AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೋಭಾ ಕಣ್ಣಿಗೆ ಬಟ್ಟೆ; ಹನುಮಂತ ಫಸ್ಟ್​ ನೈಟ್ ಬೆಡ್​ನ ವಿವರಣೆ ಕೊಟ್ಟ ಪರಿಗೆ ಸುದೀಪ್ ಸುಸ್ತು

ಶೋಭಾ ಶೆಟ್ಟಿ ಹಾಗೂ ರಜತ್ ಅವರು ಬಂದರು. ಶೋಭಾ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಈ ವೇಳೆ ಫಸ್ಟ್​ನೈಟ್ ಬೆಡ್​ನ ಫೋಟೋ ಬಂತು. ಇದನ್ನು ನೋಡಿ ಎಲ್ಲರೂ ನಕ್ಕರು. ರಜತ್ ಬಳಿ ಇದನ್ನು ವಿವರಿಸೋಕೆ ಸಾಧ್ಯ ಆಗಲೇ ಇಲ್ಲ. ಆ ಬಳಿಕ ಶಿಶಿರ್ ಅವರು ತಾವು ಪ್ರಯತ್ನ ಮಾಡುವುದಾಗಿ ಬಂದರು. ಕೊನೆಗೆ ಬಂದ ಹನುಮಂತ ಇದರಲ್ಲಿ ಯಶಸ್ಸು ಕಂಡರು.

ಶೋಭಾ ಕಣ್ಣಿಗೆ ಬಟ್ಟೆ; ಹನುಮಂತ ಫಸ್ಟ್​ ನೈಟ್ ಬೆಡ್​ನ ವಿವರಣೆ ಕೊಟ್ಟ ಪರಿಗೆ ಸುದೀಪ್ ಸುಸ್ತು
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Dec 02, 2024 | 10:35 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಭಾನುವಾರದ ಎಪಿಸೋಡ್​ ಯಾವಾಗಲೂ ಫನ್ ಇಂದ ತುಂಬಿರುತ್ತದೆ. ಕಳೆದ ಭಾನುವಾರ (ಡಿಸೆಂಬರ್ 1) ಈ ಫನ್ ಸ್ವಲ್ಪ ಅಧಿಕವಾಗಿಯೇ ಇತ್ತು. ಸ್ಪರ್ಧಿಯ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ಈ ವೇಳೆ ಬೋರ್ಡ್​​ಮೇಲೆ ಒಂದು ವಸ್ತುವನ್ನು ತೋರಿಸಲಾಗುತ್ತದೆ. ಅದು ಏನು ಎಂಬುದನ್ನು ಎದುರು ಇರುವ ವ್ಯಕ್ತಿ ಧ್ವನಿ ಮೂಲಕವೇ ವಿವರಿಸಬೇಕು. ಈ ಎಪಿಸೋಡ್ ಸಖತ್ ಮನರಂಜನಾತ್ಮಕವಾಗಿ ಇತ್ತು.

ಶೋಭಾ ಶೆಟ್ಟಿ ಹಾಗೂ ರಜತ್ ಅವರು ಬಂದರು. ಶೋಭಾ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಈ ವೇಳೆ ಫಸ್ಟ್​ನೈಟ್ ಬೆಡ್​ನ ಫೋಟೋ ಬಂತು. ಇದನ್ನು ನೋಡಿ ಎಲ್ಲರೂ ನಕ್ಕರು. ರಜತ್ ಬಳಿ ಇದನ್ನು ವಿವರಿಸೋಕೆ ಸಾಧ್ಯ ಆಗಲೇ ಇಲ್ಲ. ಆ ಬಳಿಕ ಶಿಶಿರ್ ಅವರು ತಾವು ಪ್ರಯತ್ನ ಮಾಡುವುದಾಗಿ ಬಂದರು. ಅವರ ಬಳಿಯೂ ಸಾಧ್ಯವಾಗಿಲ್ಲ.

ಕೊನೆಗೆ ಸುದೀಪ್ ಅವರು ಈ ಟಾಸ್ಕ್​ನ ತ್ರಿವಿಕ್ರಂಗೆ ನೀಡಿದರು. ‘ಇದನ್ನು ಸರಿಯಾಗಿ ಗೆಸ್ ಮಾಡಿದರೆ ಇಡೀ ಮನೆಗೆ ಲಕ್ಷುರಿ ಬಜೆಟ್ ಸಿಗುತ್ತದೆ’ ಎಂದರು. ಆದರೆ, ತ್ರಿವಿಕ್ರಂ ಬಳಿಯೂ ಇದನ್ನು ಮಾಡೋಕೆ ಸಾಧ್ಯವಾಗಿಲ್ಲ. ಕೊನೆಗೆ ಬಂದಿದ್ದೇ ಹನುಮಂತ ಅವರು. ಹನುಮಂತ ಅವರು ಬರುತ್ತಿದ್ದಂತೆ, ‘ಎ ಏ ಐ ಅಂ ಅಃ..’ ಎಂದರು. ಅವರ ಧ್ವನಿಯಲ್ಲೇ ಶೋಭಾಗೆ ಗೊತ್ತಾಗಿ ಹೋಯಿತು. ‘ಫಸ್ಟ್​ನೈಟ್ ಕೋಣೆ ಅಥವಾ ಬೆಡ್’ ಎಂದು ಶೋಭಾ ಉತ್ತರ ಕೊಟ್ಟರು. ಈ ಮೂಲಕ ಇಡೀ ಮನೆ ಲಕ್ಷುರಿ ಪಡೆಯಿತು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಮತ್ತೆ ಹೈಡ್ರಾಮಾ; ಮುಖ್ಯದ್ವಾರ ತೆಗೆದ ಬಳಿಕ ಉಲ್ಟಾ ಹೊಡೆದ ಶೋಭಾ ಶೆಟ್ಟಿ

ರಜತ್, ಶಿಶಿರ್ ಹಾಗೂ ತ್ರಿವಿಕ್ರಂ ಬಳಿ ಸಾಧ್ಯವಾಗದೇ ಇದ್ದಿದ್ದನ್ನು ಹನುಮಂತ ಅವರು ಮಾಡಿ ತೋರಿಸಿದರು. ಈ ಮೂಲಕ ಇಡೀ ಮನೆಗೆ ಲಕ್ಷುರಿ ಕೊಡಿಸಿ ಅವರು ಹಿರೋ ಆದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್