AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ’; ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮನವಿ

ಸಾನ್ಯಾ ಐಯ್ಯರ್ ಬಳಿ ‘ಕಲಾವಿದ’ ಎಂಬ ಟ್ಯಾಗ್ ಇತ್ತು. ಇದನ್ನು ಪ್ರಶಾಂತ್ ಸಂಬರ್ಗಿಗೆ ನೀಡಿದ್ದ ಸಾನ್ಯಾ, ‘ಪ್ರಶಾಂತ್ ಸಂಬರ್ಗಿ ಅವರಲ್ಲಿ ಕುತಂತ್ರ ಬುದ್ಧಿ ಹೆಚ್ಚಿದೆ. ಕಲಾವಿದರಿಗೆ ಮಾತ್ರ ಅದು ಸಾಧ್ಯ’ ಎಂದಿದ್ದರು. ಈ ಬಗ್ಗೆ ಸುದೀಪ್ ಅವರು ಸಾನ್ಯಾಗೆ ಕ್ಲಾಸ್ ತೆಗೆದುಕೊಂಡಿದ್ದರು.

‘ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ’; ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮನವಿ
ಪ್ರಶಾಂತ್​-ಸಾನ್ಯಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Oct 03, 2022 | 10:17 PM

Share

ಕಳೆದ ವಾರ ಪ್ರಶಾಂತ್ ಸಂಬರ್ಗಿ (Prashanth Sambargi) ಬಗ್ಗೆ ಸಾನ್ಯಾ ಐಯ್ಯರ್ ಅವರು ಒಂದು ಮಾತನ್ನು ಹೇಳಿದ್ದರು. ಈ ಮಾತು ಹಲವು ದಿನಗಳ ಕಾಲ ಚರ್ಚೆಯಲ್ಲಿದೆ. ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಇದೇ ವಿಚಾರ ಪ್ರಸ್ತಾಪ ಮಾಡಿದ್ದರು. ಸುದೀಪ್ ಈ ಮಾತನ್ನು ಹೇಳಿದ ನಂತರದಲ್ಲಿ ಪ್ರಶಾಂತ್ ಸಂಬರ್ಗಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾನ್ಯಾ ಎದುರು ಪದೇಪದೇ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಪ್ರಶಾಂತ್​. ಇದಕ್ಕೆ ಸಾನ್ಯಾ ಐಯ್ಯರ್ (Sanya Iyer) ಸಿಟ್ಟಾಗಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗ ಎಲ್ಲರಿಗೂ ಒಂದು ಬ್ಯಾಂಡ್ ನೀಡಲಾಗಿತ್ತು. ಎಲ್ಲಾ ಬ್ಯಾಂಡ್​ಗಳ ಮೇಲೆ ಒಂದು ಒಳ್ಳೆಯ ಗುಣದ ಹೆಸರು ಬರೆದಿತ್ತು. ಸಾನ್ಯಾ ಐಯ್ಯರ್ ಬಳಿ ‘ಕಲಾವಿದ’ ಎಂಬ ಟ್ಯಾಗ್ ಇತ್ತು. ಇದನ್ನು ಪ್ರಶಾಂತ್ ಸಂಬರ್ಗಿಗೆ ನೀಡಿದ್ದ ಸಾನ್ಯಾ, ‘ಪ್ರಶಾಂತ್ ಸಂಬರ್ಗಿ ಅವರಲ್ಲಿ ಕುತಂತ್ರ ಬುದ್ಧಿ ಹೆಚ್ಚಿದೆ. ಕಲಾವಿದರಿಗೆ ಮಾತ್ರ ಅದು ಸಾಧ್ಯ’ ಎಂದಿದ್ದರು. ಈ ಬಗ್ಗೆ ಸುದೀಪ್ ಅವರು ಸಾನ್ಯಾಗೆ ಕ್ಲಾಸ್ ತೆಗೆದುಕೊಂಡಿದ್ದರು.

‘ನಾವು ಬ್ಯಾಂಡ್​ನ ಒಳ್ಳೆಯ ಕಾರಣಕ್ಕೆ ನೀಡಿದ್ದು. ಆದರೆ, ಕುತಂತ್ರಿ ಎಂಬ ಶಬ್ದವನ್ನು ನೀವೇ ಸೇರಿಸಿಕೊಂಡಿರಿ. ಆ ರೀತಿ ಮಾಡಬಾರದಿತ್ತು’ ಎಂದು ಸಾನ್ಯಾಗೆ ಸುದೀಪ್ ಹೇಳಿದ್ದರು. ಆ ಬಳಿಕ ಪ್ರಶಾಂತ್ ಸಂಬರ್ಗಿ ಅವರು ಈ ಬಗ್ಗೆ ಚರ್ಚೆ ಮಾಡಿದ್ದರು. ‘ನೀವು ನನಗೆ ಕುತಂತ್ರಿ ಎಂದಿದ್ದೀರಾ’ ಎಂದು ಸಾನ್ಯಾಗೆ ಪ್ರಶಾಂತ್ ಸಂಬರ್ಗಿ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ನಂತರ ಪ್ರಶಾಂತ್ ಸಂಬರ್ಗಿ ಸಾನ್ಯಾ ಅವರನ್ನು ಮತ್ತೆ ಪ್ರಶ್ನೆ ಮಾಡಿದರು. ‘ನಾನು ಕುಂತತ್ರಿ ಎಂದು ಹೇಳಿದ್ದಕ್ಕೆ ನಿಮಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ, ನನ್ನ ಮಾತನ್ನು ಹಿಂಪಡೆಯಲ್ಲ. ನೀವು ನನಗೆ ಆ ರೀತಿ ಕಂಡಿರಿ. ಹಾಗಾಗಿ ಹೇಳಿದೆ ಎಂದರು ಸಾನ್ಯಾ. ‘ಹಾಲು ಒಡೆದು ಹೋಗಿದೆ, ಗಾಜು ಕೂಡ ಒಡೆದು ಹೋಗಿದೆ. ಅದನ್ನು ಸರಿ ಮಾಡೋಕೆ ಆಗಲ್ಲ ಬಿಡಿ’ ಎಂದು ಪ್ರಶಾಂತ್ ಸಂಬರ್ಗಿ ಹೇಳಿದರು.

ಇದನ್ನೂ ಓದಿ: ಸಿಟ್ಟಲ್ಲಿ ರಾಕೇಶ್ ಅಡಿಗ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ; ಮನೆಯವರಿಗೆ ಹೆಚ್ಚಿತು ಟೆನ್ಷನ್

‘ನಮ್ಮಿಬ್ಬರ ಮಧ್ಯೆ ಈ ಚರ್ಚೆ ಬೇಡ. ನನ್ನನ್ನು ಚಿಕ್ಕವನು ಎಂದುಕೊಳ್ಳಬೇಡಿ. ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ. ನಾನು ನಿಮ್ಮನ್ನು ಆ ದೃಷ್ಟಿಕೋನದಲ್ಲಿ ನೋಡಲ್ಲ’ ಎಂದು ಮನವಿ ಮಾಡಿಕೊಂಡಿದ್ದಾರೆ ಸಾನ್ಯಾ ಐಯ್ಯರ್.

Published On - 9:58 pm, Mon, 3 October 22

ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ