AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಗ್ನಿಸಾಕ್ಷಿ’ ಪ್ರೋಮೋ ಬಿಡುಗಡೆ; ಬಿಸ್ನೆಸ್​​ಮೆನ್​ ಗೆಟಪ್ನಲ್ಲಿ ಬಂದ ಶಮಂತ್ ಬ್ರೋ ಗೌಡ

ಹೊಸ 'ಅಗ್ನಿಸಾಕ್ಷಿ' ಧಾರಾವಾಹಿ ಪ್ರೋಮೋ ಬಿಡುಗಡೆಯಾಗಿದ್ದು, ಶಮಂತ್ ಬ್ರೋ ಗೌಡ ಹಾಗೂ ವರ್ಷಿಣಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿನ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿಯಂತೆಯೇ ಇದೂ ಜನಮನ ಸೆಳೆಯುವ ನಿರೀಕ್ಷೆಯಿದೆ. ಶಮಂತ್ ಧಿಮಾಕಿನ ಉದ್ಯಮಿಯಾಗಿ, ವರ್ಷಿಣಿ ಸಿಟ್ಟಿಗೆದ್ದ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ನಂತರ ಶಮಂತ್ ಹಾಗೂ 'ಜಯಂ' ನಟಿ ವರ್ಷಿಣಿ ಈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಮರಳಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

‘ಅಗ್ನಿಸಾಕ್ಷಿ’ ಪ್ರೋಮೋ ಬಿಡುಗಡೆ; ಬಿಸ್ನೆಸ್​​ಮೆನ್​ ಗೆಟಪ್ನಲ್ಲಿ ಬಂದ ಶಮಂತ್ ಬ್ರೋ ಗೌಡ
ಅಗ್ನಿಸಾಕ್ಷಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 24, 2026 | 8:22 AM

Share

‘ಅಗ್ನಿಸಾಕ್ಷಿ’ ಧಾರಾವಾಹಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಈ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ, ಪ್ರಿಯಾಂಕಾ, ಮುಖ್ಯಮಂತ್ರಿ ಚಂದ್ರು ನಟಿಸಿದ್ದರು. ಈ ಧಾರಾವಾಹಿಯಿಂದ ವೈಷ್ಣವಿ ಜನಪ್ರಿಯತೆ ಪಡೆದರು. ಈಗ ಹಳೆ ಬಾಟಲಿ, ಹೊಸ ಮದ್ಯ ಎಂಬಂತೆ, ಇದೇ ಟೈಟಲ್ ಒಂದಿಗೆ ಹೊಸ ಪಾತ್ರದ ಮೂಲಕ ‘ಅಗ್ನಿಸಾಕ್ಷಿ’ ಧಾರಾವಾಹಿ ಬರುತ್ತಿದೆ. ಈ ಧಾರಾವಾಹಿಗೆ ಶಮಂತ್ ಬ್ರೋ ಗೌಡ ನಾಯಕನಾದರೆ, ವರ್ಷಿಣಿ ಗೌಡ ನಾಯಕಿ.

‘ಅಗ್ನಿಸಾಕ್ಷಿ’ ಧಾರಾವಾಹಿ ಬರೋದಾಗಿ ಈ ಮೊದಲೇ ಘೋಷಣೆ ಆಗಿತ್ತು. ಈಗ ಪ್ರೋಮೋ ರಿಲೀಸ್ ಆಗಿದೆ. ಈ ಧಾರಾವಾಹಿಯಲ್ಲಿ ಶಮಂತ್ ಬ್ರೋ ಗೌಡ ಅವರು ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಸಾಮಾನ್ಯ ಉದ್ಯಮಿ ಎಂದು ಅಂದುಕೊಳ್ಳಬೇಡಿ. ತುಂಬಾನೇ ಧಿಮಾಕು ಇರುವ ಉದ್ಯಮಿ. ಈಗ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಶಮಂತ್ ಬ್ರೋ ಗೌಡ ಡಿಫೆಂಡರ್ ಕಾರಿನಲ್ಲಿ ಬರುತ್ತಾರೆ. ಈ ವೇಳೆ ಮಳೆ ಬರುತ್ತಾ ಇರುತ್ತದೆ. ವರ್ಷಿಣಿ ಕೈಯಿಂದ ಛತ್ರಿಯನ್ನು ಕಿತ್ತುಕೊಳ್ಳುವ ಶಮಂತ್ ತನ್ನ ಆಫೀಸ್ ಒಳಗೆ ಹೋಗುತ್ತಾನೆ. ಇದರಿಂದ ಸಿಟ್ಟಾಗುವ ವರ್ಷಿಣಿ ಬಂದು ಶಮಂತ್ಗೆ ಬೈಯುತ್ತಾರೆ.ಈ ರೀತಿಯಲ್ಲಿ ಪ್ರೋಮೋ ಇದೆ.

ಇದನ್ನೂ ಓದಿ: ‘ನನ್ನನ್ನೇಕೆ ಕುಳ್ಳಿ ಎಂದೆ’; ‘ಅಗ್ನಿಸಾಕ್ಷಿ’ ರೀಯೂನಿಯನ್​ನಲ್ಲಿ ಸುಕೃತಾ-ವೈಷ್ಣವಿ ಸಖತ್ ಫನ್

ಶಮಂತ್ ಬ್ರೋ ಗೌಡ ಅವರು ‘ಬಿಗ್ ಬಾಸ್’ ಅಲ್ಲಿ ಕಾಣಿಸಿಕೊಂಡರು. ಆ ಬಳಿಕ ಅವರಿಗೆ ‘ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅವರು ನಟಿಸಿದರು. ನಂತರ ಮದುವೆ ಆಗಿ ಒಂದು ಬ್ರೇಕ್ನಲ್ಲಿದ್ದರು. ಈಗ ಈ ಧಾರಾವಾಹಿ ಮೂಲಕ ಮತ್ತೆ ಮರಳಿದ್ದಾರೆ. ಈ ಧಾರಾವಾಹಿಗಾಗಿ ಅಭಿಮಾನಿಗಳು ಕಾದಿದ್ದಾರೆ. ಇನ್ನು, ವರ್ಷಿಣಿ ಗೌಡ ಬಗ್ಗೆ ಹೇಳಲೇಬೇಕು. ಅವರು ‘ಜಯಂ’ ಹೆಸರಿನ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಕನ್ನಡದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಪೂರ್ಣಗೊಂಡ ಬಳಿಕ ಈ ಧಾರಾವಾಹಿ ಪ್ರಸಾರ ಕಾಣಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us