AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepika Das: ಬಿಗ್​ ಬಾಸ್​ ಗೆದ್ದ 2ನೇ ಮಹಿಳೆ ಆಗಬೇಕು ಎಂಬ ದೀಪಿಕಾ ದಾಸ್​ ಕನಸು ಭಗ್ನ; ಫಿನಾಲೆಯಲ್ಲಿ ಔಟ್​

Bigg Boss Kannada Season 9 | BBK 9 Finale: ‘ಬಿಗ್​ ಬಾಸ್ ಕನ್ನಡ ಸೀಸನ್​ 9’ ಫಿನಾಲೆಯಲ್ಲಿ ದೀಪಿಕಾ ದಾಸ್​ ಔಟ್​ ಆಗಿದ್ದಾರೆ. 2ನೇ ರನ್ನರ್​ ಅಪ್​ ಸ್ಥಾನಕ್ಕೆ ಅವರು ತೃಪ್ತಿಪಟ್ಟುಕೊಂಡಿದ್ದಾರೆ.

Deepika Das: ಬಿಗ್​ ಬಾಸ್​ ಗೆದ್ದ 2ನೇ ಮಹಿಳೆ ಆಗಬೇಕು ಎಂಬ ದೀಪಿಕಾ ದಾಸ್​ ಕನಸು ಭಗ್ನ; ಫಿನಾಲೆಯಲ್ಲಿ ಔಟ್​
ದೀಪಿಕಾ ದಾಸ್
TV9 Web
| Edited By: |

Updated on: Dec 31, 2022 | 10:43 PM

Share

ನಟಿ ದೀಪಿಕಾ ದಾಸ್​ (Deepika Das) ಅವರು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಬಿಗ್​​ ಬಾಸ್​ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಫಿನಾಲೆಯಲ್ಲಿ (BBK 9 Finale) ಅವರು ಮುಗ್ಗರಿಸಿದ್ದಾರೆ. ಹೌದು, ‘ಬಿಗ್​ ಬಾಸ್​ ಕನ್ನಡ ಸೀಸನ್ 9’ (Bigg Boss Kannada Season 9) ಶೋಗೆ ಶನಿವಾರ (ಡಿ.31) ಫಿನಾಲೆ ನಡೆದಿದೆ. ಕೊನೆತನಕ ಫೈಟ್​ ನೀಡಿದ್ದ ದೀಪಿಕಾ ದಾಸ್​ ಅವರು ಎಲಿಮಿನೇಟ್​ ಆಗಿದ್ದಾರೆ. ಟ್ರೋಫಿ ಪಡೆಯಬೇಕು ಎಂಬ ಅವರ ಆಸೆ ಈಡೇರಿಲ್ಲ. ಶುಕ್ರವಾರದ (ಡಿ.30) ಸಂಚಿಕೆಯಲ್ಲಿ ಅವರು ತಮ್ಮ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ‘ಈವರೆಗೂ ಕನ್ನಡದಲ್ಲಿ ಮಹಿಳಾ ಸ್ಪರ್ಧಿ ಬಿಗ್​ ಬಾಸ್​ ಗೆದ್ದಿದ್ದು ಒಮ್ಮೆ ಮಾತ್ರ. ನಾನು ಎರಡನೆಯವಳು ನಾನಾಗಬೇಕು’ ಎಂದು ದೀಪಿಕಾ ದಾಸ್​ ಹೇಳಿದ್ದರು. ಆದರೆ ಅವರ ಈ ಕನಸು ಭಗ್ನ ಆಗಿದೆ.

ಈ ಬಾರಿ ಇಬ್ಬರು ಮಹಿಳಾ ಸ್ಪರ್ಧಿಗಳು (ದಿವ್ಯಾ ಉರುಡುಗ, ದೀಪಿಕಾ ದಾಸ್​) ಫಿನಾಲೆ ತನಕ ಬಂದರು. ಇಬ್ಬರಲ್ಲಿ ಒಬ್ಬರಾದರೂ ಟ್ರೋಫಿ ಗೆಲ್ಲಲಿ ಎಂದು ಅನೇಕ ಅಭಿಮಾನಿಗಳು ಬಯಸಿದ್ದುಂಟು. ಆದರೆ ಅದು ಸಾಧ್ಯವಾಗಲಿಲ್ಲ. ದೀಪಿಕಾ ದಾಸ್​ ಅವರು 2ನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಬಿಗ್​ ಬಾಸ್​ ಮನೆಯನ್ನು ತೊರೆದಿದ್ದಾರೆ.

ಇದನ್ನೂ ಓದಿ: Roopesh Shetty: ‘ಸಾನ್ಯಾ ಐಯ್ಯರ್ ಅಂದ್ರೆ ಯಾರು?’ ದೀಪಿಕಾ ದಾಸ್​​ಗೆ ಪ್ರಶ್ನೆ ಮಾಡಿದ ರೂಪೇಶ್ ಶೆಟ್ಟಿ

ಇದನ್ನೂ ಓದಿ
Image
Roopesh Shetty: ‘ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ ಮನದ ಮಾತು
Image
Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ
Image
BBK 9 Finale: ಬಿಗ್​ ಬಾಸ್​ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್​ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್​
Image
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ

ದೀಪಿಕಾ ದಾಸ್​ ಅವರು ಕಿರುತೆರೆ ಧಾರಾವಾಹಿಗಳ ಜಗತ್ತಿನಲ್ಲಿ ಫೇಮಸ್​ ಆದವರು. ಹಾಗಾಗಿ ಅವರಿಗೆ ಫ್ಯಾನ್​ ಫಾಲೋಯಿಂಗ್​ ಜಾಸ್ತಿ ಇದೆ. ಬಿಗ್​ ಬಾಸ್​ನಲ್ಲಿ ಹೆಚ್ಚಿನ ವೋಟ್​ ಪಡೆಯಲು ಇದು ಸಾಧ್ಯವಾಯ್ತು. ಆದರೆ ಅವರು ಒಮ್ಮೆ ಎಲಿಮಿನೇಟ್​ ಆಗಿ, ನಂತರ ಮತ್ತೆ ವೈಲ್ಡ್​ ಕಾರ್ಡ್​ ಮೂಲಕ ರೀ-ಎಂಟ್ರಿ ಪಡೆದಿದ್ದು ಹಲವರಿಗೆ ಹಿಡಿಸಲಿಲ್ಲ. ಈಗಾಗಲೇ ಎಲಿಮಿನೇಟ್​ ಆದ ಸ್ಪರ್ಧಿಗಳು ಈ ವಿಚಾರವನ್ನು ಶನಿವಾರ ಫಿನಾಲೆಯ ವೇದಿಕೆಯಲ್ಲಿ ಹೇಳಿದ್ದರು.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಯಲ್ಲಿ ದೀಪಿಕಾ ದಾಸ್​

ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿಯೂ ದೀಪಿಕಾ ದಾಸ್​ ಅವರು ಸ್ಪರ್ಧಿಸಿದ್ದರು. ಆಗಲೂ ಅವರಿಗೆ ಕಪ್​ ಗೆಲ್ಲಲು ಸಾಧ್ಯವಾಗಿರಲಿಲ್ಲ. ಎರಡನೇ ಅವಕಾಶ ಸೀಸನ್​ 9ರಲ್ಲಿ ಸಿಕ್ಕಿತು. ಈ ಬಾರಿ ಅವರು ಫಿನಾಲೆ ತನಕ ಬರಲು ಸಫಲರಾದರೂ ಕೂಡ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ. ಮನರಂಜನೆ ನೀಡುವ ವಿಚಾರದಲ್ಲಿ ದೀಪಿಕಾ ದಾಸ್​ ಹಿಂದೆ ಬಿದ್ದರು. ಅದು ಕೂಡ ಅವರಿಗೆ ಕಡಿಮೆ ವೋಟ್​ ಸಿಗಲು ಕಾರಣ ಆಗಿರಬಹುದು.

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ ಬಳಿಕ ದೀಪಿಕಾ ದಾಸ್​ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದರಿಂದ ಅವರ ವೃತ್ತಿಜೀವನಕ್ಕೆ ಅನುಕೂಲ ಆಗಲಿದೆ. ಸೀರಿಯಲ್​ ಮತ್ತು ಸಿನಿಮಾಗಳಲ್ಲಿ ಅವರಿಗೆ ಇನ್ನಷ್ಟು ಅವಕಾಶಗಳು ಸಿಗಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್