AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಟಿ ಅಂಚು ನೋಡಿ ಶಾಸ್ತ್ರ ಹೇಳಲು ಆರಂಭಿಸಿದ ಗುರೂಜಿ; ನಾಚಿ ನೀರಾದ ಅಮೂಲ್ಯ

ಅಮೂಲ್ಯ ಗೌಡ, ರಾಕೇಶ್ ಹಾಗೂ ಆರ್ಯವರ್ಧನ್ ಗುರೂಜಿ ಒಟ್ಟಾಗಿ ಕುಳಿತಿದ್ದರು. ಈ ವೇಳೆ ಅಮೂಲ್ಯ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ತುಟಿಗೆ ಲಿಪ್​ಸ್ಟಿಕ್ ಹಾಕಿದ್ದರು.

ತುಟಿ ಅಂಚು ನೋಡಿ ಶಾಸ್ತ್ರ ಹೇಳಲು ಆರಂಭಿಸಿದ ಗುರೂಜಿ; ನಾಚಿ ನೀರಾದ ಅಮೂಲ್ಯ
ಅಮುಲ್ಯ-ಆರ್ಯವರ್ಧನ್
TV9 Web
| Edited By: |

Updated on: Oct 07, 2022 | 3:03 PM

Share

ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ‘ಬಿಗ್​ ಬಾಸ್ ಕನ್ನಡ ಸೀಸನ್​ 9’ರಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಒಟಿಟಿಯಲ್ಲಿ ಖ್ಯಾತಿ ಹೆಚ್ಚಿಸಿಕೊಂಡ ನಂತರದಲ್ಲಿ ಅವರು ಟಿವಿ ಸೀಸನ್​ಗೆ ಕಾಲಿಟ್ಟಿದ್ದಾರೆ. ‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂದು ಹೇಳಿಕೊಂಡೇ ಫೇಮಸ್ ಆಗಿದ್ದರು ಗುರೂಜಿ. ಈಗ ಅವರು ತುಟಿ ನೋಡಿ ಶಾಸ್ತ್ರ ಹೇಳೋಕೆ ಶುರು ಮಾಡಿದ್ದಾರೆ. ಅಮೂಲ್ಯ ಎದುರು ಈ ವಿಚಾರವನ್ನು ಹೇಳಿಕೊಂಡಿದ್ದಾರೆ ಆರ್ಯವರ್ಧನ್​. ಈ ಮಾತನ್ನು ಕೇಳಿ ಅಮೂಲ್ಯ (Amulya Gowda) ನಾಚಿ ನೀರಾಗಿದ್ದಾರೆ.

ಅಮೂಲ್ಯ ಗೌಡ, ರಾಕೇಶ್ ಹಾಗೂ ಆರ್ಯವರ್ಧನ್ ಗುರೂಜಿ ಒಟ್ಟಾಗಿ ಕುಳಿತಿದ್ದರು. ಈ ವೇಳೆ ಅಮೂಲ್ಯ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ತುಟಿಗೆ ಲಿಪ್​ಸ್ಟಿಕ್ ಹಾಕಿದ್ದರು. ಇದನ್ನು ನೋಡಿದ ಆರ್ಯವರ್ಧನ್​, ‘ನಿಮ್ಮ ತುಟಿ ನೋಡಿ ಭವಿಷ್ಯ ಹೇಳ್ತೀನಿ. ನಿಮ್ಮ ತುಟಿ ಚೂಪ ಇದೆ. ಹಾಗಿದ್ದರೆ ಅನೇಕರು ನಿಮ್ಮನ್ನು ಇಷ್ಟಪಡ್ತಾರೆ’ ಎಂದರು ಆರ್ಯವರ್ಧನ್​ ಗುರೂಜಿ. ಈ ಮಾತನ್ನು ಕೇಳಿ ಅಮೂಲ್ಯ ನಾಚಿಕೊಂಡರು.

ಇದನ್ನು ಕೇಳಿ ರಾಕೇಶ್ ಅಡಿಗಗೆ ಕುತೂಹಲ ಹೆಚ್ಚಿತು. ‘ನನ್ನ ತುಟಿ ನೋಡಿ ಜ್ಯೋತಿಷ್ಯ ಹೇಳಿ’ ಎಂದು ಕೇಳಿದರು ರಾಕೇಶ್. ‘ನೀನು ಬೇರೆಯವರನ್ನ ಹೆಚ್ಚು ಇಷ್ಟಪಡ್ತೀಯ. ಆದರೆ, ನಿನ್ನನ್ನು ಬೇರೆಯವರು ಇಷ್ಟಪಡಲ್ಲ’ ಎಂದರು ಗುರೂಜಿ. ಈ ಮಾತು ಕೇಳುತ್ತಿದ್ದಂತೆ ಅನೇಕರು ಹೊಟ್ಟೆ ಹುಣ್ಣಾಗುವಂತೆ ನಕ್ಕರು. ರಾಕೇಶ್ ಕೂಡ ಸಾಕಷ್ಟು ನಕ್ಕರು.

ಇದನ್ನೂ ಓದಿ
Image
‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’; ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ ನವಾಜ್
Image
ಬಿಗ್ ಬಾಸ್​​ನಲ್ಲಿ ದಿವ್ಯಾ ಉರುಡುಗ ಟಾಸ್ಕ್​ ಆಡಿದ ಪರಿಗೆ ನಿಬ್ಬೆರಗಾದ ಮನೆ ಮಂದಿ
Image
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
Image
ನೀಲಕುರಂಜಿ ಹೂಗಳ ಸೌಂದರ್ಯಕ್ಕೆ ಮಾರು ಹೋದ ಬಿಗ್ ಬಾಸ್ ಬೆಡಗಿ ದಿವ್ಯಾ ಉರುಡುಗ

ಈ ಮೊದಲ ಸೀಸನ್​​ಗಳಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ಲವ್ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆದರೆ, ಈ ಬಾರಿ ಆ ರೀತಿಯ ವಿಚಾರಗಳು ಚರ್ಚೆಗೆ ಬರುತ್ತಿಲ್ಲ. ಸಾನ್ಯಾ ಐಯ್ಯರ್ ಹಾಗೂ ರಾಕೇಶ್ ಅಡಿಗ ಕ್ಲೋಸ್ ಆಗಿದ್ದಾರೆ. ಆದರೆ, ಇಬ್ಬರ ನಡುವೆ ಇರೋದು ಫ್ರೆಂಡ್​ಶಿಪ್ ಮಾತ್ರ ಎಂದು ಇವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ಹೊರಗಿದ್ದಾಗ ಎರಡೇ ಬಟ್ಟೆ ಇತ್ತು’; ‘ಬಿಗ್ ಬಾಸ್​​’ಗೆ ಬಂದ ನಂತರದಲ್ಲಿ ಬದಲಾಯ್ತು ನವಾಜ್ ಜೀವನ

ವಾರಾಂತ್ಯಕ್ಕೆ ಎಲಿಮಿನೇಷನ್

ಕಳೆದ ವಾರ ಐಶ್ವರ್ಯಾ ಪಿಸೆ ಅವರು ಬಿಗ್​ ಬಾಸ್​ನಿಂದ ಎಲಿಮಿನೇಟ್ ಆದರು. ಮೊದಲ ವಾರವೇ ಅವರು ಔಟ್ ಆದರು. ಈ ವಾರ ದರ್ಶ್ ಚಂದ್ರಪ್ಪ, ನವಾಜ್, ಮಯೂರಿ, ಅಮೂಲ್ಯ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ, ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ ಮೇಲೆ ಎಲಿಮಿನೇಷನ್ ತೂಗುಗತ್ತಿ ಇದೆ.

Follow Us
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್