Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮಿಂದ ಟಿಆರ್​ಪಿ ಬರೊಲ್ಲ’: ಸ್ಪರ್ಧಿಗಳ ಭ್ರಮೆ ದೂರ ಮಾಡಿದ ಸುದೀಪ್

Bigg Boss Kannada: ಬಿಗ್​ಬಾಸ್ ಕನ್ನಡ ಶೋ, ಹೆಚ್ಚು ಟಿಆರ್​ಪಿ ಪಡೆಯುತ್ತದೆ. ಆದರೆ ಈ ಸೀಸನ್​ನಲ್ಲಿ ಕೆಲ ಸ್ಪರ್ಧಿಗಳು, ನಮ್ಮಿಂದಲೇ ಟಿಆರ್​ಪಿ ಎಂಬಂತೆ ಮಾತನಾಡಿದ್ದಾರೆ. ಆದರೆ ಸುದೀಪ್, ಸ್ಪರ್ಧಿಗಳ ಆ ಭ್ರಮೆಯನ್ನು ದೂರ ಮಾಡಿದ್ದಾರೆ.

‘ನಿಮ್ಮಿಂದ ಟಿಆರ್​ಪಿ ಬರೊಲ್ಲ’: ಸ್ಪರ್ಧಿಗಳ ಭ್ರಮೆ ದೂರ ಮಾಡಿದ ಸುದೀಪ್
Follow us
ಮಂಜುನಾಥ ಸಿ.
|

Updated on: Nov 17, 2024 | 7:57 AM

ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಟಿಆರ್​ಪಿ ಪಡೆವ ಶೋ ಎಂದರೆ ಅದು ಬಿಗ್​ಬಾಸ್​ ಕನ್ನಡ ಶೋ. ಈ ರಿಯಾಲಿಟಿ ಶೋ ಪ್ರಾರಂಭ ಆಗಿ ಅಂತ್ಯವಾಗುವ ಮೂರು ತಿಂಗಳ ವರೆಗೆ ಬಹುತೇಕ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತದೆ. ಆದರೆ ಇದೀಗ ಕೆಲವು ಬಿಗ್​ಬಾಸ್​ ಸ್ಪರ್ಧಿಗಳು ನಮ್ಮಿಂದಲೇ ಶೋಗೆ ಇಷ್ಟೋಂದು ಟಿಆರ್​ಪಿ ಬರುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ. ಈ ಸೀಸನ್​ನಲ್ಲಿ ಕೆಲ ಸ್ಪರ್ಧಿಗಳು ಈ ಬಗ್ಗೆ ಮಾತನಾಡಿದ್ದಾರೆ ಸಹ. ಆದರೆ ಸುದೀಪ್ ಟಿಆರ್​ಪಿ ವಿಷಯವನ್ನು ವಿವರವಾಗಿ ವಿವರಿಸಿ ಭ್ರಮೆ ದೂರ ಮಾಡಿದ್ದಾರೆ. ಮತ್ತು ಸ್ಪರ್ಧಿಗಳಿಂದ ಟಿಆರ್​ಪಿ ಅಲ್ಲ ಎಂದು ಹೇಳಿದ್ದಾರೆ.

ಕಳೆದ ವಾರ ಯಾರೂ ಎಲಿಮಿನೇಟ್ ಆಗಿರಲಿಲ್ಲ. ಆದರೆ ಭಾನುವಾರದ ಎಪಿಸೋಡ್ ಬಳಿಕ ಭವ್ಯಾ, ಇನ್ನೇನು ಎಲಿಮಿನೇಟ್ ಆಗುತ್ತಾರೆ ಎನ್ನುವಂತೆ ಬಾಗಿಲಿನವರೆಗೆ ಹೋಗಿ ವಾಪಸ್ಸಾದರು. ಭವ್ಯಾ ಎಲಿಮಿನೇಷನ್ ವರೆಗೆ ಹೋಗಿದ್ದು ಭವ್ಯಾ ಸೇರಿದಂತೆ ಮನೆಯವರಿಗೆ ಶಾಕ್ ಆಯ್ತು. ಆದರೆ ಭವ್ಯಾ ಸೇಫ್ ಆದ ಬಳಿಕ ಚೇಂಜಿಂಗ್ ರೂಂನಲ್ಲಿ ಮಾತನಾಡಿದ್ದ ಅನುಷಾ, ಭವ್ಯಾ, ಚೈತ್ರಾ ಅವರುಗಳು ಟಿಆರ್​ಪಿ ವಿಷಯ ಮಾತನಾಡಿದ್ದರಂತೆ. ನಮ್ಮಿಂದ ಒಳ್ಳೆಯ ಟಿಆರ್​ಪಿ ಸಿಗುತ್ತೆ ಹಾಗಾಗಿ ಬೇಗ ಹೊರಗೆ ಕಳಿಸಲ್ಲ ಎಂದು ಭವ್ಯಾ ಹೇಳಿದ್ದರಂತೆ. ಇದರ ಬಗ್ಗೆ ಸುದೀಪ್ ಶನಿವಾರದ ಶೋನಲ್ಲಿ ಮಾತನಾಡಿದರು.

‘ಸ್ಪರ್ಧಿಗಳು, ಸ್ಪರ್ಧಿಗಳಾಗಿ ಮಾತ್ರವೇ ಇರಿ. ನೀವ್ಯಾಕೆ ಶೋನ ನಿರ್ದೇಶಕ, ಮಾರ್ಕೆಟಿಂಗ್ ವ್ಯಕ್ತಿ ಆಗಲು ಹೋಗುತ್ತೀರಿ. ಈ ಚಾನೆಲ್ ವರ್ಷಪೂರ್ತಿ ಟಿಆರ್​ಪಿಯಲ್ಲಿ ಟಾಪ್​ನಲ್ಲಿರುತ್ತದೆ. ಹಲವಾರು ಶೋಗಳು, ಕಲಾವಿದರು ಇದಕ್ಕೆ ಕಾರಣ ಆಗಿದ್ದಾರೆ. ನಮ್ಮಿಂದಲೇ ಟಿಆರ್​ಪಿ ಬರುತ್ತಿದೆ ಎಂಬುದನ್ನು ತಲೆಯಿಂದ ತೆಗೆದು ಹಾಕಿ. ಒಂದೊಮ್ಮೆ ಸ್ಪರ್ಧಿಗಳಿಂದ ಟಿಆರ್​ಪಿ ಬರುವುದಿದ್ದರೆ 17 ಸ್ಪರ್ಧಿಗಳಿರುತ್ತಾರೆ, ಒಬ್ಬೊಬ್ಬರೇ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದಂತೆ ಟಿಆರ್​ಪಿ ಸಹ ಇಳಿಯಬೇಕಿತ್ತು ಅಲ್ಲವೆ, ಸ್ಪರ್ಧಿಗಳಿಂದ ಟಿಆರ್​ಪಿ ಇದ್ದರೆ ಆಯಾ ಸ್ಪರ್ಧಿ ಹೊರಗೆ ಹೋಗುತ್ತಿದ್ದಂತೆ ಟಿಆರ್​ಪಿ ಸಹ ಇಳಿಯಬೇಕಿತ್ತಲ್ಲ, ಏಕೆ ಇಳಿಯುತ್ತಿಲ್ಲ? ಬದಲಿಗೆ ಜನ ಕಡಿಮೆ ಆದಷ್ಟು ಟಿಆರ್​ಪಿ ಹೆಚ್ಚಾಗುತ್ತಲೇ ಹೋಗುತ್ತಿದೆ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ:ಸುದೀಪ್ ‘ಬಿಗ್ ಬಾಸ್’ ಕಂಬ್ಯಾಕ್​ಗೆ ಸಿಕ್ತು ಭರ್ಜರಿ ಟಿಆರ್​ಪಿ; ಎರಡಂಕಿ ದಾಟಿದ ‘ಪುಟ್ಟಕ್ಕನ ಮಕ್ಕಳು’ ಟಿವಿಆರ್

ಮನೆಯಲ್ಲಿ ಸ್ಪರ್ಧಿಗಳು ಜಗಳ ಮಾಡುವುದು, ಸ್ಟ್ರಾಟಜಿ ಮಾಡುವುದು ಇದೆಲ್ಲ ಓಕೆ, ಆದರೆ ಮನೆಯವ ಮಾತಿನಿಂದ ಶೋನ ವಿಶ್ವಾಸಾರ್ಹತೆಗೆ ಧಕ್ಕೆ ಬರುತ್ತಿದೆ ಎಂದಾಗ ನಾನು ನೇರವಾಗಿ ಮಾತನಾಡಿಯೇ ಆಡುತ್ತೇನೆ ಎಂದ ಸುದೀಪ್, ಕಳೆದ ವಾರ ಎಲಿಮಿನೇಷನ್ ರೌಂಡ್ ಇರಲಿಲ್ಲ ಎಂಬ ಬಗ್ಗೆ ಮಾತನಾಡುತ್ತಾ, ಕಳೆದ ವಾರ ಎಲಿಮಿನೇಷನ್ ರೌಂಡ್ ಇರಲಿಲ್ಲ ಎಂಬುದು ನಿಮಗೆ ಗೊತ್ತಿರಲಿಲ್ಲ. ಆದರೆ ಜನರಿಗೆ ಅದು ಮೊದಲೇ ಗೊತ್ತಿತ್ತು. ನಾವು ಮುಚ್ಚು ಮರೆ ಮಾಡಿರಲಿಲ್ಲ. ಏಕೆಂದರೆ ಕಳೆದ ವಾರ ವೋಟಿಂಗ್ ಲೈನ್ ಓಪನ್ ಆಗಿರಲೇ ಇಲ್ಲ. ಮತ ಹಾಕದೆ ಯಾರೂ ಎಲಿಮಿನೇಟ್ ಆಗುವುದಿಲ್ಲ. ಜನರಿಗೆ ಅದು ಮೊದಲೇ ಗೊತ್ತಿತ್ತು. ಟಿಆರ್​ಪಿಗಾಗಿ ಮಾಡಿದ್ದಲ್ಲ, ಅಥವಾ ಟಿಆರ್​ಪಿಗಾಗಿ ಯಾರನ್ನೋ ಉಳಿಸಿಕೊಳ್ಳುವ ಪ್ಲಾನ್ ಸಹ ಅದಲ್ಲ’ ಎಂದಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​