AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರಾಜ್​-ಉಮಾಶ್ರೀ ಜೋಡಿಯ ‘ಮಾನ’ ಚಿತ್ರದ ಹಿಂದಿದೆ ಹಲವು ಇಂಟರೆಸ್ಟಿಂಗ್​ ಕಹಾನಿ

‘ಮಾನ’ ಸಿನಿಮಾದಲ್ಲಿ ದೇವರಾಜ್​ ಅವರು ಜೀತದಾಳು ಪಾತ್ರ ಮಾಡಿದ್ದಾರೆ. ಅವರು ಹೀರೋ ಎಂಬುದು ತಿಳಿದ ಬಳಿಕ ನಟಿ ಉಮಾಶ್ರೀ ಕೂಡ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು.

ದೇವರಾಜ್​-ಉಮಾಶ್ರೀ ಜೋಡಿಯ ‘ಮಾನ’ ಚಿತ್ರದ ಹಿಂದಿದೆ ಹಲವು ಇಂಟರೆಸ್ಟಿಂಗ್​ ಕಹಾನಿ
ದೇವರಾಜ್, ಉಮಾಶ್ರೀ
TV9 Web
| Edited By: |

Updated on: Feb 02, 2022 | 1:49 PM

Share

ನಟ ದೇವರಾಜ್​ (Devaraj) ಮತ್ತು ನಟಿ ಉಮಾಶ್ರೀ ಅವರು ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಸಿನಿಮಾರಂಗದಲ್ಲಿ ಅವರು ಅಪಾರ ಅನುಭವ ಹೊಂದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಎಷ್ಟೋ ಚಿತ್ರಗಳಲ್ಲಿ ದೇವರಾಜ್​ ಮತ್ತು ಉಮಾಶ್ರೀ ಅವರು ತೆರೆಹಂಚಿಕೊಂಡಿದ್ದರೂ ಕೂಡ ಎಂದಿಗೂ ಜೋಡಿಯಾಗಿ ಅಭಿನಯಿಸಿರಲಿಲ್ಲ. ಇದೇ ಮೊದಲ ಬಾರಿಗೆ ‘ಮಾನ’ (Maana Kannada Movie) ಸಿನಿಮಾದಲ್ಲಿ ಅವರಿಬ್ಬರು ಜೋಡಿಯಾಗಿದ್ದಾರೆ. ಗಂಡ-ಹೆಂಡತಿ ಪಾತ್ರದಲ್ಲಿ ದೇವರಾಜ್​ ಮತ್ತು ಉಮಾಶ್ರೀ (Umashree) ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್​ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸೆಬಾಸ್ಟಿಯನ್​ ಡೇವಿಡ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಕಾಂತಲಕ್ಷ್ಮೀ ರಮೇಶ್​ ಬಾಬು ಅವರು ನಿರ್ಮಾಣ ಮಾಡಿದ್ದಾರೆ. ಕುಂ. ವೀರಭದ್ರಪ್ಪ ಬರೆದ ಕಥೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಸಿನಿಮಾಗೆ ದೇವರಾಜ್​ ಅವರೇ ಹೀರೋ ಆಗಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತು. ಅವರು ಒಪ್ಪಿಕೊಂಡರೆ ಮಾತ್ರ ಸಿನಿಮಾ ನಿರ್ಮಾಣ ಮಾಡುವುದಾಗಿ ನಿರ್ದೇಶಕರಿಗೆ ರಮೇಶ್​ ಬಾಬು ಹೇಳಿದ್ದರು. ಕುಂ.ವೀ. ಕಥೆಗಳ ಬಗ್ಗೆ ದೇವರಾಜ್​ ಅವರಿಗೆ ವಿಶೇಷ ಭರವಸೆ. ಹಾಗಾಗಿ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು. ಈಗ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

‘ಮಾನ’ ಸಿನಿಮಾದಲ್ಲಿ ದೇವರಾಜ್​ ಅವರು ಜೀತದಾಳು ಪಾತ್ರ ಮಾಡಿದ್ದಾರೆ. ಅವರ ಕಾಸ್ಟ್ಯೂಮ್​ ಕೂಡ ಅದೇ ರೀತಿ ಇದೆ. ಈ ರೀತಿಯ ಬಟ್ಟೆ ಧರಿಸಿ ದೇವರಾಜ್​ ನಟಿಸುತ್ತಾರೋ ಇಲ್ಲವೋ ಎಂಬ ಅಳುಕು ನಿರ್ದೇಶಕರಿಗೆ ಇತ್ತು. ಅದರೆ ಅವರು ಪಾತ್ರಕ್ಕೆ ನ್ಯಾಯ ಸಲ್ಲಿಸುವ ಸಲುವಾಗಿ ಏನು ಬೇಕೋ ಎಲ್ಲವನ್ನೂ ಮಾಡಿದ್ದಾರೆ. ಆರಂಭದಲ್ಲಿ ಈ ಚಿತ್ರದಲ್ಲಿ ನಟಿಸಲು ಉಮಾಶ್ರೀ ಒಪ್ಪಿಕೊಂಡಿರಲಿಲ್ಲ. ಆದರೆ ದೇವರಾಜ್​ ಹೀರೋ ಎಂಬುದು ಗೊತ್ತಾದ ಬಳಿಕ ಅವರು ಒಪ್ಪಿಕೊಂಡರು.

ಒಂದು ಕಲಾತ್ಮಕ ಸಿನಿಮಾ ರೀತಿಯಲ್ಲಿ ‘ಮಾನ’ ಮೂಡಿಬಂದಿದೆ. ಆದರೆ ಈ ಸಿನಿಮಾದಲ್ಲಿ ಹಾಸ್ಯ ಕೂಡ ಚೆನ್ನಾಗಿದೆ. ಅದು ಜನರಿಗೆ ಇಷ್ಟವಾದರೆ ಇದು ಕಮರ್ಷಿಯಲ್​ ಸಿನಿಮಾ ಆಗಲಿದೆ ಎಂಬುದು ದೇವರಾಜ್​ ಅಭಿಪ್ರಾಯ. ಈ ರೀತಿಯ ಪಾತ್ರಗಳು ದೇವರಾಜ್​ ಅವರಿಗೆ ಹೊಸದಲ್ಲ. ರಂಗಭೂಮಿಯ ಹಿನ್ನೆಲೆಯಿಂದ ಬಂದ ಅವರು ತಮ್ಮ ಸಿನಿಮಾ ಜರ್ನಿಯ ಆರಂಭದ ದಿನಗಳಲ್ಲಿ ಇಂಥ ಅನೇಕ ಪಾತ್ರಗಳನ್ನು ಮಾಡಿದ್ದರು. ಈಗ ‘ಮಾನ’ ಮೂಲಕ ಮತ್ತೆ ಅಂಥ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಕಥೆ ಉಮಾಶ್ರೀ ಅವರಿಗೆ ಹೆಚ್ಚು ಇಷ್ಟ ಆಗಿದೆ. ‘ಕುಂ.ವೀ. ಕಥೆ ಮತ್ತು ದೇವರಾಜ್​ ನಟಿಸುವ ಸಿನಿಮಾ ಎಂದರೆ ಅದಕ್ಕೊಂದು ತೂಕ ಇರತ್ತೆ. ಈ ಪಾತ್ರದಲ್ಲಿ ದೇವರಾಜ್​ ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ. ಸಮಾಜದಲ್ಲಿ ಇಂದಿಗೂ ದೌರ್ಜನ್ಯಗಳು ನಡೆಯುತ್ತಿವೆ. ನಗರಗಳಲ್ಲೂ ಅದು ಇದೆ. ನಾವು ಕೂಡ ಕಂಡಿರುವುದರಿಂದ ಈ ಸಿನಿಮಾ ಒಪ್ಪಿಕೊಂಡೆ. ಇಂಥ ಸಿನಿಮಾಗಳಿಂದ ಒಂದಷ್ಟು ಜನರ ಮನಸ್ಸು ಮತ್ತು ಬದುಕು ಪರಿವರ್ತನೆ ಆಗಲಿದೆ ಅಂತ ನಿರೀಕ್ಷಿಸುತ್ತೇನೆ’ ಎಂದು ಉಮಾಶ್ರೀ ಹೇಳಿದ್ದಾರೆ.

ಟೀಸರ್​ ಬಿಡುಗಡೆ ಕಾರ್ಯಕ್ರಮಕ್ಕೆ ಆನಂದ್​ ಗುರೂಜಿ ಮತ್ತು ಪ್ರಜ್ವಲ್​ ದೇವರಾಜ್​ ಅವರು ಅತಿಥಿಗಳಾಗಿ ಆಗಮಿಸಿದ್ದರು. ಪಳನಿ ಡಿ. ಸೇನಾಪತಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿಜೋ ಕೆ. ಜೋಸ್​ ಛಾಯಾಗ್ರಹಣ, ಶಿವಪ್ರಸಾದ್​ ಯಾದವ್ ಸಂಕಲನ​ ಮಾಡಿದ್ದಾರೆ.

ಇದನ್ನೂ ಓದಿ:

ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’

ನಾವೆಲ್ಲರೂ ಮಾಲಾಶ್ರೀಗೆ ಬೆಂಬಲವಾಗಿ ನಿಂತುಕೊಳ್ತೀವಿ; ದೇವರಾಜ್​ ಭಾವುಕ ನುಡಿ

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ