Sign In

By signing in or creating an account, you agree with Associated Broadcasting Company's Terms & Conditions and Privacy Policy.

34 ವರ್ಷದ ಹಿಂದಿನ ಚೊಚ್ಚಲ ಸಿನಿಮಾ ಸಂಭ್ರಮದಲ್ಲಿ ಸೈನಿಕರನ್ನ ನೆನೆದ ಶಿವಣ್ಣ

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಇಂದು ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ ಶಿವಣ್ಣ ನಟಿಸಿದ ಚೊಚ್ಚಲ ಚಿತ್ರ ಆನಂದ್ ಬಿಡುಗಡೆಯಾಗಿ ಇಂದಿಗೆ 34 ವರ್ಷ ಆಗಿದೆ. ಬಾಲ ನಟನಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ರೂ, ಶಿವಣ್ಣ ನಾಯಕನಾಗಿ ತೆರೆಮೇಲೆ ಕಂಡ ಮೊದಲ ಸಿನಿಮಾ ಆನಂದ್. ಹೀಗಾಗಿ ಚಿತ್ರರಂಗದ ಗಣ್ಯರೆಲ್ಲರೂ ಶಿವಣ್ಣ ಹಾಗೂ ಸುಧಾರಾಣಿ ಜೋಡಿಗೆ ಶುಭಾಶಯಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಅಣ್ಣಾವ್ರ ಮೊದಲ ಪುತ್ರ ನಾಯಕನಾಗಿ ತೆರೆಮೇಲೆ ಬರ್ತಾರೆ ಅಂದಾಗ ಅಂದು ಸಹಜವಾಗೇ ಕುತೂಹಲವಿತ್ತು. ಸಿನಿಮಾ ಹೇಗಿರ್ಬಹುದು? ಆ್ಯಕ್ಷನ್ ಸಿನಿಮಾನಾ? […]

34 ವರ್ಷದ ಹಿಂದಿನ ಚೊಚ್ಚಲ ಸಿನಿಮಾ ಸಂಭ್ರಮದಲ್ಲಿ ಸೈನಿಕರನ್ನ ನೆನೆದ ಶಿವಣ್ಣ
Follow us
ಸಾಧು ಶ್ರೀನಾಥ್​
|

Updated on: Jun 19, 2020 | 5:55 PM

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಇಂದು ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ ಶಿವಣ್ಣ ನಟಿಸಿದ ಚೊಚ್ಚಲ ಚಿತ್ರ ಆನಂದ್ ಬಿಡುಗಡೆಯಾಗಿ ಇಂದಿಗೆ 34 ವರ್ಷ ಆಗಿದೆ. ಬಾಲ ನಟನಾಗಿ ಶ್ರೀ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ರೂ, ಶಿವಣ್ಣ ನಾಯಕನಾಗಿ ತೆರೆಮೇಲೆ ಕಂಡ ಮೊದಲ ಸಿನಿಮಾ ಆನಂದ್. ಹೀಗಾಗಿ ಚಿತ್ರರಂಗದ ಗಣ್ಯರೆಲ್ಲರೂ ಶಿವಣ್ಣ ಹಾಗೂ ಸುಧಾರಾಣಿ ಜೋಡಿಗೆ ಶುಭಾಶಯಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ.

ಅಣ್ಣಾವ್ರ ಮೊದಲ ಪುತ್ರ ನಾಯಕನಾಗಿ ತೆರೆಮೇಲೆ ಬರ್ತಾರೆ ಅಂದಾಗ ಅಂದು ಸಹಜವಾಗೇ ಕುತೂಹಲವಿತ್ತು. ಸಿನಿಮಾ ಹೇಗಿರ್ಬಹುದು? ಆ್ಯಕ್ಷನ್ ಸಿನಿಮಾನಾ? ಲವ್ವಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳನ್ನ ಹೊತ್ತು ಚಿತ್ರಮಂದಿರಕ್ಕೆ ನುಗ್ಗಿದ್ದ ಜನರು ಟುವ್ವಿ ಟುವ್ವಿ ಅಂತ ಹಾಡುತ್ತಾ ಚಿತ್ರಮಂದಿರದಿಂದ ಹೊರಕ್ಕೆ ಬಂದಿದ್ದರು.

ಶಿವರಾಜ್​ಕುಮಾರ್ ಬಣ್ಣ ಹಚ್ಚಿ ಆನಂದ್ ಅವತಾರವೆತ್ತಿ ಬಂದಾಗ ಕನ್ನಡ ಚಿತ್ರರಂಗ ಮನಸಾರೆ ಕೈ ಬೀಸಿ ಕರೆಯಿತು. ಇಲ್ಲಿಂದ ಶಿವಣ್ಣ ನಟಿಸಿದ ಮುಂದಿನ ಎರಡೂ ಸಿನಿಮಾ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಕೂಡ ಬ್ಲಾಕ್​ಬಸ್ಟರ್ ಹಿಟ್ ಆಯ್ತು. ಹೀಗಾಗಿ ಅಭಿಮಾನಿಗಳು ಪ್ರೀತಿಯಿಂದ ಹ್ಯಾಟ್ರಿಕ್ ಹೀರೋ ಅಂತ ಬಿರುದು ನೀಡಿದ್ರು. ಶಿವಣ್ಣ ಹಾಗೂ ಸುಧಾರಾಣಿ ಜೋಡಿ ಕನ್ನಡ ಚಿತ್ರರಂಗದ ಬೆಸ್ಟ್ ಪೇರ್ ಆಯ್ತು.

ಶಿವಣ್ಣ ಮೊದಲ ಸಿನಿಮಾ ಆನಂದ್​ 34 ವರ್ಷಗಳನ್ನ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಆದ್ರೆ ಇನ್ನೊಂದ್ಕಡೆ ಚೀನಾ ಸೈನಿಕರೊಂದಿಗೆ ಹೋರಾಡಿ ಹುತಾತ್ಮರಾದ ಸೈನಿಕರಿಗೆ ಮನ ಮಿಡಿದಿದ್ದಾರೆ.

ನಾನು ಅನ್ನೋ ಸ್ವಾರ್ಥ ಇಲ್ಲದೆ ನಾವು ಅನ್ನೋ ನಿಸ್ವಾರ್ಥ ಜೀವಗಳೇ ನಮ್ಮ ಸೈನಿಕರು. ಈ ದುರಂತ ಘಟನೆಯ ಅನ್ಯಾಯಕ್ಕೆ ಇನ್ನು ಮುಂದೆ ಯೋಧರ ಕುಟುಂಬಗಳಿಗೆ ಪ್ರತಿಯೊಬ್ಬ ಭಾರತೀಯ ನಾಗರಿಕರು ಜವಾಬ್ದಾರರು. ಹೀಗಂತ ಸೆಂಚುರಿ ಸ್ಟಾರ್ ಸೈನಿಕರ ಕುಟುಂಬಗಳಿಗೆ ಸಾಂತ್ವಾನ ಹೇಳಿ, ಚೀನಾದ ಮೋಸಕ್ಕೆ ಧಿಕ್ಕಾರವೆಂದಿದ್ದಾರೆ -ಮುರಳಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !