AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹಕ್ಕೂ ಮುನ್ನ ಜಯಾಗೆ ಒಂದು ಕಠಿಣ ಷರತ್ತು ವಿಧಿಸಿದ್ದ ಅಮಿತಾಭ್  

ಅಮಿತಾಭ್ ಮತ್ತು ಜಯಾ ಬಚ್ಚನ್ ಅವರು ವಿವಾಹ ಆಗಿ 52 ವರ್ಷಗಳು ಕಳೆದಿವೆ. ಜಯಾ ಅವರು ತಮ್ಮ ಮದುವೆಗೆ ಮುಂಚೆ ಅಮಿತಾಭ್ ಒಂದು ಷರತ್ತು ವಿಧಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅಮಿತಾಭ್, ಜಯಾ ಪೂರ್ಣ ಸಮಯದ ಕೆಲಸ ಮಾಡಬಾರದು ಎಂದು ಬಯಸಿದ್ದರು. ಆದರೆ, ಜಯಾ ತಮ್ಮ ವೃತ್ತಿಜೀವನ ಮತ್ತು ಕುಟುಂಬ ಜೀವನವನ್ನು ಸಮತೋಲನಗೊಳಿಸಿದ್ದಾರೆ.

ವಿವಾಹಕ್ಕೂ ಮುನ್ನ ಜಯಾಗೆ ಒಂದು ಕಠಿಣ ಷರತ್ತು ವಿಧಿಸಿದ್ದ ಅಮಿತಾಭ್  
ಅಮಿತಾಭ್-ಜಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 27, 2025 | 9:53 AM

Share

ಅಮಿತಾಭ್​ ಬಚ್ಚನ್ (Amitabh Bachchan) ಮತ್ತು ಜಯಾ ಬಚ್ಚನ್ ಅವರ ವಿವಾಹವಾಗಿ 52 ವರ್ಷಗಳಾಗಿದೆ. ಇವರಿಬ್ಬರೂ ಜೂನ್ 3, 1973 ರಂದು ವಿವಾಹವಾದರು. ವಿವಾಹ ಸಮಾರಂಭವು ಜಯಾ ಬಚ್ಚನ್ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ನಡೆಯಿತು. ಅಮಿತಾಭ್ ಮತ್ತು ಜಯಾ ಅವರ ಪ್ರೇಮಕಥೆ ಎಲ್ಲರಿಗೂ ತಿಳಿದಿದೆ. ಆದರೆ ಬಿಗ್ ಬಿ ಮದುವೆಗೂ ಮುನ್ನ ಜಯಾಗೆ ಒಂದು ಷರತ್ತು ವಿಧಿಸಿದ್ದರು ಎಂಬುದು ಬಹಳ ಕಡಿಮೆ ಜನರಿಗೆ ತಿಳಿದಿದೆ. ತಮ್ಮ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗಿನ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಜಯಾ ಸ್ವತಃ ಇದನ್ನು ಬಹಿರಂಗಪಡಿಸಿದ್ದಾರೆ.

ಮದುವೆಯ ನಂತರ ಪತ್ನಿ ಪೂರ್ಣಾವಧಿ ಕೆಲಸ ಮಾಡಬಾರದು ಎಂಬುದು ಅಮಿತಾಭ್​ ಬಚ್ಚನ್ ಅವರ ಆಸೆ ಆಗಿತ್ತು. ಈ ಬಗ್ಗೆ ಅವರು ದೃಢ ನಿಶ್ಚಯ ಹೊಂದಿದ್ದರು. ‘ವಾಟ್ ದಿ ಹೆಲ್ ನವ್ಯಾ’ ಪಾಡ್​ಕಾಸ್ಟ್​ನಲ್ಲಿ ಜಯಾ ಮಾತನಾಡಿದ್ದಾರೆ. ‘ನಾವು ಅಕ್ಟೋಬರ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದೆವು. ಏಕೆಂದರೆ ಆಗ ನನ್ನ ಕೆಲಸದ ಹೊರೆ ಕಡಿಮೆ ಇರುತ್ತದೆ. ಆದರೆ 9ರಿಂದ 5 ರವರೆಗೆ ಕೆಲಸ ಮಾಡುವ ಹೆಂಡತಿ ನನಗೆ ಬೇಡ ಎಂದು ಅವರು ಆಗಲೇ ನನಗೆ ಹೇಳಿದ್ದರು. ನೀವು ಕೆಲಸ ಮಾಡಿ, ಆದರೆ ಪ್ರತಿದಿನ ಅಲ್ಲ. ನೀವು ನಿಮ್ಮ ಯೋಜನೆಗಳನ್ನು ಆರಿಸಿಕೊಳ್ಳಿ ಮತ್ತು ಸರಿಯಾದ ಜನರೊಂದಿಗೆ ಕೆಲಸ ಮಾಡಿ ಎಂದು ಅಮಿತಾಭ್ ನನಗೆ ಹೇಳಿದ್ದರು’ ಎಂದು ಜಯಾ ವಿವರಿಸಿದ್ದರು.

ಜಯಾ ಮತ್ತು ಅಮಿತಾಭ್ ಮೊದಲ ಬಾರಿಗೆ 1971ರಲ್ಲಿ ಹೃಷಿಕೇಶ್ ಮುಖರ್ಜಿ ಅವರ ‘ಗುಡ್ಡಿ’ ಚಿತ್ರದ ಸೆಟ್​ನಲ್ಲಿ ಭೇಟಿಯಾದರು. ಅದಾದ ನಂತರ ಇಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಜನಪ್ರಿಯ ಜೋಡಿ ‘ಜಂಜೀರ್’, ‘ಅಭಿಮಾನ್’, ‘ಚುಪ್ಕೆ ಚುಪ್ಕೆ’, ‘ಶೋಲೆ’, ‘ಕಭಿ ಖುಷಿ ಕಭಿ ಗಮ್’, ‘ಸಿಲ್ಸಿಲಾ’ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಜಯಾ ಮತ್ತು ಬಿಗ್ ಬಿ ಅವರ ಮೊದಲ ಭೇಟಿಯ ಎರಡು ವರ್ಷಗಳ ನಂತರ, ಜೂನ್ 3, 1973ರಂದು ವಿವಾಹವಾದರು.

ಇದನ್ನೂ ಓದಿ
Image
ರಾಮ್ ಚರಣ್ ಹೊಸ ಚಿತ್ರದ ಟೈಟಲ್ ರಿವೀಲ್; ಮತ್ತೆ ಮಾಸ್ ಲುಕ್​
Image
ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂಪಾಯಿ
Image
ಐಶ್ವರ್ಯಾ ಕಾರು ಅಪಘಾತಕ್ಕೆ ಒಳಗಾಗಿದ್ದು ಹೇಗೆ? ವಿಡಿಯೋ ವೈರಲ್
Image
ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ

ಇದನ್ನೂ ಓದಿ: 82ನೇ ವಯಸ್ಸಲ್ಲಿ ದಿನಕ್ಕೆ 1 ಕೋಟಿ ರೂ. ದುಡಿಯುತ್ತಾರೆ ಅಮಿತಾಭ್; ವರದಾನವಾಯ್ತು ಆ ಪ್ರಾಜೆಕ್ಟ್

ಜಯಾ ಬಚ್ಚನ್ ಅವರನ್ನು ಮದುವೆಯಾದ ನಂತರ ಅಮಿತಾಭ್​ ಬಾಲಿವುಡ್ ಉದ್ಯಮದಲ್ಲಿ ಸೂಪರ್ ಸ್ಟಾರ್ ಆದರು. ಮತ್ತೊಂದೆಡೆ, ಜಯಾ ಆಯ್ದ ಕೆಲವೇ ಚಿತ್ರಗಳನ್ನು ಮಾಡಿದರು. ಅವರು ತಮ್ಮ ಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಡಲು ಆದ್ಯತೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ನಾಮಪತ್ರ ರದ್ದಾಗಲೆಂದೇ ಕಾಂಗ್ರೆಸ್ ಫಾರ್ಮ್ ತುಂಬಿತ್ತಾ? ಬಿಜೆಪಿ ಲೇವಡಿ
ನಾಮಪತ್ರ ರದ್ದಾಗಲೆಂದೇ ಕಾಂಗ್ರೆಸ್ ಫಾರ್ಮ್ ತುಂಬಿತ್ತಾ? ಬಿಜೆಪಿ ಲೇವಡಿ
ಏನಿದು ಕಸದಿಂದ ಕಾಸು? ಎಳೆ ಎಳೆಯಾಗಿ ಬಿಚ್ಚಿಟ್ಟ ಆರ್ ಅಶೋಕ್
ಏನಿದು ಕಸದಿಂದ ಕಾಸು? ಎಳೆ ಎಳೆಯಾಗಿ ಬಿಚ್ಚಿಟ್ಟ ಆರ್ ಅಶೋಕ್
ಕೇರಳದಲ್ಲಿ ಶಿಗೆಲ್ಲ ಮಾರಿಗೆ ಮಗು ಬಲಿ; ಏನಿದು ಶಿಗೆಲ್ಲ, ಇದು ಹರಡುವುದೇಗೆ?
ಕೇರಳದಲ್ಲಿ ಶಿಗೆಲ್ಲ ಮಾರಿಗೆ ಮಗು ಬಲಿ; ಏನಿದು ಶಿಗೆಲ್ಲ, ಇದು ಹರಡುವುದೇಗೆ?
ಸಕಲೇಶಪುರದಲ್ಲಿ ಕರುಗಳನ್ನು ಬೆನ್ನಟ್ಟಿದ ಆನೆ ಮರಿ
ಸಕಲೇಶಪುರದಲ್ಲಿ ಕರುಗಳನ್ನು ಬೆನ್ನಟ್ಟಿದ ಆನೆ ಮರಿ
ಅಪ್ರಾಪ್ತನಿಗೆ ಸಿಗರೇಟ್ ಸೇದಿಸಿ,ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನ ದರೋಡ
ಅಪ್ರಾಪ್ತನಿಗೆ ಸಿಗರೇಟ್ ಸೇದಿಸಿ,ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನ ದರೋಡ
ಶಾಲಾ ಕಟ್ಟಡದಿಂದ ಬಿದ್ದು 15 ವರ್ಷದ ಬಾಲಕ ಸಾವು
ಶಾಲಾ ಕಟ್ಟಡದಿಂದ ಬಿದ್ದು 15 ವರ್ಷದ ಬಾಲಕ ಸಾವು
ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಶ್ರೇಷ್ಠ ಮಾನದಂಡ: ಪ್ರಧಾನಿ ಮೋದಿ
ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಶ್ರೇಷ್ಠ ಮಾನದಂಡ: ಪ್ರಧಾನಿ ಮೋದಿ
ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಹರಿಪ್ರಸಾದ್ ಭೇಟಿ
ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಹರಿಪ್ರಸಾದ್ ಭೇಟಿ
ಪ್ರಧಾನಿ ಮೋದಿ ಒಳಿತಿಗಾಗಿ ಮುನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅಶೋಕ್​
ಪ್ರಧಾನಿ ಮೋದಿ ಒಳಿತಿಗಾಗಿ ಮುನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅಶೋಕ್​
ಮೋದಿ ಪ್ರಧಾನಿಯಾಗಿ 12 ವರ್ಷ: ಬೆಂಗಳೂರಿನಲ್ಲಿ ಸೋಮಣ್ಣ ವಿಶೇಷ ಪೂಜೆ
ಮೋದಿ ಪ್ರಧಾನಿಯಾಗಿ 12 ವರ್ಷ: ಬೆಂಗಳೂರಿನಲ್ಲಿ ಸೋಮಣ್ಣ ವಿಶೇಷ ಪೂಜೆ