ಬಿಗ್​ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಮದುವೆ ಮಾತು, ಜವಾಬ್ದಾರಿ ಹೊತ್ತ ಸಂತು-ಪಂತು

Drone Prathap Marriage: ಡ್ರೋನ್ ಪ್ರತಾಪ್ ಮೂರು ವರ್ಷಗಳ ಬಳಿಕ ತಮ್ಮ ಪೋಷಕರನ್ನು ಭೇಟಿ ಆದರು. ಈ ವೇಳೆ ಮನೆಯಲ್ಲಿ ಪ್ರತಾಪ್​ರ ಮದುವೆ ವಿಷಯ ಪ್ರಸ್ತಾಪವಾಯ್ತು.

ಬಿಗ್​ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಮದುವೆ ಮಾತು, ಜವಾಬ್ದಾರಿ ಹೊತ್ತ ಸಂತು-ಪಂತು
ಡ್ರೋನ್ ಪ್ರತಾಪ್
Follow us
|

Updated on:Dec 28, 2023 | 11:44 PM

ಗುರುವಾರದ ಬಿಗ್​ಬಾಸ್ (BiggBoss) ಎಪಿಸೋಡ್ ಪ್ರೇಕ್ಷಕರನ್ನು ಭಾವುಕಗೊಳಿಸಿತು. ಡ್ರೋನ್ ಪ್ರತಾಪ್ ಮೂರು ವರ್ಷಗಳ ಬಳಿಕ ತಮ್ಮ ಪೋಷಕರನ್ನು ಭೇಟಿಯಾದರು. ತಾನು ಮಾಡಿದ ತಪ್ಪಿನಿಂದ ಅವಮಾನ ಅನುಭವಿಸಿದ ಅವರು ನನ್ನನ್ನು ನೋಡಲು ಮನೆಗೆ ಬರುವುದಿಲ್ಲವೇನೋ ಎಂಬ ಆತಂಕದಲ್ಲಿದ್ದರು. ಆದರೆ ಡ್ರೋನ್​ ಪ್ರತಾಪ್​ರಷ್ಟೆ ಕಾತರತೆಯಿಂದ ಅಪ್ಪನೂ ಮಗನನ್ನು ನೋಡಲು ಕಾಯುತ್ತಿದ್ದರೆಂಬುದು ಅವರ ಆಗಮನದಿಂದ, ಅವರು ನೀಡಿದ ಬಿಗಿಯಾದ ಅಪ್ಪುಗೆಯಿಂದ ತಿಳಿದು ಬಂತು.

ಡ್ರೋನ್ ಪ್ರತಾಪ್​, ತಮ್ಮ ಪೋಷಕರನ್ನು ಮತ್ತೆ ಸೇರಿದ್ದು ಮನೆಯ ಸದಸ್ಯರನ್ನು ಭಾವುಕಗೊಳಿಸಿತು. ಹಲವು ಭಾವುಕ ಸನ್ನಿವೇಶಗಳು, ಮಾತುಕತೆಗಳು ಡ್ರೋನ್ ಪ್ರತಾಪ್ ಹಾಗೂ ಅವರ ಪೋಷಕರ ನಡುವೆ ಸೃಷ್ಟಿಯಾದವು. ಇದೆಲ್ಲದರ ನಡುವೆ ಪ್ರತಾಪ್​ರ ಮದುವೆ ವಿಷಯವೂ ಸಹ ಮನೆಯಲ್ಲಿ ಚರ್ಚೆಯಾಯ್ತು.

ವರ್ತೂರು ಸಂತೋಷ್ ಮೊದಲಿಗೆ ಡ್ರೋನ್ ಪ್ರತಾಪ್​ರ ಮದುವೆ ಚರ್ಚೆ ಎತ್ತಿದರು. ‘‘ಯಜಮಾನ್ರೆ ನೀವು ಹೇಳಿದರೆ ನಿಮ್ಮ ಮಗ ಮದುವೆ ಆಗ್ತಾನಂತೆ, ನೀವು ಹೂ ಅನ್ನಿ ಎಂದರು. ಅದಕ್ಕೆ ಪ್ರತಾಪ್​ರ ತಂದೆ ನನ್ನ ಅಭ್ಯಂತರವೇನೂ ಇಲ್ಲ ಎಂದರು. ಬಳಿಕ ಹಾಗಿದ್ದರೆ ಆ ಜವಾಬ್ದಾರಿ ನನಗೆ ಬಿಡಿ ನಾನು ನೋಡುತ್ತೇನೆ ಎಂದರು. ಹೌದು, ನಿಮ್ಮ ಊರಲ್ಲೇ ಒಂದು ಒಳ್ಳೆ ಹೆಣ್ಣು ನೋಡಪ್ಪ ಎಂದರು ಪ್ರತಾಪ್​ರ ತಂದೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಕರಗಿತು ಮುನಿಸು, ಅಪ್ಪ-ಮಗನ ಭಾವುಕ ಸಮ್ಮಿಲನ

ಬಳಿಕ ತುಕಾಲಿ ಸಂತು, ನಮ್ಮ ಊರಲ್ಲಿ ಒಂದು ಒಳ್ಳೆಯ ಹೆಣ್ಣು ಇದೆ ನೀವು ಹೂ ಅನ್ನಿ ನಾನು ಮಾತಾಡ್ತೀನಿ ಎಂದರು. ಅಯ್ಯೋ ನಾವು ಹೂ ಅಂದರೆ ಹುಡುಗಿಯೂ ಒಪ್ಪಿಕೊಳ್ಳಬೇಕಲ್ಲ ಅಂದರು. ಅವರಿಗೆ ನನ್ನ ಮಾತೇ ಅಂತಿಮ, ನಾನು ಮಾತನಾಡಿದರೆ ಮುಗಿದಂತೆ ಎಂದರು. ಆ ಮಾತಿಗೆ ಎಲ್ಲರೂ ಸೇರಿ ತುಕಾಲಿಯ ಕಾಲೆಳೆದರು.

ಪ್ರತಾಪ್, ಪ್ರತ್ಯೇಕವಾಗಿ ಅಪ್ಪ-ಅಮ್ಮನೊಟ್ಟಿಗೆ ಮಾತನಾಡುವಾಗ ತಂಗಿಯ ಬಗ್ಗೆ ವಿಚಾರಿಸಿದರು. ಆಕೆಗೆ ಕೆಲಸವಿತ್ತು ಅದಕ್ಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಆಕೆ ಚೆನ್ನಾಗಿ ದುಡಿಯುತ್ತಿದ್ದಾಳೆ, ನನ್ನನ್ನು-ಅಮ್ಮನನ್ನು ನೋಡಿಕೊಳ್ಳುತ್ತಿದ್ದಾಳೆ ಎಂದರು. ಆಗ ಮತ್ತೆ ಭಾವುಕರಾದ ಪ್ರತಾಪ್, ನಾನು ಮನೆಗೆ ಬರ್ತೀನಿ, ತಂಗಿಯ ಮದುವೆ ಮಾಡ್ತೀನಿ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:44 pm, Thu, 28 December 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್