AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಿವರಾಜ್​ಕುಮಾರ್ ತಾಯಿಯಾಗಿ ಗುರುತಿಸಿದ್ರು’; 80ರ ದಶಕದ ಕಥೆ ಹೇಳಿಕೊಂಡಿದ್ದ ಪಾರ್ವತಮ್ಮ

Shivarajkumar Birthday: ಪಾರ್ವತಮ್ಮ ಅವರು ರಾಜ್ ಕುಮಾರ್ ಅವರ ಪತ್ನಿ ಮತ್ತು ಶಿವರಾಜ್ ಕುಮಾರ್ ಅವರ ತಾಯಿಯಾಗಿ ಹೆಚ್ಚು ಗುರುತಿಸಲ್ಪಟ್ಟರು. ಶಿವರಾಜ್ ಕುಮಾರ್ ಅವರ ಚಿತ್ರರಂಗ ಪ್ರವೇಶದ ನಂತರ, ಅವರನ್ನು "ಶಿವರಾಜ್ ಕುಮಾರ್ ಅವರ ತಾಯಿ" ಎಂದು ಕರೆಯಲಾರಂಭಿಸಿದ್ದು ಅವರಿಗೆ ಸಂತೋಷವನ್ನು ನೀಡಿತು. ಈ ಬಗ್ಗೆ ಅವರ ಅಪರೂಪದ ಸಂದರ್ಶನವೊಂದು ಈಗ ಮತ್ತೆ ಸುದ್ದಿಯಾಗಿದೆ.

‘ಶಿವರಾಜ್​ಕುಮಾರ್ ತಾಯಿಯಾಗಿ ಗುರುತಿಸಿದ್ರು’; 80ರ ದಶಕದ ಕಥೆ ಹೇಳಿಕೊಂಡಿದ್ದ ಪಾರ್ವತಮ್ಮ
ಶಿವಣ್ಣ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jul 12, 2025 | 7:35 AM

Share

ಪಾರ್ವತಮ್ಮ ಅವರು ನಿರ್ಮಾಪಕಿ ಆಗಿ ಹೆಚ್ಚು ಗುರುತಿಸಿಕೊಂಡಿದ್ದರು. ಅವರನ್ನು ಅನೇಕರು ರಾಜ್​ಕುಮಾರ್ ಪತ್ನಿ ಎಂದು ಗುರುತಿಸುತ್ತಿದ್ದರು. ಯಾವಾಗ ಶಿವರಾಜ್​ಕುಮಾರ್ ಚಿತ್ರರಂಗದಲ್ಲಿ ಮಿಂಚಿದರೋ ಆಗ ‘ಶಿವರಾಜ್​ಕುಮಾರ್ ಅಮ್ಮ ಇವರು’ ಎಂದು ಗುರುತಿಸಲು ಆರಂಭಿಸಿದರಂತೆ. ಈ ಬಗ್ಗೆ ಪಾರ್ವತಮ್ಮ ಅವರಿಗೆ ಖುಷಿ ಇತ್ತು. ಈ ಬಗ್ಗೆ ಹಳೆಯ ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ಇಂದು (ಜುಲೈ 12) ಶಿವರಾಜ್​ಕುಮಾರ್ ಜನ್ಮದಿನ. ಈ ವೇಳೆ ಈ ಹಳೆಯ ಘಟನೆಯನ್ನು ನೆನಪಿಸಿಕೊಳ್ಳೋಣ.

ಆಗಿನ ಕಾಲದಲ್ಲಿ ಈ ರೀತಿ ಮಾಧ್ಯಮಗಳು, ಯೂಟ್ಯೂಬ್ ಇರಲಿಲ್ಲ. ಸೆಲೆಬ್ರಿಟಿಗಳು ನೀಡುವ ಸಂದರ್ಶನ ಟಿವಿಯಲ್ಲಿ ಪ್ರಸಾರ ಮಾಡಲು ಕೆಲವೇ ಮಾಧ್ಯಮಗಳು ಇದ್ದವು. ಈಗ ಶಿವರಾಜ್​ಕುಮಾರ್ ಹಾಗೂ ಪಾರ್ವತಮ್ಮ ಅವರ ಅಪರೂಪದ ಸಂದರ್ಶನ ಒಂದು ಸಿಕ್ಕಿದೆ. ‘ಆನಂದ್’ ಹಿಟ್ ಆದ ಬಳಿಕ ಶಿವಣ್ಣ ಅವರು ಈ ಸಂದರ್ಶನ ನೀಡಿದ್ದರು.

‘ಶಿವರಾಜ್​ಕುಮಾರ್ ತಾಯಿ ಎಂದು ಕೆಲವರು ಹೇಳಿದರು. ಶಿವರಾಜ್​ಕುಮಾರ್ ತಾಯಿ ಅಂತೀರಲ್ಲೋ, ಅವರು ಮೊದಲು ರಾಜ್​ಕುಮಾರ್ ಪತ್ನಿ ಎಂದು ಅವರಿಗೆ ಹೇಳಲಾಯಿತು. ನನಗೆ ಶಿವರಾಜ್​ಕುಮಾರ್ ತಾಯಿ ಎಂದರೂ ಖುಷಿ ಆಗುತ್ತದೆ, ರಾಜ್​ಕುಮಾರ್ ಪತ್ನಿ ಎಂದರೂ ಖುಷಿ ಆಗುತ್ತದೆ’ ಎಂದು ಪಾರ್ವತಮ್ಮ ಹೇಳಿದ್ದರು. ‘ಯಾವುದು ಹೆಚ್ಚು, ಯಾವುದು ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಪಾರ್ವತಮ್ಮ ಅವರು ವಿವರಿಸಿದ್ದರು.

ಇದನ್ನೂ ಓದಿ
Image
ಶಿವಣ್ಣ ಹುಟ್ಟಿದ ಬಳಿಕ ಸಂಜೆಯಿಂದ ಬೆಳಗ್ಗಿನವರೆಗೆ ಸ್ವೀಟ್ ಹಂಚಿದ್ದ ರಾಜ್​
Image
ದಳಪತಿ ವಿಜಯ್ ಚಿತ್ರದಲ್ಲಿ ನನ್ನ ಪಾತ್ರ ವೇಸ್ಟ್ ಮಾಡಿದರು; ಸಂಜಯ್ ದತ್ ಬೇಸರ
Image
ನಟ ದರ್ಶನ್ ಬಳಿಯೂ ಇತ್ತು ಹಮ್ಮರ್; ಮಾರಿದ್ದು ಏಕೆ?
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ದೊಡ್ಡ ತಿರುವು; ಭೂಮಿಕಾಗೆ ಅವಳಿ ಮಕ್ಕಳು

ಶಿವರಾಜ್​ಕುಮಾರ್ ಅವರು ಬಣ್ಣದ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಬಾರಿ ಅವರಿಗೆ ಬರ್ತ್​ಡೇ ವಿಶೇಷ. ಏಕೆಂದರೆ ಅವರು ಕ್ಯಾನ್ಸರ್​ನ ಎದುರಿಸಿ ಬಂದಿದ್ದಾರೆ. ಅವರು ಕ್ಯಾನ್ಸರ್ ಸಂಪೂರ್ಣ ಗೆದ್ದಿರುವುದರಿಂದ ಸಾವು ಗೆದ್ದು ಬಂದಂತೆ ಆಗಿದೆ ಆಗಿದೆ ಎನ್ನಬಹುದು. ಆದರೆ, ಅವರು ದೊಡ್ಡ ಮಟ್ಟದಲ್ಲಿ ಬರ್ತ್ಡೇ ಆಚರಿಸಿಕೊಳ್ಳಲು ಯಾವಾಗಲೂ ಆದ್ಯತೆ ನೀಡುವುದಿಲ್ಲ. ಈ ಬಾರಿಯೂ ಅದೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗಿಲ್ಲ. ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ಆ ದಿನ ಆಗಿದ್ದನ್ನು ವಿವರಿಸಿದ ಮಡೆನೂರು ಮನು

ಶಿವರಾಜ್​ಕುಮಾರ್ ಬರ್ತ್​ಡೇ ಪ್ರಯುಕ್ತ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಇದೆ. ಪರಭಾಷೆಯಲ್ಲೂ ಅವರು ನಟಿಸುತ್ತಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:34 am, Sat, 12 July 25

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ