AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ಮೂರು ಹೊಸ ಸಿನಿಮಾಗಳ ಬಗ್ಗೆ ಸುಳಿವು ಕೊಟ್ಟ ಜೂ ಎನ್​ಟಿಆರ್

Jr NTR movies: ಜೂ ಎನ್​ಟಿಆರ್ ಪ್ರಸ್ತುತ ‘ವಾರ್ 2’ ಸಿನಿಮಾ ಮುಗಿಸಿ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾ ಶೂಟಿಂಗ್ ಪ್ರಾರಂಭಿಸಿದ್ದಾರೆ. ಇವುಗಳ ಜೊತೆಗೆ ಅವರು ನಟಿಸಲಿರುವ ಮುಂದಿನ ಕೆಲ ಸಿನಿಮಾಗಳ ಬಗ್ಗೆಯೂ ಗುಟ್ಟು ರಟ್ಟು ಮಾಡಿದ್ದಾರೆ. ಆಸಕ್ತಿಕರ ಲೈನ್ ಅಪ್ ಅನ್ನು ಇಟ್ಟುಕೊಂಡಿದ್ದಾರೆ ಜೂ ಎನ್​ಟಿಆರ್.

ಮುಂದಿನ ಮೂರು ಹೊಸ ಸಿನಿಮಾಗಳ ಬಗ್ಗೆ ಸುಳಿವು ಕೊಟ್ಟ ಜೂ ಎನ್​ಟಿಆರ್
Jr Ntr
Follow us
ಮಂಜುನಾಥ ಸಿ.
|

Updated on:Apr 05, 2025 | 3:25 PM

ನಟ ಜೂ ಎನ್​ಟಿಆರ್ (Jr NTR), ಜಪಾನ್ (Japan)​ ಇಂದ ವಾಪಸ್ಸಾಗಿದ್ದಾರೆ. ಸುಮಾರು ಎರಡು ವಾರಗಳ ಕಾಲ ಜಪಾನ್​ ಪ್ರವಾಸದಲ್ಲಿದ್ದ ಜೂ ಎನ್​ಟಿಆರ್ ಅಲ್ಲಿ ತಮ್ಮ ‘ದೇವರ’ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಜಪಾನ್​ನಲ್ಲಿ ಭಾರಿ ಜನಪ್ರೀತಿ ಅವರಿಗೆ ಲಭಿಸಿತು. ಹೈದರಾಬಾದ್​ಗೆ ಮರಳುತ್ತಿದ್ದಂತೆ ಮತ್ತೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿರುವ ಜೂ ಎನ್​ಟಿಆರ್, ಇತ್ತೀಚೆಗೆ ಬಿಡುಗಡೆ ಆದ ‘ಮ್ಯಾಡ್ ಸ್ಕ್ವೇರ್’ ಸಿನಿಮಾದ ಸಕ್ಸಸ್ ಮೀಟ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಸಮಯ ತಮ್ಮ ಮುಂದಿನ ಎರಡು ಸಿನಿಮಾಗಳ ಬಗ್ಗೆ ಅವರು ಸುಳಿವು ನೀಡಿದರು.

ಹಾಸ್ಯ ಪ್ರಧಾನವಾದ ಸಿನಿಮಾಗಳು ತಮ್ಮ ಫೇವರೇಟ್ ಎಂದ ಜೂ ಎನ್​ಟಿಆರ್, ‘ತೆರೆ ಮೇಲೆ ಹಾಸ್ಯ ಮಾಡುವುದು ಬಹಳ ಕಷ್ಟದ ಕೆಲಸ. ಇದೇ ಕಾರಣಕ್ಕೆ ನಾನು ‘ಅದುರ್ಸ್ 2’ ಮಾಡಲು ಹಿಂದೇಟು ಹಾಕುತ್ತಿದ್ದೀನಿ. ಆದರೆ ಎಂದಾದರೂ ಅದನ್ನು ಮಾಡುವ ಆಸೆಯೂ ಇದೆ’ ಎಂದಿದ್ದಾರೆ. ‘ಅದುರ್ಸ್’ ಜೂ ಎನ್​ಟಿಆರ್ ಮಾಡಿದ್ದ ಹಾಸ್ಯ ಪ್ರಧಾನ ಆಕ್ಷನ್ ಸಿನಿಮಾ ಆಗಿತ್ತು. ಆ ಸಿನಿಮಾದಲ್ಲಿ ಜೂ ಎನ್​ಟಿಆರ್ ಅವರು ಬ್ರಾಹ್ಮಣ ಯುವಕನಾಗಿ ನೀಡಿದ್ದ ನಟನೆ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಜಮೌಳಿಗೆ ಜೂ ಎನ್​ಟಿಆರ್ ಅವರ ಮೆಚ್ಚಿನ ಸಿನಿಮಾ ಎಂದರೆ ಅದು ‘ಅದುರ್ಸ್’.

‘ಮ್ಯಾಡ್ ಸ್ಕೇರ್’ ಸಿನಿಮಾದ ನಿರ್ಮಾಪಕ ನಾಗವಂಶಿ ಜೊತೆಗೂ ಒಂದು ಸಿನಿಮಾ ಮಾಡಲಿಕ್ಕಿದೆ. ಆದಷ್ಟು ಬೇಗವೇ ಆ ಸಿನಿಮಾ ಸೆಟ್ಟೇರಲಿದೆ ಎಂದು ಅದೇ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದರು ಜೂ ಎನ್​ಟಿಆರ್. ‘ನನ್ನ ಅಭಿಮಾನಿಗಳನ್ನು ಸಂಭಾಳಿಸುವ ಜವಾಬ್ದಾರಿಯನ್ನು ಯುವ ನಿರ್ಮಾಪಕ ನಾಗ ವಂಶಿಗೆ ನಾನು ಬಿಟ್ಟು ಬಿಡುತ್ತೇನೆ’ ಎಂದು ಜೂ ಎನ್​ಟಿಆರ್ ಹೇಳಿದ್ದಾರೆ. ‘ದೇವರ 2’ ಸಿನಿಮಾ ಸಹ ಶೀಘ್ರವೇ ಪ್ರಾರಂಭ ಆಗಲಿರುವ ಬಗ್ಗೆಯೂ ಅವರು ಹೇಳಿದ್ದಾರೆ. ಇದರ ಜೊತೆಗೆ ತಮಿಳಿನ ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿರುವ ಸಿನಿಮಾದಲ್ಲಿಯೂ ನಟಿಸುತ್ತಿರುವುದಾಗಿ ಜೂ ಎನ್​ಟಿಆರ್ ಹೇಳಿದ್ದಾರೆ.

ಇದನ್ನೂ ಓದಿ
Image
ಅನುಮತಿ ಇಲ್ಲದೆ ಚಿತ್ರೀಕರಣ, ರಾಣಾ ಸಿನಿಮಾ ಮೇಲೆ ಅರಣ್ಯ ಇಲಾಖೆಯಿಂದ ದಾಳಿ
Image
ಪ್ರಭಾಸ್ ಕಾರಣದಿಂದ ರಿಷಬ್ ಶೆಟ್ಟಿ ಸಿನಿಮಾ ಮೇಲೆ ಕರಿನೆರಳು
Image
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
Image
ಮೊಮ್ಮಗ ಮಾಡಿದ ಸಾಲದಿಂದ ಹರಾಜಿಗೆ ಬಂತು ಶಿವಾಜಿ ಗಣೇಶನ್ ಮನೆ

ಇದನ್ನೂ ಓದಿ:ದೊಡ್ಡ ಸಿಗ್ನಲ್ ಕೊಟ್ಟ ಜೂ ಎನ್​ಟಿಆರ್ ಅಣ್ಣ, ಎಲ್ಲವೂ ಸರಿಹೋಯ್ತಾ?

‘ಮ್ಯಾಡ್ ಸ್ಕೇರ್’ ಸಿನಿಮಾ ಅನ್ನು ಬಹುವಾಗಿ ಮೆಚ್ಚಿಕೊಂಡಿರುವುದಾಗಿ ಹೇಳಿದ ಜೂ ಎನ್​ಟಿಆರ್. ಸಿನಿಮಾದಲ್ಲಿ ನಟಿಸಿರುವ ಎಲ್ಲರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೂ ಎನ್​ಟಿಆರ್ ಅವರ ಪತ್ನಿಯ ಸಹೋದರ ಸಂಬಂಧಿ ನಾರ್ನೆ ನಿತಿನ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಜೂ ಎನ್​ಟಿಆರ್, ‘ಮೊದಲಿನಿಂದಲೂ ಆತ ನನ್ನೊಟ್ಟಿಗೆ ಹೆಚ್ಚು ಮಾತನಾಡಲಿಲ್ಲ, ಆದರೆ ಮಾತನಾಡಿದ್ದು, ಆತ ನಟ ಆಗಬೇಕು ಎಂದು ಡಿಸೈಡ್ ಮಾಡಿದಾಗ ಮಾತ್ರ, ಆದರೆ ನಾನು ಆಗಲೇ ಹೇಳಿಬಿಟ್ಟಿದ್ದೆ, ನನ್ನಿಂದ ಯಾವ ಸಹಾಯವನ್ನೂ ನಿರೀಕ್ಷಿಸಬೇಡ ಸ್ವಂತವಾಗಿ ಬೆಳಿ ಎಂದು, ಹಾಗೆಯೇ ಮಾಡಿದ್ದಾನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Sat, 5 April 25

ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್