Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ರಾಜ್​ಕುಮಾರ್​ ಬಯೋಪಿಕ್ ಪ್ಲ್ಯಾನ್ ಬಗ್ಗೆ ಮಾತಾಡಿದ ಸಂತೋಷ್ ಆನಂದ್​ರಾಮ್

‘ಪವರ್ ಸ್ಟಾರ್​’ ಪುನೀತ್ ರಾಜ್​ಕುಮಾರ್​ ಅವರ ಜೀವನದ ಕುರಿತು ಸಿನಿಮಾ ಮೂಡಿಬರಬೇಕು ಎಂಬುದು ಅಭಿಮಾನಿಗಳ ಆಸೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಸಂತೋಷ್ ಆನಂದ್​ರಾಮ್ ಅವರು ಆಲೋಚನೆ ಮಾಡಿದ್ದಾರೆ. ತಮ್ಮ ಮುಂದಿನ ಪ್ಲ್ಯಾನ್ ಬಗ್ಗೆ ಅವರು ಮಾತಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..

ಪುನೀತ್ ರಾಜ್​ಕುಮಾರ್​ ಬಯೋಪಿಕ್ ಪ್ಲ್ಯಾನ್ ಬಗ್ಗೆ ಮಾತಾಡಿದ ಸಂತೋಷ್ ಆನಂದ್​ರಾಮ್
Santhosh Ananddram, Puneeth Rajkumar
Follow us
Mangala RR
| Updated By: ಮದನ್​ ಕುಮಾರ್​

Updated on: Mar 14, 2025 | 12:12 PM

ನಟ ಪುನೀತ್ ರಾಜ್​ಕುಮಾರ್​ (Puneeth Rajkumar) ಅವರನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಭೌತಿಕವಾಗಿ ಇಲ್ಲದಿದ್ದರೂ ಕೂಡ ಫ್ಯಾನ್ಸ್ ಮನದಲ್ಲಿ ಅವರು ಶಾಶ್ವತವಾಗಿ ನೆಲೆಸಿರುತ್ತಾರೆ. ಇಂದು (ಮಾರ್ಚ್​ 14) ಪುನೀತ್ ನಟನೆಯ ‘ಅಪ್ಪು’ ಸಿನಿಮಾ ಮರು ಬಿಡುಗಡೆ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಬಂದು ಸಿನಿಮಾ ನೋಡುತ್ತಿದ್ದಾರೆ. ಪುನೀತ್ ಜೊತೆ ಹೆಚ್ಚು ಆಪ್ತತೆ ಹೊಂದಿದ್ದ ನಿರ್ದೇಶಕ ಸಂತೋಷ್ ಆನಂದ್​ರಾಮ್ (Santhosh Ananddram) ಅವರು ಕೂಡ ‘ಅಪ್ಪು’ ಚಿತ್ರ ನೋಡಲು ಬಂದಿದ್ದಾರೆ. ಈ ವೇಳೆ ಟಿವಿ9 ಜೊತೆ ಮಾತನಾಡಿ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್​ಕುಮಾರ್​ ಅವರ ಬಯೋಪಿಕ್ (Puneeth Rajkumar Biopic) ಮಾಡುವ ಕುರಿತು ಸಂತೋಷ್ ಆನಂದ್​ರಾಮ್ ಮಾತನಾಡಿದ್ದಾರೆ.

ಪುನೀತ್ ರಾಜ್​ಕುಮಾರ್​ ಅವರ ಜೀವನದ ಕುರಿತು ಸಿನಿಮಾ ಮಾಡುವ ಆಲೋಚನೆ ಸಂತೋಷ್ ಆನಂದ್​ರಾಮ್ ಅವರಿಗೆ ಇದೆ. ಆ ಕುರಿತು ಅವರು ವಿವರ ಹಂಚಿಕೊಂಡಿದ್ದಾರೆ. ‘ಅವರ ಜೊತೆ ನಾನು ಮಾಡಿದ 2 ಸಿನಿಮಾಗಳು ಹಿಟ್ ಆದವು. ನನ್ನ ಬರವಣಿಗೆಯಲ್ಲಿ ಅಪ್ಪು ಅವರನ್ನು ಬಣ್ಣಿಸಿದ ಖುಷಿ ನನಗೆ ಇದೆ. ನಾನು ಇರುವವರೆಗೂ ನನ್ನ ಬರವಣಿಗೆ ಅವರ ಕುರಿತು ಇದ್ದೇ ಇರುತ್ತದೆ. ಅವರ ಬಗ್ಗೆ ಸಿನಿಮಾ ಮಾಡಿ ಎಂದು ಫ್ಯಾನ್ಸ್ ಯಾವಾಗಲೂ ಕೇಳುತ್ತಾರೆ’ ಎಂದಿದ್ದಾರೆ ಸಂತೋಷ್ ಆನಂದ್​ರಾಮ್​.

‘ಇಂದು ಎಐ ಟೆಕ್ನಾಲಜಿ ಇದೆ. ಮುಂದಿನ ದಿನಗಳಲ್ಲಿ ಆ ದೇವರು ಅವಕಾಶ ಕೊಟ್ಟರೆ, ಅಪ್ಪು ಅವರ ಚರಿತ್ರೆಯನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ನಾನು ಮಾಡಬೇಕು ಎಂಬುದನ್ನು ಈಗ ತುಂಬ ಗಂಭೀರವಾಗಿ ಪರಿಗಣಿಸಿದ್ದೇನೆ. ಹೊಂಬಾಳೆ ಫಿಲ್ಮ್ಸ್​ ಮೂಲಕ ನಾನು ಮತ್ತು ಪುನೀತ್ ಅವರು 5 ಸಿನಿಮಾ ಮಾಡಬೇಕು ಅಂತ ಪ್ಲ್ಯಾನ್ ಆಗಿತ್ತು. ಮಾಡಿದ್ದರೆ ರೆಕಾರ್ಡ್ ಆಗುತ್ತಿತ್ತು. ಮೂರು ಮತ್ತು ನಾಲ್ಕನೇ ಸಿನಿಮಾಗೆ ಕಮಿಟ್ ಕೂಡ ಆಗಿದ್ದೆವು. ಆದರೆ ದೇವರ ಆಟ ಬೇರೆಯೇ ಇತ್ತು’ ಎಂದು ಸಂತೋಷ್ ಆನಂದ್​ರಾಮ್ ಹೇಳಿದ್ದಾರೆ.

ಇದನ್ನೂ ಓದಿ
Image
ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ
Image
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
Image
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
Image
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಅವರ ಸ್ಟಂಟ್ ಅನ್ನು ‘ಅಪ್ಪು ವೆಂಕಟೇಶ್’ ನೆನಪಿಸಿಕೊಂಡಿದ್ದು ಹೀಗೆ

ಪುನೀತ್ ರಾಜ್​ಕುಮಾರ್​ ಕುರಿತು ಪುಸ್ತಕ ಕೂಡ ಸಿದ್ಧವಾಗುತ್ತಿದೆ. ಆ ಬಗ್ಗೆ ಸಹ ಸಂತೋಷ್ ಆನಂದ್​ರಾಮ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಪುನೀತ್ ಹುಟ್ಟುಹಬ್ಬಕ್ಕೆ ಬುಕ್ ಬರಲಿದೆ. ಪ್ರಕೃತಿ ಬನವಾಸಿ ಅವರು ಬರೆಯುತ್ತಿದ್ದಾರೆ. ಅಶ್ವಿನಿ ಮೇಡಂ ನಿಂತು ಆ ಕೆಲಸ ಮಾಡಿಸುತ್ತಿದ್ದಾರೆ. ಆ ಪುಸ್ತಕದಿಂದ ಪುನೀತ್ ಅವರ ವ್ಯಕ್ತಿತ್ವದ ಬಗ್ಗೆ ಜನರಿಗೆ ಇನ್ನಷ್ಟು ಗೊತ್ತಾಗುತ್ತದೆ. ನಾವು ಎಷ್ಟು ಸಾಧ್ಯವೋ ಅಷ್ಟು ಅವರನ್ನು ನೆನಪಿಸಿಕೊಳ್ಳುತ್ತಾ ಇರುತ್ತೇವೆ’ ಎಂದಿದ್ದಾರೆ ಸಂತೋಷ್ ಆನಂದ್​ರಾಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.