AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಉಸಿರು ಇರೋ ತನಕ ಬುಲ್​ಬುಲ್ ಅಂತ ಕರೆಯಿರಿ, ದರ್ಶನ್​ಗೆ ನಾನು ಋಣಿ: ರಚಿತಾ ರಾಮ್

ನಟಿ ರಚಿತಾ ರಾಮ್ ಅವರು ಸ್ಟಾರ್​ ಹೀರೋಯಿನ್ ಆಗಿ ಮಿಂಚಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಮೊದಲು ಅವಕಾಶ ಕೊಟ್ಟವರನ್ನು ಇಂದಿಗೂ ಸ್ಮರಿಸುತ್ತಾರೆ ರಚಿತಾ ರಾಮ್. ದರ್ಶನ್​ ಅವರನ್ನು ತಮ್ಮ ಗಾಡ್​ಫಾದರ್​ ಎಂದು ರಚಿತಾ ಕರೆದಿದ್ದಾರೆ.

ನನ್ನ ಉಸಿರು ಇರೋ ತನಕ ಬುಲ್​ಬುಲ್ ಅಂತ ಕರೆಯಿರಿ, ದರ್ಶನ್​ಗೆ ನಾನು ಋಣಿ: ರಚಿತಾ ರಾಮ್
Rachita Ram, Darshan
ಮದನ್​ ಕುಮಾರ್​
|

Updated on: Mar 12, 2025 | 4:58 PM

Share

ನಟ ದರ್ಶನ್ ಮೇಲೆ ರಚಿತಾ ರಾಮ್ (Rachita Ram) ಅವರಿಗೆ ಅಪಾರ ಗೌರವ ಇದೆ. ಚಿತ್ರರಂಗದಲ್ಲಿ ರಚಿತಾ ರಾಮ್ ಅವರಿಗೆ ಮೊದಲು ಅವಕಾಶ ನೀಡಿದ್ದೇ ದರ್ಶನ್. ರಚಿತಾ ನಟಿಸಿದ ಮೊದಲ ಸಿನಿಮಾ ‘ಬುಲ್​ಬುಲ್’. ಆ ಸಿನಿಮಾ 2013ರಲ್ಲಿ ತೆರೆಕಂಡಿತು. ಮೊದಲ ಸಿನಿಮಾದಲ್ಲೇ ದರ್ಶನ್​ (Darshan) ಜೊತೆ ನಾಯಕಿಯಾಗಿ ನಟಿಸುವ ಅವಕಾಶ ರಚಿತಾ ರಮ್ ಅವರಿಗೆ ಸಿಕ್ಕಿತು. ಆ ಅವಕಾಶ ನೀಡಿದ್ದಕ್ಕೆ ತಾವು ಕೊನೆವರೆಗೂ ದರ್ಶನ್ ಅವರಿಗೆ ಚಿರಋಣಿ ಆಗಿರುವುದಾಗಿ ರಚಿತಾ ರಾಮ್ ಹೇಳಿದ್ದಾರೆ. ‘ಜೀ ಕನ್ನಡ’ ವಾಹಿನಿಯ ‘ಭರ್ಜರಿ ಬ್ಯಾಚುಲರ್ಸ್​’ (Bharjari Bachelors) ಶೋನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ದರ್ಶನ್ ಸರ್ ಒಂದು ಮಾತು ಹೇಳುತ್ತಿದ್ದರು. ಅವರ ವೃತ್ತಿ ಜೀವನದಲ್ಲಿ ಹೀರೋಯಿನ್ ಹೆಸರೇ ಶೀರ್ಷಿಕೆ ಆದಂತಹ ಸಿನಿಮಾವನ್ನು ಮಾಡಿಲ್ಲ. ಎಲ್ಲ ಸಿನಿಮಾಗೂ ಹೀರೋ ಕೇಂದ್ರಿತ ಟೈಟಲ್ ಇರುತ್ತಿತ್ತು. ಮೊದಲ ಬಾರಿಗೆ ಬುಲ್​ಬುಲ್ ಅಂತ ಹೀರೋಯಿನ್ ಸೆಂಟ್ರಿಕ್ ಟೈಟಲ್ ಇದೆ. ಹಾಗಾಗಿ ನೀನು ಎಷ್ಟೊಂದು ಲಕ್ಕಿ ಅಂತ ನನಗೆ ಹೇಳುತ್ತಿದ್ದರು’ ಎಂದಿದ್ದಾರೆ ರಚಿತಾ ರಾಮ್.

ಇದನ್ನೂ ಓದಿ
Image
ರಚಿತಾ​ಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ ದರ್ಶನ್; ನಟಿಯ ಪ್ರತಿಕ್ರಿಯೆ ಏನು?
Image
‘ಎಷ್ಟೇ ವರ್ಷ ನನ್ನ ಹಿಂದೆ ಬಂದರೂ ನಿಮಗೆ ಬೀಳಲ್ಲ’; ನೇರವಾಗಿ ಹೇಳಿದ ರಚಿತಾ
Image
ಯಾರ ಜೊತೆಗೂ ಹೋಗಿ ಇರಲ್ಲ ಎಂದು ರಚಿತಾ ರಾಮ್ ಹೇಳಿದ್ದರ ಹಿಂದಿನ ವಿವಾದವೇನು?
Image
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
View this post on Instagram

A post shared by Zee Kannada (@zeekannada)

‘ಒಂದಷ್ಟು ವರ್ಷಗಳ ತನಕ ನನ್ನನ್ನು ಬುಲ್​ಬುಲ್ ಅಂತ ಕರೆಯುತ್ತಿದ್ದರು ಅಂತ ನೀವು ಹೇಳಿದ್ರಿ. ಇಲ್ಲ.. ಈಗಲೂ ಕೂಡ ಜನರು ನನ್ನನ್ನು ಬುಲ್​ಬುಲ್​ ಅಂತಾನೇ ಕರೆಯುವುದು. ಉಸಿರು ಇರುವವರೆಗೂ ನನಗೆ ಬುಲ್​ಬುಲ್​ ಅಂತಾನೇ ಕರೆದರೆ ಖುಷಿ. ನನ್ನ ತಂಡಕ್ಕೆ, ದರ್ಶನ್​ ಸರ್​ಗೆ, ದರ್ಶನ್​ ಅವರ ಅಭಿಮಾನಿಗಳಿಗೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ’ ಎಂದು ರಚಿತಾ ರಾಮ್ ಅವರು ಹೇಳಿದ್ದಾರೆ.

‘ನಾನು ಪುಣ್ಯವಂತೆ. ನನ್ನ ಗಾಡ್​ಫಾದರ್​ಗೆ ನಾನು ಧನ್ಯವಾದ ಹೇಳುತ್ತಾನೆ’ ಎಂದು ರಚಿತಾ ರಾಮ್ ಅವರು ‘ಭರ್ಜರಿ ಬ್ಯಾಚುಲರ್ಸ್​’ ವೇದಿಕೆಯಿಂದಲೇ ದರ್ಶನ್​ ಅವರಿಗೆ ನಮಸ್ಕಾರ ಮಾಡಿದ್ದಾರೆ. ರಚಿತಾ ರಾಮ್ ಅವರ ಮಾತು ಕೇಳಿ ದರ್ಶನ್ ಅಭಿಮಾನಿಗಳಿಗೆ ಖುಷಿ ಆಗಿದೆ. ಅವಕಾಶ ಕೊಟ್ಟವರನ್ನು ಎಂದಿಗೂ ಮರೆಯದ ರಚಿತಾ ಗುಣವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ‘ಬುಲ್​ಬುಲ್’ ಬಳಿಕ ‘ಅಂಬರೀಶ’, ‘ಕ್ರಾಂತಿ’, ‘ಜಗ್ಗುದಾದ’ ಸಿನಿಮಾಗಳಲ್ಲಿ ದರ್ಶನ್ ಜೊತೆ ರಚಿತಾ ರಾಮ್ ತೆರೆ ಹಂಚಿಕೊಂಡರು.

ಇದನ್ನೂ ಓದಿ: ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ಡಿ ಬಾಸ್

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾಗ ರಚಿತಾ ರಾಮ್ ಅವರು ಹೋಗಿ ಮಾತನಾಡಿಸಿಕೊಂಡು ಬಂದಿದ್ದರು. ಆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದಾಗಲೂ ಕೂಡ ಅವರು ದರ್ಶನ್ ಕೊಟ್ಟ ಅವಕಾಶವನ್ನು ಸ್ಮರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?