AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pavithra Gowda: ಪವಿತ್ರಾ ಗೌಡ ಅತಿ ಆಸೆ ಎಷ್ಟಿತ್ತು ಗೊತ್ತಾ? ಇದುವೇ ಸಾಕ್ಷಿ

ವಿಜಯಲಕ್ಷ್ಮಿ ಅವರು ರೇಂಜ್ ರೋವರ್ ಕಾರು ಖರೀದಿ ಮಾಡಿದರು. ಆ ಬಳಿಕ ತಮಗೂ ಅದೇ ಕಾರು ಬೇಕು ಎಂದು ದರ್ಶನ್ ಬಳಿ ಹಠ ಹಿಡಿದು ಕುಳಿತರು ಪವಿತ್ರಾ ಗೌಡ. ಹೀಗಾಗಿ, ದರ್ಶನ್ ಅವರು ಪವಿತ್ರಾಗೆ ರೇಂಜ್ ರೋವರ್ ಕಾರನ್ನೇ ಕೊಡಿಸಿದರು. ಪವಿತ್ರಾ ಗೌಡ ಅವರ ಅತಿಆಸೆ ಯಾವ ಮಟ್ಟಕ್ಕೆ ಬೆಳೆದಿತ್ತು ಅನ್ನೋದಕ್ಕೆ ಈ ಘಟನೆಗಳೇ ಸಾಕ್ಷಿ.

Pavithra Gowda: ಪವಿತ್ರಾ ಗೌಡ ಅತಿ ಆಸೆ ಎಷ್ಟಿತ್ತು ಗೊತ್ತಾ? ಇದುವೇ ಸಾಕ್ಷಿ
ಪವಿತ್ರಾ ಗೌಡ
Mangala RR
| Edited By: |

Updated on: Jun 20, 2024 | 12:08 PM

Share

ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ (Vijayalakshmi) ಹಾಯಾಗಿ ಸಂಸಾರ ನಡೆಸುತ್ತಿದ್ದರು. ಆಗ ಎಂಟ್ರಿ ಆಗಿದ್ದು ಪವಿತ್ರಾ ಗೌಡ. ಪವಿತ್ರಾ ಜೊತೆ ದರ್ಶನ್ ಸಾಕಷ್ಟು ಆಪ್ತತೆ ಬೆಳೆಸಿಕೊಂಡರು. ಇದು ವಿಜಯಲಕ್ಷ್ಮಿ ಕೋಪಕ್ಕೆ ಕಾರಣವಾಗಿತ್ತು. ವಿಜಯಲಕ್ಷ್ಮಿ ಹಾಗೂ ಪವಿತ್ರಾ ಓಪನ್ ಆಗಿ ಕಿತ್ತಾಡಿಕೊಂಡಿದ್ದು ಇದೆ. ಈ ಮಧ್ಯೆ ಪವಿತ್ರಾ ಗೌಡ ಅವರ ಅತಿಆಸೆ ಯಾವ ಮಟ್ಟಕ್ಕೆ ಬೆಳೆದಿತ್ತು ಅನ್ನೋದಕ್ಕೆ ಈ ಘಟನೆಗಳೇ ಸಾಕ್ಷಿ.

ಮೈ ಫ್ರೆಶ್ ಬಾಸ್ಕೆಟ್ ಎಂಬ ಆ್ಯಪ್ ಲಾಂಚ್ ಮಾಡಿದ್ದ ವಿಜಯಲಕ್ಷ್ಮಿ, ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಆನ್​ಲೈನ್ ಮೂಲಕ ಮಾರಾಟ ಮಾಡಲು ಆರಂಭಿಸಿದರು. ಇದರಿಂದ ಪವಿತ್ರಾಗೆ ಹೊಟ್ಟೆ ಉರಿ ಆರಂಭ ಆಗಿತ್ತು. ಹೀಗಾಗಿ, ತಮಗೂ ಒಂದು ಉದ್ಯಮ ಬೇಕು ಎಂದು ಆಸೆ ಪಟ್ಟರು. ಆ ಬಳಿಕ ಪವಿತ್ರಾ ಗೌಡ ಅವರು ರೆಡ್ ಕಾರ್ಪೆಟ್ ಹೆಸರಿನ ಬೊಟಿಕ್ ಆರಂಭಿಸಿದರು.

ವಿಜಯಲಕ್ಷ್ಮಿ ಅವರು ರೇಂಜ್ ರೋವರ್ ಕಾರು ಖರೀದಿ ಮಾಡಿದರು. ಆ ಬಳಿಕ ತಮಗೂ ಅದೇ ಕಾರು ಬೇಕು ಎಂದು ದರ್ಶನ್ ಬಳಿ ಹಠ ಹಿಡಿದು ಕುಳಿತರು ಪವಿತ್ರಾ ಗೌಡ. ಹೀಗಾಗಿ, ದರ್ಶನ್ ಅವರು ಪವಿತ್ರಾಗೆ ರೇಂಜ್ ರೋವರ್ ಕಾರನ್ನೇ ಕೊಡಿಸಿದರು. ವಿಜಯಲಕ್ಷ್ಮಿ ಹತ್ತಿರ ಏನೆಲ್ಲ ಇದೆಯೋ ಅದು ತಮಗೂ ಬೇಕು ಎಂದು ಪವಿತ್ರಾ ಗೌಡ ಹೇಳುತ್ತಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ?

ಸೇಮ್ ಡ್ರೇಸ್, ಒಡವೆ, ಕಾರ್ ಎಲ್ಲವೂ ಬೇಕು ಎಂದು ಪವಿತ್ರಾ ಗೌಡ ಡಿಮ್ಯಾಂಡ್ ಮಾಡುತ್ತಿದ್ದರು. ವಿಜಯಲಕ್ಷ್ಮಿ ಪೋಟೋ ಹಾಕುತ್ತಿದ್ದ ಹಾಗೆ ಪವಿತ್ರಾ ಬಳಿಯು ಅದೇ ರೀತಿಯ ಡ್ರೆಸ್, ಒಡವೆ ಇರುತ್ತಿತ್ತು.  ವಿಜಯಲಕ್ಷ್ಮಿ ತಮ್ಮ ಗೆಳೆತಿಯರ ಜೊತೆ ‘ಕಾಟೇರ’ ಶೋ ಹಾಕಿಸಿಕೊಂಡು ನೋಡಿದ್ದರು ಎನ್ನಲಾಗಿದೆ. ಇದನ್ನು ತಿಳಿದು ಪವಿತ್ರಾ ತಾವು ಕೂಡ ಅದೇ ರೀತಿ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು