AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಾಕಷ್ಟು ಸಂಭಾವನೆ ಕೇಳಿದ್ರು’; ರಣಬೀರ್ ‘ಕಾಫಿ ವಿತ್ ಕರಣ್’ಗೆ ಬರದಿರಲು ಕಾರಣ ನೀಡಿದ ಕರಣ್

ಆಲಿಯಾ ಜತೆ ರಣಬೀರ್ ಬರಬೇಕು ಎಂಬುದು ಅನೇಕರ ಬಯಕೆ ಆಗಿತ್ತು. ರಣಬೀರ್ ಈ ಶೋಗೆ ಬರದಿರಲು ಕಾರಣ ಏನು ಎಂಬುದಕ್ಕೆ ಗಾಸಿಪ್ ಮಂದಿ ನಾನಾ ರೀತಿಯ ಕಾರಣ ಹುಡುಕಿದ್ದರು. ಇದಕ್ಕೆಲ್ಲ ಕರಣ್ ಸ್ಪಷ್ಟನೆ ನೀಡಿದ್ದಾರೆ.

‘ಸಾಕಷ್ಟು ಸಂಭಾವನೆ ಕೇಳಿದ್ರು’; ರಣಬೀರ್ ‘ಕಾಫಿ ವಿತ್ ಕರಣ್’ಗೆ ಬರದಿರಲು ಕಾರಣ ನೀಡಿದ ಕರಣ್
ಕರಣ್​-ರಣಬೀರ್
TV9 Web
| Edited By: |

Updated on:Jul 06, 2022 | 5:49 PM

Share

ಕರಣ್ ಜೋಹರ್ ‘ಕಾಫಿ ವಿತ್ ಕರಣ್’ (Koffee With Karan) ಶೋ ನಡೆಸಿಕೊಡುತ್ತಾ ಬಂದಿದ್ದಾರೆ. ಈಗಾಗಲೇ ಆರು ಸೀಸನ್​ಗಳು ಯಶಸ್ವಿಯಾಗಿ ಆಗಿವೆ. ಜುಲೈ 7ರಿಂದ ಏಳನೇ ಸೀಸನ್​ನ ಮೊದಲ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಈ ಶೋಗೆ ಬರೋಕೆ ಸೆಲೆಬ್ರಿಟಿಗಳು ಕೂಡ ಇಷ್ಟಪಡುತ್ತಾರೆ. ಕರಣ್​ಗೆ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳ  ಜತೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಸಾಕಷ್ಟು ಸ್ಟಾರ್ ನಟರ ಸಿನಿಮಾಗೆ ಅವರು ಬಂಡವಾಳ ಹೂಡುತ್ತಾರೆ. ಹೀಗಾಗಿ, ತಮ್ಮ ಆಪ್ತರಿಗೆ ಮಾತ್ರ ಈ ಶೋಗೆ ಅತಿಥಿಯಾಗಿ ಬರಲು ಕರಣ್ (Karan Johar) ಆಮಂತ್ರಣ ನೀಡುತ್ತಾರೆ. ಇದಕ್ಕೆ ಅವರು ಸಂಭಾವನೆ ನೀಡುವುದಿಲ್ಲ. ಈಗ ರಣಬೀರ್ ಬರದಿರಲು ಕಾರಣ ಏನು ಎಂಬುದನ್ನು ಕರಣ್ ವಿವರಿಸಿದ್ದಾರೆ.

‘ಕಾಫಿ ವಿತ್ ಕರಣ್ 7’ ಮೊದಲ ಎಪಿಸೋಡ್​​ನಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಪ್ರೋಮೋಗಳು ಈಗಾಗಲೇ ವೈರಲ್ ಆಗಿವೆ. ಆಲಿಯಾ ಜತೆ ರಣಬೀರ್ ಬರಬೇಕು ಎಂಬುದು ಅನೇಕರ ಬಯಕೆ ಆಗಿತ್ತು. ರಣಬೀರ್ ಈ ಶೋಗೆ ಬರದಿರಲು ಕಾರಣ ಏನು ಎಂಬುದಕ್ಕೆ ಗಾಸಿಪ್ ಮಂದಿ ನಾನಾ ರೀತಿಯ ಕಾರಣ ಹುಡುಕಿದ್ದರು. ಇದಕ್ಕೆಲ್ಲ ಕರಣ್ ಸ್ಪಷ್ಟನೆ ನೀಡಿದ್ದಾರೆ.

ಎನ್​​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕರಣ್​, ‘ಅವರು (ರಣಬೀರ್) ನನ್ನ ಕ್ಲೋಸ್ ಫ್ರೆಂಡ್. ನಾನು ಈಗ ಏನಾದರೂ ಹೇಳಿದರೆ ಅದರಿಂದ ತೊಂದರೆಯೇ ಆಗುತ್ತದೆ’ ಎಂದು ಕರಣ್​ ಜೋಹರ್ ಹೇಳಿದ್ದಾರೆ. ನಂತರ ರಣಬೀರ್ ಬರದಿರಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ಇದನ್ನು ಅವರು ಗಂಭೀರವಾಗಿ ಹೇಳಿದ್ದಾರೋ ಅಥವಾ ಫನ್ನಿಯಾಗಿ ಹೇಳಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ
Image
ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ, ಏಕೆಂದರೆ ನೀವು ಸುಸ್ತಾಗಿರುತ್ತೀರಿ ಎಂದ ಆಲಿಯಾ ಭಟ್
Image
ಶಾರುಖ್-ಕರಣ್ ಸಂಬಂಧದ ಬಗ್ಗೆ ಹುಟ್ಟಿತ್ತು ಅನುಮಾನ; ಎಲ್ಲವನ್ನೂ ವಿವರಿಸಿದ್ದ ಜೋಹರ್  
Image
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
Image
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

‘ಈ ಶೋನಿಂದ ನಿಮಗೆ ಏನು ಹಣ ಸಿಗುತ್ತದೆಯೋ ಅದನ್ನು ನನಗೆ ನೀಡಿ ಎಂದು ರಣಬೀರ್ ಟೀಸ್ ಮಾಡುತ್ತಿರುತ್ತಾರೆ. ನಾನು ನಿಮಗೆ ಸಂಭಾವನೆ ನೀಡುವುದಿಲ್ಲ. ಸಿನಿಮಾಗಳಲ್ಲಿ ನಿಮಗೆ ಸಾಕಷ್ಟು ಸಂಭಾವನೆ ನೀಡುತ್ತೇನೆ ಎಂದು ನಾನು ರಣಬೀರ್​ಗೆ ಹೇಳಿದ್ದೇನೆ. ನನಗೆ ಆಪ್ತವಾಗಿದ್ದ ಮಾತ್ರಕ್ಕೆ ಅವರು ಶೋಗೆ ಬರಲೇಬೇಕೆಂದೇನು ಇಲ್ಲ. ಅವರಿಗೆ ಇಷ್ಟವಿದ್ದರೆ ಮಾತ್ರ ಅವರು ಬರುತ್ತಾರೆ’ ಎಂದಿದ್ದಾರೆ ಕರಣ್.

‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕರಣ್​​ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕಾಗಿ ರಣಬೀರ್ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ದಯವಿಟ್ಟು ಕಾಫಿ ವಿತ್ ಕರಣ್​ ಶೋಗೆ ಬನ್ನಿ’; ಸೆಲೆಬ್ರಿಟಿಗಳಿಗೆ ಕರೆ ಮಾಡಿ ಬೇಡಿದ ಕರಣ್ ಜೋಹರ್

ಕರಣ್ ಜೋಹರ್ ಪಾರ್ಟಿ ಎಫೆಕ್ಟ್​; ಶಾರುಖ್​, ಕತ್ರಿನಾಗೆ ಕೊರೊನಾ ಪಾಸಿಟಿವ್

Published On - 5:38 pm, Wed, 6 July 22

Follow Us
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ