AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಕಾಶಕ್ಕಾಗಿ ಕರಣ್​ ಜೋಹರ್​ ಕಾರಿನ ಹಿಂದೆ ಓಡಿದ್ದ ನಟ ತಹ ಶಾ; ಈಗ ಹೇಗಿದೆ ಜೀವನ?

ನಟ ತಹ ಶಾ ಬದುಶಾ ಅವರು ಒಂದೇ ಒಂದು ಅವಕಾಶಕ್ಕಾಗಿ ಸ್ಟಾರ್​ ನಿರ್ಮಾಪಕ ಕರಣ್​ ಜೋಹರ್​ ಕಾರಿನ ಹಿಂದೆ ಓಡಿದ್ದರು. ಆ ದಿನಗಳನ್ನು ಅವರೀಗ ಮೆಲುಕು ಹಾಕಿದ್ದಾರೆ. ‘ಹೀರಾಮಂಡಿ’ ವೆಬ್​ ಸಿರೀಸ್​ನ ಯಶಸ್ಸಿನಿಂದ ತಹ ಶಾ ಬದುಶಾ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅವಕಾಶಗಳು ಹೆಚ್ಚಾಗಿವೆ. ಆದರೆ ಅವರ ಆರಂಭದ ದಿನಗಳು ಇಷ್ಟು ಸುಲಭವಾಗಿ ಇರಲಿಲ್ಲ.

ಅವಕಾಶಕ್ಕಾಗಿ ಕರಣ್​ ಜೋಹರ್​ ಕಾರಿನ ಹಿಂದೆ ಓಡಿದ್ದ ನಟ ತಹ ಶಾ; ಈಗ ಹೇಗಿದೆ ಜೀವನ?
ಕರಣ್​ ಜೋಹರ್​, ತಹ ಶಾ ಬದುಶಾ
ಮದನ್​ ಕುಮಾರ್​
|

Updated on: Jun 10, 2024 | 9:48 PM

Share

ನಟ ತಹ ಶಾ ಬದುಶಾ (Taha Shah Badussha) ಅವರು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ 13 ವರ್ಷಗಳ ಅನುಭವ ಇದೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಆದರೆ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದ್ದು ಹೀರಾಮಂಡಿ’ (Heeramandi) ವೆಬ್​ ಸರಣಿ ಮೂಲಕ. ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ ಈ ವೆಬ್​ ಸಿರೀಸ್​ನಲ್ಲಿ ತಹ ಶಾ ಅವರಿಗೆ ಪ್ರಮುಖ ಪಾತ್ರವಿದೆ. ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆ ಆದ ‘ಹೀರಾಮಂಡಿ’ ಸೂಪರ್​ ಹಿಟ್​ ಆಗಿದೆ. ಇದರಿಂದ ತಹ ಶಾ ಬದುಶಾ ಅವರಿಗೆ ಅವಕಾಶಗಳು ಹೆಚ್ಚಾಗಿದೆ. ಆದರೆ ಆರಂಭದ ದಿನಗಳಲ್ಲಿ ಹೀಗಿರಲಿಲ್ಲ. ಒಂದೇ ಒಂದು ಅವಕಾಶಕ್ಕಾಗಿ ಕರಣ್​ ಜೋಹರ್​ (Karan Johar) ಕಾರಿನ ಹಿಂದೆ ತಹ ಶಾ ಓಡಿದ್ದರು.

‘ದಿ ವೀಕ್​’ ನಡೆಸಿದ ಸಂದರ್ಶನದಲ್ಲಿ ತಹ ಶಾ ಬದುಶಾ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರಲ್ಲಿ. ಅವರ ಮೊದಲ ಸಿನಿಮಾ ‘ಲವ್​ ಕ ದಿ ಎಂಡ್​’. ಆ ದಿನಗಳನ್ನು ತಹ ಶಾ ನೆನಪಿಸಿಕೊಂಡಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾಗೆ ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿತ್ತು. ಹಾಗಿದ್ದರೂ ಕೂಡ ಎರಡನೇ ಅವಕಾಶ ಪಡೆಯಲು ತಹ ಶಾ ಕಷ್ಟಪಡಬೇಕಿತ್ತು.

‘ಮೊದಲ ಸಿನಿಮಾ ‘ಲವ್​ ಕ ದಿ ಎಂಡ್​’ ಪೂರ್ಣವಾದ ಬಳಿಕ ನಾನು ಹೊರಬಂದು ಜನರ ಸಂಪರ್ಕ ಹೆಚ್ಚಿಸಿಕೊಳ್ಳಲು ಆರಂಭಿಸಿದೆ. ಆ ರೀತಿಯಲ್ಲೇ ನನಗೆ ‘ಗಿಪ್ಪಿ’ ಸಿನಿಮಾ ಸಿಕ್ಕಿದ್ದು. ನಾನು ಕರಣ್​ ಜೋಹರ್​ ಅವರ ಕಾರಿನ ಹಿಂದೆ ಓಡಿದೆ. ಅವರ ಕಾರನ್ನು ತಟ್ಟಿದೆ. ನಾನು ಒಂದು ಸಿನಿಮಾದಲ್ಲಿ ನಟಿಸಿದ್ದೇನೆ. ಅದನ್ನು ನಿಮಗೆ ತೋರಿಸಬೇಕು. ದಯವಿಟ್ಟು ನಿಮ್ಮ ಫೋನ್​ ನಂಬರ್​ ಕೊಡಿ ಅಂತ ಕೇಳಿದೆ’ ಎಂದಿದ್ದಾರೆ ತಹ ಶಾ.

ಇದನ್ನೂ ಓದಿ: ಆಕರ್ಷಕ ಮೈಕಟ್ಟಿನ ಫೋಟೋಗಳಿಂದ ಗಮನ ಸೆಳೆದ ‘ಹೀರಾಮಂಡಿ’ ನಟ

‘ಕರಣ್​ ಜೋಹರ್​ ಅವರು ನನಗೆ ಫೋನ್​ ನಂಬರ್​ ನೀಡಿದರು. ಓಡೋಡಿ ಬಂದಿದ್ದ ನನಗೆ ಏನಾದರೂ ಆಗಿದೆಯಾ ಅಂತ ಅವರು ವಿಚಾರಿಸಿದರು. ಅಲ್ಲದೇ, ಕುಡಿಯಲು ನೀರು ಕೊಟ್ಟರು. ಈ ರೀತಿ ನಾನು ಅವರನ್ನು ಮೊದಲ ಬಾರಿ ಭೇಟಿ ಆಗಿದ್ದು. ನಂತರ ನಾನು ಅವರ ಆಫೀಸ್​ಗೆ ಹೋದೆ. ಗಿಪ್ಪಿ ಸಿನಿಮಾಗೆ ಆಡಿಷನ್​ ನೀಡಿ ಆಯ್ಕೆಯಾದೆ’ ಎಂದು ತಹ ಶಾ ಹೇಳಿದ್ದಾರೆ.

ಕೆಲವೊಮ್ಮೆ ಅಂದುಕೊಂಡ ರೀತಿಯಲ್ಲಿ ಅವಕಾಶಗಳು ಬಾರದೇ ಇರಬಹುದು. ಇಂಥ ಸಂದರ್ಭದಲ್ಲಿ ಕೂಡ ತಹ ಶಾ ಅವರು ಚಿತ್ರರಂಗವನ್ನು ತೊರೆಯಲು ನಿರ್ಧಾರ ಮಾಡಲಿಲ್ಲ. ‘ಚಿತ್ರರಂಗ ಬಿಟ್ಟು ಬೇರೆ ಎಲ್ಲಿಗೋ ಹೋಗಿ, ಏನನ್ನೋ ಮಾಡಬೇಕು ಅಂತ ನಾನು ಎಂದಿಗೂ ಯೋಚಿಸಿಲ್ಲ. ನಟನೆ ಹೊರತಾಗಿ ನನಗೆ ಏನೂ ಗೊತ್ತಿಲ್ಲ. ಚಿತ್ರರಂಗದವರ ಸಂಪರ್ಕ ಹೆಚ್ಚಿಸಿಕೊಳ್ಳುವುದು, ಮಾತುಕತೆ ಮಾಡುವುದು, ತರಗತಿಗಳಿಗೆ ಹಾಜರಾಗುವುದು ಮತ್ತು ಕಷ್ಟಪಡುವುದರ ಬಗ್ಗೆ ಮಾತ್ರ ನಾನು ಆಲೋಚಿಸಿದೆ’ ಎಂದು ತಮ್ಮ ಆರಂಭದ ದಿನಗಳನ್ನು ತಹ ಶಾ ಮೆಲುಕು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ