AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್: ಒಂದೇ ತಂಡದ ಹುಡುಗಿಯರ ನಡುವೆ ಕಿರಿಕ್, ಕಣ್ಣೀರು

ಸೌಂದರ್ಯಾ ಶೆಟ್ಟಿ ಅವರಿಗೆ ರಿಯಾಲಿಟಿ ಶೋ ಅನುಭವ ಹೊಸದಲ್ಲ. ಸರಿಯಾದ ಸಮಯಕ್ಕೆ ತಿರುಗಿಬೀಳುವುದು ಹೇಗೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಬಿಗ್ ಬಾಸ್ ಟಾಸ್ಕ್ ವೇಳೆ ತಮ್ಮದೇ ತಂಡದಲ್ಲಿ ಇರುವ ಆಸಿಯಾ ಜೊತೆ ಸೌಂದರ್ಯಾ ಅವರು ಜಗಳ ಮಾಡಿಕೊಂಡಿದ್ದಾರೆ. ಇದರಿಂದಾಗಿ ಆಸಿಯಾ ಕಣ್ಣೀರು ಹಾಕುವಂತಾಗಿದೆ.

ಬಿಗ್ ಬಾಸ್: ಒಂದೇ ತಂಡದ ಹುಡುಗಿಯರ ನಡುವೆ ಕಿರಿಕ್, ಕಣ್ಣೀರು
Asiya Firdose, Soundarya Shetty
ಮದನ್​ ಕುಮಾರ್​
|

Updated on: Sep 10, 2026 | 10:47 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮೊದಲ ವಾರವೇ ಹತ್ತಾರು ಡ್ರಾಮಾ ನಡೆದಿದೆ. ನೋಡನೋಡುತ್ತಿದ್ದಂತೆಯೇ ಜಗಳ ಶುರುವಾಗಿದೆ. ಬಲವಾದ ಕಾರಣ ಇಲ್ಲದಿದ್ದರೂ ಕೂಡ ಮಹಿಳಾ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಆಸಿಯಾ ಮತ್ತು ಸೌಂದರ್ಯಾ ಶೆಟ್ಟಿ ಅವರು ಕಾಲು ಕೆರೆದುಕೊಂಡು ಜಗಳ ಮಾಡಿದ್ದಾರೆ. ಟಾಸ್ಕ್ ಶುರುವಾಗುವುದಕ್ಕೂ ಮುನ್ನವೇ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಮೊದಲ ವಾರದಲ್ಲಿಯೇ ಈ ಪರಿ ಜಗಳ ಆದರೆ ಮುಂದಿನ ವಾರಗಳಲ್ಲಿ ಏನಾಗಬಹುದು ಎಂದು ವೀಕ್ಷಕರು ಯೋಚಿಸುವಂತಾಗಿದೆ.

4ನೇ ದಿನ ಬಿಗ್ ಬಾಸ್ ನೀಡಿದ ಒಂದು ಟಾಸ್ಕ್​ನಲ್ಲಿ ಯಾರು, ಯಾವ ಕೆಲಸ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತಿತ್ತು. ವೈಷ್ಣವಿ, ಪ್ರಥಮಾ ಪ್ರಸಾದ್, ಸೌಂದರ್ಯಾ ಶೆಟ್ಟಿ, ಆಸಿಯಾ ಅವರು ಒಂದು ತಂಡದಲ್ಲಿದ್ದರೂ ಕೂಡ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಸಣ್ಣ ಮಾತುಕಥೆಯಲ್ಲಿ ಮುಗಿಯಬಹುದಾಗಿದ್ದ ವಿಷಯವು ಜಗಳದಲ್ಲಿ ಅಂತ್ಯವಾಗಿದೆ.

ಸ್ವಿಮಿಂಗ್ ಪೂಲ್​ಗೆ ಇಳಿಯಲ್ಲ ಎಂದು ಆಸಿಯಾ ಅವರು ಹೇಳಿದರು. ಆದರೆ ಅದಕ್ಕೆ ಸೌಂದರ್ಯಾ ಶೆಟ್ಟಿ ಅವರು ವಿರೋಧ ವ್ಯಕ್ತಪಡಿಸಿದರು. ನೀವು ಯಾಕೆ ಸ್ವಿಮಿಂಗ್ ಪೂಲ್​ಗೆ ಇಳಿಯಲ್ಲ ಎಂದು ಸೌಂದರ್ಯಾ ಅವರು ಪ್ರಶ್ನೆ ಮಾಡಿದರು. ಅದಕ್ಕೆ ಆಸಿಯಾ ಕಡೆಯಿಂದ ಸೂಕ್ತ ಸಮರ್ಥನೆ ಬರಲಿಲ್ಲ. ಆಗ ಇಬ್ಬರ ನಡುವಿನ ಮಾತಿನ ಚಕಮಕಿ ಹೆಚ್ಚಾಯಿತು.

ಈ ಮನೆಯಲ್ಲಿ ತಮ್ಮನ್ನು ಎಲ್ಲರೂ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆಸಿಯಾ ಆರೋಪ ಮಾಡಿದರು. ಆ ಮಾತು ಕೇಳಿಸಿಕೊಂಡ ಸೌಂದರ್ಯಾ ಶೆಟ್ಟಿ ಅವರಿಗೆ ಕೋಪ ಬಂತು. ಕೂಡಲೇ ರೊಚ್ಚಿಗೆದ್ದ ಅವರು ಆಸಿಯಾರನ್ನು ಅಣಕಿಸುವ ರೀತಿಯಲ್ಲಿ ವರ್ತಿಸಿದರು. ಕ್ಯಾಮೆರಾ ಮುಂದೆ ಬಂದು ಅಳುವ ರೀತಿಯಲ್ಲಿ ಅಣಕಿಸಿದರು. ಇದರಿಂದಾಗಿ ಆಸಿಯಾಗೆ ಹೆಚ್ಚು ಬೇಸರ ಆಯಿತು.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹಲವು ಸ್ಪರ್ಧಿಗಳು ನಾಮಿನೇಟ್

ಸಣ್ಣ ವಿಚಾರಕ್ಕೆ ಆದ ಈ ಪರಿ ರಂಪಾಟದಿಂದಾಗಿ ಆಸಿಯಾಗೆ ನಿಜವಾಗಿಯೂ ಅಳು ಬಂತು. ಟಾಸ್ಕ್ ಆರಂಭ ಆಗುವುದಕ್ಕೂ ಮುನ್ನ ಅವರು ಕಣ್ಣೀರು ಹಾಕಿದರು. ಇನ್ನುಳಿದ ಸ್ಪರ್ಧಿಗಳು ಸಮಾಧಾನ ಮಾಡಲು ಬಂದರೂ ಕೂಡ ಆಸಿಯಾ ಅವರಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಆಸಿಯಾ ವರ್ಸಸ್ ಸೌಂದರ್ಯಾ ಜಗಳ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್