AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯಾ ಮದುವೆ ಆಗೋ ಹುಡುಗ ಮಂಟಪದಿಂದ ಜೂಟ್; ಪೆಟ್ರೋಲ್ ಸುರಿದುಕೊಂಡ ಶಾಂತಿ  

ನಿತ್ಯಾಳ ಮದುವೆಯ ಸಂಭ್ರಮದಲ್ಲಿ ತೇಜಸ್ ಕೊನೆಯ ಕ್ಷಣದಲ್ಲಿ ಮಂಟಪದಿಂದ ಓಡಿಹೋಗಿದ್ದಾನೆ. ಕರ್ಣನ ತಂದೆ ರಮೇಶ್‌ನ ಪಿತೂರಿಯಿಂದಾಗಿ ಈ ಘಟನೆ ನಡೆದಿದೆ. ಈಗ ನಿತ್ಯಾ ಮತ್ತು ಕರ್ಣನ ವಿವಾಹಕ್ಕೆ ಸಿದ್ಧತೆ ನಡೆದಿದೆ. ತೇಜಸ್‌ನ ಪ್ರೀತಿಸಿದ ನಿತ್ಯಾ, ಮತ್ತು ಕರ್ಣನನ್ನು ಇಷ್ಟಪಟ್ಟ ನಿಧಿ ಇಬ್ಬರ ಕನಸುಗಳನ್ನೂ ರಮೇಶ್ ನುಚ್ಚು ನೂರು ಮಾಡಿದ್ದಾನೆ.

ನಿತ್ಯಾ ಮದುವೆ ಆಗೋ ಹುಡುಗ ಮಂಟಪದಿಂದ ಜೂಟ್; ಪೆಟ್ರೋಲ್ ಸುರಿದುಕೊಂಡ ಶಾಂತಿ  
ನಮ್ರತಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 14, 2025 | 11:15 AM

Share

ನಿತ್ಯಾ ಮದುವೆ ಸಂಭ್ರಮದಿಂದ ನಡೆಯುತ್ತಿದೆ. ನಿತ್ಯಾ ಹಾಗೂ ತೇಜಸ್ ವಿವಾಹ ಆಗುವುದರಲ್ಲಿದ್ದರು. ಅರಿಶಿಣ ಶಾಸ್ತ್ರ ಕೂಡ ನಡೆದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹುಡುಗ ಹಾಗೂ ಆತನ ಕುಟುಂಬದವರು ಮದುವೆ ಮಂಟಪದಿಂದ ಓಡಿ ಹೋಗಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು, ಕರ್ಣನ (Karna) ತಂದೆ ರಮೇಶ್. ಮುಂದೆ ಕರ್ಣ ಹಾಗೂ ನಿತ್ಯಾ ವಿವಾಹ ನಡೆಯಲಿದೆ. ಅದಕ್ಕೆ ಈಗ ಪೀಠಿಕೆ ಆರಂಭ ಆಗಿದೆ.

ನಿತ್ಯಾ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದಳು. ಆದರೆ, ಅವಳ ಕನಸು ಈಡೇರುತ್ತಿಲ್ಲ. ಈ ಬಗ್ಗೆ ಆಕೆಗೆ ಬೇಸರ ಇದೆ. ಆದರೂ ಮದುವೆ ಆಗಬೇಕಲ್ಲ ಎಂದು ಆಗುತ್ತಿದ್ದಾಳೆ. ಆದರೆ, ಈಗ ಮದುವೆ ಮಂಟಪದಿಂದ ತೇಜಸ್ ಓಡಿ ಹೋಗಿದ್ದಾನೆ. ಇದು ಆಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆಕೆ ಇನ್ನೂ ಶಾಕ್​ನಲ್ಲಿ ಇದ್ದಾಳೆ.

ನಿತ್ಯಾ ಹಲವು ವರ್ಷಗಳಿಂದ ತೇಜಸ್​ನ ಪ್ರೀತಿಸುತ್ತಿದ್ದಳು. ಆತನನ್ನು ತುಂಬಾನೇ ನಂಬಿದ್ದಳು. ಆದರೆ, ಕೊನೆಯ ಕ್ಷಣದಲ್ಲಿ ಆತ ಓಡಿ ಹೋಗಿದ್ದು, ನಿತ್ಯಾ ಅಜ್ಜಿ ಶಾಂತಿಗೆ ಸಾಕಷ್ಟು ಬೇಸರ ಮೂಡಿಸಿದೆ. ಆಕೆಯೂ ಶಾಕ್​ಗೆ ಒಳಗಾಗಿದ್ದಾಳೆ. ಹೀಗಾಗಿ, ಪ್ರತಿಯೊಬ್ಬರ ಬಳಿ ತೆರಳಿ ಮದುವೆ ಆಗುವಂತೆ ಕೋರಿದ್ದಾಳೆ. ಆದರೆ, ಯಾರೊಬ್ಬರೂ ಮದುವೆ ಆಗಲು ಒಪ್ಪಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ನಿತ್ಯಾಳಿಗೂ ಪೆಟ್ರೋಲ್ ಸುರಿದು, ತಾನೂ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ನಿತ್ಯಾ ನಿರ್ಧರಿಸಿದ್ದಾಳೆ.

ಇದನ್ನೂ ಓದಿ
Image
‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ
Image
ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಕಾವ್ಯಾ ಕಣ್ಣಿಗೆ ಹೆದರಿದ ಗಿಲ್ಲಿ
Image
ಈ ವಾರ ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದು ಯಾರು? ಕಾದಿದೆ ದೊಡ್ಡ ಟ್ವಿಸ್
Image
ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ ಅಮಿತಾಭ್ ಬಚ್ಚನ್; ಇಲ್ಲಿದೆ ವಿವರ

ರಮೇಶ್ ಕಿತಾಪತಿ

ಈ ಕೆಲಸದ ಹಿಂದೆ ಇರೋದು ರಮೇಶ್ ಕಿತಾಪತಿ. ಕರ್ಣನ ತಂದೆ ರಮೇಶ್ ಮೊದಲಿನಿಂದಲೂ ಕರ್ಣನ ಬಗ್ಗೆ ದ್ವೇಷ ಸಾಧಿಸುತ್ತಲೇ ಬರುತ್ತಿದ್ದಾನೆ. ಆತ ನಿಧಿಯನ್ನು ಪ್ರೀತಿಸುತ್ತಿರೋ ವಿಚಾರ ರಮೇಶ್​ಗೆ ತಿಳಿದಿದೆ. ಹೇಗಾದರೂ ಮಾಡಿ ನಿಧಿಯಿಂದ ಆತನನ್ನು ದೂರ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಈ ಕಾರಣಕ್ಕೆ ಕರ್ಣ ಹಾಗೂ ನಿತ್ಯಾ ಮದುವೆ ಮಾಡಲು ಆತ ಮುಂದಾಗಿದ್ದಾನೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಮದುವೆಗೂ ಮೊದಲೇ ಸಪ್ತಪದಿ ತುಳಿದ ಕರ್ಣ-ನಿಧಿ; ಕಣ್ಣೀರೇ ಬಂತು

ನಿತ್ಯಾ-ನಿಧಿ ಕನಸು ನುಚ್ಚು ನೂರು

ತೇಜಸ್​ನ ವಿವಾಹ ಆಗಬೇಕು ಎಂಬುದು ನಿತ್ಯಾಳ ಕನಸಾಗಿತ್ತು. ಆದರೆ, ಈ ಕನಸು ಈಡೇರಿಲ್ಲ. ಅತ್ತ ಕರ್ಣನ ಮದುವೆ ಆಗಬೇಕು ಎಂಬುದು ನಿಧಿ ಆಸೆ ಆಗಿತ್ತು. ಅದು ಕೂಡ ನೆರವೇರುತ್ತಿಲ್ಲ. ಹೀಗಾಗಿ, ಒಂದೇ ಕಲ್ಲಲ್ಲಿ ಇಬ್ಬರ ಕನಸನ್ನು ರಮೇಶ್ ನುಚ್ಚುನೂರು ಮಾಡಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್