ನೋಡ ನೋಡುತ್ತಿದ್ದಂತೆ ಹೋಯ್ತು ಲಕ್ಷ ಲಕ್ಷ ಹಣ; ಬಿಗ್ ಬಾಸ್ ವಿನ್ನರ್​ಗೆ ಸಿಗೋ ಫೈನಲ್ ಅಮೌಂಟ್ ಎಷ್ಟು?

ಐದು ಜನರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ರೀತಿ ನಾಮಿನೇಟ್ ಆದವರ ಒಟ್ಟೂ ಮೊತ್ತ 25 ಲಕ್ಷ ರೂಪಾಯಿ ಆಗಿತ್ತು. ಪ್ರೈಜ್ ಅಮೌಂಟ್​ನಲ್ಲಿ ಈ ಹಣವನ್ನು ಕತ್ತರಿಸಲಾಯಿತು.

ನೋಡ ನೋಡುತ್ತಿದ್ದಂತೆ ಹೋಯ್ತು ಲಕ್ಷ ಲಕ್ಷ ಹಣ; ಬಿಗ್ ಬಾಸ್ ವಿನ್ನರ್​ಗೆ ಸಿಗೋ ಫೈನಲ್ ಅಮೌಂಟ್ ಎಷ್ಟು?
ಬಿಗ್ ಬಾಸ್ ಸ್ಪರ್ಧಿಗಳು
Follow us
|

Updated on:Jan 05, 2024 | 8:01 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ನಲ್ಲಿ (BBK 10) ಸಾಕಷ್ಟು ಟ್ವಿಸ್ಟ್ ನೀಡಲಾಗುತ್ತಿದೆ. ಪ್ರತಿ ಬಾರಿ 50 ಲಕ್ಷ ರೂಪಾಯಿ ಹಣ ವಿಜೇತರಿಗೆ ಸಿಗುತ್ತಿತ್ತು. ಆದರೆ, ಈ ಬಾರಿ ಟ್ವಿಸ್ಟ್ ನೀಡಲಾಗಿದೆ. ಈ ವಾರ ನಡೆದ ಟಾಸ್ಕ್​ಗಳು ವಿಜೇತರಿಗೆ ಸಿಗುವ ಹಣ ಎಷ್ಟು ಎಂಬುದನ್ನು ನಿರ್ಧರಿಸಿದೆ. ಮಾಡಿದ ಹಲವು ತಪ್ಪಿನಿಂದ ಸ್ಪರ್ಧಿಗಳು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಹಾಗಾದರೆ, ಈ ಬಾರಿ ಬಿಗ್ ಬಾಸ್ ವಿಜೇತರಿಗೆ ಸಿಗುತ್ತಿರುವುದು ಎಷ್ಟು ಲಕ್ಷ ರೂಪಾಯಿ ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್​’ನಲ್ಲಿ ಈ ಬಾರಿ ಟ್ವಿಸ್ಟ್ ನೀಡಲಾಯಿತು. 25 ಸಾವಿರದಿಂದ ಆರಂಭ ಆಗಿ 20 ಲಕ್ಷ ಪಾಯಿಂಟ್ಸ್​ನ ಬೋರ್ಡ್​ನ ಬಿಗ್ ಬಾಸ್ ನೀಡಿದರು. ಇದನ್ನು ಸ್ಪರ್ಧಿಗಳು ತಮಗೆ ಸೂಕ್ತ ಎನಿಸಿದ್ದನ್ನು ಧರಿಸಬೇಕಿತ್ತು. ಇದಕ್ಕೆ ವೋಟಿಂಗ್ ಮಾಡಲಾಯಿತು. ಆ ಬಳಿಕ ಬಿಗ್ ಬಾಸ್ ಟ್ವಿಸ್ಟ್ ನೀಡಿದರು. ಬೋರ್ಡ್ ಧರಿಸಿದರವರು ನಾಮಿನೇಟ್ ಆದರೆ ಅವರು ಧರಿಸಿದ ಬೋರ್ಡ್​ನ ಮೊತ್ತವನ್ನು ಪ್ರೈಜ್ ಅಮೌಂಟ್​ನಲ್ಲಿ ಕಡಿತಗೊಳಿಸುವುದಾಗಿ ಬಿಗ್ ಬಾಸ್ ಘೋಷಿಸಿದರು.

ಐದು ಜನರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ರೀತಿ ನಾಮಿನೇಟ್ ಆದವರ ಒಟ್ಟೂ ಮೊತ್ತ 25 ಲಕ್ಷ ರೂಪಾಯಿ ಆಗಿತ್ತು. ಪ್ರೈಜ್ ಅಮೌಂಟ್​ನಲ್ಲಿ ಈ ಹಣವನ್ನು ಕತ್ತರಿಸಲಾಯಿತು. ಇದನ್ನು ಮರಳಿ ಪಡೆಯಲು ಬಿಗ್ ಬಾಸ್ ಒಂದಷ್ಟು ಟಾಸ್ಕ್ ನೀಡಿದರು. ಈ ಟಾಸ್ಕ್​ನಲ್ಲಿ ಸ್ಪರ್ಧಿಗಳು ಗೆದ್ದಿದ್ದು ಕೇವಲ 15 ಲಕ್ಷ ರೂಪಾಯಿ ಮಾತ್ರ. ಈ ಬಗ್ಗೆ ಬಿಗ್ ಬಾಸ್ ಘೋಷಣೆ ಮಾಡಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪ್ರತಾಪ್?

‘ಟಾಸ್ಕ್ ಆಡಿ ಮನೆ 15 ಲಕ್ಷ ರೂಪಾಯಿ ಗೆಲ್ಲಲು ಮಾತ್ರ ಸಾಧ್ಯವಾಗಿದೆ. ಇನ್ನು, 10 ಲಕ್ಷವನ್ನು ಮನೆ ಕಳೆದುಕೊಂಡಿದೆ. ಹೀಗಾಗಿ, ವಿನ್ನರ್​ಗೆ ಸಿಗೋದು 40 ಲಕ್ಷ ರೂಪಾಯಿ ಮಾತ್ರ’ ಎಂದರು ಬಿಗ್ ಬಾಸ್. ಆ ಬಳಿಕ ಬಿಗ್ ಬಾಸ್ ಹೆಚ್ಚುವರಿಯಾಗಿ 5 ಲಕ್ಷ ಸೇರ್ಪಡೆ ಮಾಡಿದರು. ಈ ಮೂಲಕ ಪ್ರೈಜ್ ಮೊತ್ತ 45 ಲಕ್ಷ ರೂಪಾಯಿ ಆಯಿತು. ಇದರ ಜೊತೆ ಮಾರುತಿ ಬ್ರೇಜಾ ಕಾರು ಹಾಗೂ ಇಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:30 am, Fri, 5 January 24

ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ