AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ದಾಖಲೆಯ ಅಡ್ವಾನ್ಸ್ ಬುಕಿಂಗ್

Spider Man Brand New Day: ‘ದಿ ಆಡಸ್ಸಿ’ ಸಿನಿಮಾ ಭಾರತದಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ಕಳೆದ ಶನಿವಾರ ಸಹ ಭಾರತದಲ್ಲಿ 14 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ಈಗ ಅದರ ಸ್ಥಾನ ತುಂಬಲು ಮತ್ತೊಂದು ಹಾಲಿವುಡ್ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಬಿಡುಗಡೆ ಆಗುತ್ತಿದೆ. ‘ದಿ ಆಡಸ್ಸಿ’ ಸಿನಿಮಾ ಅನ್ನೂ ಸಹ ಮೀರಿಸುವ ರೀತಿಯ ಅಡ್ವಾನ್ಸ್ ಬುಕಿಂಗ್ ಮಾಡಿದೆ. ಭಾರತದಲ್ಲೂ ಸಹ ‘ಸ್ಪೈಡರ್​​ ಮ್ಯಾನ್’ ಸಿನಿಮಾ ದಾಖಲೆ ಮೊತ್ತದ ಅಡ್ವಾನ್ಸ್ ಬುಕಿಂಗ್ ಆಗಿದೆ.

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ದಾಖಲೆಯ ಅಡ್ವಾನ್ಸ್ ಬುಕಿಂಗ್
Spider Man Brand New Day
ಮಂಜುನಾಥ ಸಿ.
|

Updated on: Jul 28, 2026 | 10:52 AM

Share

ಇತ್ತೀಚೆಗೆ ಬಿಡುಗಡೆ ಆದ ‘ದಿ ಆಡಸ್ಸಿ’ (The Odyssey) ಸಿನಿಮಾ ಭಾರತದಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ಕಳೆದ ಶನಿವಾರ ಸಹ ಭಾರತದಲ್ಲಿ 14 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ಈಗ ಅದರ ಸ್ಥಾನ ತುಂಬಲು ಮತ್ತೊಂದು ಹಾಲಿವುಡ್ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಬಿಡುಗಡೆ ಆಗುತ್ತಿದೆ. ‘ದಿ ಆಡಸ್ಸಿ’ ಸಿನಿಮಾ ಅನ್ನೂ ಸಹ ಮೀರಿಸುವ ರೀತಿಯ ಅಡ್ವಾನ್ಸ್ ಬುಕಿಂಗ್ ಮಾಡಿದೆ. ಭಾರತದಲ್ಲೂ ಸಹ ‘ಸ್ಪೈಡರ್​​ ಮ್ಯಾನ್’ ಸಿನಿಮಾ ದಾಖಲೆ ಮೊತ್ತದ ಅಡ್ವಾನ್ಸ್ ಬುಕಿಂಗ್ ಆಗಿದೆ.

‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವು ಅಧಿಕೃತವಾಗಿ ಜುಲೈ 30 ರಂದು ಭಾರತೀಯ ಥಿಯೇಟರ್‌ಗಳಲ್ಲಿ ಮತ್ತು ಜುಲೈ 31 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಭಾರತದಲ್ಲಿ ಒಂದು ದಿನ ಮುಂಚಿತವಾಗಿಯೇ ಬಿಡುಗಡೆ ಆಗಲಿದೆ. ಜುಲೈ 30 ರಂದು ಥಿಯೇಟರ್‌ಗಳಿಗೆ ಅಪ್ಪಳಿಸಲಿರುವ ಈ ಚಿತ್ರವು, ಬಿಡುಗಡೆಗೆ ಮೂರು ದಿನಗಳ ಮುಂಚೆಯೇ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ. 2023 ರ ನಂತರ ‘ಬುಕ್‌ಮೈಶೋ’ (BookMyShow) ನಲ್ಲಿ ಅತಿ ಹೆಚ್ಚು ಮುಂಗಡ ಬುಕಿಂಗ್ ದಾಖಲಿಸಿದ ಹಾಲಿವುಡ್ ಚಿತ್ರ ಎನಿಸಿಕೊಂಡಿದೆ ‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’.

ಮಾರ್ವೆಲ್-ಸೋನಿ ನಿರ್ಮಾಣದ ಈ ಚಿತ್ರವು ಅಡ್ವಾನ್ಸ್ ಬುಕಿಂಗ್​​ನಲ್ಲಿ 8,00,000 ಟಿಕೆಟ್‌ಗಳನ್ನು ದಾಟಿ ದಾಖಲೆ ಬರೆದಿದೆ. ಹಾಲಿವುಡ್​​ನ ಇನ್ಯಾವುದೇ ಸಿನಿಮಾ ಮುಂಗಡವಾಗಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್​​ಗಳನ್ನು ಭಾರತದಲ್ಲಿ ಮಾರಾಟ ಮಾಡಿರಲಿಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಡೆಡ್‌ಪೂಲ್ & ವೊಲ್ವೆರಿನ್’ ಚಿತ್ರದ ಒಟ್ಟು ಟಿಕೆಟ್ ಸಂಖ್ಯೆಯನ್ನು ಕೇವಲ ಮುಂಗಡ ಬುಕಿಂಗ್​​ನಲ್ಲಿಯೇ ಹಿಂದಿಕ್ಕಿದೆ ‘ಸ್ಪೈಡರ್​ ಮ್ಯಾನ್’. ಆ ಮೂಲಕ ಭಾರತದಲ್ಲಿ ಈ ಸಿನಿಮಾ ಭಾರಿ ದೊಡ್ಡ ಓಪನಿಂಗ್ ಪಡೆದುಕೊಳ್ಳುವ ಭರವಸೆಯನ್ನು ಮೂಡಿಸಿದೆ.

ಇದನ್ನೂ ಓದಿ:‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್

‘ದಿ ಆಡಸ್ಸಿ’ ಇನ್ನೂ ಒಳ್ಳೆಯ ಪ್ರದರ್ಶನ ಮಾಡುತ್ತಿದ್ದರೂ ಸಹ ‘ಸ್ಪೈಡರ್ ಮ್ಯಾನ್’ ಬಗ್ಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಜುಲೈ 17 ರಂದು ಸುಮಾರು 43,000 ಇದ್ದ ಟಿಕೆಟ್ ಮಾರಾಟವು, ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ಜುಲೈ 26 ರಂದು ಗರಿಷ್ಠ 141,000 ಕ್ಕೆ ಏರಿಕೆಯಾಗಿದ್ದು, ಬೇಡಿಕೆಯಲ್ಲಿ ಭಾರಿ ಹೆಚ್ಚಳ ಆಗುತ್ತಲೇ ಸಾಗಿದೆ. ಬೆಂಗಳೂರಿನಲ್ಲಿ ಸಹ ಈಗಾಗಲೇ ಮಲ್ಟಿಪ್ಲೆಕ್ಸ್​ ಚಿತ್ರಮಂದಿರಗಳ ಬಹುತೇಕ ಶೋಗಳು ಹೌಸ್​ ಫುಲ್ ಆಗಿಬಿಟ್ಟಿವೆ.

ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಸರಪಳಿಗಳಲ್ಲಿಯೂ ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಿವಿಆರ್ (PVR), ಐನಾಕ್ಸ್ (INOX) ಮತ್ತು ಸಿನಿಪೊಲಿಸ್ (Cinepolis) ಮಲ್ಟಿಪ್ಲೆಕ್ಸ್ ಗಳಲ್ಲಿ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಈಗಾಗಲೇ ಸುಮಾರು 3.19 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಮುಂಗಡವಾಗಿ ಒಟ್ಟು 16 ಕೋಟಿ ರೂ. ಗಳಿಕೆ ಮಾಡಿದೆ. ಪಿವಿಆರ್ 8.35 ಕೋಟಿ ರೂ. ಮೌಲ್ಯದ 1.57 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಅತಿ ಹೆಚ್ಚು ಕೊಡುಗೆ ನೀಡಿದೆ. ಇದರ ನಂತರ ಐನಾಕ್ಸ್ 4.70 ಕೋಟಿ ರೂ. ಮೌಲ್ಯದ 1.02 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಸಿನಿಪೊಲಿಸ್ ಮತ್ತೊಂದು 60,000 ಟಿಕೆಟ್‌ಗಳೊಂದಿಗೆ 2.95 ಕೋಟಿ ರೂ. ಗಳಿಸಿದೆ. ಈ ಚಿತ್ರವು 4,000 ಕ್ಕೂ ಹೆಚ್ಚು ಶೋಗಳಲ್ಲಿ ಶೇಕಡಾ 36 ರಷ್ಟು ಮುಂಗಡ ಆಕ್ಯುಪೆನ್ಸಿ ದಾಖಲಿಸುತ್ತಿದೆ.

ಟಾಮ್ ಹಾಲೆಂಡ್ ನಟಿಸಿರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’, ‘ಸ್ಪೈಡರ್ ಮ್ಯಾನ್’ ಸರಣಿಯ 12ನೇ ಸಿನಿಮಾ ಆಗಿದೆ. ಹಾಗೂ ಟಾಮ್ ಹಾಲೆಂಡ್ ಅವರ ಏಳನೇ ಸಿನಿಮಾ ಆಗಿದೆ. ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ‘ಸ್ಪೈಡರ್ ಮ್ಯಾನ್’ ಅನ್ನು ಇಡೀ ಜಗತ್ತು ಮರೆತು ಹೋಗಿದೆ, ಆತನ ಗೆಳೆಯ, ಗರ್ಲ್​​ಫ್ರೆಂಡ್ ಸಹ ಸ್ಪೈಡರ್ ಮ್ಯಾನ್ ಬಗ್ಗೆ ಮರೆತು ಹೋಗಿದ್ದಾರೆ. ಜೊತೆಗೆ ಸ್ಪೈಡರ್​ ಮ್ಯಾನ್​​ಗೆ ಹಲವು ಹೊಸ ವೈರಿಗಳು ಹುಟ್ಟುಕೊಂಡಿದ್ದಾರೆ. ಹಲ್ಕ್ ಸಹ ಸ್ಪೈಡರ್​ ಮ್ಯಾನ್​​ಗೆ ಎದುರಾಳಿ ಆಗಿದ್ದಾನೆ. ಸಿನಿಮಾ ಜುಲೈ 30ರಂದು ಭಾರತದಲ್ಲಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್