AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್ ಸಾವಿನಿಂದ ಬದಲಾಯಿತು ರಿಯಾ ಚಕ್ರವರ್ತಿ ಜೀವನ; ಇರುವ ಆರೋಪ ಒಂದೆರಡಲ್ಲ

ರಿಯಾ ಅವರು ಸುಶಾಂತ್​ಗೆ ತುಂಬಾನೇ ಟಾರ್ಚರ್ ಕೊಟ್ಟರು ಎನ್ನುವ ಆರೋಪ ಕೇಳಿ ಬಂತು. ಸುಶಾಂತ್ ಖಾತೆಯಿಂದ ಅವರು ಹಣ ವರ್ಗಾವಣೆ ಮಾಡಿಕೊಂಡರು ಎನ್ನುವ ಆರೋಪವೂ ಇದೆ. ಈ ಕಾರಣದಿಂದಲೇ ರಿಯಾ ರಿಯಾ ಅವರನ್ನು ಜೈಲಿಗೆ ಹಾಕಲಾಯಿತು. ಈ ಪ್ರಕರಣದ ಬೆನ್ನು ಹತ್ತಿದಾಗ ಡ್ರಗ್ಸ್ ವಿಚಾರ ಕೂಡ ಹೊರಬಿತ್ತು.

ಸುಶಾಂತ್ ಸಾವಿನಿಂದ ಬದಲಾಯಿತು ರಿಯಾ ಚಕ್ರವರ್ತಿ ಜೀವನ; ಇರುವ ಆರೋಪ ಒಂದೆರಡಲ್ಲ
ಸುಶಾಂತ್-ರಿಯಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 01, 2024 | 9:40 AM

ನಟಿ ರಿಯಾ ಚಕ್ರವರ್ತಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕಾದವರು. ಆದರೆ, ಅವರ ಜೀವನ ಅಂದುಕೊಂಡಂತೆ ನಡೆಯಲೇ ಇಲ್ಲ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯಿಂದ ಅವರು ಸಾಕಷ್ಟು ತೊಂದರೆ ಎದುರಿಸಬೇಕಾಯಿತು. ಜೈಲು ಕೂಡ ಸೇರಿದರು. ಅವರು ಏನೇ ಸ್ಪಷ್ಟನೆ ಕೊಟ್ಟರೂ ಅವರ ವಿರುದ್ಧ ಇರುವ ಗಂಭೀರ ಆರೋಪ ಎಂದಿಗೂ ಮರೆಯಾಗುವಂಥದ್ದಲ್ಲ. ಇಂದು (ಜುಲೈ 1) ರಿಯಾ ಚಕ್ರವರ್ತಿ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅವರ ಮಾಡಿಕೊಂಡ ವಿವಾದದ ಬಗ್ಗೆ ಇಲ್ಲಿದೆ ವಿವರ.

2020ರ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದರು. ‘ಧೋನಿ: ದಿ ಅನ್​ಟೋಲ್ಟ್ ಸ್ಟೋರಿ’, ‘ಕೇದಾರ್​ನಾಥ್’ ಸೇರಿ ಅನೇಕ ಸಿನಿಮಾಗಳಲ್ಲಿ ಸುಶಾಂತ್ ನಟಿಸಿದ್ದರು. ಆದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಆರೋಪ ಇದೆ. ಅವರ ಸಾವಿಗೆ ರಿಯಾ ಚಕ್ರವರ್ತಿ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ರಿಯಾ ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ.

ರಿಯಾ ಹಾಗೂ ಸುಶಾಂತ್ ಸಿಂಗ್ ಪರಸ್ಪರ ಡೇಟ್ ಮಾಡುತ್ತಿದ್ದರು. ಸುಶಾಂತ್ ಸಾಯುವುದಕ್ಕೂ ಕೆಲವೇ ವಾರ ಮೊದಲು ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಇವರ ಬ್ರೇಕಪ್​ಗೆ ಕಾರಣ ತಿಳಿದಿಲ್ಲ. ಸುಶಾಂತ್​ಗೆ ರಿಯಾ ತುಂಬಾನೇ ಟಾರ್ಚರ್ ಕೊಟ್ಟರು ಎನ್ನುವ ಆರೋಪ ಬಂತು. ಸುಶಾಂತ್ ಖಾತೆಯಿಂದ ಅವರು ಹಣ ವರ್ಗಾವಣೆ ಮಾಡಿಕೊಂಡರು ಎನ್ನುವ ಆರೋಪವೂ ಇದೆ. ಈ ಕಾರಣದಿಂದಲೇ ರಿಯಾ ಅವರನ್ನು ಜೈಲಿಗೆ ಹಾಕಲಾಯಿತು. ಈ ಪ್ರಕರಣದ ಬೆನ್ನು ಹತ್ತಿದಾಗ ಡ್ರಗ್ಸ್ ವಿಚಾರ ಕೂಡ ಹೊರಬಿತ್ತು.

ರಿಯಾ-ಸುಶಾಂತ್ ಸಂಬಂಧದ ಬಗ್ಗೆ ಅವರ ಸಹೋದರಿ ಪ್ರಿಯಾಂಕಾ ಮಾತನಾಡಿದ್ದರು. ‘ಸುಶಾಂತ್ ಸಿಂಗ್ ಅವರ ಜೀವನ 2019ರಿಂದ ನಾಶ ಆಗುತ್ತಲೇ ಬಂದಿದೆ. ರಿಯಾ ಅವರ ಜೀವನಕ್ಕೆ ಬಂದಾಗಿನಿಂದ ಸುಶಾಂತ್ ಜೀವನ ಹಾಳಾಯಿತು. ಅವಳು ಬಂದ ಆರೇ ದಿನಕ್ಕೆ ನನ್ನ ಹಾಗೂ ಸುಶಾಂತ್ ಮಧ್ಯೆ ಮಿಸ್ ಅಂಡರ್​ಸ್ಟ್ಯಾಂಡಿಂಗ್ ಬಂತು’ ಎಂದಿದ್ದರು ಪ್ರಿಯಾಂಕಾ.

ಇದನ್ನೂ ಓದಿ: ಸುಶಾಂತ್ ಸಿಂಗ್ ಅಂತಿಮ ದರ್ಶನಕ್ಕೆ ಹೋಗಲಿಲ್ಲವೇಕೆ? ಮಾಜಿ ಗರ್ಲ್​ಫ್ರೆಂಡ್ ಅಂಕಿತಾ ಕೊಟ್ಟರು ಕಾರಣ

‘ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ, ಸುಶಾಂತ್ ಜೀವನವನ್ನು ನಾಶ ಮಾಡಲೆಂದೇ ಅವಳನ್ನು ಕಳುಹಿಸಲಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂಬ ಆರೋಪ ಇದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಈವರೆಗೆ ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು