AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ

Aamir Khan: ಆಮಿರ್ ಖಾನ್​ ಅವರು ಈಗ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಅದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ಹಿಂದಿ ರಿಮೇಕ್​.

ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
ಜೇಮ್ಸ್ ಕ್ಯಾಮೆರಾನ್, ಆಮಿರ್ ಖಾನ್​, ಸ್ಟೀವನ್​ ಸ್ಪೀಲ್​ಬರ್ಗ್
TV9 Web
| Edited By: |

Updated on: May 29, 2022 | 1:56 PM

Share

ನಟ ಆಮಿರ್​ ಖಾನ್ (Aamir Khan) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾಗಳನ್ನು ಜಗತ್ತಿನಾದ್ಯಂತ ಇರುವ ಪ್ರೇಕ್ಷಕರು ನೋಡುತ್ತಾರೆ. ಆಮಿರ್​ ಖಾನ್​ ನಟಿಸಿದ್ದ ‘ದಂಗಲ್​’ ಸಿನಿಮಾ ಚೀನಾದಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ನಂತರ ‘ಸೀಕ್ರೆಟ್​ ಸೂಪರ್​ ಸ್ಟಾರ್​’ ಸಿನಿಮಾ ಕೂಡ ಸಖತ್​ ಸದ್ದು ಮಾಡಿತ್ತು. ಬರೀ ಚೀನಾದಲ್ಲಿ ಮಾತ್ರವಲ್ಲದೇ ಪಾಶ್ಚಿಮಾತ್ಯ ದೇಶಗಳಲ್ಲೂ ಆಮಿರ್ ಖಾನ್​ ಸಿನಿಮಾಗಳಿಗೆ ಮಾರುಕಟ್ಟೆ ಇದೆ. ಜನಸಾಮಾನ್ಯರು ಅಷ್ಟೇ ಅಲ್ಲದೇ ಹಾಲಿವುಡ್​ (Hollywood) ಸೆಲೆಬ್ರಿಟಿಗಳಿಗೂ ಆಮಿರ್​ ಖಾನ್​ ಬಗ್ಗೆ ತಿಳಿದಿದೆ. ಈ ಹಿಂದೆ ಖ್ಯಾತ ನಿರ್ದೇಶಕ ಸ್ಟೀವನ್​ ಸ್ಪೀಲ್​ಬರ್ಗ್​ ಅವರು ಆಮಿರ್​ ಖಾನ್​ರನ್ನು ‘ಟೈಟಾನಿಕ್​’ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್​ಗೆ (James Cameron) ಹೋಲಿಸಿದ್ದರು. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..

ಆಮಿರ್ ಖಾನ್​ ಅವರು ಈಗ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಅದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ಹಿಂದಿ ರಿಮೇಕ್​. ‘ಫಾರೆಸ್ಟ್​ ಗಂಪ್​’ ಚಿತ್ರದ ರಿಮೇಕ್​ ಹಕ್ಕುಗಳನ್ನು ಪಡೆಯಲು ಆಮಿರ್ ಖಾನ್​ ಸಾಕಷ್ಟು ಕಷ್ಟಪಟ್ಟಿದ್ದರು. ಆಗ ಅವರ ಸಹಾಯಕ್ಕೆ ಬಂದಿದ್ದೇ ‘ಜ್ಯುರಾಸಿಕ್​ ಪಾರ್ಕ್​’ ಸಿನಿಮಾ ನಿರ್ದೇಶಕ, ಹಾಲಿವುಡ್​ ದಿಗ್ಗಜ ಸ್ಟೀವನ್​ ಸ್ಪೀಲ್​ಬರ್ಗ್​. ಅದರ ಹಿಂದೆ ಒಂದು ಇಂಟರೆಸ್ಟಿಂಗ್​ ಘಟನೆ ಇದೆ.

ಇದನ್ನೂ ಓದಿ: ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರಕ್ಕೆ ಆಮಿರ್​, ಕರೀನಾ, ನಾಗ ಚೈತನ್ಯ ಪಡೆದ ಸಂಭಾವನೆ ಎಷ್ಟು ಕೋಟಿ?

ಇದನ್ನೂ ಓದಿ
Image
IPL Final ವೇಳೆ ರಿಲೀಸ್​ ಆಗತ್ತೆ ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​: ಇದು ಆಮಿರ್​ ಖಾನ್​ ಹೊಸ ಐಡಿಯಾ
Image
ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?
Image
ನಟನೆಗೆ ವಿದಾಯ ಹೇಳಲು ಆಮಿರ್​ ಖಾನ್​ ನಿರ್ಧಾರ ಮಾಡಿದ್ದ ಸಂಗತಿ ಬಯಲು; ಮಾಜಿ ಪತ್ನಿ ಏನು ಹೇಳಿದ್ರು?
Image
‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​

‘ಫಾರೆಸ್ಟ್​ ಗಂಪ್​’ ರಿಮೇಕ್​ ಹಕ್ಕು ಪಡೆಯುವ ಸಲುವಾಗಿ ಅದರ ನಿರ್ದೇಶಕ ರಾಬರ್ಟ್​ ಝೆಮೆಕಿಸ್​ ಅವರನ್ನು ಭೇಟಿಯಾಗಲು ಆಮಿರ್​ ಖಾನ್​ ಬಯಸಿದ್ದರು. ಆದರೆ ಆಮಿರ್​ ಖಾನ್​ರನ್ನು ಭೇಟಿಯಾಗಲು ರಾರ್ಬಟ್​ ಝೆಮೆಕಿಸ್​ ಸಿದ್ಧರಿರಲಿಲ್ಲ. ಇದಕ್ಕಾಗಿ ಸ್ಟೀವನ್​ ಸ್ಪೀಲ್​ಬರ್ಗ್ ಅವರ ಸಹಾಯ ಪಡೆಯಲು ಆಮಿರ್​ ಖಾನ್​ ನಿರ್ಧರಿದರು. ಆಗ ‘ಬ್ರಿಜ್​ ಆಫ್​ ಸ್ಪೈಸ್​’ ಚಿತ್ರದ ಶೂಟಿಂಗ್​ನಲ್ಲಿ ಸ್ಟೀವನ್​ ಸ್ಪೀಲ್​ ಬ್ಯುಸಿ ಆಗಿದ್ದರು.

ಇದನ್ನೂ ಓದಿ: ‘ಕೆಜಿಎಫ್​ 2’ ಜತೆಗಿನ ರೇಸ್​​ನಿಂದ ಹಿಂದೆ ಸರಿದ ‘ಲಾಲ್​ ಸಿಂಗ್​ ಛಡ್ಡಾ’​; ಆಮಿರ್​ ಖಾನ್ ನೀಡಿದ ಕಾರಣ ಏನು?

‘ಬ್ರಿಜ್​ ಆಫ್​ ಸ್ಪೈಸ್​’ ಚಿತ್ರದಲ್ಲಿ ‘ಫಾರೆಸ್ಟ್​ ಗಂಪ್’ ಖ್ಯಾತಿಯ ನಟ ಟಾಮ್​ ಹ್ಯಾಂಕ್ಸ್​ ನಟಿಸುತ್ತಿದ್ದರು. ಅದೇ ಸೆಟ್​ನಲ್ಲಿ ಆಮಿರ್​ ಖಾನ್​ರನ್ನು ಟಾಮ್​ ಹ್ಯಾಂಕ್ಸ್​ಗೆ ಸ್ಟೀವನ್​ ಸ್ಪೀಲ್​ಬರ್ಗ್​ ಪರಿಚಯ ಮಾಡಿಕೊಟ್ಟರು. ‘ಇವರು ಭಾರತದ ಜೇಮ್ಸ್​ ಕ್ಯಾಮೆರಾನ್​ ಇದ್ದಂತೆ. ಯಾಕೆಂದರೆ ಇವರ ದಾಖಲೆಗಳನ್ನು ಇವರೇ ಮುರಿಯುತ್ತಾರೆ’ ಎಂದು ಸ್ಟೀವನ್​ ಸ್ಪೀಲ್​ಬರ್ಗ್ ಹೇಳಿದ್ದರಂತೆ. ಆಗ ಟಾಮ್​ ಹ್ಯಾಂಕ್ಸ್​ ನೀಡಿದ ಪ್ರತಿಕ್ರಿಯೆ ಕೂಡ ಅಚ್ಚರಿ ಮೂಡಿಸಿತ್ತು. ‘ನಾನು ಇವರನ್ನು ಬಲ್ಲೆ. ಇವರು ನಟಿಸಿದ ‘3 ಈಡಿಯಟ್ಸ್’​ ಚಿತ್ರವನ್ನು ಮೂರು ಬಾರಿ ನೋಡಿದ್ದೇನೆ’ ಎಂದು ಅವರು ಹೇಳಿದ್ದರು ಎಂಬ ವಿಷಯ ಕೇಳಿ ಆಮಿರ್ ಖಾನ್​ ಫ್ಯಾನ್ಸ್​ ಖುಷಿ ಪಟ್ಟಿದ್ದಾರೆ.

ಆಗಸ್ಟ್​ 11ರಂದು ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ತೆರೆಕಾಣಲಿದೆ. ಈ ಚಿತ್ರವನ್ನು ನೋಡಲು ಆಮಿರ್​ ಖಾನ್​ ಫ್ಯಾನ್ಸ್​ ಕಾದಿದ್ದಾರೆ. ಈ ಸಿನಿಮಾದಲ್ಲಿ ಕರೀನಾ ಕಪೂರ್​, ನಾಗ ಚೈತನ್ಯ ಕೂಡ ಅಭಿನಯಿಸಿದ್ದಾರೆ. ಹಲವು ಗೆಟಪ್​ಗಳಲ್ಲಿ ಆಮಿರ್​ ಖಾನ್​ ಕಾಣಿಸಿಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್