Sign In

By signing in or creating an account, you agree with Associated Broadcasting Company's Terms & Conditions and Privacy Policy.

Katrina Kaif: ಕಲ್ಯಾಣದ ನಂತರ ಹೆಸರು ಬದಲಿಸಲಿದ್ದಾರಾ ಕತ್ರಿನಾ?

Vicky Kaushal: ನಟ ವಿಕ್ಕಿ ಕೌಶಲ್ ಜೊತೆಗಿನ ಕಲ್ಯಾಣದ ನಂತರ ಕತ್ರಿನಾ ಕೈಫ್ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿದ್ದಾರಾ? ಬಾಲಿವುಡ್ ಅಂಗಳದಲ್ಲಿ ಹೀಗೊಂದು ಕುತೂಹಲಕರ ಗಾಸಿಪ್ ಹರಿದಾಡುತ್ತಿದೆ.

Katrina Kaif: ಕಲ್ಯಾಣದ ನಂತರ ಹೆಸರು ಬದಲಿಸಲಿದ್ದಾರಾ ಕತ್ರಿನಾ?
ಕತ್ರಿನಾ ಕೈಫ್, ವಿಕ್ಕಿ ಕೌಶಲ್
Follow us
TV9 Web
| Updated By: shivaprasad.hs

Updated on:Nov 25, 2021 | 10:01 AM

ಬಾಲಿವುಡ್ ಅಭಿಮಾನಿಗಳು ಸದ್ಯ ನಟ ರಾಜ್​ಕುಮಾರ್ ರಾವ್ ಹಾಗೂ ಪತ್ರಲೇಖಾ ಅವರ ಕಲ್ಯಾಣದ ಗುಂಗಿನಲ್ಲಿದ್ದಾರೆ. ಆದರೆ ಸದ್ಯದಲ್ಲೇ ಬಾಲಿವುಡ್ ಮತ್ತೊಂದು ಅದ್ದೂರಿ ಮದುವೆಗೆ ಸಜ್ಜಾಗುತ್ತಿದೆ. ಈಗಾಗಲೇ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ, ಆ ತಾರಾ ಜೋಡಿ ಮಾತ್ರ ಈ ಕುರಿತು ತುಟಿಕ್-ಪಿಟಿಕ್ ಎಂದಿಲ್ಲ. ಹೌದು, ಕೆಲಕಾಲದಿಂದ ಜೊತೆಯಾಗಿ ಸುತ್ತಾಡುತ್ತಾ, ಇದೀಗ ದಾಂಪತ್ಯಕ್ಕೆ ಕಾಲಿರಿಸಲು ಸಿದ್ಧತೆ ನಡೆಸಿರುವುದು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಜೋಡಿ. ಸದ್ಯ ಎಲ್ಲೆಡೆ ಇವರದ್ದೇ ಮಾತು. ಇದೀಗ ಬಾಲಿವುಡ್ ಗಾಸಿಪ್ ಅಂಗಳದಿಂದ ಹೊಸ ಚರ್ಚೆಯೊಂದು ಪ್ರಾರಂಭವಾಗಿದೆ. ಅದೇನೆಂದರೆ, ಕತ್ರಿನಾ ಮದುವೆಯ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆಯೇ ಎಂಬುದು. ಇದಕ್ಕೆ ಗಾಸಿಪ್ ಪ್ರಿಯರು ತಮ್ಮ ತಮ್ಮ ವಾದ ಹೂಡಿ, ಸಮರ್ಥನೆಯನ್ನೂ ಮಾಡುತ್ತಿದ್ದಾರೆ. ಅಷ್ಟಕ್ಕೂ, ಏನಿದು ಸಮಾಚಾರ? ಮುಂದೆ ಓದಿ.

ಸದ್ಯ ಕೇಳಿಬರುತ್ತಿರುವ ಗುಸು ಗುಸು ಪ್ರಕಾರ, ಕತ್ರಿನಾ ಕೈಫ್ ತಮ್ಮ ಹೆಸರನ್ನು ಮದುವೆಯ ನಂತರ- ಕತ್ರಿನಾ ಕೈಫ್ ಕೌಶಲ್ ಎಂದು ಬದಲಾಯಿಸಬಹುದು. ಒಂದು ವೇಳೆ ಅವರು ಹೀಗೆ ಹೆಸರು ಬದಲಾಯಿಸಿದ್ದೇ ಆದರೆ, ಅವರ ಮುಂಬರುವ ಬಹುನಿರೀಕ್ಷಿತ ‘ಟೈಗರ್ 3’ ಚಿತ್ರದಲ್ಲೂ ಅದೇ ಹೆಸರು ಕಾಣಿಸಿಕೊಳ್ಳಲಿದೆ ಎನ್ನುತ್ತಿದ್ದಾರೆ ಗಾಸಿಪ್ ಮಂದಿ. ಕತ್ರಿನಾ ಆಪ್ತವಲಯದ ಪ್ರಕಾರ, ಒಂದು ತಮಾಷೆಯ ಸುದ್ದಿಯೂ ಕೇಳಿ ಬರುತ್ತಿದೆ. ಅದೇನೆಂದರೆ, ಕತ್ರಿನಾ ಕೈಫ್ ‘ಕೆಕೆ’ ಎಂದು ಗುರುತಿಸಿಕೊಂಡಿದ್ದಾರೆ. ಒಂದು ವೇಳೆ ಅವರು ಕತ್ರಿನಾ ಕೈಫ್ ಕೌಶಲ್ ಎಂದು ಹೆಸರು ಬದಲಾಯಿಸಿಕೊಂಡರೆ, ಅವರ ಹೆಸರು ‘ಕೆಕೆಕೆ’ ಆಗಲಿದೆ ಎಂದು ಅವರ ಸ್ನೇಹಿತರು ತಮಾಷೆ ಮಾಡುತ್ತಿದ್ದಾರಂತೆ!

ಬಾಲಿವುಡ್​ನಲ್ಲಿ ಮದುವೆಯ ನಂತರ ಹೆಸರು ಬದಲಾಯಿಸುವುದು ಹೊಸ ವಿಚಾರವೇನಲ್ಲೂ ಅಲ್ಲ. ಕರೀನಾ ಕಪೂರ್ ಮದುವೆಯ ನಂತರ ಕಾಣಿಸಿಕೊಂಡಿದ್ದ ‘ತಲಾಶ್’ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಅದಾಗ್ಯೂ ಹೆಸರು ಬದಲಾಯಿಸಿಕೊಳ್ಳುವುದು ಸಂಪೂರ್ಣ ಕತ್ರಿನಾ ಅವರ ಆಯ್ಕೆ. ಅವರು ಇಷ್ಟಪಟ್ಟರೆ ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದ್ದಾರೆ. ಇಲ್ಲದಿದ್ದರೇ ಅವರ ಹಳೆಯ ಹೆಸರಿನೊಂದಿಗೆ ಮುಂದುವರೆಯಲಿದ್ದಾರೆ ಎನ್ನುತ್ತಾರೆ ಬಾಲಿವುಡ್ ಮಂದಿ.

ಇದನ್ನೂ ಓದಿ:

Mohanlal: ‘ಮರಕ್ಕರ್’ ಚಿತ್ರದ ನೂತನ ಟೀಸರ್ ರಿಲೀಸ್; ಅದ್ದೂರಿ ದೃಶ್ಯ ವೈಭವಕ್ಕೆ ಮಾರುಹೋದ ಅಭಿಮಾನಿಗಳು

ಕತ್ರಿನಾ-ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಷರತ್ತು; ಇದನ್ನು ಪಾಲಿಸಲೇಬೇಕು

Published On - 9:59 am, Thu, 25 November 21

ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು