AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೋಭಾ ಕಣ್ಣಿಗೆ ಬಟ್ಟೆ; ಹನುಮಂತ ಫಸ್ಟ್​ ನೈಟ್ ಬೆಡ್​ನ ವಿವರಣೆ ಕೊಟ್ಟ ಪರಿಗೆ ಸುದೀಪ್ ಸುಸ್ತು

ಶೋಭಾ ಶೆಟ್ಟಿ ಹಾಗೂ ರಜತ್ ಅವರು ಬಂದರು. ಶೋಭಾ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಈ ವೇಳೆ ಫಸ್ಟ್​ನೈಟ್ ಬೆಡ್​ನ ಫೋಟೋ ಬಂತು. ಇದನ್ನು ನೋಡಿ ಎಲ್ಲರೂ ನಕ್ಕರು. ರಜತ್ ಬಳಿ ಇದನ್ನು ವಿವರಿಸೋಕೆ ಸಾಧ್ಯ ಆಗಲೇ ಇಲ್ಲ. ಆ ಬಳಿಕ ಶಿಶಿರ್ ಅವರು ತಾವು ಪ್ರಯತ್ನ ಮಾಡುವುದಾಗಿ ಬಂದರು. ಕೊನೆಗೆ ಬಂದ ಹನುಮಂತ ಇದರಲ್ಲಿ ಯಶಸ್ಸು ಕಂಡರು.

ಶೋಭಾ ಕಣ್ಣಿಗೆ ಬಟ್ಟೆ; ಹನುಮಂತ ಫಸ್ಟ್​ ನೈಟ್ ಬೆಡ್​ನ ವಿವರಣೆ ಕೊಟ್ಟ ಪರಿಗೆ ಸುದೀಪ್ ಸುಸ್ತು
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Dec 02, 2024 | 10:35 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಭಾನುವಾರದ ಎಪಿಸೋಡ್​ ಯಾವಾಗಲೂ ಫನ್ ಇಂದ ತುಂಬಿರುತ್ತದೆ. ಕಳೆದ ಭಾನುವಾರ (ಡಿಸೆಂಬರ್ 1) ಈ ಫನ್ ಸ್ವಲ್ಪ ಅಧಿಕವಾಗಿಯೇ ಇತ್ತು. ಸ್ಪರ್ಧಿಯ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ಈ ವೇಳೆ ಬೋರ್ಡ್​​ಮೇಲೆ ಒಂದು ವಸ್ತುವನ್ನು ತೋರಿಸಲಾಗುತ್ತದೆ. ಅದು ಏನು ಎಂಬುದನ್ನು ಎದುರು ಇರುವ ವ್ಯಕ್ತಿ ಧ್ವನಿ ಮೂಲಕವೇ ವಿವರಿಸಬೇಕು. ಈ ಎಪಿಸೋಡ್ ಸಖತ್ ಮನರಂಜನಾತ್ಮಕವಾಗಿ ಇತ್ತು.

ಶೋಭಾ ಶೆಟ್ಟಿ ಹಾಗೂ ರಜತ್ ಅವರು ಬಂದರು. ಶೋಭಾ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಈ ವೇಳೆ ಫಸ್ಟ್​ನೈಟ್ ಬೆಡ್​ನ ಫೋಟೋ ಬಂತು. ಇದನ್ನು ನೋಡಿ ಎಲ್ಲರೂ ನಕ್ಕರು. ರಜತ್ ಬಳಿ ಇದನ್ನು ವಿವರಿಸೋಕೆ ಸಾಧ್ಯ ಆಗಲೇ ಇಲ್ಲ. ಆ ಬಳಿಕ ಶಿಶಿರ್ ಅವರು ತಾವು ಪ್ರಯತ್ನ ಮಾಡುವುದಾಗಿ ಬಂದರು. ಅವರ ಬಳಿಯೂ ಸಾಧ್ಯವಾಗಿಲ್ಲ.

ಕೊನೆಗೆ ಸುದೀಪ್ ಅವರು ಈ ಟಾಸ್ಕ್​ನ ತ್ರಿವಿಕ್ರಂಗೆ ನೀಡಿದರು. ‘ಇದನ್ನು ಸರಿಯಾಗಿ ಗೆಸ್ ಮಾಡಿದರೆ ಇಡೀ ಮನೆಗೆ ಲಕ್ಷುರಿ ಬಜೆಟ್ ಸಿಗುತ್ತದೆ’ ಎಂದರು. ಆದರೆ, ತ್ರಿವಿಕ್ರಂ ಬಳಿಯೂ ಇದನ್ನು ಮಾಡೋಕೆ ಸಾಧ್ಯವಾಗಿಲ್ಲ. ಕೊನೆಗೆ ಬಂದಿದ್ದೇ ಹನುಮಂತ ಅವರು. ಹನುಮಂತ ಅವರು ಬರುತ್ತಿದ್ದಂತೆ, ‘ಎ ಏ ಐ ಅಂ ಅಃ..’ ಎಂದರು. ಅವರ ಧ್ವನಿಯಲ್ಲೇ ಶೋಭಾಗೆ ಗೊತ್ತಾಗಿ ಹೋಯಿತು. ‘ಫಸ್ಟ್​ನೈಟ್ ಕೋಣೆ ಅಥವಾ ಬೆಡ್’ ಎಂದು ಶೋಭಾ ಉತ್ತರ ಕೊಟ್ಟರು. ಈ ಮೂಲಕ ಇಡೀ ಮನೆ ಲಕ್ಷುರಿ ಪಡೆಯಿತು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಮುಖ್ಯದ್ವಾರ ತೆಗೆದ ಬಳಿಕ ಉಲ್ಟಾ ಹೊಡೆದ ಶೋಭಾ ಶೆಟ್ಟಿ

ರಜತ್, ಶಿಶಿರ್ ಹಾಗೂ ತ್ರಿವಿಕ್ರಂ ಬಳಿ ಸಾಧ್ಯವಾಗದೇ ಇದ್ದಿದ್ದನ್ನು ಹನುಮಂತ ಅವರು ಮಾಡಿ ತೋರಿಸಿದರು. ಈ ಮೂಲಕ ಇಡೀ ಮನೆಗೆ ಲಕ್ಷುರಿ ಕೊಡಿಸಿ ಅವರು ಹಿರೋ ಆದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ