AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಜನಿಸಿ 2 ತಿಂಗಳಾದ ಬಳಿಕ ಸತ್ಯ ಬಿಚ್ಚಿಟ್ಟ ದಿಯಾ ಮಿರ್ಜಾ; ತಾಯಿ-ಮಗು ಪ್ರಾಣಕ್ಕಿತ್ತು ಅಪಾಯ

Dia Mirza Vaibhav Rekhi: ಪ್ರೆಗ್ನೆನ್ಸಿ ಸಂದರ್ಭದಲ್ಲಿ ದಿಯಾ ಮಿರ್ಜಾಗೆ ಅಪೆಂಡಿಸೈಟಿಸ್ ಆಗಿತ್ತು. ಜೊತೆಗೆ ಆತಂಕಕಾರಿ ರೀತಿಯಲ್ಲಿ ಇನ್ಫೆಕ್ಷನ್​ ಕೂಡ ಆಗಿತ್ತು. ಇದರಿಂದ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯ ಎದುರಾಗಿತ್ತು.

ಮಗು ಜನಿಸಿ 2 ತಿಂಗಳಾದ ಬಳಿಕ ಸತ್ಯ ಬಿಚ್ಚಿಟ್ಟ ದಿಯಾ ಮಿರ್ಜಾ; ತಾಯಿ-ಮಗು ಪ್ರಾಣಕ್ಕಿತ್ತು ಅಪಾಯ
ದಿಯಾ ಮಿರ್ಜಾ
TV9 Web
| Updated By: Digi Tech Desk|

Updated on:Jul 14, 2021 | 2:35 PM

Share

ಸೆಲೆಬ್ರಿಟಿಗಳಿಗೆ ಮಗು ಜನಿಸಿದ ಕೂಡಲೇ ದೊಡ್ಡ ಸುದ್ದಿ ಆಗುವುದು ಸಹಜ. ಆದರೆ ಬಾಲಿವುಡ್​ ನಟಿ ದಿಯಾ ಮಿರ್ಜಾ ಅವರಿಗೆ ಮಗು ಜನಿಸಿ 2 ತಿಂಗಳಾಗುವವರೆಗೂ ಆ ವಿಚಾರವನ್ನು ಮುಚ್ಚಿಡಲಾಗಿತ್ತು. ಈಗ ಸ್ವತಃ ದಿಯಾ ಮಿರ್ಜಾ ಅವರು ಸತ್ಯ ಬಾಯಿ ಬಿಟ್ಟಿದ್ದಾರೆ. ಆತಂಕದ ವಿಷಯ ಏನೆಂದರೆ ಅವಧಿಗೂ ಮುನ್ನವೇ ಅವರಿಗೆ ಮಗು ಜನಿಸಿದ್ದು ತಾಯಿ-ಮಗುವಿನ ಪ್ರಾಣಕ್ಕೆ ಅಪಾಯ ಕೂಡ ಎದುರಾಗಿತ್ತು. ಆದರೆ ವೈದ್ಯರ ಆರೈಕೆಯಿಂದಾಗಿ ಇಬ್ಬರೂ ಸೇಫ್​ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ದಿಯಾ ಮಿರ್ಜಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮೇ 14ರಂದು ದಿಯಾ ಮಿರ್ಜಾಗೆ ಮಗು ಜನಿಸಿತ್ತು. ಮಗುವಿಗೆ ಅವ್ಯಾನ್ ಆಜಾದ್​ ರೇಖಿ ಎಂದು ಹೆಸರು ಇಡಲಾಗಿದೆ. ‘ತುಂಬ ಬೇಗ ಜನಿಸಿರುವ ಈ ಚಿಕ್ಕ ಅದ್ಭುತವನ್ನು ವೈದ್ಯರು ಮತ್ತು ನರ್ಸ್​ಗಳು ಐಸಿಯುನಲ್ಲಿ ಇಟ್ಟು ಕಾಪಾಡಿದ್ದಾರೆ’ ಎಂದು ದಿಯಾ ಮಿರ್ಜಾ ತಿಳಿಸಿದ್ದಾರೆ.

ಪ್ರೆಗ್ನೆನ್ಸಿ ಸಂದರ್ಭದಲ್ಲಿ ದಿಯಾ ಮಿರ್ಜಾಗೆ ಅಪೆಂಡಿಸೈಟಿಸ್ ಆಗಿತ್ತು. ಜೊತೆಗೆ ಆತಂಕಕಾರಿ ರೀತಿಯಲ್ಲಿ ಇನ್ಫೆಕ್ಷನ್​ ಕೂಡ ಆಗಿತ್ತು. ಇದರಿಂದ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಅಪಾಯ ಎದುರಾಗಿತ್ತು. ಕೂಡಲೇ ಸಿಸರಿನ್​ ಡೆಲಿವರಿ ಮಾಡಿಸಲಾಯಿತು. ಈ ಕಷ್ಟದ ಸಂದರ್ಭದಲ್ಲಿ ತಮ್ಮ ಸಹಾಯಕ್ಕೆ ನಿಂತ ಎಲ್ಲರಿಗೂ, ಬೆಂಬಲ ನೀಡಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ದಿಯಾ ಮಿರ್ಜಾ ಧನ್ಯವಾದ ತಿಳಿಸಿದ್ದಾರೆ. ಆದಷ್ಟು ಬೇಗ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ದಿಯಾ ಮಿರ್ಯಾ ಅವರು ಉದ್ಯಮಿ ವೈಭವ್​ ರೇಖಿ ಜೊತೆ ಮದುವೆ ಆಗಿದ್ದರು. ಇದು ಅವರಿಗೆ ಎರಡನೇ ವಿವಾಹ. ಅದಕ್ಕೂ ಮುನ್ನ 2014ರಲ್ಲಿ ಅವರು ಸಾಹಿಲ್​ ಸಂಘ ಜೊತೆ ಮದುವೆಯಾಗಿ, 2019ರಲ್ಲಿ ವಿಚ್ಛೇದನ ನೀಡಿದ್ದರು. ರೆಹ್ನಾ ಹೈ ತೇರೆ ದಿಲ್​ ಮೆ, ಲಗೇ ರಹೋ ಮುನ್ನಾ ಭಾಯ್​, ಸಂಜು ಮುಂತಾದ ಸಿನಿಮಾಗಳಿಂದ ದಿಯಾ ಮಿರ್ಜಾ ಹೆಚ್ಚು ಫೇಮಸ್​ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲೂ ಅವರು ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ.

ಇದನ್ನೂ ಓದಿ:

‘ಉರಿ’ ನಿರ್ದೇಶಕನ ಜೊತೆ ಗುಟ್ಟಾಗಿ ಮದುವೆಯಾದ ‘ಉಲ್ಲಾಸ ಉತ್ಸಾಹ’ ಚಿತ್ರದ ನಟಿ ಯಾಮಿ ಗೌತಮ್​

ತಾಯಿಯಾದ ಬಳಿಕ ಸೀರಿಯಲ್​ ನಟಿ ಟಾಪ್​ ಲೆಸ್ ಪೋಸ್​; ಬೇಸರಗೊಂಡ ಫ್ಯಾನ್ಸ್​ ಹೇಳಿದ್ದೇನು?

Published On - 1:31 pm, Wed, 14 July 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ