AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಸಿನಿಮಾಗಳಿಂದ ಯಾರ ಬದುಕೂ ಬದಲಾಗಿಲ್ಲ’; ಬೇಸರದಿಂದ ಹೇಳಿದ ಫಹಾದ್ ಫಾಸಿಲ್

ಸಿನಿಮಾಗೆ ಹಲವರ ಬದುಕನ್ನು ಬದಲಾಯಿಸೋ ಶಕ್ತಿ ಇದೆ. ಸಿನಿಮಾ ನೋಡಿ ಬದುಕು ಬದಲಿಸಿಕೊಂಡ ಅನೇಕರಿದ್ದಾರೆ. ಆದರೆ, ಫಹಾದ್​ಗೆ ತಮ್ಮ ಸಿನಿಮಾಗಳಿಂದ ಯಾರ ಬದುಕೂ ಬದಲಾಗಿಲ್ಲ ಎನ್ನುವ ಬೇಸರ ಇದೆ. ‘ಸಿನಿಮಾ ಪರಾಡಿಸೋ’ ಹೆಸರಿನ ಇಟಲಿಯ ಸಿನಿಮಾ ಅವರ ಬದುಕನ್ನು ಬದಲಿಸಿದೆಯಂತೆ.

‘ನನ್ನ ಸಿನಿಮಾಗಳಿಂದ ಯಾರ ಬದುಕೂ ಬದಲಾಗಿಲ್ಲ’; ಬೇಸರದಿಂದ ಹೇಳಿದ ಫಹಾದ್ ಫಾಸಿಲ್
ಫಹಾದ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 25, 2024 | 7:47 AM

Share

ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮಲಿಕ್​’, ‘ಬೆಂಗಳೂರು ಡೇಸ್’, ‘ವಿಕ್ರಮ್’ ಹೀಗೇ ಅವರ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಆದರೆ, ಅವರ ಸಿನಿಮಾಗಳಿಂದ ಯಾರ ಜೀವನವೂ ಬದಲಾಗಿಲ್ಲ ಅನ್ನೋದು ಅವರ ಅಭಿಪ್ರಾಯ. ತಾವು ನಟನೆಯನ್ನು ತೊರೆಯೋ ಮೊದಲು ಆ ರೀತಿಯ ಸಿನಿಮಾಗಳನ್ನು ಮಾಡುವ ಕನಸು ಹೊಂದಿದ್ದಾರೆ.

ಸಿನಿಮಾಗೆ ಹಲವರ ಬದುಕನ್ನು ಬದಲಾಯಿಸೋ ಶಕ್ತಿ ಇದೆ. ಸಿನಿಮಾ ನೋಡಿ ಬದುಕು ಬದಲಿಸಿಕೊಂಡ ಅನೇಕರಿದ್ದಾರೆ. ಆದರೆ, ಫಹಾದ್​ಗೆ ತಮ್ಮ ಸಿನಿಮಾಗಳಿಂದ ಯಾರ ಬದುಕೂ ಬದಲಾಗಿಲ್ಲ ಎನ್ನುವ ಬೇಸರ ಇದೆ. ‘ಸಿನಿಮಾ ಪರಾಡಿಸೋ’ ಹೆಸರಿನ ಇಟಲಿಯ ಸಿನಿಮಾ ಅವರ ಬದುಕನ್ನು ಬದಲಿಸಿದೆಯಂತೆ. ಆ ಸಿನಿಮಾ ನೋಡುವಾಗ ತಮಗೆ ಏನನ್ನಿಸುತ್ತದೆ ಅನ್ನೋದನ್ನು ಜನರಿಗೆ ಹೇಳಬೇಕು ಎಂಬುದು ಅವರ ಆಸೆ.

‘ನನ್ನ ಸಿನಿಮಾಗಳು ಯಾರ ಮೇಲೂ ಪ್ರಭಾವ ಬೀರಿಲ್ಲ. ನಾನು ಯಾರ ಬದುಕನ್ನೂ ಬದಲಾಯಿಸಿಲ್ಲ. ಆದರೆ, ಸಿನಿಮಾ ಪರಾಡಿಸೋ ನನ್ನ ಬದುಕನ್ನು ಬದಲಾಯಿಸಿತು. ಒಬ್ಬೇ ಒಬ್ಬರು ಬಂದು ಆ ಬಗ್ಗೆ ನನ್ನಲ್ಲಿ ಹೇಳಿಕೊಂಡಿಲ್ಲ. ಅನೇಕ ಸಿನಿಮಾಗಳು ನನ್ನ ಮೇಲೆ ಪ್ರಭಾವ ಬೀರಿವೆ. ನಾನು ನಟನೆಯನ್ನು ಬಿಡುವ ಮೊದಲು ಆ ರೀತಿಯ ಅನುಭವಗಳನ್ನು ನನ್ನ ಪ್ರೇಕ್ಷರಿಗೆ ನೀಡಬೇಕು ಎಂಬುದು ನನ್ನ ಕನಸು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಪ್ರೇಮಲು’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಮಾಹಿತಿ ಕೊಟ್ಟ ನಿರ್ಮಾಪಕ ಫಹಾದ್ ಫಾಸಿಲ್

ಫಹಾದ್ ಫಾಸಿಲ್ ಅವರ ಮತ್ತೊಂದು ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕುತ್ತಿದೆ. ‘ಸಿನಿಮಾ ಮಾತ್ರ ಜೀವನ ಅಲ್ಲ, ಅದನ್ನು ಬಿಟ್ಟೂ ಇನ್ನೂ ಹಲವು ವಿಚಾರಗಳು ಇವೆ’ ಎಂದು ಫಹಾದ್ ಹೇಳಿದ್ದಾರೆ. ಈ ಹೇಳಿಕೆಗೆ ಅನೇಕರು ವಿರೋದ ವ್ಯಕ್ತಪಡಿಸಿದ್ದಾರೆ. ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಸದ್ಯ ಅವರು ತೆಲುಗಿನ ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಸುಕುಮಾರನ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್