ್ ಸಿಂಗ್ಗೆ ವಾಟ್ಸ್ಪ್ ಮೂಲಕ ಬೆದರಿಕೆ ಹಾಕಲಾಗಿದ್ದು, ‘ನಿಮ್ಮ ಮ್ಯಾನೇಜರ್, ನಿಮ್ಮ ಎಲ್ಲ ಸಿಬ್ಬಂದಿಯನ್ನೂ ಕೊಲ್ಲುತ್ತೇವೆ’ ಎಂದು ಮಾಫಿಯಾಕ್ಕೆ ಸೇರಿದ ದುರುಳರು ಎಚ್ಚರಿಕೆ ನೀಡಿದ್ದಾರೆ.

ಬಾಲಿವುಡ್ (Bollywood) ಮೇಲೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಕೆಲ ದಶಕಗಳ ಹಿಂದೆ ದಾವೂದ್, ಚೋಟಾ ಶಕೀಲ್ ಇನ್ನೂ ಕೆಲ ಪಾತಕಿಗಳ ಸಮಯದಲ್ಲಿ ಬಾಲಿವುಡ್ ಅಕ್ಷರಷಃ ನಡುಗಿತ್ತು. ಅದಾದ ಬಳಿಕ ಕಳೆದ ಒಂದೆರಡು ದಶಕದಿಂದ ಭೂಗತ ಜಗತ್ತಿನ ಉಪಟಳ ಇಲ್ಲದೆ ಆರಾಮವಾಗಿತ್ತು ಆದರೆ ಇದೀಗ ಮತ್ತೆ ಬಾಲಿವುಡ್ ಮೇಲೆ ಭೂಗತ ಜಗತ್ತಿನ ಕಣ್ಣು ಬಿದ್ದಿದೆ. ಸಲ್ಮಾನ್ ಖಾನ್, ಕಪಿಲ್ ಶರ್ಮಾ ಇನ್ನೂ ಹಲವಾರು ಸೆಲೆಬ್ರಿಟಿಗಳಿಗೆ ಈಗಾಗಲೇ ಬೆದರಿಕೆ ಹಾಕಲಾಗಿದೆ. ಇದೀಗ ರೋಹಿತ್ ಶೆಟ್ಟಿ ಮತ್ತು ರಣ್ವೀರ್ ಸಿಂಗ್ ಅವರಿಗೂ ಬೆದರಿಕೆ ಹಾಕಲಾಗಿದೆ.
ಕೆಲ ದಿನಗಳ ಹಿಂದಷ್ಟೆ ನಿರ್ದೇಶಕ, ನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಅದಾದ ಬಳಿಕ ನಟ ರಣ್ವೀರ್ ಸಿಂಗ್ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಅದಾಗಿ ಕೆಲವೇ ದಿನಗಳ ಬಳಿಕ ಮತ್ತೆ ರಣ್ವೀರ್ ಸಿಂಗ್ಗೆ ವಾಟ್ಸ್ಪ್ ಮೂಲಕ ಬೆದರಿಕೆ ಹಾಕಲಾಗಿದ್ದು, ‘ನಿಮ್ಮ ಮ್ಯಾನೇಜರ್, ನಿಮ್ಮ ಎಲ್ಲ ಸಿಬ್ಬಂದಿಯನ್ನೂ ಕೊಲ್ಲುತ್ತೇವೆ’ ಎಂದು ಮಾಫಿಯಾಕ್ಕೆ ಸೇರಿದ ದುರುಳರು ಎಚ್ಚರಿಕೆ ನೀಡಿದ್ದಾರೆ.
ವಾಯ್ಸ್ ಮೆಜೇಜ್ ಮೂಲಕ ರೋಹಿತ್ ಶೆಟ್ಟಿಗೆ ಬಂದಿರುವ ಎಚ್ಚರಿಕೆಯಲ್ಲಿ ‘ಲೈನ್ ಗೆ ಬಂದುಬಿಡು, ಇಲ್ಲದೇ ಹೋದರೆ ಅದರ ಪರಿಣಾಮ ಹೇಗಿರುತ್ತದೆ ಎಂದು ನೀನು ನೋಡಬೇಕಾಗುತ್ತದೆ. ಮಾತಿನಂತೆ ನಡೆದುಕೊಳ್ಳದೇ ಹೋದರೆ ಶಿಕ್ಷೆ ಹೇಗಿರುತ್ತದೆ ಎಂದು ನಿನಗೆ ತೋರಿಸುತ್ತೇವೆ’ ಎಂದು ವಾಯ್ಸ್ ಮೆಸೇಜ್ನಲ್ಲಿ ಹೇಳಲಾಗಿದೆ. ಈ ಎಚ್ಚರಿಕೆ ನಿನಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೆ ಎಂದು ಸಹ ವಾಯ್ಸ್ ಮೆಸೇಜ್ನಲ್ಲಿದೆ. ಇನ್ನು ರಣ್ವೀರ್ ಸಿಂಗ್ಗೂ ಸಹ ಹೊಸದಾಗಿ ಎಚ್ಚರಿಕೆ ಬಂದಿದ್ದು ಕೊಲೆ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ:‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್
ಬೆದರಿಕೆ ಬಂದ ಬೆನ್ನಲ್ಲೆ ರಣ್ವೀರ್ ಸಿಂಗ್ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ ಮಾತ್ರವಲ್ಲದೆ, ಅವರ ಪತ್ನಿ ದೀಪಿಕಾ ಪಡುಕೋಣೆಗೂ ಸಹ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ರಣ್ವೀರ್ ಸಿಂಗ್ ಅವರ ಮ್ಯಾನೇಜರ್ಗೆ ಬಂದಿರುವ ವಾಯ್ಸ್ ಮೆಸೇಜ್ನಲ್ಲಿ ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಹಣ ನೀಡದೇ ಹೋದರೆ ರಣ್ವೀರ್ ಸಿಂಗ್ ಅವರಿಗೆ ‘ಬುದ್ಧಿ’ ಕಲಿಸುವುದಾಗಿ ಹೇಳಲಾಗಿದೆ. ರಣ್ವೀರ್ ಸಿಂಗ್ ಅವರಿಗೆ ಸಂಬಂಧಪಟ್ಟವರನ್ನು ಕೊಲೆ ಮಾಡುವುದಾಗಿ ಸಹ ಹೇಳಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




