Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಮದುವೆ ಮಾತು, ಜವಾಬ್ದಾರಿ ಹೊತ್ತ ಸಂತು-ಪಂತು

Drone Prathap Marriage: ಡ್ರೋನ್ ಪ್ರತಾಪ್ ಮೂರು ವರ್ಷಗಳ ಬಳಿಕ ತಮ್ಮ ಪೋಷಕರನ್ನು ಭೇಟಿ ಆದರು. ಈ ವೇಳೆ ಮನೆಯಲ್ಲಿ ಪ್ರತಾಪ್​ರ ಮದುವೆ ವಿಷಯ ಪ್ರಸ್ತಾಪವಾಯ್ತು.

ಬಿಗ್​ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಮದುವೆ ಮಾತು, ಜವಾಬ್ದಾರಿ ಹೊತ್ತ ಸಂತು-ಪಂತು
ಡ್ರೋನ್ ಪ್ರತಾಪ್
Follow us
ಮಂಜುನಾಥ ಸಿ.
|

Updated on:Dec 28, 2023 | 11:44 PM

ಗುರುವಾರದ ಬಿಗ್​ಬಾಸ್ (BiggBoss) ಎಪಿಸೋಡ್ ಪ್ರೇಕ್ಷಕರನ್ನು ಭಾವುಕಗೊಳಿಸಿತು. ಡ್ರೋನ್ ಪ್ರತಾಪ್ ಮೂರು ವರ್ಷಗಳ ಬಳಿಕ ತಮ್ಮ ಪೋಷಕರನ್ನು ಭೇಟಿಯಾದರು. ತಾನು ಮಾಡಿದ ತಪ್ಪಿನಿಂದ ಅವಮಾನ ಅನುಭವಿಸಿದ ಅವರು ನನ್ನನ್ನು ನೋಡಲು ಮನೆಗೆ ಬರುವುದಿಲ್ಲವೇನೋ ಎಂಬ ಆತಂಕದಲ್ಲಿದ್ದರು. ಆದರೆ ಡ್ರೋನ್​ ಪ್ರತಾಪ್​ರಷ್ಟೆ ಕಾತರತೆಯಿಂದ ಅಪ್ಪನೂ ಮಗನನ್ನು ನೋಡಲು ಕಾಯುತ್ತಿದ್ದರೆಂಬುದು ಅವರ ಆಗಮನದಿಂದ, ಅವರು ನೀಡಿದ ಬಿಗಿಯಾದ ಅಪ್ಪುಗೆಯಿಂದ ತಿಳಿದು ಬಂತು.

ಡ್ರೋನ್ ಪ್ರತಾಪ್​, ತಮ್ಮ ಪೋಷಕರನ್ನು ಮತ್ತೆ ಸೇರಿದ್ದು ಮನೆಯ ಸದಸ್ಯರನ್ನು ಭಾವುಕಗೊಳಿಸಿತು. ಹಲವು ಭಾವುಕ ಸನ್ನಿವೇಶಗಳು, ಮಾತುಕತೆಗಳು ಡ್ರೋನ್ ಪ್ರತಾಪ್ ಹಾಗೂ ಅವರ ಪೋಷಕರ ನಡುವೆ ಸೃಷ್ಟಿಯಾದವು. ಇದೆಲ್ಲದರ ನಡುವೆ ಪ್ರತಾಪ್​ರ ಮದುವೆ ವಿಷಯವೂ ಸಹ ಮನೆಯಲ್ಲಿ ಚರ್ಚೆಯಾಯ್ತು.

ವರ್ತೂರು ಸಂತೋಷ್ ಮೊದಲಿಗೆ ಡ್ರೋನ್ ಪ್ರತಾಪ್​ರ ಮದುವೆ ಚರ್ಚೆ ಎತ್ತಿದರು. ‘‘ಯಜಮಾನ್ರೆ ನೀವು ಹೇಳಿದರೆ ನಿಮ್ಮ ಮಗ ಮದುವೆ ಆಗ್ತಾನಂತೆ, ನೀವು ಹೂ ಅನ್ನಿ ಎಂದರು. ಅದಕ್ಕೆ ಪ್ರತಾಪ್​ರ ತಂದೆ ನನ್ನ ಅಭ್ಯಂತರವೇನೂ ಇಲ್ಲ ಎಂದರು. ಬಳಿಕ ಹಾಗಿದ್ದರೆ ಆ ಜವಾಬ್ದಾರಿ ನನಗೆ ಬಿಡಿ ನಾನು ನೋಡುತ್ತೇನೆ ಎಂದರು. ಹೌದು, ನಿಮ್ಮ ಊರಲ್ಲೇ ಒಂದು ಒಳ್ಳೆ ಹೆಣ್ಣು ನೋಡಪ್ಪ ಎಂದರು ಪ್ರತಾಪ್​ರ ತಂದೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಕರಗಿತು ಮುನಿಸು, ಅಪ್ಪ-ಮಗನ ಭಾವುಕ ಸಮ್ಮಿಲನ

ಬಳಿಕ ತುಕಾಲಿ ಸಂತು, ನಮ್ಮ ಊರಲ್ಲಿ ಒಂದು ಒಳ್ಳೆಯ ಹೆಣ್ಣು ಇದೆ ನೀವು ಹೂ ಅನ್ನಿ ನಾನು ಮಾತಾಡ್ತೀನಿ ಎಂದರು. ಅಯ್ಯೋ ನಾವು ಹೂ ಅಂದರೆ ಹುಡುಗಿಯೂ ಒಪ್ಪಿಕೊಳ್ಳಬೇಕಲ್ಲ ಅಂದರು. ಅವರಿಗೆ ನನ್ನ ಮಾತೇ ಅಂತಿಮ, ನಾನು ಮಾತನಾಡಿದರೆ ಮುಗಿದಂತೆ ಎಂದರು. ಆ ಮಾತಿಗೆ ಎಲ್ಲರೂ ಸೇರಿ ತುಕಾಲಿಯ ಕಾಲೆಳೆದರು.

ಪ್ರತಾಪ್, ಪ್ರತ್ಯೇಕವಾಗಿ ಅಪ್ಪ-ಅಮ್ಮನೊಟ್ಟಿಗೆ ಮಾತನಾಡುವಾಗ ತಂಗಿಯ ಬಗ್ಗೆ ವಿಚಾರಿಸಿದರು. ಆಕೆಗೆ ಕೆಲಸವಿತ್ತು ಅದಕ್ಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಆಕೆ ಚೆನ್ನಾಗಿ ದುಡಿಯುತ್ತಿದ್ದಾಳೆ, ನನ್ನನ್ನು-ಅಮ್ಮನನ್ನು ನೋಡಿಕೊಳ್ಳುತ್ತಿದ್ದಾಳೆ ಎಂದರು. ಆಗ ಮತ್ತೆ ಭಾವುಕರಾದ ಪ್ರತಾಪ್, ನಾನು ಮನೆಗೆ ಬರ್ತೀನಿ, ತಂಗಿಯ ಮದುವೆ ಮಾಡ್ತೀನಿ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:44 pm, Thu, 28 December 23

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ