AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಿಕಾನ ಮೊದಲ ಬಾರಿಗೆ ಮನೆಗೆ ಕರೆತಂದಾಗ ಯಶ್​ಗೆ ಷರತ್ತು ಹಾಕಿದ್ದ ತಾಯಿ ಪುಷ್ಪಾ

ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಅನೇಕರಿಗೆ ಮಾದರಿ. 9 ವರ್ಷಗಳ ದಾಂಪತ್ಯದ ನಂತರವೂ ಇವರ ಪ್ರೇಮಕಥೆ ಕುತೂಹಲಕಾರಿ. ಕಿರುತೆರೆಯಿಂದ ಬೆಳೆದ ಇವರ ಪ್ರೀತಿ, ವರಮಹಾಲಕ್ಷ್ಮಿ ಹಬ್ಬದಂದು ಯಶ್ ತಮ್ಮ ತಾಯಿಗೆ ರಾಧಿಕಾರನ್ನು ಪರಿಚಯಿಸಿದ ರೀತಿ, ಮತ್ತು ಯಶ್ ತಾಯಿ ಪುಷ್ಪಾ ಅವರ ಷರತ್ತಿನ ಮೂಲಕ ರಾಧಿಕಾರನ್ನು ಸೊಸೆಯಾಗಿ ಒಪ್ಪಿಕೊಂಡ ಕಥೆಯನ್ನು ಯಶ್ ಹಂಚಿಕೊಂಡಿದ್ದಾರೆ.

ರಾಧಿಕಾನ ಮೊದಲ ಬಾರಿಗೆ ಮನೆಗೆ ಕರೆತಂದಾಗ ಯಶ್​ಗೆ ಷರತ್ತು ಹಾಕಿದ್ದ ತಾಯಿ ಪುಷ್ಪಾ
ಯಶ್,ರಾಧಿಕಾ,ಪುಷ್ಪಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 22, 2025 | 7:58 AM

Share

ರಾಧಿಕಾ ಪಂಡಿತ್ ಹಾಗೂ ಯಶ್ (Yash) ಅವರು ಎಷ್ಟು ಅನ್ಯೋನ್ಯವಾಗಿದ್ದಾರೆ ಎಂದು ಹೊಸದಾಗಿ ಹೇಳಬೇಕಾಗಿಲ್ಲ. ಈ ದಂಪತಿ ಅನೇಕರಿಗೆ ಮಾದರಿ. ಕುಟುಂಬದವರು ಒಪ್ಪಿ ಮದುವೆ ಆಗಿ ಇವರ ದಾಂಪತ್ಯಕ್ಕೆ ಈಗ 9 ವರ್ಷ. ಇತ್ತೀಚೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ವಿವಾಹ ವಾರ್ಷಿಕೋತ್ಸವ ಅನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇವರ ಪ್ರೇಮ ಕಥೆ ಬಗ್ಗೆ ಯಶ್ ಮಾತನಾಡಿದ್ದರು. ಮನೆಯಲ್ಲಿ ಒಪ್ಪಿದ್ದು ಹೇಗೆ ಎಂದು ಯಶ್ ಹೇಳಿದ್ದರು.

ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಿಗೆ ಕಿರುತೆರೆಯಲ್ಲಿ ನಟಿಸಿದವರು. ನಂತರ ಹಿರಿತೆರೆಯಲ್ಲೂ ಇವರು ಒಟ್ಟಿಗೆ ಸಿನಿಮಾ ಮಾಡಿದರು. ಅಲ್ಲಿಂದ ಇವರ ಬಾಂಡ್ ಬೆಳೆಯಿತು. ‘ಡ್ರಾಮಾ’ ಸಿನಿಮಾ ಸಂದರ್ಭದಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು ಎನ್ನಲಾಗಿದೆ. ಆ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದರು. ಎಲ್ಲಿಯೂ ಹೊರಗೆ ಸಾರ್ವಜನಿಕವಾಗಿ ಸುತ್ತಾಡದೆ, ಯಾರ ಬಾಯಿಗೂ ಆಹಾರ ಆಗದೆ ಅವರು ಮೆಚ್ಚುಗೆ ಪಡೆದರು.

ಹಾಗಾದರೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮನೆಯವರನ್ನು ಒಪ್ಪಿಸಿದ್ದು ಹೇಗೆ? ಯಶ್ ತಾಯಿ ಪುಷ್ಪಾಗೆ ಪ್ರೀತಿ ವಿಷಯ ಹೇಗೆ ಗೊತ್ತಾಯಿತು ಎಂಬುದನ್ನು ಯಶ್ ಅವರು ವಿವರಿಸಿದ್ದರು. ಪ್ರಿಯಾಮಣಿ ಎದುರು ಈ ವಿಷಯ ಹೇಳಿಕೊಂಡಿದ್ದರು. ಆ ಅಪರೂಪದ ವಿಡಿಯೋ ಇಲ್ಲಿದೆ. ವಿಡಿಯೋದಲ್ಲಿ ಹೇಳಿದ್ದು ಏನು ಎಂಬ ವಿಷಯದ ಬಗ್ಗೆ ಇಲ್ಲಿದೆ ಮಾಹಿತಿ.

‘ರಾಧಿಕಾನ ನಾನು ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಗೆ ಕರೆದುಕೊಂಡು ಹೋದೇ. ಆಗ ಮನೆಯವರಿಗೆ ಗೊತ್ತಾಯ್ತು ಏನೋ ಇದೆ ಎಂದು. ನಾನು ಯಾರನ್ನೂ ಹಬ್ಬಕ್ಕೆ ಕರೆದು ತಂದವನಲ್ಲ. ಆಗ ಅಮ್ಮ ಅವಳಿಗೆ ಮನೆಯ ಚಿನ್ನ ಹಾಕಿದರು. ಆ ಚಿನ್ನದ ಸರವನ್ನು ಮನೆಯವರಿಗೆ ಮಾತ್ರ ಕೊಡೋದು. ಆ ಸರನ ರಾಧಿಕಾಗೆ ಅಮ್ಮ ಹಾಕಿದ್ರು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದರು ಯಶ್.

ಇದನ್ನೂ ಓದಿ: ರಾಧಿಕಾ ಪಾಲಿಗೆ ಯಶ್ ಯಾರು? ಒಂದು ವಿಡಿಯೋ ಮೂಲಕ ವಿವರಿಸಿದ ನಟಿ

‘ಏನಾದರೂ ಮಾಡು, ಯಾರನ್ನು ಮೊದಲು ಸೊಸೆ ಎಂದು ಕರೆದುಕೊಂಡು ಬರ್ತಿಯೋ ಅವಳು ಮಾತ್ರ ಸೊಸೆ’ ಎಂದು ಷರತ್ತು ಹಾಕಿದ್ದರು ಪುಷ್ಪಾ. ‘ನೀನು ಗಂಭೀರವಾಗಿದ್ರೆ ಮಾತ್ರ ಇದನ್ನೆಲ್ಲ ಮಾಡಬೇಕು. ನಂತರ ಯಾರನ್ನೇ ಕರೆದುಕೊಂಡು ಬಂದರೂ ಸೇರಿಸಲ್ಲ. ಲವ್ ಎಂದು ಆಗಿದ್ದು ಅದೇ ಮೊದಲಾಗಿತ್ತು. ಅವಳನ್ನೇ ಮದುವೆ ಆದೆ’ ಎಂದಿದ್ದರು ಯಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?