AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?

Bigg Boss Kannada: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಬಿಗ್​ ಬಾಸ್​ ಮನೆಯ ಒಂದು ಗಾಜಿನ ಲೋಟ ಒಡೆದು ಹಾಕಿದ್ದರು. ಅದಕ್ಕೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ.

ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?
ಈಗ ಬಿಗ್​ ಬಾಸ್​ ಗೆದ್ದ ನಂತರದಲ್ಲಿ ಮಂಜು ಅವರು ಶಿವರಾಜ್​ಕುಮಾರ್​ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್​ಕುಮಾರ್​ ‘ಮಂಜು ಭೇಟಿ ಮಾಡಿದ್ದು ಹಾಗೂ ಅವರು ಗೆಲುವು ಖುಷಿ ಕೊಟ್ಟಿದೆ’ ಎಂದಿದ್ದಾರೆ.
ಮದನ್​ ಕುಮಾರ್​
| Edited By: |

Updated on: Apr 25, 2021 | 2:23 PM

Share

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬೇರೆ ಯಾವುದೇ ಮನರಂಜನೆ ಇಲ್ಲದ ಆ ದೊಡ್ಮನೆಯೊಳಗೆ ನಕ್ಕು ನಗಿಸುವ ಮೂಲಕ ಎಲ್ಲ ಸ್ಪರ್ಧಿಗಳಿಗೆ ಮಂಜು ಭರಪೂರ ಮನರಂಜನೆ ನೀಡುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಮಂಜು ಜೊತೆ ಯಾರೇ ಮಾತಿಗೆ ಕುಳಿತರೂ ಅಲ್ಲಿ ಕಾಮಿಡಿಗೆ ಕೊರತೆಯೇ ಇರುವುದಿಲ್ಲ. ಆ ಕಾರಣಕ್ಕಾಗಿಯೇ ಅವರು ಸತತ 8 ವಾರಗಳಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡು ಬರುತ್ತಿದ್ದಾರೆ. ದಿವ್ಯಾ ಸುರೇಶ್​ ಜೊತೆಗಿನ ಲವ್​ ಕಾರಣಕ್ಕೂ ಅವರು ಹೆಚ್ಚು ಸುದ್ದಿ ಆಗುತ್ತಾರೆ.

ಏ.24ರ ಎಪಿಸೋಡ್​ನಲ್ಲಿ ನಟಿ ವೈಷ್ಣವಿ ಗೌಡ ಅವರಿಗೆ ಮಂಜು ಹೇಳಿದ ಒಂದು ಮಾತು ಹೆಚ್ಚು ಹೈಲೈಟ್​ ಆಗುತ್ತಿದೆ. ‘ನಿನಗೇನು ಮಾನ ಮರ್ಯಾದೆ ಇಲ್ಲವಾ? ನನ್ನ ಹಿಂದಿಂದೆ ಬರಬೇಡ ಹೋಗು’ ಎಂದು ವೈಷ್ಣವಿಗೆ ಮಂಜು ಹೇಳಿದ್ದಾರೆ. ಇದರ ಹಿಂದೆ ಒಂದು ಇಂಟರೆಸ್ಟಿಂಗ್​ ಕಹಾನಿ ಇದೆ. ಮಂಜು ಈ ಮಾತನ್ನು ಸೀರಿಯಸ್​ ಆಗಿ ಹೇಳಿಲ್ಲ. ಬದಲಿಗೆ, ಬಿಗ್​ ಬಾಸ್​ ಮನೆಯಲ್ಲಿ ಒಂದು ಫನ್ನಿ ಘಟನೆ ನಡೆದಿದೆ.

ನಟಿ ವೈಷ್ಣವಿ ಅವರು ಬಿಗ್​ ಬಾಸ್​ ಮನೆಯ ಒಂದು ಗಾಜಿನ ಲೋಟ ಒಡೆದು ಹಾಕಿದ್ದರು. ಅದಕ್ಕೆ ಬಿಗ್​ಬಾಸ್​ ಶಿಕ್ಷೆ ನೀಡಿದ್ದಾರೆ. ಯಾವುದೇ ಲೋಟ ಅಥವಾ ಬಾಟಲಿಯನ್ನು ಬಳಸಿ ವೈಷ್ಣವಿ ನೀರು ಕುಡಿಯುವಂತಿಲ್ಲ. ಅವರಿಗೆ ನೀರು ಬೇಕು ಅನಿಸಿದಾಗ ಮನೆಯಲ್ಲಿ ಇರುವ ಯಾರಾದರೊಬ್ಬ ಸದಸ್ಯನಿಗೆ ಒಂದು ಡ್ಯಾನ್ಸ್​ ಸ್ಟೆಪ್​ ಹೇಳಿಕೊಡಬೇಕು. ಡ್ಯಾನ್ಸ್ ಕಲಿತು ತೋರಿಸುವ ಸದಸ್ಯನೇ ವೈಷ್ಣವಿಗೆ ಚಿಕ್ಕ ಲೋಟದಲ್ಲಿ ನೀರು ಕುಡಿಸಬೇಕು. ಏ.24ರ ಎಪಿಸೋಡ್​ನಲ್ಲಿ ಮಂಜುಗೆ ವೈಷ್ಣವಿ ಡ್ಯಾನ್ಸ್​ ಕಲಿಸಿದರು.

‘ಬಾ ನಿನಗೆ ನೀರು ಕುಡಿಸುತ್ತೇನೆ’ ಎಂದು ಮಂಜು ಮುಂದೆ ಸಾಗುತ್ತಿರುವಾಗ ಅವರನ್ನು ವೈಷ್ಣವಿ ಹಿಂಬಾಲಿಸಿದರು. ಆಗ ಮಂಜು ತಮಾಷೆಗೆ, ‘ನಿನಗೇನು ಮಾನ ಮರ್ಯಾದೆ ಇಲ್ಲವಾ? ಹಿಂದೆ ಹಿಂದೆ ಬರಬೇಡ ಹೋಗು’ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಮನೆಮಂದಿಯಲ್ಲಾ ನಕ್ಕಿದ್ದಾರೆ. ‘ನೋಡಿ ಬಿಗ್​ ಬಾಸ್​, ನಾನು ಅಗ್ನಿಸಾಕ್ಷಿ ಹೀರೋಯಿನ್​ಗೆ ನೀರು ಕುಡಿಸಿಬಿಟ್ಟೆ’ ಎಂದು ಮಂಜು ಬೀಗಿದ್ದಾರೆ.

ಅಂದಹಾಗೆ, ವೈಷ್ಣವಿ ಈ ರೀತಿ ಶಿಕ್ಷೆ ಪಡೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಕೆಲವೇ ದಿನಗಳ ಹಿಂದೆ ಲೋಟ ಒಡೆದು ಹಾಕಿದ್ದಕ್ಕಾಗಿ ಜೋಕ್​ ಹೇಳಬೇಕು ಎಂಬ ಶಿಕ್ಷೆಯನ್ನು ಅವರಿಗೆ ನೀಡಲಾಗಿತ್ತು. ಆಗಲೂ ಕೂಡ ಅವರು ಮನೆಯ ಸದಸ್ಯರಿಗೆ ಜೋಕ್​ ಹೇಳಿ ನಗಿಸಲು ಹರಸಾಹಸ ಪಟ್ಟಿದ್ದರು. ಈಗ ಡ್ಯಾನ್ಸ್​ ಹೇಳಿಕೊಡುವ ಶಿಕ್ಷೆ ಮುಂದುವರಿದಿದೆ.

ಇದನ್ನೂ ಓದಿ: Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?

(Bigg Boss Kannada: Manju Pavagada asks Vaishnavi Gowda not to follow him in BBK8)

ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಕಸ ಎಸೆಯಲು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ
ಬ್ರೇಕ್ ಫೇಲ್ ಆಗಿ ಎಲೆಕ್ಟ್ರಿಕ್ ಪೋಲ್​ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್!
ಬ್ರೇಕ್ ಫೇಲ್ ಆಗಿ ಎಲೆಕ್ಟ್ರಿಕ್ ಪೋಲ್​ಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್!
Video: ಶೌಚಾಲಯದ ಬಾಗಿಲಿಗೆ ಶಿವಾಜಿ ಮಹಾರಾಜ್, ಮಹಾರಾಣಿ ಪದ್ಮಿನಿ ಫೋಟೋ
Video: ಶೌಚಾಲಯದ ಬಾಗಿಲಿಗೆ ಶಿವಾಜಿ ಮಹಾರಾಜ್, ಮಹಾರಾಣಿ ಪದ್ಮಿನಿ ಫೋಟೋ