AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Srujan Lokesh Birthday: ಸಿನಿಮಾ ಹಿನ್ನೆಲೆ ಇದ್ದರೂ ಸೃಜನ್ ಲೋಕೇಶ್ ಅನುಭವಿಸಿದ ಕಷ್ಟ ಒಂದೆರಡಲ್ಲ; ಕೈ ಹಿಡಿಯಿತು ಕಿರುತೆರೆ

Happy Birthday Srujan Lokesh: ಸಿನಿಮಾ ರಂಗದಲ್ಲಿ ಯಶಸ್ಸಿಗಾಗಿ ಕಾದು ಕೂತಿದ್ದಾಗ ಸೃಜನ್​ ಕಿರುತೆರೆಯತ್ತ ಆಕರ್ಷಿತರಾದರು. ಮೊದಲ ಬಾರಿಗೆ 2011ರಲ್ಲಿ ‘ಮಜಾ ವಿತ್ ಸೃಜ’ ಶೋ ನಡೆಸಿಕೊಡುವ ಮೂಲಕ ಅವರು ಜನಪ್ರಿಯರಾದರು.

Srujan Lokesh Birthday: ಸಿನಿಮಾ ಹಿನ್ನೆಲೆ ಇದ್ದರೂ ಸೃಜನ್ ಲೋಕೇಶ್ ಅನುಭವಿಸಿದ ಕಷ್ಟ ಒಂದೆರಡಲ್ಲ; ಕೈ ಹಿಡಿಯಿತು ಕಿರುತೆರೆ
ಸೃಜನ್
TV9 Web
| Updated By: ಮದನ್​ ಕುಮಾರ್​|

Updated on:Jun 28, 2022 | 7:57 AM

Share

ಸೃಜನ್ ಲೋಕೇಶ್ (Srujan Lokesh) ಅವರು ಇಂದು (ಜೂನ್ 28) 42ನೇ ವರ್ಷದ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಸೃಜನ್​ ಲೋಕೇಶ್ ಸಿನಿಮಾ ಹಿನ್ನೆಲೆಯಿಂದ ಬಂದವರು. ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನ’ದಲ್ಲಿ ನಟಿಸಿದ್ದು ಸೃಜನ್​ ತಾತ ಸುಬ್ಬಯ್ಯ ನಾಯ್ಡು. ತಂದೆ ಹಿರಿಯ ನಟ ಲೋಕೇಶ್ (Lokesh) ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅವರ ತಾಯಿ ಗಿರಿಜಾ ಲೋಕೇಶ್ ಕೂಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಫೇಮಸ್. ಸಿನಿಮಾ ಹಿನ್ನೆಲೆ ಇದ್ದ ಹೊರತಾಗಿಯೂ ಸೃಜನ್​ ಲೋಕೇಶ್​ಗೆ ಸಿನಿಮಾ ಇಂಡಸ್ಟ್ರಿ ಅಷ್ಟಾಗಿ ಕೈ ಹಿಡಿಯಲಿಲ್ಲ. ಅವರಿಗೆ ಯಶಸ್ಸು ಸಿಕ್ಕಿದ್ದು ಕಿರುತೆರೆ ಲೋಕದಲ್ಲಿ.

ಸೃಜನ್ ಲೋಕೇಶ್ ಅವರು ಬಾಲ ಕಲಾವಿದನಾಗಿ ಗುರುತಿಸಿಕೊಂಡರು. 1991ರಲ್ಲಿ ತೆರೆಗೆ ಬಂದ ‘ವೀರಪ್ಪನ್’ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲ ಕಲಾವಿದನಾಗಿ ನಟಿಸಿದರು. 2002ರಲ್ಲಿ ತೆರೆಗೆ ಬಂದ ರಾಜ್​ಕಿಶೋರ್ ನಿರ್ದೇಶನದ ‘ನೀಲ ಮೇಘ ಶ್ಯಾಮ’ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಗೊಂಡರು. ಆ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ಯಾವುದೂ ಹೇಳಿಕೊಳ್ಳುವಂತಹ ಯಶಸ್ಸು ನೀಡಲಿಲ್ಲ.

ಸಿನಿಮಾ ರಂಗದಲ್ಲಿ ಯಶಸ್ಸಿಗಾಗಿ ಕಾದು ಕೂತಿದ್ದಾಗ ಸೃಜನ್​ ಕಿರುತೆರೆಯತ್ತ ಆಕರ್ಷಿತರಾದರು. ಮೊದಲ ಬಾರಿಗೆ 2011ರಲ್ಲಿ ‘ಮಜಾ ವಿತ್ ಸೃಜ’ ಶೋ ನಡೆಸಿಕೊಡುವ ಮೂಲಕ ಅವರು ಜನಪ್ರಿಯರಾದರು. ಈ ಶೋ ಅನ್ನು ಜನರು ಮೆಚ್ಚಿಕೊಂಡರು. ನಂತರ ಅವರಿಗೆ ಕಿರುತೆರೆಯಿಂದ ಹಲವು ಆಫರ್​ಗಳು ಬಂದವು. ಮರುವರ್ಷ ಅಂದರೆ 2012ರಲ್ಲಿ ‘ಸ್ಟಾರ್​ ಸಿಂಗರ್ ಗ್ರ್ಯಾಂಡ್ ಫಿನಾಲೆ’, ‘ಸುವರ್ಣ ಫಿಲ್ಮ್​ ಅವಾರ್ಡ್ಸ್​’, ‘ಸೈ 2’ ‘ಮಮ್ಮಿ ನಂಬರ್ 1’ ಶೋಗಳನ್ನು ಇವರು ನಿರೂಪಣೆ​ ಮಾಡಿದರು.

ಇದನ್ನೂ ಓದಿ
Image
ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್
Image
‘ನನ್ನಮ್ಮ ಸೂಪರ್ ಸ್ಟಾರ್​ ಜಡ್ಜ್​​ಗಳಿಗೆ ಸೃಜನ್ ಲೋಕೇಶ್​​ ವಿಶೇಷ ಗಿಫ್ಟ್’; ಗಳಗಳನೆ ಅತ್ತ ಅನುಪಮಾ ಗೌಡ​
Image
‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು
Image
ಮಾಸ್ಟರ್​ ಆನಂದ್​ ಮಗಳು ವಂಶಿಕಾ ಭರ್ಜರಿ ಶಾಪಿಂಗ್​; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​

ಸೃಜನ್​ಗೆ ‘ಬಿಗ್ ಬಾಸ್’ ಹೆಸರು ತಂದುಕೊಟ್ಟಿತು. ‘ಬಿಗ್ ಬಾಸ್​ ಕನ್ನಡ ಸೀಸನ್ 2’ನಲ್ಲಿ ಸೃಜನ್ ಸ್ಪರ್ಧಿ ಆಗಿದ್ದರು. ಈ ಶೋಅನ್ನು ಅಕುಲ್ ಗೆದ್ದರೆ, ಸೃಜನ್ ಮೊದಲ ರನ್ನರ್ ಅಪ್ ಆದರು. 2015-17ರವರೆಗೆ ‘ಮಜಾ ಟಾಕೀಸ್​’ ಪ್ರಸಾರವಾಯಿತು. ಇದನ್ನು ಸೃಜನ್​ ನಡೆಸಿಕೊಟ್ಟರು. ನಂತರ ‘ಮಜಾ ಟಾಕೀಸ್​ ಸೂಪರ್ ಸೀಸನ್​’, ‘ಮಜಾ ಟಾಕೀಸ್​’ ಸೃಜನ್ ಸಾರಥ್ಯದಲ್ಲಿ ಮೂಡಿ ಬಂದವು. ಸದ್ಯ, ‘ಗಿಚ್ಚಿ ಗಿಲಿಗಿಲಿ’ ಶೋಗೆ ಅವರು ಜಡ್ಜ್​ ಆಗಿದ್ದಾರೆ.

2013ರಲ್ಲಿ ಸೃಜನ್​ ಲೋಕೇಶ್​ ಹಾಗೂ ಗಿರಿಜಾ ಲೋಕೇಶ್ ‘ಲೋಕೇಶ್ ಪ್ರೊಡಕ್ಷನ್ಸ್​’ ಆರಂಭಿಸಿದರು. ಹಲವು ಯಶಸ್ವಿ ಶೋಗಳನ್ನು ಇವರು ನಿರ್ಮಾಣ ಮಾಡಿದ್ದಾರೆ. ಇವರ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದ ‘ಮಜಾ ಟಾಕೀಸ್​’ ದೊಡ್ಡ ಯಶಸ್ಸು ಪಡೆಯಿತು. ಅವರು ಸಿನಿಮಾ ಕೂಡ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:  ನಿಮ್ಮನ್ನು ನಕ್ಕು ನಲಿಸುತ್ತಿರುವ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ತೀರ್ಪುಗಾರಾಗಿರುವ ಸೃಜನ್ ಮತ್ತು ಶೃತಿಯ ಮನದಾಳದ ಮಾತು!

‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು

Published On - 6:40 am, Tue, 28 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ